ETV Bharat / state

ವಿಜಯೇಂದ್ರ ಗಾಡಿ ಬಹಳ ದಿನ ಹೋಗಲ್ಲ: ಸಚಿವ ಎಂ.ಬಿ.ಪಾಟೀಲ್​ ಲೇವಡಿ - Minister MB Patil

author img

By ETV Bharat Karnataka Team

Published : Aug 30, 2024, 8:34 PM IST

ಸಚಿವ ಎಂ.ಬಿ.ಪಾಟೀಲ್ ಅವರು ವಿಜಯೇಂದ್ರ ಕುರಿತು ಮಾತನಾಡಿದ್ದಾರೆ. ವಿಜಯೇಂದ್ರ ಅವರ ನಾಯಕತ್ವಕ್ಕೆ ಅವರದೇ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಸಚಿವರು ಹೇಳಿದ್ದಾರೆ.

minister-mb-patil
ಸಚಿವ ಎಂ ಬಿ ಪಾಟೀಲ್ (ETV Bharat)
ಸಚಿವ ಎಂ. ಬಿ ಪಾಟೀಲ್ (ETV Bharat)

ಬೆಳಗಾವಿ: ವಿಜಯೇಂದ್ರ ಗಾಡಿ ಬಹಳ ದಿನ ಹೋಗೋದಿಲ್ಲ. ವಿಜಯೇಂದ್ರ ನಾಯಕತ್ವವನ್ನು ಅವರದೇ ಪಕ್ಷದ ಯತ್ನಾಳ್​, ರಮೇಶ್​ ಜಾರಕಿಹೊಳಿ, ಆರ್. ಅಶೋಕ್​, ಬೊಮ್ಮಾಯಿ ಸೇರಿ ಬಹಳಷ್ಟು ನಾಯಕರು ಒಪ್ಪುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ, ಆರ್​ಎಸ್ಎಸ್ ಕೆಲಸವೇ ಒಡೆದು ಆಳುವುದು ಎಂದು ಸಚಿವ ಎಂ. ಬಿ‌ ಪಾಟೀಲ್​ ವಾಗ್ದಾಳಿ ಮಾಡಿದರು.

ದಲಿತ ವರ್ಸಸ್ ದಲಿತ ಮಾಡುವ ನಿಟ್ಟಿನಲ್ಲಿ ಯಾರಾದರೂ ಧ್ವನಿ ಎತ್ತಿದರೆ ಬೇರೆ ಆಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರನ್ನು ಎತ್ತಿಕಟ್ಟಿ, ಬಲಿಪಶು ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ವಿರುದ್ಧ ಯತ್ನಾಳ್ ಸೇರಿ ಮತ್ತಿತರ ಲಿಂಗಾಯತ ನಾಯಕರನ್ನೇ ಬಳಸಿಕೊಂಡು ಷಡ್ಯಂತ್ರ ಮಾಡಿದರು. ಇದನ್ನು ವಿಜಯೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದ ಎಂ. ಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಬಹುದಿತ್ತು. ಆದರೆ, ಛಲವಾದಿ ನಾರಾಯಣಸ್ವಾಮಿ ಅವರನ್ನೆ ಏಕೆ ಆಯ್ಕೆ ಮಾಡಿದರು ಎಂದು ಪ್ರಶ್ನಿಸಿದರು‌.

ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದರೆ ಮುಂದಿನ ಸಿಎಂ ರೇಸ್​ನಲ್ಲಿ ತಾವಿದ್ದಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಮುಡಾ ಕೇಸ್​ನಲ್ಲಿ ಎಳ್ಳಷ್ಟು ಸಿದ್ದರಾಮಯ್ಯ ತಪ್ಪಿಲ್ಲ. ಬಿಜೆಪಿಯವರು ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರುತ್ತದೆ. ಖಾಸಗಿಯಾಗಿ ಅನೇಕ ಬಿಜೆಪಿ ನಾಯಕರು ನನ್ನ ಜೊತೆಗೆ ಮಾತಾಡಿದ್ದು, ನಾವು ಬಹಳ ತಪ್ಪು ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ. ಅಂತಿಮವಾಗಿ ಕೋರ್ಟ್​ನಲ್ಲಿ ನ್ಯಾಯ ಸಿಕ್ಕು ಸಿದ್ದರಾಮಯ್ಯನವರು ಮತ್ತಷ್ಟು ಬಲಿಷ್ಠರಾಗುತ್ತಾರೆ. ಆಗ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಈಗ ಸಿಎಂ ಇದ್ದಾರೆ. ಅವರೇ ಮುಂದುವರೆಯುತ್ತಾರೆ. ಸಿಎಂ ಖುರ್ಚಿಗೆ ಯಾರೂ ಟವೆಲ್ ಹಾಕೋ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯನವರ ಈ ಅವಧಿ ಮುಗಿದ ಮೇಲೆ ಆ ಪ್ರಶ್ನೆ ಉದ್ಭವಿಸುತ್ತದೆ. ನಾನು ಯಾವುದೇ ಆಕಾಂಕ್ಷಿ ಅಲ್ಲ‌. ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆ. ನಾನು ಬಯಸಿದರೆ ಸಿಎಂ ಆಗಲ್ಲ‌. ಹೈಕಮಾಂಡ್, ಶಾಸಕರು ಬಯಸಬೇಕು. ಈಗ ಅಂತೂ ಸಿಎಂ ಸ್ಥಾನ ಖಾಲಿ ಇಲ್ಲ‌. ಅಂತಹ ದುರಾಸೆಗಳಿಲ್ಲ‌. ನಾವು ಬಿಜಾಪುರದವರು ಬಹಳ ನೇರವಾಗಿದ್ದೇವೆ. ನಮ್ಮಲ್ಲಿ ಯಾರೂ ದುರಾಸೆ ಪಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಎಲ್ಲ ಸಚಿವರು, ಶಾಸಕರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇಡೀ ಪಕ್ಷ ನಿಂತಿದೆ ಎಂದು ಸಮರ್ಥಿಸಿಕೊಂಡರು.

ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಲಿಂಗಾಯತ ಧರ್ಮದ ಹೋರಾಟ ಕೈ ಬಿಟ್ಟರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ಸಂಬಂಧ ಬೇರೆ, ಹೋರಾಟ, ಸಂಘಟನೆ ಬೇರೆ‌. ಅದು ನಡೆಯುತ್ತಿದೆ. ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭೆ ಅಧಿವೇಶನದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ, ನೀವು ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು.

ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಶೆಡ್ ಗಿರಾಕಿ ಎಂದು ಛಲವಾದಿ ನಾರಾಯಣಸ್ವಾಮಿ ಕರೆದಿರುವ ವಿಚಾರಕ್ಕೆ, ರಾಜಕೀಯ ಹೊರತುಪಡಿಸಿ ಛಲವಾದಿ ನಾರಾಯಣಸ್ವಾಮಿ ನನಗೆ ಆಪ್ತರು. ಛಲವಾದಿ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ರಾಹುಲ್, ಖರ್ಗೆ ಕೂಡ ದಲಿತರೇ ಅಲ್ಲವೇ ? ಒಬ್ಬ ದಲಿತರನ್ನು ಉಪಯೋಗಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ದಲಿತರಿಗೆ ಮಾಡಿದ ಅಪಮಾನ ಅಲ್ಲವೇ? ಛಲವಾದಿ ನಾರಾಯಣಸ್ವಾಮಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶೆಡ್ ಗಿರಾಕಿ ಎಂದು ಆ ಅರ್ಥದಲ್ಲಿ ಕರೆದಿಲ್ಲ. ಒಂದು ವೇಳೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಯತ್ನಾಳ್​ ಕಾರ್ಖಾನೆಗೆ ಅನುಮತಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕೈಗಾರಿಕೆ ಆರಂಭಿಸಲು ಪರಿಸರ ಇಲಾಖೆ ಅನುಮತಿ ಪಡೆಯಬೇಕು‌‌. ಯತ್ನಾಳ್ ಅವರು ಅನುಮತಿ ಪಡೆದಿಲ್ಲ. ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಇದರಲ್ಲಿ ಯಾರಿಗೂ ಅನುಮತಿ ಕೊಡುವ ಪ್ರಶ್ನೆ ಇಲ್ಲ. ಪರಿಸರ ಇಲಾಖೆ ಅನುಮತಿ ಕಡ್ಡಾಯ ಎಂದರು.

