ETV Bharat / state

ನಾನು ಸಿಎಂ ಆಕಾಂಕ್ಷಿಯೇ ಅಲ್ಲ: ಮಾಜಿ ಸಚಿವ ಆರ್​.ವಿ.ದೇಶಪಾಂಡೆ ಮತ್ತೆ ಸ್ಪಷ್ಟನೆ - R V Deshapande

author img

By ETV Bharat Karnataka Team

Published : Sep 10, 2024, 3:57 PM IST

ಸಿಎಂ ಕುರ್ಚಿ ಖಾಲಿ ಇಲ್ಲ. ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ. ಮುಂದಿನ ನಾಲ್ಕು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆರ್​.ವಿ.ದೇಶಪಾಂಡೆ ಹೇಳಿದ್ದಾರೆ.

ಮಾಜಿ ಸಚಿವ ಆರ್​.ವಿ.ದೇಶಪಾಂಡೆ
ಮಾಜಿ ಸಚಿವ ಆರ್​.ವಿ.ದೇಶಪಾಂಡೆ (ETV Bharat)
ಆರ್​.ವಿ.ದೇಶಪಾಂಡೆ (ETV Bharat)

ಬೆಳಗಾವಿ: ನಮ್ಮ ಸರ್ಕಾರ ಇರೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಅಲ್ಲದೇ ಐದು‌ ವರ್ಷ ಅಧಿಕಾರವನ್ನೂ ನಡೆಸುತ್ತಾರೆ. ಇನ್ನು ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಇದ್ದಾಗ ಕ್ಲೇಮ್ ಮಾಡಬೇಕು. ಈಗ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಇನ್ನು ಸತೀಶ್ ಜಾರಕೊಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ, ನಾನು ಈಗ ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಸತೀಶ್ ಜಾರಕಿಹೊಳಿ ಒಳ್ಳೆಯ, ಸಜ್ಜನ ರಾಜಕಾರಣಿ ಎಂದು ಆರ್.ವಿ. ದೇಶಪಾಂಡೆ ಹೊಗಳಿದ್ದಾರೆ.

ನಾನೂ ಸೀನಿಯರ್ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ನಾವು ಅಧಿಕಾರಕ್ಕೆ ಬಂದು ವರ್ಷ ಆಗಿದೆ. ನಮಗೆ ಇನ್ನೂ ನಾಲ್ಕು ವರ್ಷ ಅವಕಾಶವಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಹೀಗಿರುವಾಗ ನಾವು ಸಿಎಂ‌ ಬದಲಾವಣೆ ಬಗ್ಗೆ ಮಾತನಾಡೋದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. ಸಿಎಂ ಬದಲಾವಣೆ ಇಲ್ಲ, ಈ ಬಗ್ಗೆ ಹೈಕಮಾಂಡ್ ಕೂಗು ಇಲ್ಲ. ಅನಾವಶ್ಯಕವಾಗಿ ಈ ಬಗ್ಗೆ ಮಾತು ಕೇಳಿ ಬರುತ್ತಿದೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದ್ದು ಎಂದು ಮರು ಪ್ರಶ್ನಿಸಿದರು.

ಮುಡಾ ಪ್ರಕರಣದಲ್ಲಿ ವ್ಯತಿರಿಕ್ತ ತೀರ್ಪು ಬರಲ್ಲ: ನಾನೂ ಒಬ್ಬ ವಕೀಲನಾಗಿದ್ದು, ಮುಡಾ ಹಗರಣದಲ್ಲಿ ಕೋರ್ಟ್​ನಿಂದ ವ್ಯತಿರಿಕ್ತ ಪರಿಣಾಮ ಬರಲು ಸಾಧ್ಯವಿಲ್ಲ. ಮುಡಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ತಪ್ಪು ಹೆಜ್ಜೆ ಇಟ್ಟಿಲ್ಲ. ಇದು ಸರಿಯಲ್ಲ ಅಂತಾ ಕೋರ್ಟ್ ಆದೇಶ ನೀಡುತ್ತದೆ ಎಂದು ಆರ್.ವಿ.ದೇಶಪಾಂಡೆ ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನಲ್ಲಿ ಒಳಗೊಳಗೆ ನಾಯಕರು ಕತ್ತಿ‌ ಮಸಿಯುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಶೆಟ್ಟರ್ ಯಾಕೆ ಹಾಗೆ ಹೇಳಿದರು ಅಂತಾ ಗೊತ್ತಿಲ್ಲ, ಅವರು ಈ ರೀತಿ ಮಾತನಾಡೋರಲ್ಲ ಎಂದು ಕುಟುಕಿದರು.

