ETV Bharat / state

18 ಸಾವಿರ ಅಡಿ ಎತ್ತರದಲ್ಲಿ ಉಸಿರಾಟ ಸಮಸ್ಯೆ: ಲಡಾಖ್​​ನ ಲೇಹ್​ನಲ್ಲಿ ಮೈಸೂರಿನ ವ್ಯಕ್ತಿ ಸಾವು - karnataka Man dies in Ladakh

author img

By ETV Bharat Karnataka Team

Published : Sep 11, 2024, 8:05 PM IST

ಲಡಾಖ್​​ನ ಲೇಹ್​​ನಲ್ಲಿ ಮೈಸೂರಿನ ವ್ಯಕ್ತಿಯೊಬ್ಬರು ಟ್ರಕ್ಕಿಂಗ್​ ತೆರಳಿದ್ದ ವೇಳೆ ಉಸಿರಾಟದ ಸಮಸ್ಯೆಯಿಂದ ಸಾವಿಗೀಡಾಗಿದ್ದು, ಅಲ್ಲಿಯೇ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.

ಲಡಾಖ್​​ನ ಲೇಹ್​ನಲ್ಲಿ ಮೈಸೂರಿನ ವ್ಯಕ್ತಿ ಸಾವು
ಲಡಾಖ್​​ನ ಲೇಹ್​ನಲ್ಲಿ ಮೈಸೂರಿನ ವ್ಯಕ್ತಿ ಸಾವು (ETV Bharat)

ಮೈಸೂರು: ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್.ಪದ್ಮನಾಭ ಅವರ ಪುತ್ರ, ನರೇನ್ ಕೌಶಿಕ್ (44) ಟ್ರಕ್ಕಿಂಗ್ ತೆರಳಿದ್ದ ವೇಳೆಯಲ್ಲಿ ಉಸಿರಾಟದ ತೊಂದರೆಯಿಂದ ಲಡಾಖ್​​ನ ಲೇಹ್​ನಲ್ಲಿ ಸೆಪ್ಟೆಂಬರ್​​ 7ರಂದು ಮೃತಪಟ್ಟಿದ್ದಾರೆ.

ಸೆಪ್ಟೆಂಬರ್​​ 2 ರಂದು ಬೆಂಗಳೂರಿನಿಂದ ಸ್ನೇಹಿತರು, ಇಬ್ಬರು ವೈದ್ಯರು, ಇಬ್ಬರ್ ತರಬೇತುದಾರರೊಂದಿಗೆ ಟ್ರಕ್ಕಿಂಗ್​ಗೆ ತೆರಳಲಾಗಿತ್ತು. ಸೆಪ್ಟೆಂಬರ್​​ 7ರಂದು ಲೇಹ್ ಬಳಿ 18,000 ಮೀಟರ್ ಎತ್ತರದಲ್ಲಿ ಉಸಿರಾಟದ ತೊಂದರೆಯಿಂದ ನಿಧನರಾದರು. ಸೆ.8 ರಂದು ಸಂಜೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ನಂತರ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಸೆಪ್ಟೆಂಬರ್​ 10 ರಂದು ಬೆಳಿಗ್ಗೆ ಲೇಹ್‌ನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಲೇಹ್‌ನ ಜಿಲ್ಲಾಧಿಕಾರಿ ಸಂತೋಷ್ ಸುಖದೇವ್ ಅವರೊಂದಿಗೆ ಮಾತುಕತೆ ನಡೆಸಿದರು.