ಬೆಳಗಾವಿ ಕಾರ್ಖಾನೆ ದುರಂತದ ಬಗ್ಗೆ ನಿನ್ನೆ ಪ್ರಾಥಮಿಕ ಮಾಹಿತಿ ಪಡೆದಿದ್ದೇನೆ. ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ. ಅಲ್ಲದೇ ತಪ್ಪಿತಸ್ಥರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ - ಆರ್​ಎಸ್ಎಸ್ ಹುನ್ನಾರ : ಪಂಚಾಯತ್ ಸದಸ್ಯ ಸ್ಥಾನದಿಂದ AICC ಅಧ್ಯಕ್ಷ ಸ್ಥಾನದವರೆಗೆ ಏರಿದ ರಾಜ್ಯದ ಒಬ್ಬ ಧೀಮಂತ ನಾಯಕ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಅವರ ತೇಜೋವಧೆ ಮಾಡುವುದು ಬಿಜೆಪಿ-ಆರ್​ಎಸ್​ಎಸ್ ಹುನ್ನಾರ ಎಂದು ಸಚಿವ ಎಂ. ಬಿ ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಛಲವಾದಿ ನಾರಾಯಣಸ್ವಾಮಿಯವರು ಕೇವಲ ಕೈಗೊಂಬೆ. ಅವರದೇ ಇತಿಹಾಸ ಈ ರೀತಿ ಇದೆ ಎಂದು ತಿಳಿಯದೆ ಈ ಹುನ್ನಾರದಲ್ಲಿ ಭಾಗಿಯಾಗಿ ಅವರೇ ಈಗ ಹರಕೆಯ ಕುರಿಯಾಗಿದ್ದಾರೆ. ಲಿಂಗಾಯತರನ್ನೂ ಒಳಗೊಂಡಂತೆ ಹಿಂದುಳಿದವರನ್ನು ಬಳಸಿ ಬಿಸಾಡುವ ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ ಎಂದರು.

ಒಬ್ಬ ಹಿಂದುಳಿದ ಸಮುದಾಯದ ನಾಯಕನ ಏಳಿಗೆ ಸಹಿಸದೆ ಅವರದ್ದೇ ಸಮುದಾಯವರನ್ನು ಬಳಸಿಕೊಂಡು ತೇಜೋವಧೆ ಮಾಡಿಸುವ ಮೂಲಕ, ಸಮುದಾಯದ ನಾಯಕರಲ್ಲಿ ವೈಷಮ್ಯ ಮೂಡಿಸುವುದೇ ಇವರ ಅಜೆಂಡಾ. ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಗೂ ಛಲವಾದಿ ನಾರಾಯಣಸ್ವಾಮಿಯವರನ್ನು ಹರಕೆಯ ಕುರಿ ಮಾಡಿದ್ದಕ್ಕೆ ಬಿಜೆಪಿ- ಆರ್​ಎಸ್​ಎಸ್​ ಬಹಿರಂಗವಾಗಿ ಪರಿಶಿಷ್ಟ ಜಾತಿ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನಾನು ಶೆಡ್​ ಗಿರಾಕಿಯೇ, ದೊಡ್ ಗಿರಾಕಿ ಅಲ್ಲ: ಎಂ ಬಿ ಪಾಟೀಲ್​ಗೆ ಛಲವಾದಿ ತಿರುಗೇಟು - Chalavadi Narayana Swamy

ಸಚಿವ ಎಂ. ಬಿ ಪಾಟೀಲ್ (ETV Bharat)

ಬೆಳಗಾವಿ: ವಿಜಯೇಂದ್ರ ಗಾಡಿ ಬಹಳ ದಿನ ಹೋಗೋದಿಲ್ಲ. ವಿಜಯೇಂದ್ರ ನಾಯಕತ್ವವನ್ನು ಅವರದೇ ಪಕ್ಷದ ಯತ್ನಾಳ್​, ರಮೇಶ್​ ಜಾರಕಿಹೊಳಿ, ಆರ್. ಅಶೋಕ್​, ಬೊಮ್ಮಾಯಿ ಸೇರಿ ಬಹಳಷ್ಟು ನಾಯಕರು ಒಪ್ಪುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ, ಆರ್​ಎಸ್ಎಸ್ ಕೆಲಸವೇ ಒಡೆದು ಆಳುವುದು ಎಂದು ಸಚಿವ ಎಂ. ಬಿ‌ ಪಾಟೀಲ್​ ವಾಗ್ದಾಳಿ ಮಾಡಿದರು.

ದಲಿತ ವರ್ಸಸ್ ದಲಿತ ಮಾಡುವ ನಿಟ್ಟಿನಲ್ಲಿ ಯಾರಾದರೂ ಧ್ವನಿ ಎತ್ತಿದರೆ ಬೇರೆ ಆಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರನ್ನು ಎತ್ತಿಕಟ್ಟಿ, ಬಲಿಪಶು ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ವಿರುದ್ಧ ಯತ್ನಾಳ್ ಸೇರಿ ಮತ್ತಿತರ ಲಿಂಗಾಯತ ನಾಯಕರನ್ನೇ ಬಳಸಿಕೊಂಡು ಷಡ್ಯಂತ್ರ ಮಾಡಿದರು. ಇದನ್ನು ವಿಜಯೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದ ಎಂ. ಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಬಹುದಿತ್ತು. ಆದರೆ, ಛಲವಾದಿ ನಾರಾಯಣಸ್ವಾಮಿ ಅವರನ್ನೆ ಏಕೆ ಆಯ್ಕೆ ಮಾಡಿದರು ಎಂದು ಪ್ರಶ್ನಿಸಿದರು‌.

ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದರೆ ಮುಂದಿನ ಸಿಎಂ ರೇಸ್​ನಲ್ಲಿ ತಾವಿದ್ದಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಮುಡಾ ಕೇಸ್​ನಲ್ಲಿ ಎಳ್ಳಷ್ಟು ಸಿದ್ದರಾಮಯ್ಯ ತಪ್ಪಿಲ್ಲ. ಬಿಜೆಪಿಯವರು ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರುತ್ತದೆ. ಖಾಸಗಿಯಾಗಿ ಅನೇಕ ಬಿಜೆಪಿ ನಾಯಕರು ನನ್ನ ಜೊತೆಗೆ ಮಾತಾಡಿದ್ದು, ನಾವು ಬಹಳ ತಪ್ಪು ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ. ಅಂತಿಮವಾಗಿ ಕೋರ್ಟ್​ನಲ್ಲಿ ನ್ಯಾಯ ಸಿಕ್ಕು ಸಿದ್ದರಾಮಯ್ಯನವರು ಮತ್ತಷ್ಟು ಬಲಿಷ್ಠರಾಗುತ್ತಾರೆ. ಆಗ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಈಗ ಸಿಎಂ ಇದ್ದಾರೆ. ಅವರೇ ಮುಂದುವರೆಯುತ್ತಾರೆ. ಸಿಎಂ ಖುರ್ಚಿಗೆ ಯಾರೂ ಟವೆಲ್ ಹಾಕೋ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯನವರ ಈ ಅವಧಿ ಮುಗಿದ ಮೇಲೆ ಆ ಪ್ರಶ್ನೆ ಉದ್ಭವಿಸುತ್ತದೆ. ನಾನು ಯಾವುದೇ ಆಕಾಂಕ್ಷಿ ಅಲ್ಲ‌. ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆ. ನಾನು ಬಯಸಿದರೆ ಸಿಎಂ ಆಗಲ್ಲ‌. ಹೈಕಮಾಂಡ್, ಶಾಸಕರು ಬಯಸಬೇಕು. ಈಗ ಅಂತೂ ಸಿಎಂ ಸ್ಥಾನ ಖಾಲಿ ಇಲ್ಲ‌. ಅಂತಹ ದುರಾಸೆಗಳಿಲ್ಲ‌. ನಾವು ಬಿಜಾಪುರದವರು ಬಹಳ ನೇರವಾಗಿದ್ದೇವೆ. ನಮ್ಮಲ್ಲಿ ಯಾರೂ ದುರಾಸೆ ಪಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಎಲ್ಲ ಸಚಿವರು, ಶಾಸಕರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇಡೀ ಪಕ್ಷ ನಿಂತಿದೆ ಎಂದು ಸಮರ್ಥಿಸಿಕೊಂಡರು.

ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಲಿಂಗಾಯತ ಧರ್ಮದ ಹೋರಾಟ ಕೈ ಬಿಟ್ಟರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ಸಂಬಂಧ ಬೇರೆ, ಹೋರಾಟ, ಸಂಘಟನೆ ಬೇರೆ‌. ಅದು ನಡೆಯುತ್ತಿದೆ. ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭೆ ಅಧಿವೇಶನದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ, ನೀವು ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು.

ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಶೆಡ್ ಗಿರಾಕಿ ಎಂದು ಛಲವಾದಿ ನಾರಾಯಣಸ್ವಾಮಿ ಕರೆದಿರುವ ವಿಚಾರಕ್ಕೆ, ರಾಜಕೀಯ ಹೊರತುಪಡಿಸಿ ಛಲವಾದಿ ನಾರಾಯಣಸ್ವಾಮಿ ನನಗೆ ಆಪ್ತರು. ಛಲವಾದಿ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ರಾಹುಲ್, ಖರ್ಗೆ ಕೂಡ ದಲಿತರೇ ಅಲ್ಲವೇ ? ಒಬ್ಬ ದಲಿತರನ್ನು ಉಪಯೋಗಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ದಲಿತರಿಗೆ ಮಾಡಿದ ಅಪಮಾನ ಅಲ್ಲವೇ? ಛಲವಾದಿ ನಾರಾಯಣಸ್ವಾಮಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶೆಡ್ ಗಿರಾಕಿ ಎಂದು ಆ ಅರ್ಥದಲ್ಲಿ ಕರೆದಿಲ್ಲ. ಒಂದು ವೇಳೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಯತ್ನಾಳ್​ ಕಾರ್ಖಾನೆಗೆ ಅನುಮತಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕೈಗಾರಿಕೆ ಆರಂಭಿಸಲು ಪರಿಸರ ಇಲಾಖೆ ಅನುಮತಿ ಪಡೆಯಬೇಕು‌‌. ಯತ್ನಾಳ್ ಅವರು ಅನುಮತಿ ಪಡೆದಿಲ್ಲ. ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಇದರಲ್ಲಿ ಯಾರಿಗೂ ಅನುಮತಿ ಕೊಡುವ ಪ್ರಶ್ನೆ ಇಲ್ಲ. ಪರಿಸರ ಇಲಾಖೆ ಅನುಮತಿ ಕಡ್ಡಾಯ ಎಂದರು.

ಬೆಳಗಾವಿ ಕಾರ್ಖಾನೆ ದುರಂತದ ಬಗ್ಗೆ ನಿನ್ನೆ ಪ್ರಾಥಮಿಕ ಮಾಹಿತಿ ಪಡೆದಿದ್ದೇನೆ. ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ. ಅಲ್ಲದೇ ತಪ್ಪಿತಸ್ಥರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ - ಆರ್​ಎಸ್ಎಸ್ ಹುನ್ನಾರ : ಪಂಚಾಯತ್ ಸದಸ್ಯ ಸ್ಥಾನದಿಂದ AICC ಅಧ್ಯಕ್ಷ ಸ್ಥಾನದವರೆಗೆ ಏರಿದ ರಾಜ್ಯದ ಒಬ್ಬ ಧೀಮಂತ ನಾಯಕ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಅವರ ತೇಜೋವಧೆ ಮಾಡುವುದು ಬಿಜೆಪಿ-ಆರ್​ಎಸ್​ಎಸ್ ಹುನ್ನಾರ ಎಂದು ಸಚಿವ ಎಂ. ಬಿ ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಛಲವಾದಿ ನಾರಾಯಣಸ್ವಾಮಿಯವರು ಕೇವಲ ಕೈಗೊಂಬೆ. ಅವರದೇ ಇತಿಹಾಸ ಈ ರೀತಿ ಇದೆ ಎಂದು ತಿಳಿಯದೆ ಈ ಹುನ್ನಾರದಲ್ಲಿ ಭಾಗಿಯಾಗಿ ಅವರೇ ಈಗ ಹರಕೆಯ ಕುರಿಯಾಗಿದ್ದಾರೆ. ಲಿಂಗಾಯತರನ್ನೂ ಒಳಗೊಂಡಂತೆ ಹಿಂದುಳಿದವರನ್ನು ಬಳಸಿ ಬಿಸಾಡುವ ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ ಎಂದರು.

ಒಬ್ಬ ಹಿಂದುಳಿದ ಸಮುದಾಯದ ನಾಯಕನ ಏಳಿಗೆ ಸಹಿಸದೆ ಅವರದ್ದೇ ಸಮುದಾಯವರನ್ನು ಬಳಸಿಕೊಂಡು ತೇಜೋವಧೆ ಮಾಡಿಸುವ ಮೂಲಕ, ಸಮುದಾಯದ ನಾಯಕರಲ್ಲಿ ವೈಷಮ್ಯ ಮೂಡಿಸುವುದೇ ಇವರ ಅಜೆಂಡಾ. ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಗೂ ಛಲವಾದಿ ನಾರಾಯಣಸ್ವಾಮಿಯವರನ್ನು ಹರಕೆಯ ಕುರಿ ಮಾಡಿದ್ದಕ್ಕೆ ಬಿಜೆಪಿ- ಆರ್​ಎಸ್​ಎಸ್​ ಬಹಿರಂಗವಾಗಿ ಪರಿಶಿಷ್ಟ ಜಾತಿ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನಾನು ಶೆಡ್​ ಗಿರಾಕಿಯೇ, ದೊಡ್ ಗಿರಾಕಿ ಅಲ್ಲ: ಎಂ ಬಿ ಪಾಟೀಲ್​ಗೆ ಛಲವಾದಿ ತಿರುಗೇಟು - Chalavadi Narayana Swamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.