ETV Bharat / state

ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ-ಮುಸ್ಲಿಂ ಸ್ನೇಹಿತರ ಭಾವೈಕ್ಯತೆ - Harmony of Hindu Muslim friends

author img

By ETV Bharat Karnataka Team

Published : Sep 7, 2024, 12:59 PM IST

Updated : Sep 7, 2024, 4:01 PM IST

ಹಿಂದೂ ಹಾಗೂ ಮುಸ್ಲಿಂ ಸ್ನೇಹಿತರಿಬ್ಬರು ಪಿಯುಸಿಯಿಂದಲೂ ಅವರ ಮನೆಯಲ್ಲಿ ನಡೆಯುವ ಹಬ್ಬಕ್ಕೆ ಇವರು ಹಾಗೂ ಇವರ ಮನೆಯಲ್ಲಿ ಆಚರಿಸುವ ಹಬ್ಬಗಳಿಗೆ ಅವರು ಬಂದು ಭಾಗವಹಿಸಿ ಧಾರ್ಮಿಕ ಸಾಮರಸ್ಯ ಮೆರೆಯುತ್ತಿದ್ದಾರೆ.

Koppala: Harmony of Hindu Muslim friends even on Ganesha festival
ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ ಮುಸ್ಲಿಂ ಸ್ನೇಹಿತರ ಭಾವೈಕ್ಯತೆ (ETV Bharat)

ಕೊಪ್ಪಳ: ಇಂದಿನಿಂದ ನಾಡಿನಾದ್ಯಂತ ಗಣೇಶಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೊಪ್ಪಳದಲ್ಲಿ ಹಿಂದೂ ಮುಸ್ಲಿಂ ಸ್ನೇಹಿತರಿಬ್ಬರು ಗಣೇಶ ಹಬ್ಬವನ್ನು ಕಳೆದ ಎಂಟು ವರ್ಷಗಳಿಂದ ಕೂಡಿಕೊಂಡು ಆಚರಿಸುತ್ತಿದ್ದಾರೆ. ಕೊಪ್ಪಳ ನಗರದ ದೇವರಾಜ ಅರಸ ಕಾಲೊನಿಯ ಶಿವರಾಜ್​ ಅವರ ಮನೆಗೆ ಅವರ ಸ್ನೇಹಿತ ಶ್ಯಾಮೀದ್​ ಅಲಿ ಅವರು ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಬರುತ್ತಾರೆ. ಶಿವರಾಜ್​ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಯನ್ನು ಶ್ಯಾಮೀದ್​ ಅಲಿ ಅವರೇ ತೆಗೆದುಕೊಂಡು ಹೋಗುತ್ತಾರೆ.

ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ-ಮುಸ್ಲಿಂ ಸ್ನೇಹಿತರ ಭಾವೈಕ್ಯತೆ (ETV Bharat)

ಪಿಯುಸಿಯಿಂದಲೂ ಸ್ನೇಹಿತರಾಗಿರುವ ಶಿವರಾಜ್​ ಹಾಗೂ ಶ್ಯಾಮೀದ್​ ಅಲಿ ಅವರು ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಯಾವುದೇ ಬೇಧವಿಲ್ಲದೆ ಪಾಲ್ಗೊಂಡು ಆಚರಿಸುತ್ತಾರೆ. ಶಿವರಾಜ್​ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶ್ಯಾಮೀದ್​ ಅಲಿ ಹಾಗೂ ಶ್ಯಾಮೀದ್​ ಅಲಿ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶಿವರಾಜ್​ ಅವರು ಪಾಲ್ಗೊಳ್ಳುತ್ತಾರೆ. ಜಾತಿ, ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು, ನಾವೆಲ್ಲರೂ ಒಂದೇ. ಇಲ್ಲಿ ಯಾರೂ ಬೇರೆ ಅಲ್ಲ. ಹೀಗಾಗಿ ನಾನು ಹಿಂದೂ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುತ್ತಾರೆ ಶ್ಯಾಮೀದ್​ ಅಲಿ.

ಇದನ್ನೂ ಓದಿ: ಮತ್ತೆ ಸಾಮರಸ್ಯದ ಹೆಜ್ಜೆ ಇಟ್ಟ ಮುಸ್ಲಿಂ ಮುಖಂಡರು; ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಮುಂದೂಡಿಕೆ, ಡಿಜೆ ಬ್ಯಾನ್ ನಿರ್ಧಾರ - Eid Milad procession

ಕೊಪ್ಪಳ: ಇಂದಿನಿಂದ ನಾಡಿನಾದ್ಯಂತ ಗಣೇಶಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೊಪ್ಪಳದಲ್ಲಿ ಹಿಂದೂ ಮುಸ್ಲಿಂ ಸ್ನೇಹಿತರಿಬ್ಬರು ಗಣೇಶ ಹಬ್ಬವನ್ನು ಕಳೆದ ಎಂಟು ವರ್ಷಗಳಿಂದ ಕೂಡಿಕೊಂಡು ಆಚರಿಸುತ್ತಿದ್ದಾರೆ. ಕೊಪ್ಪಳ ನಗರದ ದೇವರಾಜ ಅರಸ ಕಾಲೊನಿಯ ಶಿವರಾಜ್​ ಅವರ ಮನೆಗೆ ಅವರ ಸ್ನೇಹಿತ ಶ್ಯಾಮೀದ್​ ಅಲಿ ಅವರು ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಬರುತ್ತಾರೆ. ಶಿವರಾಜ್​ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಯನ್ನು ಶ್ಯಾಮೀದ್​ ಅಲಿ ಅವರೇ ತೆಗೆದುಕೊಂಡು ಹೋಗುತ್ತಾರೆ.

ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ-ಮುಸ್ಲಿಂ ಸ್ನೇಹಿತರ ಭಾವೈಕ್ಯತೆ (ETV Bharat)

ಪಿಯುಸಿಯಿಂದಲೂ ಸ್ನೇಹಿತರಾಗಿರುವ ಶಿವರಾಜ್​ ಹಾಗೂ ಶ್ಯಾಮೀದ್​ ಅಲಿ ಅವರು ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಯಾವುದೇ ಬೇಧವಿಲ್ಲದೆ ಪಾಲ್ಗೊಂಡು ಆಚರಿಸುತ್ತಾರೆ. ಶಿವರಾಜ್​ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶ್ಯಾಮೀದ್​ ಅಲಿ ಹಾಗೂ ಶ್ಯಾಮೀದ್​ ಅಲಿ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶಿವರಾಜ್​ ಅವರು ಪಾಲ್ಗೊಳ್ಳುತ್ತಾರೆ. ಜಾತಿ, ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು, ನಾವೆಲ್ಲರೂ ಒಂದೇ. ಇಲ್ಲಿ ಯಾರೂ ಬೇರೆ ಅಲ್ಲ. ಹೀಗಾಗಿ ನಾನು ಹಿಂದೂ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುತ್ತಾರೆ ಶ್ಯಾಮೀದ್​ ಅಲಿ.

ಇದನ್ನೂ ಓದಿ: ಮತ್ತೆ ಸಾಮರಸ್ಯದ ಹೆಜ್ಜೆ ಇಟ್ಟ ಮುಸ್ಲಿಂ ಮುಖಂಡರು; ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಮುಂದೂಡಿಕೆ, ಡಿಜೆ ಬ್ಯಾನ್ ನಿರ್ಧಾರ - Eid Milad procession

Last Updated : Sep 7, 2024, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.