ಲೇಹ್​​ನಲ್ಲೇ ಅಂತ್ಯಸಂಸ್ಕಾರ: 18 ಸಾವಿರ ಅಡಿ ಎತ್ತರ ಪ್ರದೇಶದಿಂದ ಮೃತದೇಹವನ್ನು ತರುವುದು ಸವಾಲಾಗಿತ್ತು. ಮೈಸೂರಿಗೆ ತರುವ ಬಗ್ಗೆ ಯೋಜಿಸಲಾಗಿತ್ತು. ಆದರೆ, ಶವವನ್ನು ಸ್ಥಳದಿಂದ ತಂದು ಶವಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸುವಾಗ 72 ಗಂಟೆಗಳು ಕಳೆದಿದ್ದರಿಂದ ಅಂತಿಮ ವಿಧಿಗಳನ್ನು ಲೇಹ್​​ನಲ್ಲಿಯೇ ಮಾಡಲು ಕುಟುಂಬ ನಿರ್ಧರಿಸಿತು.

ಸಿಆರ್‌ಪಿಎಫ್​​ ಐಜಿಪಿ ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಲೇಹ್‌ನ ಜಿಲ್ಲಾ ವರಿಷ್ಠಾಧಿಕಾರಿ ಶ್ರುತಿ ಅರೋರಾ, ಬ್ರಿಗೇಡಿಯರ್ ಸೀತಾರಾಮ್ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಂತಿಮ ಸಂಸ್ಕಾರವನ್ನು ಅಲ್ಲಿಯೇ ನಡೆಸಲಾಗಿದೆ.

ಮೃತ ನರೇನ್ ಕೌಶಿಕ್​ ಅವರು ಬೆಂಗಳೂರಿನ ಜಿಇ ಎಲೆಕ್ಟ್ರಿಕಲ್ಸ್ ಮೆಡಿಕಲ್ ಸಲಕರಣೆ ವಿಭಾಗದ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನ ಎಸ್‌ಜೆಸಿಇ ಇಂಜಿನಿಯರ್ ಕಾಲೇಜಿನಲ್ಲಿ ಪಾಲಿಮರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರನೇ ರ್‍ಯಾಂಕ್​ ಗಳಿಸಿದ್ದರು.

ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿರುವ ಪತ್ನಿ ರಾಧಿಕಾ, ಪುತ್ರಿ ವಾರುಣಿ, ತಂದೆ ಪ್ರೊ.ಆರ್.ಎನ್.ಪದ್ಮನಾಭ, ತಾಯಿ ನಾಗರತ್ನ ಪದ್ಮನಾಭ, ಆಸ್ಟ್ರೇಲಿಯಾದಲ್ಲಿ ಇಂಜಿಿನಿಯರ್ ಆಗಿರುವ ಸಹೋದರ ಪವನ್ ಕೌಶಿಕ್ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನ ಖಾಲಿ ಆದ ಬಳಿಕ ಅವಕಾಶ ಸಿಕ್ಕರೆ ಲಿಂಗಾಯತ ಸಿಎಂ ಮಾಡುತ್ತೇವೆ: ಶಾಮನೂರು ಶಿವಶಂಕರಪ್ಪ - Shamanur Shivashankarappa

ಮೈಸೂರು: ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್.ಪದ್ಮನಾಭ ಅವರ ಪುತ್ರ, ನರೇನ್ ಕೌಶಿಕ್ (44) ಟ್ರಕ್ಕಿಂಗ್ ತೆರಳಿದ್ದ ವೇಳೆಯಲ್ಲಿ ಉಸಿರಾಟದ ತೊಂದರೆಯಿಂದ ಲಡಾಖ್​​ನ ಲೇಹ್​ನಲ್ಲಿ ಸೆಪ್ಟೆಂಬರ್​​ 7ರಂದು ಮೃತಪಟ್ಟಿದ್ದಾರೆ.

