ETV Bharat / state

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ - Raghavendra Swamy Maharathotsava

author img

By ETV Bharat Karnataka Team

Published : Aug 22, 2024, 7:12 PM IST

Updated : Aug 22, 2024, 7:38 PM IST

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ ಇಂದು ಅತ್ಯಂತ ಸಂಭ್ರಮದಿಂದ ನೆರವೇರಿತು. ರಥೋತ್ಸವಕ್ಕೂ ಮುನ್ನ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ನೆರೆದ ಭಕ್ತರಿಗೆ ಬಣ್ಣ ಎರಚುವ ಮೂಲಕ ವಸಂತವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

shri-raghavendra-swamy-maharathotsava-celebrated
ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ (ETV Bharat)
ಅದ್ಧೂರಿಯಾಗಿ ನೆರವೇರಿದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ (ETV Bharat)

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ ಇಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಐದನೇ ದಿನ ಬೆಳಿಗ್ಗೆಯಿಂದ ವಿವಿಧ ಪೂಜೆ ಕೈಂಕರ್ಯಗಳು ನಡೆದವು. ರಥೋತ್ಸವಕ್ಕೆ ಮುನ್ನ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಸಂತಕ್ಕೆ ಚಾಲನೆ ಕೊಟ್ಟರು. ರಾಯರ ಮೂಲ ಬೃಂದಾವನ ಗುಲಾಲ್(ಬಣ್ಣ) ಸಮರ್ಪಿಸಿದರು. ನೆರೆದ ಭಕ್ತರಿಗೆ ಬಣ್ಣ ಎರಚುವ ಮೂಲಕ ವಸಂತವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಇದಾದ ನಂತರ, ಪ್ರಹ್ಲಾದ್ ರಾಜ್ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವಿವಿಧ ಪ್ರಕಾರಗಳ ವಾದ್ಯ ಮೇಳದೊಂದಿಗೆ ಪ್ರದಕ್ಷಿಣೆ ಮಾಡ, ಪೂಜೆ ಸಲ್ಲಿಸಲಾಯಿತು.

MP YADUVEER WADIYAR
ಸಂಸದ ಯದುವೀರ್ ಶ್ರೀಕಂಠದತ್ತ ಒಡೆಯರ್‌ಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ (ETV Bharat)

ಬಾಂಗ್ಲಾ ಹಿಂದೂಗಳ ಮೇಲೆ ದಾಳಿ ಖಂಡಿಸಿದ ಶ್ರೀಗಳು: ಸುಬುಧೇಂದ್ರ ತೀರ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, "ಜಾತಿ, ಮತ, ಬೇಧವಿಲ್ಲದೆ ದೇಶದಲ್ಲಿ ನಡೆಯುವ ಹಬ್ಬ ರಾಯರ ಆರಾಧನಾ ಮಹೋತ್ಸವ. ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ, ಮನುಕುಲಕ್ಕೆ ಒಳ್ಳೆಯದಾಗಲಿ. ಗಲಭೆಗಳು ಆಗದಂತೆ ಭಗವಂತ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸೋಣ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ, ಇದು ಅತ್ಯಂತ ಹೇಯವಾದದ್ದು, ಖಂಡಿಸೋಣ" ಎಂದರು.

"ಎಲ್ಲರೂ ಅಣ್ಣ-ತಮ್ಮಂದಿರ ಹಾಗೆ ಬಾಳುವಂತಾಗಬೇಕು. ದೇಶ-ದೇಶಗಳ ನಡುವೆ ಗಲಭೆಯಾಗದಂತೆ ಭಗವಂತ ಕಾಪಾಡಲಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇವೆ. ಇದೇ ವೇಳೆ ಮಠದ ಸಿಬ್ಬಂದಿಗೆ ವೇತನ ಹೆಚ್ಚಳ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ" ಎಂದೂ ಶ್ರೀಗಳು ಘೋಷಿಸಿದರು.

