ETV Bharat / state

ಬರದ ನಾಡು ಜಗಳೂರು ಕೆರೆಗೆ ಹರಿದ ತುಂಗಭದ್ರಾ ‌ನದಿ ನೀರು; ಕುಣಿದು ಕುಪ್ಪಳಿಸಿದ ಜನ - Jagalur lake filled

author img

By ETV Bharat Karnataka Team

Published : 2 hours ago

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದಿಟೂರು ಬಳಿಯ ತುಂಗಭದ್ರಾ ನದಿ ಜಾಕ್​​ವೆಲ್​​ ನಿಂದ ಸುಮಾರು 65 ಕಿಲೋಮೀಟರ್​ ದೂರದಲ್ಲಿರುವ ಜಗಳೂರು ಕೆರೆಗೆ ತುಂಗಭದ್ರಾ ನದಿ ನೀರು ಹರಿದಿದೆ. ಇದರಿಂದಾಗಿ ಇಲ್ಲಿನ ರೈತರು ಸಂತಸಗೊಂಡಿದ್ದಾರೆ. ಅಲ್ಲದೇ, ತಮ್ಮ ಮಕ್ಕಳೊಂದಿಗೆ ಕೆರೆ ನೋಡಲು ಧಾವಿಸುತ್ತಿದ್ದಾರೆ.

jagalur-lake
ಜಗಳೂರು ಕೆರೆ (ETV Bharat)

ದಾವಣಗೆರೆ : ಬರದ ನಾಡು ಜಗಳೂರು ಕೆರೆಗೆ ತುಂಗಭದ್ರಾ ‌ನದಿ ನೀರು ಹರಿದಿದೆ.‌ ಐದು ದಶಕಗಳ ಹೋರಾಟಕ್ಕೆ ಕೆರೆ ಅಂಗಳದಲ್ಲಿ ತುಂಗಭದ್ರೆ ನೀರು ಚಿಮ್ಮಿದೆ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು, ರೈತರ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಸಾಕಷ್ಟು ವರ್ಷಗಳ ಕಾಲ ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗೆ ನೀರು ಹರಿದಿದ್ದು, ಕೆರೆ ಮೈದುಂಬಿದೆ.

ಜನಸಾಮಾನ್ಯರು ಕೆರೆಯನ್ನು ನೋಡಲು ಮಕ್ಕಳೊಂದಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ಕೆಲವರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಕೆಲವರು ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕೆರೆ ಜಗಳೂರು ಪಟ್ಟಣದ ಕೂಗಳತೆಯಲ್ಲಿದೆ. ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರಾ ನದಿ ಜಾಕ್ ವೆಮ್​ನಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಜಗಳೂರು ಕೆರೆಗೆ ನೀರು ಹರಿದಿದೆ.

ಜಗಳೂರು ಕೆರೆಗೆ ಹರಿದ ತುಂಗಭದ್ರಾ ‌ನದಿ ನೀರು (ETV Bharat)

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 57 ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದಿದ್ದರಿಂದ ಇದು ಸಾಧ್ಯವಾಗಿದೆ.‌ ಜಗಳೂರು, ತುಪ್ಪದ ಹಳ್ಳಿ ಕೆರೆ ಸೇರಿ 20 ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನೀರು ಬಂದು ಸೇರಿದ್ದು, ಬರಪೀಡಿತ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.‌ ಕುಡಿಯುವ ನೀರಿಗೂ ಪರದಾಡುತ್ತಿದ್ದ ಜಗಳೂರು ಜನರಲ್ಲಿ ಸಂತಸ ಮನೆ ಮಾಡಿದೆ.‌ ಕೆರೆ ವೀಕ್ಷಣೆಗೆ ತಂಡೋಪತಂಡವಾಗಿ ಜನ ಬರುತ್ತಿದ್ದಾರೆ.

ಇದನ್ನೂ ಓದಿ : ಮೈದುಂಬಿ ಹರಿಯುತ್ತಿದೆ ತುಂಗಭದ್ರಾ: ನದಿ ಪಾತ್ರದಲ್ಲಿ ಪ್ರವಾಹದ ಭೀತಿ - Tungabhadra is overflowing

ದಾವಣಗೆರೆ : ಬರದ ನಾಡು ಜಗಳೂರು ಕೆರೆಗೆ ತುಂಗಭದ್ರಾ ‌ನದಿ ನೀರು ಹರಿದಿದೆ.‌ ಐದು ದಶಕಗಳ ಹೋರಾಟಕ್ಕೆ ಕೆರೆ ಅಂಗಳದಲ್ಲಿ ತುಂಗಭದ್ರೆ ನೀರು ಚಿಮ್ಮಿದೆ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು, ರೈತರ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಸಾಕಷ್ಟು ವರ್ಷಗಳ ಕಾಲ ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗೆ ನೀರು ಹರಿದಿದ್ದು, ಕೆರೆ ಮೈದುಂಬಿದೆ.

ಜನಸಾಮಾನ್ಯರು ಕೆರೆಯನ್ನು ನೋಡಲು ಮಕ್ಕಳೊಂದಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ಕೆಲವರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಕೆಲವರು ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕೆರೆ ಜಗಳೂರು ಪಟ್ಟಣದ ಕೂಗಳತೆಯಲ್ಲಿದೆ. ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರಾ ನದಿ ಜಾಕ್ ವೆಮ್​ನಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಜಗಳೂರು ಕೆರೆಗೆ ನೀರು ಹರಿದಿದೆ.

ಜಗಳೂರು ಕೆರೆಗೆ ಹರಿದ ತುಂಗಭದ್ರಾ ‌ನದಿ ನೀರು (ETV Bharat)

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 57 ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದಿದ್ದರಿಂದ ಇದು ಸಾಧ್ಯವಾಗಿದೆ.‌ ಜಗಳೂರು, ತುಪ್ಪದ ಹಳ್ಳಿ ಕೆರೆ ಸೇರಿ 20 ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನೀರು ಬಂದು ಸೇರಿದ್ದು, ಬರಪೀಡಿತ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.‌ ಕುಡಿಯುವ ನೀರಿಗೂ ಪರದಾಡುತ್ತಿದ್ದ ಜಗಳೂರು ಜನರಲ್ಲಿ ಸಂತಸ ಮನೆ ಮಾಡಿದೆ.‌ ಕೆರೆ ವೀಕ್ಷಣೆಗೆ ತಂಡೋಪತಂಡವಾಗಿ ಜನ ಬರುತ್ತಿದ್ದಾರೆ.

ಇದನ್ನೂ ಓದಿ : ಮೈದುಂಬಿ ಹರಿಯುತ್ತಿದೆ ತುಂಗಭದ್ರಾ: ನದಿ ಪಾತ್ರದಲ್ಲಿ ಪ್ರವಾಹದ ಭೀತಿ - Tungabhadra is overflowing

ETV Bharat Logo

Copyright © 2024 Ushodaya Enterprises Pvt. Ltd., All Rights Reserved.