ETV Bharat / state

ಕರಾವಳಿ ಉತ್ಸವದ ಪ್ರಯುಕ್ತ ಹೆಲಿ ಟೂರಿಸಂ; 9 ದಿನಗಳ ಕಾಲ ಬಾನಂಗಳದಿಂದ ಕುಡ್ಲ ವೀಕ್ಷಣೆ ಅವಕಾಶ - HELI TOURISM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಹೀಗಾಗಿ, ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ.

heli-tourism
ಹೆಲಿಕಾಪ್ಟರ್​ನಲ್ಲಿ ಕಂಡುಬಂದಿರುವ ದೃಶ್ಯ (ETV Bharat)
author img

By ETV Bharat Karnataka Team

Published : Dec 21, 2024, 6:44 PM IST

Updated : Dec 21, 2024, 8:16 PM IST

ಮಂಗಳೂರು (ದಕ್ಷಿಣ ಕನ್ನಡ) : ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ನಗರದಲ್ಲಿ‌ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದ‌ಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ.

ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿದರು (ETV Bharat)

ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ. ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ‌ಮೇಲಿನಿಂದ ಕಣ್ತುಂಬಿಕೊಂಡರು.

ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21 ರಿಂದ 31ರ ವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. ಒಂದು ರೌಂಡ್ 6-7 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತೀ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು, ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದಾಗಿದೆ. ಮಂಗಳೂರಿನ ನದಿ ಸಮುದ್ರವನ್ನು ಮೇಲಿನಿಂದಲೇ ನೋಡಬಹುದಾಗಿದೆ.

ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, 'ಹೆಲಿಟೂರಿಸಂ ಸಕ್ಸಸ್ ಆದಲ್ಲಿ ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಜಿಲ್ಲಾಡಳಿತದಲ್ಲಿದೆ. ಈ ಮೂಲಕ ಕೊಲ್ಲೂರು ಸೇರಿದಂತೆ ಬೇಲೂರು-ಹಳೇಬೀಡು, ಬೇಕಲ್ ಫೋರ್ಟ್‌ಗಳಿಗೂ ಹೆಲಿಟೂರಿಸಂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದರು.

ಈ ಬಗ್ಗೆ ಮಾತನಾಡಿದ ತುಂಬಿ ಏರ್ ಟ್ಯಾಕ್ಸ್​ನ ಪ್ರತಿನಿಧಿ ಸುಹೈಲ್ ಅವರು, 'ಇವತ್ತಿನಿಂದ ಹೊಸ ವರ್ಷದವರೆಗೆ ಹೆಲಿ ಟೂರಿಸಂ ಇರಲಿದೆ. 6 ರಿಂದ 7 ನಿಮಿಷದ ರೈಡ್​ಗೆ ರೂ. 4500 ದರ ನಿಗದಿಪಡಿಸಲಾಗಿದೆ' ಎಂದು ಹೇಳಿದರು.

ಮೇರಿ ಹಿಲ್ ಹೆಲಿಪ್ಯಾಡ್​​ನಿಂದ ಸಹ್ಯಾದ್ರಿ ಗ್ರೌಂಡ್​ಗೆ ಶಿಫ್ಟ್​​ ಸಾಧ್ಯತೆ : ಕರಾವಳಿ ಉತ್ಸವದ ಪ್ರಯುಕ್ತ ಮಂಗಳೂರಿನ ಮೇರಿಹಿಲ್​ನಲ್ಲಿ ಉದ್ಘಾಟನೆಗೊಂಡ ಹೆಲಿ ಟೂರಿಸಂ ಅಡ್ಯಾರ್​ನ ಸಹ್ಯಾದ್ರಿ ಗ್ರೌಂಡ್​ಗೆ ಶಿಫ್ಟ್​​ ಆಗುವ ಸಾಧ್ಯತೆ ಇದೆ. ಮೇರಿಹಿಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನದ ಬಳಿ ಇರುವುದರಿಂದ ವಿಮಾನ ಯಾನಕ್ಕೆ ತಾಂತ್ರಿಕ ಸಮಸ್ಯೆ ಆಗುವುದರಿಂದ ಸದ್ಯ ಹೆಲಿ ಟೂರಿಸಂ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಇದನ್ನು ಅಡ್ಯಾರ್​ನ ಸಹ್ಯಾದ್ರಿ ಗ್ರೌಂಡ್​ಗೆ ಸ್ಥಳಾಂತರಿಸಲು ಮಾಡಲು ಚಿಂತಿಸಲಾಗಿದೆ.

