ETV Bharat / state

ಬಡತನದಲ್ಲಿ ಅರಳಿದ ಪ್ರತಿಭೆ: ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದ ಮಯೂರ್​ ಖಿಲಾರಿ! - KUD Convocation

author img

By ETV Bharat Karnataka Team

Published : 3 hours ago

ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಕೃಷಿಕನ ಮಗನೊಬ್ಬ ಏಳು ಚಿನ್ನದ ಪದಕ ಪಡೆದಿದ್ದಾರೆ.

KUD CONVOCATION
ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದ ಮಯೂರ್​ ಖಿಲಾರಿ (ETV Bharat)

ಕಾರವಾರ: ಬಡತನದಿಂದಾಗಿ ಕಾಲೇಜಿನ‌ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೃಷಿಕನ ಮಗನೋರ್ವ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ.

ಯಲ್ಲಾಪುರ - ಕಿರವತ್ತಿ ಗ್ರಾಮ ಪಂಚಾಯತ್ ‌ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಮಯೂರ್ ಖಿಲಾರಿ ಇಂತಹದೊಂದು ಸಾಧನೆ ಮೂಲಕ ಇದೀಗ ತಂದೆ - ತಾಯಿ ಹಾಗೂ ಗ್ರಾಮಸ್ಥರು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.

ರಾಮಚಂದ್ರ ಹಾಗೂ ಭೀಮವ್ವಾ ದಂಪತಿಯ ದ್ವಿತೀಯ ಪುತ್ರರಾಗಿದ್ದಾರೆ. ಬಡತನದಲ್ಲಿ ಬೆಳೆದು ಬಂದ ಮಯೂರ್, ಶಾಲೆ ಹಾಗೂ ಕಾಲೇಜಿನ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ಪಾಲಕರಿಗೆ ಆಸರೆಯಾಗುತ್ತಿದ್ದರು. ಇದರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ್ದರು. ಇದೀಗ ಅವರ ಶ್ರಮಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಮಂಗಳವಾರ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಬಂಗಾರದ ಪದಕಗಳನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. ಇನ್ನು ಈ ಸಾಧನೆಗೆ ಗಜಾನನೋತ್ಸವ ಸಮಿತಿ ಹೊಸಳ್ಳಿ, ಯುವಕರ ಯುಗಾದಿ ಉತ್ಸವ ಸಮಿತಿ ಮತ್ತು ಎಸ್​ಡಿಎಂಸಿ, ಶಾಲಾ ಶಿಕ್ಷಕ ವೃಂದ ಹಾಗೂ ಊರನಾಗರಿಕರಿಂದ ಘಟಿಕೋತ್ಸವದ ಬಳಿಕ ಬುಧವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಸಾಧನೆಗೆ ಸಹೋದರ ಯಲ್ಲಪ್ಪ ಖಿಲಾರಿ, ಗಜಾನನೋತ್ಸವ ಸಮಿತಿ ಹೊಸಳ್ಳಿ ಅಧ್ಯಕ್ಷ ಆನಂದ ಶೆಟ್ಟಿ, ಪ್ರಮುಖರಾದ ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ, ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾಂತ್ ಪಾಟೀಲ್, ವಿಜಯ ಕಾಂಬಳೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು‌ ಕಾಂಬಳೆ, ಸಂತೋಷ ಬನ್ನೇಣ್ಣವರ, ಅಜಯ ಕಾಂಬಳೆ, ರುಸ್ತಂ ಶೇಖ, ನಾಗರಾಜ ಕದಂ ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ಲಕ್ಷಣ ಚಿನ್ನಪ್ಪಗೋಳ, ಹಸನ‌ ಬಿಜಾಪುರ, ಶಾರುಖ್‌ ಬಿಜಾಪುರ, ಅಭಿಷೇಕ ಕದಂ, ವಿನೋದ ಚವ್ಹಾನ ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ನೇಕಾರನ ಮಗ, ಆಟೋ ಚಾಲಕನ ಮಗಳ ಬಂಗಾರದ ಬೇಟೆ : ಇದು ಬಡವರ ಮನೆ ಮಕ್ಕಳ ಸಾಧನೆ - VTU GOLD MEDAL ACHIEVERS

ಮೈಸೂರು ವಿವಿ ಘಟಿಕೋತ್ಸವ: ಎಂಎಸ್ಸಿಯಲ್ಲಿ ಮೇಘನಾಗೆ 15 ಗೋಲ್ಡ್​ ಮೆಡಲ್​, ಕನ್ನಡದಲ್ಲಿ ತೇಜಸ್ವಿನಿಗೆ 10 ಚಿನ್ನದ ಪದಕ

ವಿಟಿಯು ಘಟಿಕೋತ್ಸವ ಭಾಗ-2: ಸರ್ಕಾರಿ ಕಾಲೇಜು ವಿದ್ಯಾರ್ಥಿನಿಗೆ 3, ಸಣ್ಣ ಹೋಟೆಲ್ ಮಾಲೀಕನ ಪುತ್ರಿಗೆ 4 ಚಿನ್ನದ ಪದಕ

ಕಾರವಾರ: ಬಡತನದಿಂದಾಗಿ ಕಾಲೇಜಿನ‌ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೃಷಿಕನ ಮಗನೋರ್ವ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ.