ಸೆಪ್ಟೆಂಬರ್​​ 2 ರಂದು ಬೆಂಗಳೂರಿನಿಂದ ಸ್ನೇಹಿತರು, ಇಬ್ಬರು ವೈದ್ಯರು, ಇಬ್ಬರ್ ತರಬೇತುದಾರರೊಂದಿಗೆ ಟ್ರಕ್ಕಿಂಗ್​ಗೆ ತೆರಳಲಾಗಿತ್ತು. ಸೆಪ್ಟೆಂಬರ್​​ 7ರಂದು ಲೇಹ್ ಬಳಿ 18,000 ಮೀಟರ್ ಎತ್ತರದಲ್ಲಿ ಉಸಿರಾಟದ ತೊಂದರೆಯಿಂದ ನಿಧನರಾದರು. ಸೆ.8 ರಂದು ಸಂಜೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ನಂತರ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಸೆಪ್ಟೆಂಬರ್​ 10 ರಂದು ಬೆಳಿಗ್ಗೆ ಲೇಹ್‌ನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಲೇಹ್‌ನ ಜಿಲ್ಲಾಧಿಕಾರಿ ಸಂತೋಷ್ ಸುಖದೇವ್ ಅವರೊಂದಿಗೆ ಮಾತುಕತೆ ನಡೆಸಿದರು.

ಲೇಹ್​​ನಲ್ಲೇ ಅಂತ್ಯಸಂಸ್ಕಾರ: 18 ಸಾವಿರ ಅಡಿ ಎತ್ತರ ಪ್ರದೇಶದಿಂದ ಮೃತದೇಹವನ್ನು ತರುವುದು ಸವಾಲಾಗಿತ್ತು. ಮೈಸೂರಿಗೆ ತರುವ ಬಗ್ಗೆ ಯೋಜಿಸಲಾಗಿತ್ತು. ಆದರೆ, ಶವವನ್ನು ಸ್ಥಳದಿಂದ ತಂದು ಶವಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸುವಾಗ 72 ಗಂಟೆಗಳು ಕಳೆದಿದ್ದರಿಂದ ಅಂತಿಮ ವಿಧಿಗಳನ್ನು ಲೇಹ್​​ನಲ್ಲಿಯೇ ಮಾಡಲು ಕುಟುಂಬ ನಿರ್ಧರಿಸಿತು.

ಸಿಆರ್‌ಪಿಎಫ್​​ ಐಜಿಪಿ ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಲೇಹ್‌ನ ಜಿಲ್ಲಾ ವರಿಷ್ಠಾಧಿಕಾರಿ ಶ್ರುತಿ ಅರೋರಾ, ಬ್ರಿಗೇಡಿಯರ್ ಸೀತಾರಾಮ್ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಂತಿಮ ಸಂಸ್ಕಾರವನ್ನು ಅಲ್ಲಿಯೇ ನಡೆಸಲಾಗಿದೆ.

ಮೃತ ನರೇನ್ ಕೌಶಿಕ್​ ಅವರು ಬೆಂಗಳೂರಿನ ಜಿಇ ಎಲೆಕ್ಟ್ರಿಕಲ್ಸ್ ಮೆಡಿಕಲ್ ಸಲಕರಣೆ ವಿಭಾಗದ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನ ಎಸ್‌ಜೆಸಿಇ ಇಂಜಿನಿಯರ್ ಕಾಲೇಜಿನಲ್ಲಿ ಪಾಲಿಮರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರನೇ ರ್‍ಯಾಂಕ್​ ಗಳಿಸಿದ್ದರು.

ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿರುವ ಪತ್ನಿ ರಾಧಿಕಾ, ಪುತ್ರಿ ವಾರುಣಿ, ತಂದೆ ಪ್ರೊ.ಆರ್.ಎನ್.ಪದ್ಮನಾಭ, ತಾಯಿ ನಾಗರತ್ನ ಪದ್ಮನಾಭ, ಆಸ್ಟ್ರೇಲಿಯಾದಲ್ಲಿ ಇಂಜಿಿನಿಯರ್ ಆಗಿರುವ ಸಹೋದರ ಪವನ್ ಕೌಶಿಕ್ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನ ಖಾಲಿ ಆದ ಬಳಿಕ ಅವಕಾಶ ಸಿಕ್ಕರೆ ಲಿಂಗಾಯತ ಸಿಎಂ ಮಾಡುತ್ತೇವೆ: ಶಾಮನೂರು ಶಿವಶಂಕರಪ್ಪ - Shamanur Shivashankarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.