ETV Bharat / state

ಶಿಗ್ಗಾವಿ ಭೀಕರ ಅಪಘಾತಕ್ಕೆ ಚಾಲಕನ ಅತಿ ವೇಗವೇ ಕಾರಣ: ಎಎಸ್​​ಪಿ - Haveri Car Accident

author img

By ETV Bharat Karnataka Team

Published : Jul 14, 2024, 8:55 AM IST

ಹಾವೇರಿಯ ಶಿಗ್ಗಾವಿಯಲ್ಲಿ ಶನಿವಾರ ನಡೆದ ಭೀಕರ ಕಾರು ಅಪಘಾತದಲ್ಲಿ ಒಟ್ಟು 4 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಅಪಘಾತಕ್ಕೆ 'ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯ ಕಾರಣವೆಂದು ಹೆಚ್ಚುವರಿ ಎಸ್​​ಪಿ ಗೋಪಾಲ್​​ .ಸಿ. ತಿಳಿಸಿದ್ದಾರೆ.

car accident
ಹೆಚ್ಚುವರಿ ಎಸ್​​ಪಿ ಗೋಪಾಲ್, ಅಪಘಾತಗೊಂಡ ಕಾರು (ETV Bharat)
ಹೆಚ್ಚುವರಿ ಎಸ್​​ಪಿ ಗೋಪಾಲ್​​ .ಸಿ. ಮಾಹಿತಿ (ETV Bharat)

ಹಾವೇರಿ: ಜಿಲ್ಲೆಯ ಶಿಗ್ಗಾವಿ​​​​ ಪಟ್ಟಣದ ಬಳಿ ಶನಿವಾರ ನಡೆದ ಕಾರು ಅಪಘಾತಕ್ಕೆ 'ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಕಾರಣ' ಎಂದು ಹಾವೇರಿ ಹೆಚ್ಚುವರಿ ಎಸ್​​ಪಿ ಗೋಪಾಲ್ ಸಿ.​ ತಿಳಿಸಿದ್ದಾರೆ.

ಹಾವೇರಿಯಲ್ಲಿ ಈ ಬಗ್ಗೆ ಶನಿವಾರ ಮಾತನಾಡಿ, 'ಕಾರು ಚಾಲಕ ಅತಿವೇಗದಿಂದ ಓವರಟೇಕ್​​ ಮಾಡಲು ಹೋಗಿದ್ದ. ಇದರಿಂದ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಉತ್ತಮ ರಸ್ತೆ ಕಾಣಿಸುತ್ತಿದ್ದಂತೆ ವಾಹನ ಸವಾರರು ವೇಗ ಅಧಿಕಗೊಳಿಸುತ್ತಾರೆ. ಆ ರೀತಿ ಮಾಡದೆ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವಂತೆ' ಹೆಚ್ಚುವರಿ ಎಸ್​​ಪಿ ಮನವಿ ಮಾಡಿದರು.

ಮೃತರು ಸವಣೂರು ತಾಲೂಕು ಬೇವಿನಹಳ್ಳಿ ಗ್ರಾಮದವರು. 7 ಜನ ಸೇರಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡಕ್ಕೆ ಹೊರಟಿದ್ದರು. ಮುಂಜಾನೆ 6:30 ಗಂಟೆ ಸುಮಾರಿಗೆ ಅಪಘಾತವಾಗಿದೆ ಎಂದು ಎಎಸ್​​ಪಿ​ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಹತ್ತಿರ ಶನಿವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿಯೇ 23 ವರ್ಷದ ನೀಲಪ್ಪ ಮೂಲಿಮನಿ ಸಾವನ್ನಪ್ಪಿದ್ದರು. ಸುದೀಪ್​ ಕೋಟಿ ಶಿಗ್ಗಾಂವ್​​ ಎಂಬವರು ತಾಲೂಕಾಸ್ಪತ್ರೆಯಲ್ಲಿ ಮೃತರಾದರೆ, ಬಳಿಕ ಚಿಕಿತ್ಸೆಗೆ ಸ್ಪಂದಿಸದೆ, ಶಿವನಗೌಡ ಯಲ್ಲನಗೌಡ್ರ (20) ಹಾಗೂ ಕಲ್ಮೇಶ ಮಾನೋಜಿ (26) ಎಂಬವರು ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಹಾವೇರಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ನಾಲ್ವರು ಯುವಕರ ಸಾವು

ಹೆಚ್ಚುವರಿ ಎಸ್​​ಪಿ ಗೋಪಾಲ್​​ .ಸಿ. ಮಾಹಿತಿ (ETV Bharat)

ಹಾವೇರಿ: ಜಿಲ್ಲೆಯ ಶಿಗ್ಗಾವಿ​​​​ ಪಟ್ಟಣದ ಬಳಿ ಶನಿವಾರ ನಡೆದ ಕಾರು ಅಪಘಾತಕ್ಕೆ 'ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಕಾರಣ' ಎಂದು ಹಾವೇರಿ ಹೆಚ್ಚುವರಿ ಎಸ್​​ಪಿ ಗೋಪಾಲ್ ಸಿ.​ ತಿಳಿಸಿದ್ದಾರೆ.

ಹಾವೇರಿಯಲ್ಲಿ ಈ ಬಗ್ಗೆ ಶನಿವಾರ ಮಾತನಾಡಿ, 'ಕಾರು ಚಾಲಕ ಅತಿವೇಗದಿಂದ ಓವರಟೇಕ್​​ ಮಾಡಲು ಹೋಗಿದ್ದ. ಇದರಿಂದ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಉತ್ತಮ ರಸ್ತೆ ಕಾಣಿಸುತ್ತಿದ್ದಂತೆ ವಾಹನ ಸವಾರರು ವೇಗ ಅಧಿಕಗೊಳಿಸುತ್ತಾರೆ. ಆ ರೀತಿ ಮಾಡದೆ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವಂತೆ' ಹೆಚ್ಚುವರಿ ಎಸ್​​ಪಿ ಮನವಿ ಮಾಡಿದರು.

ಮೃತರು ಸವಣೂರು ತಾಲೂಕು ಬೇವಿನಹಳ್ಳಿ ಗ್ರಾಮದವರು. 7 ಜನ ಸೇರಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡಕ್ಕೆ ಹೊರಟಿದ್ದರು. ಮುಂಜಾನೆ 6:30 ಗಂಟೆ ಸುಮಾರಿಗೆ ಅಪಘಾತವಾಗಿದೆ ಎಂದು ಎಎಸ್​​ಪಿ​ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಹತ್ತಿರ ಶನಿವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿಯೇ 23 ವರ್ಷದ ನೀಲಪ್ಪ ಮೂಲಿಮನಿ ಸಾವನ್ನಪ್ಪಿದ್ದರು. ಸುದೀಪ್​ ಕೋಟಿ ಶಿಗ್ಗಾಂವ್​​ ಎಂಬವರು ತಾಲೂಕಾಸ್ಪತ್ರೆಯಲ್ಲಿ ಮೃತರಾದರೆ, ಬಳಿಕ ಚಿಕಿತ್ಸೆಗೆ ಸ್ಪಂದಿಸದೆ, ಶಿವನಗೌಡ ಯಲ್ಲನಗೌಡ್ರ (20) ಹಾಗೂ ಕಲ್ಮೇಶ ಮಾನೋಜಿ (26) ಎಂಬವರು ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಹಾವೇರಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ನಾಲ್ವರು ಯುವಕರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.