ಇದನ್ನೂ ಓದಿ : ದ.ಕ.ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಒತ್ತು: ಜಿಲ್ಲಾಧಿಕಾರಿ - mangalore tourism destinations

ಮಂಗಳೂರು (ದಕ್ಷಿಣ ಕನ್ನಡ) : ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ನಗರದಲ್ಲಿ‌ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದ‌ಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ.

ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿದರು (ETV Bharat)

ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ. ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ‌ಮೇಲಿನಿಂದ ಕಣ್ತುಂಬಿಕೊಂಡರು.

ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21 ರಿಂದ 31ರ ವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. ಒಂದು ರೌಂಡ್ 6-7 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತೀ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು, ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದಾಗಿದೆ. ಮಂಗಳೂರಿನ ನದಿ ಸಮುದ್ರವನ್ನು ಮೇಲಿನಿಂದಲೇ ನೋಡಬಹುದಾಗಿದೆ.

ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, 'ಹೆಲಿಟೂರಿಸಂ ಸಕ್ಸಸ್ ಆದಲ್ಲಿ ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಜಿಲ್ಲಾಡಳಿತದಲ್ಲಿದೆ. ಈ ಮೂಲಕ ಕೊಲ್ಲೂರು ಸೇರಿದಂತೆ ಬೇಲೂರು-ಹಳೇಬೀಡು, ಬೇಕಲ್ ಫೋರ್ಟ್‌ಗಳಿಗೂ ಹೆಲಿಟೂರಿಸಂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದರು.

ಈ ಬಗ್ಗೆ ಮಾತನಾಡಿದ ತುಂಬಿ ಏರ್ ಟ್ಯಾಕ್ಸ್​ನ ಪ್ರತಿನಿಧಿ ಸುಹೈಲ್ ಅವರು, 'ಇವತ್ತಿನಿಂದ ಹೊಸ ವರ್ಷದವರೆಗೆ ಹೆಲಿ ಟೂರಿಸಂ ಇರಲಿದೆ. 6 ರಿಂದ 7 ನಿಮಿಷದ ರೈಡ್​ಗೆ ರೂ. 4500 ದರ ನಿಗದಿಪಡಿಸಲಾಗಿದೆ' ಎಂದು ಹೇಳಿದರು.

ಮೇರಿ ಹಿಲ್ ಹೆಲಿಪ್ಯಾಡ್​​ನಿಂದ ಸಹ್ಯಾದ್ರಿ ಗ್ರೌಂಡ್​ಗೆ ಶಿಫ್ಟ್​​ ಸಾಧ್ಯತೆ : ಕರಾವಳಿ ಉತ್ಸವದ ಪ್ರಯುಕ್ತ ಮಂಗಳೂರಿನ ಮೇರಿಹಿಲ್​ನಲ್ಲಿ ಉದ್ಘಾಟನೆಗೊಂಡ ಹೆಲಿ ಟೂರಿಸಂ ಅಡ್ಯಾರ್​ನ ಸಹ್ಯಾದ್ರಿ ಗ್ರೌಂಡ್​ಗೆ ಶಿಫ್ಟ್​​ ಆಗುವ ಸಾಧ್ಯತೆ ಇದೆ. ಮೇರಿಹಿಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನದ ಬಳಿ ಇರುವುದರಿಂದ ವಿಮಾನ ಯಾನಕ್ಕೆ ತಾಂತ್ರಿಕ ಸಮಸ್ಯೆ ಆಗುವುದರಿಂದ ಸದ್ಯ ಹೆಲಿ ಟೂರಿಸಂ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಇದನ್ನು ಅಡ್ಯಾರ್​ನ ಸಹ್ಯಾದ್ರಿ ಗ್ರೌಂಡ್​ಗೆ ಸ್ಥಳಾಂತರಿಸಲು ಮಾಡಲು ಚಿಂತಿಸಲಾಗಿದೆ.

ಇದನ್ನೂ ಓದಿ : ದ.ಕ.ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಒತ್ತು: ಜಿಲ್ಲಾಧಿಕಾರಿ - mangalore tourism destinations

Last Updated : Dec 21, 2024, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.