ಯಲ್ಲಾಪುರ - ಕಿರವತ್ತಿ ಗ್ರಾಮ ಪಂಚಾಯತ್ ‌ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಮಯೂರ್ ಖಿಲಾರಿ ಇಂತಹದೊಂದು ಸಾಧನೆ ಮೂಲಕ ಇದೀಗ ತಂದೆ - ತಾಯಿ ಹಾಗೂ ಗ್ರಾಮಸ್ಥರು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.

ರಾಮಚಂದ್ರ ಹಾಗೂ ಭೀಮವ್ವಾ ದಂಪತಿಯ ದ್ವಿತೀಯ ಪುತ್ರರಾಗಿದ್ದಾರೆ. ಬಡತನದಲ್ಲಿ ಬೆಳೆದು ಬಂದ ಮಯೂರ್, ಶಾಲೆ ಹಾಗೂ ಕಾಲೇಜಿನ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ಪಾಲಕರಿಗೆ ಆಸರೆಯಾಗುತ್ತಿದ್ದರು. ಇದರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ್ದರು. ಇದೀಗ ಅವರ ಶ್ರಮಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಮಂಗಳವಾರ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಬಂಗಾರದ ಪದಕಗಳನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. ಇನ್ನು ಈ ಸಾಧನೆಗೆ ಗಜಾನನೋತ್ಸವ ಸಮಿತಿ ಹೊಸಳ್ಳಿ, ಯುವಕರ ಯುಗಾದಿ ಉತ್ಸವ ಸಮಿತಿ ಮತ್ತು ಎಸ್​ಡಿಎಂಸಿ, ಶಾಲಾ ಶಿಕ್ಷಕ ವೃಂದ ಹಾಗೂ ಊರನಾಗರಿಕರಿಂದ ಘಟಿಕೋತ್ಸವದ ಬಳಿಕ ಬುಧವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಸಾಧನೆಗೆ ಸಹೋದರ ಯಲ್ಲಪ್ಪ ಖಿಲಾರಿ, ಗಜಾನನೋತ್ಸವ ಸಮಿತಿ ಹೊಸಳ್ಳಿ ಅಧ್ಯಕ್ಷ ಆನಂದ ಶೆಟ್ಟಿ, ಪ್ರಮುಖರಾದ ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ, ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾಂತ್ ಪಾಟೀಲ್, ವಿಜಯ ಕಾಂಬಳೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು‌ ಕಾಂಬಳೆ, ಸಂತೋಷ ಬನ್ನೇಣ್ಣವರ, ಅಜಯ ಕಾಂಬಳೆ, ರುಸ್ತಂ ಶೇಖ, ನಾಗರಾಜ ಕದಂ ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ಲಕ್ಷಣ ಚಿನ್ನಪ್ಪಗೋಳ, ಹಸನ‌ ಬಿಜಾಪುರ, ಶಾರುಖ್‌ ಬಿಜಾಪುರ, ಅಭಿಷೇಕ ಕದಂ, ವಿನೋದ ಚವ್ಹಾನ ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ನೇಕಾರನ ಮಗ, ಆಟೋ ಚಾಲಕನ ಮಗಳ ಬಂಗಾರದ ಬೇಟೆ : ಇದು ಬಡವರ ಮನೆ ಮಕ್ಕಳ ಸಾಧನೆ - VTU GOLD MEDAL ACHIEVERS

ಮೈಸೂರು ವಿವಿ ಘಟಿಕೋತ್ಸವ: ಎಂಎಸ್ಸಿಯಲ್ಲಿ ಮೇಘನಾಗೆ 15 ಗೋಲ್ಡ್​ ಮೆಡಲ್​, ಕನ್ನಡದಲ್ಲಿ ತೇಜಸ್ವಿನಿಗೆ 10 ಚಿನ್ನದ ಪದಕ

ವಿಟಿಯು ಘಟಿಕೋತ್ಸವ ಭಾಗ-2: ಸರ್ಕಾರಿ ಕಾಲೇಜು ವಿದ್ಯಾರ್ಥಿನಿಗೆ 3, ಸಣ್ಣ ಹೋಟೆಲ್ ಮಾಲೀಕನ ಪುತ್ರಿಗೆ 4 ಚಿನ್ನದ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.