ETV Bharat / state

ರಾಯಚೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ

author img

By ETV Bharat Karnataka Team

Published : Jan 23, 2024, 9:39 AM IST

Updated : Jan 23, 2024, 12:19 PM IST

ರಾಯಚೂರಿನ ಲಿಂಗಸೂಗೂರು ಪಟ್ಟಣ ಕಚೇರಿಯ ಎಇಇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ರೇಡ್​
ಲೋಕಾಯುಕ್ತ ರೇಡ್​

ರಾಯಚೂರು: ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ‌ಇಂಜಿನಿಯರ್‌ರನ್ನು (ಎಇಇ) ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಿಂಗಸೂಗೂರು ಪಟ್ಟಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಂಚಪ್ಪ ಬಾವಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಆಶಿಹಾಳ ತಾಂಡದ ನಿವಾಸಿಯಾದ ವಿದ್ಯುತ್ ಗುತ್ತಿಗೆದಾರರ ಪ್ರೇಮಕುಮಾರ್​ ಎಂಬವರು ತಾವು ವಿದ್ಯುದ್ದೀಕರಣಗೊಳಿಸಿದ ಮನೆಯ ಆರ್‌ಆರ್‌ ನಂಬರ್ ನೀಡುವಂತೆ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ಮನವಿ ಮಾಡಿದ್ದರು. ಇದಕ್ಕಾಗಿ ಕೆಂಚಪ್ಪ ಕೆಲವು ದಿನಗಳಿಂದಲೂ ಪ್ರೇಮಕುಮಾರ್​ ಅವರನ್ನು ಅಲೆದಾಡಿಸಿದ್ದರು. ಬಳಿಕ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂಜಿನಿಯರ್ ನಡೆಗೆ ಬೇಸತ್ತ ಪ್ರೇಮಕುಮಾರ್​ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಎಇಇ ಕೆಂಚಪ್ಪ ಬಾವಿಮನಿ ಅನಾರೋಗ್ಯವೆಂದು ತಿಳಿಸಿದ್ದು, ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಯಚೂರು: ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ‌ಇಂಜಿನಿಯರ್‌ರನ್ನು (ಎಇಇ) ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಿಂಗಸೂಗೂರು ಪಟ್ಟಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಂಚಪ್ಪ ಬಾವಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಆಶಿಹಾಳ ತಾಂಡದ ನಿವಾಸಿಯಾದ ವಿದ್ಯುತ್ ಗುತ್ತಿಗೆದಾರರ ಪ್ರೇಮಕುಮಾರ್​ ಎಂಬವರು ತಾವು ವಿದ್ಯುದ್ದೀಕರಣಗೊಳಿಸಿದ ಮನೆಯ ಆರ್‌ಆರ್‌ ನಂಬರ್ ನೀಡುವಂತೆ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ಮನವಿ ಮಾಡಿದ್ದರು. ಇದಕ್ಕಾಗಿ ಕೆಂಚಪ್ಪ ಕೆಲವು ದಿನಗಳಿಂದಲೂ ಪ್ರೇಮಕುಮಾರ್​ ಅವರನ್ನು ಅಲೆದಾಡಿಸಿದ್ದರು. ಬಳಿಕ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂಜಿನಿಯರ್ ನಡೆಗೆ ಬೇಸತ್ತ ಪ್ರೇಮಕುಮಾರ್​ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಎಇಇ ಕೆಂಚಪ್ಪ ಬಾವಿಮನಿ ಅನಾರೋಗ್ಯವೆಂದು ತಿಳಿಸಿದ್ದು, ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Last Updated : Jan 23, 2024, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.