ಬಿಜೆಪಿಗೆ ತಿರುಗೇಟು ಕೊಟ್ಟ ದೇಶಪಾಂಡೆ: ದೀಪಾವಳಿ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂಬ ಸಿಟಿ ರವಿ, ಆರ್.ಅಶೋಕ್ ಹೇಳಿಕೆಗೆ, ದೀಪಾವಳಿ ಬಳಿಕ ಸರ್ಕಾರ ಅಸ್ಥಿರ ಮಾಡಬೇಕು ಅಂತಾ ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ತೊಂದರೆ ಇದ್ರೂ 57 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಅದನ್ನು ತಿಳಿದುಕೊಳ್ಳುವ ಶಕ್ತಿ ಬಿಜೆಪಿಯವರಿಗೆ ಇರಬೇಕು ಎಂದು ದೇಶಪಾಂಡೆ ತಿರುಗೇಟು ನೀಡಿದ್ದಾರೆ.

'ಸಚಿವನಾಗಿ ಕೆಲಸ ಮಾಡಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು. ಇದಕ್ಕೆ ಹೈಕಮಾಂಡ್‌ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ಆದರೆ, ಸದ್ಯಕ್ಕೆ ಸಿಎಂ ಬದಲಾವಣೆ ಪ್ರ‍ಶ್ನೆಯಿಲ್ಲ' ಎಂದು ಇತ್ತೀಚೆಗೆ ಮೈಸೂರಲ್ಲಿ ಮಾಧ್ಯಮಗಳಿಗೆ ಕಾಂಗ್ರೆಸ್‌ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ: ಆರ್.ವಿ. ದೇಶಪಾಂಡೆ - RV Deshapande

ಆರ್​.ವಿ.ದೇಶಪಾಂಡೆ (ETV Bharat)

ಬೆಳಗಾವಿ: ನಮ್ಮ ಸರ್ಕಾರ ಇರೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಅಲ್ಲದೇ ಐದು‌ ವರ್ಷ ಅಧಿಕಾರವನ್ನೂ ನಡೆಸುತ್ತಾರೆ. ಇನ್ನು ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಇದ್ದಾಗ ಕ್ಲೇಮ್ ಮಾಡಬೇಕು. ಈಗ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಇನ್ನು ಸತೀಶ್ ಜಾರಕೊಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ, ನಾನು ಈಗ ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಸತೀಶ್ ಜಾರಕಿಹೊಳಿ ಒಳ್ಳೆಯ, ಸಜ್ಜನ ರಾಜಕಾರಣಿ ಎಂದು ಆರ್.ವಿ. ದೇಶಪಾಂಡೆ ಹೊಗಳಿದ್ದಾರೆ.