ಯದುವೀರ್‌ಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ: ಇದಕ್ಕೂ ಮುನ್ನ ನಡೆದ ಮಠದ ಸಮಾರಂಭದಲ್ಲಿ ಸಂಸದ ಯದುವೀರ್ ಶ್ರೀಕಂಠದತ್ತ ಒಡೆಯರ್‌ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ವೇಳೆ ಮಠದ ಪೂರ್ವಾಶ್ರಮದ ತಂದೆಯರಾದ ಡಾ.ಗಿರಿರಾಜ್‌ಆಚಾರ್, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್‌ರಾವ್, ಪಿಆರ್‌ಒ ಐ.ಪಿ.ನರಸಿಂಹಚಾರ್ಯ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ: Live: ರಾಘವೇಂದ್ರಸ್ವಾಮಿಗಳ ವಿಜೃಂಭಣೆಯ ಉತ್ತರಾಧನೆ ಸಂಭ್ರಮ - Aradhana Mahotsava

ಅದ್ಧೂರಿಯಾಗಿ ನೆರವೇರಿದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ (ETV Bharat)

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ ಇಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಐದನೇ ದಿನ ಬೆಳಿಗ್ಗೆಯಿಂದ ವಿವಿಧ ಪೂಜೆ ಕೈಂಕರ್ಯಗಳು ನಡೆದವು. ರಥೋತ್ಸವಕ್ಕೆ ಮುನ್ನ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಸಂತಕ್ಕೆ ಚಾಲನೆ ಕೊಟ್ಟರು. ರಾಯರ ಮೂಲ ಬೃಂದಾವನ ಗುಲಾಲ್(ಬಣ್ಣ) ಸಮರ್ಪಿಸಿದರು. ನೆರೆದ ಭಕ್ತರಿಗೆ ಬಣ್ಣ ಎರಚುವ ಮೂಲಕ ವಸಂತವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಇದಾದ ನಂತರ, ಪ್ರಹ್ಲಾದ್ ರಾಜ್ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವಿವಿಧ ಪ್ರಕಾರಗಳ ವಾದ್ಯ ಮೇಳದೊಂದಿಗೆ ಪ್ರದಕ್ಷಿಣೆ ಮಾಡ, ಪೂಜೆ ಸಲ್ಲಿಸಲಾಯಿತು.

MP YADUVEER WADIYAR
ಸಂಸದ ಯದುವೀರ್ ಶ್ರೀಕಂಠದತ್ತ ಒಡೆಯರ್‌ಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ (ETV Bharat)

ಬಾಂಗ್ಲಾ ಹಿಂದೂಗಳ ಮೇಲೆ ದಾಳಿ ಖಂಡಿಸಿದ ಶ್ರೀಗಳು: ಸುಬುಧೇಂದ್ರ ತೀರ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, "ಜಾತಿ, ಮತ, ಬೇಧವಿಲ್ಲದೆ ದೇಶದಲ್ಲಿ ನಡೆಯುವ ಹಬ್ಬ ರಾಯರ ಆರಾಧನಾ ಮಹೋತ್ಸವ. ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ, ಮನುಕುಲಕ್ಕೆ ಒಳ್ಳೆಯದಾಗಲಿ. ಗಲಭೆಗಳು ಆಗದಂತೆ ಭಗವಂತ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸೋಣ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ, ಇದು ಅತ್ಯಂತ ಹೇಯವಾದದ್ದು, ಖಂಡಿಸೋಣ" ಎಂದರು.

"ಎಲ್ಲರೂ ಅಣ್ಣ-ತಮ್ಮಂದಿರ ಹಾಗೆ ಬಾಳುವಂತಾಗಬೇಕು. ದೇಶ-ದೇಶಗಳ ನಡುವೆ ಗಲಭೆಯಾಗದಂತೆ ಭಗವಂತ ಕಾಪಾಡಲಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇವೆ. ಇದೇ ವೇಳೆ ಮಠದ ಸಿಬ್ಬಂದಿಗೆ ವೇತನ ಹೆಚ್ಚಳ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ" ಎಂದೂ ಶ್ರೀಗಳು ಘೋಷಿಸಿದರು.

ಯದುವೀರ್‌ಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ: ಇದಕ್ಕೂ ಮುನ್ನ ನಡೆದ ಮಠದ ಸಮಾರಂಭದಲ್ಲಿ ಸಂಸದ ಯದುವೀರ್ ಶ್ರೀಕಂಠದತ್ತ ಒಡೆಯರ್‌ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ವೇಳೆ ಮಠದ ಪೂರ್ವಾಶ್ರಮದ ತಂದೆಯರಾದ ಡಾ.ಗಿರಿರಾಜ್‌ಆಚಾರ್, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್‌ರಾವ್, ಪಿಆರ್‌ಒ ಐ.ಪಿ.ನರಸಿಂಹಚಾರ್ಯ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ: Live: ರಾಘವೇಂದ್ರಸ್ವಾಮಿಗಳ ವಿಜೃಂಭಣೆಯ ಉತ್ತರಾಧನೆ ಸಂಭ್ರಮ - Aradhana Mahotsava

Last Updated : Aug 22, 2024, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.