ನಾನೂ ಸೀನಿಯರ್ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ನಾವು ಅಧಿಕಾರಕ್ಕೆ ಬಂದು ವರ್ಷ ಆಗಿದೆ. ನಮಗೆ ಇನ್ನೂ ನಾಲ್ಕು ವರ್ಷ ಅವಕಾಶವಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಹೀಗಿರುವಾಗ ನಾವು ಸಿಎಂ‌ ಬದಲಾವಣೆ ಬಗ್ಗೆ ಮಾತನಾಡೋದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. ಸಿಎಂ ಬದಲಾವಣೆ ಇಲ್ಲ, ಈ ಬಗ್ಗೆ ಹೈಕಮಾಂಡ್ ಕೂಗು ಇಲ್ಲ. ಅನಾವಶ್ಯಕವಾಗಿ ಈ ಬಗ್ಗೆ ಮಾತು ಕೇಳಿ ಬರುತ್ತಿದೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದ್ದು ಎಂದು ಮರು ಪ್ರಶ್ನಿಸಿದರು.

ಮುಡಾ ಪ್ರಕರಣದಲ್ಲಿ ವ್ಯತಿರಿಕ್ತ ತೀರ್ಪು ಬರಲ್ಲ: ನಾನೂ ಒಬ್ಬ ವಕೀಲನಾಗಿದ್ದು, ಮುಡಾ ಹಗರಣದಲ್ಲಿ ಕೋರ್ಟ್​ನಿಂದ ವ್ಯತಿರಿಕ್ತ ಪರಿಣಾಮ ಬರಲು ಸಾಧ್ಯವಿಲ್ಲ. ಮುಡಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ತಪ್ಪು ಹೆಜ್ಜೆ ಇಟ್ಟಿಲ್ಲ. ಇದು ಸರಿಯಲ್ಲ ಅಂತಾ ಕೋರ್ಟ್ ಆದೇಶ ನೀಡುತ್ತದೆ ಎಂದು ಆರ್.ವಿ.ದೇಶಪಾಂಡೆ ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನಲ್ಲಿ ಒಳಗೊಳಗೆ ನಾಯಕರು ಕತ್ತಿ‌ ಮಸಿಯುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಶೆಟ್ಟರ್ ಯಾಕೆ ಹಾಗೆ ಹೇಳಿದರು ಅಂತಾ ಗೊತ್ತಿಲ್ಲ, ಅವರು ಈ ರೀತಿ ಮಾತನಾಡೋರಲ್ಲ ಎಂದು ಕುಟುಕಿದರು.

ಬಿಜೆಪಿಗೆ ತಿರುಗೇಟು ಕೊಟ್ಟ ದೇಶಪಾಂಡೆ: ದೀಪಾವಳಿ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂಬ ಸಿಟಿ ರವಿ, ಆರ್.ಅಶೋಕ್ ಹೇಳಿಕೆಗೆ, ದೀಪಾವಳಿ ಬಳಿಕ ಸರ್ಕಾರ ಅಸ್ಥಿರ ಮಾಡಬೇಕು ಅಂತಾ ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ತೊಂದರೆ ಇದ್ರೂ 57 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಅದನ್ನು ತಿಳಿದುಕೊಳ್ಳುವ ಶಕ್ತಿ ಬಿಜೆಪಿಯವರಿಗೆ ಇರಬೇಕು ಎಂದು ದೇಶಪಾಂಡೆ ತಿರುಗೇಟು ನೀಡಿದ್ದಾರೆ.

'ಸಚಿವನಾಗಿ ಕೆಲಸ ಮಾಡಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು. ಇದಕ್ಕೆ ಹೈಕಮಾಂಡ್‌ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ಆದರೆ, ಸದ್ಯಕ್ಕೆ ಸಿಎಂ ಬದಲಾವಣೆ ಪ್ರ‍ಶ್ನೆಯಿಲ್ಲ' ಎಂದು ಇತ್ತೀಚೆಗೆ ಮೈಸೂರಲ್ಲಿ ಮಾಧ್ಯಮಗಳಿಗೆ ಕಾಂಗ್ರೆಸ್‌ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ: ಆರ್.ವಿ. ದೇಶಪಾಂಡೆ - RV Deshapande

ETV Bharat Logo

Copyright © 2024 Ushodaya Enterprises Pvt. Ltd., All Rights Reserved.