ETV Bharat / state

ಚೆಸ್ ಮತ್ತು ವಿಜ್ಞಾನ ಸಾಕಷ್ಟು ಸಾಮ್ಯತೆ ಹೊಂದಿದೆ: ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ - IISC CONVOCATION

author img

By ETV Bharat Karnataka Team

Published : Jul 15, 2024, 8:58 PM IST

ಚೆಸ್ ಕ್ರೀಡೆಯಲ್ಲಿ ಕಂಪ್ಯೂಟರ್​ಗಳ ಬಳಕೆಯಿದೆ. ಚೆಸ್ ಕ್ರೀಡೆ ಅಭ್ಯಸಿಸುವ ಪ್ರೋಗ್ರಾಮ್ ಕೂಡ ಚಾಲ್ತಿಯಲ್ಲಿದೆ. ಸೂಪರ್ ಕಂಪ್ಯೂಟರ್ ಬೆಸ್ಟ್ ಚೆಸ್ ಪಟುವನ್ನು ಸೋಲಿಸಿ ದಾಖಲೆ ಬರೆದಿರುವುದು ಸಾಮ್ಯತೆಗೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಹೇಳಿದರು.

ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್
ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ (@indianinstituteofscienceii3263)

ಬೆಂಗಳೂರು: ಚೆಸ್ ಮತ್ತು ವಿಜ್ಞಾನ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಕ್ರೀಡಾಪಟುಗಳು ವಿಜ್ಞಾನ ವಿದ್ಯಾರ್ಥಿಗಳ ಹಾಗೆ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಚೆಸ್ ಕ್ರೀಡೆಯಲ್ಲಿ ಕಂಪ್ಯೂಟರ್​ಗಳ ಬಳಕೆಯಿದೆ. ಚೆಸ್ ಕ್ರೀಡೆ ಅಭ್ಯಸಿಸುವ ಪ್ರೋಗ್ರಾಮ್ ಕೂಡ ಚಾಲ್ತಿಯಲ್ಲಿದೆ. ಸೂಪರ್ ಕಂಪ್ಯೂಟರ್ ಬೆಸ್ಟ್ ಚೆಸ್ ಪಟುವನ್ನು ಸೋಲಿಸಿ ದಾಖಲೆ ಬರೆದಿರುವುದು ಸಾಮ್ಯತೆಗೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ಐದು ಬಾರಿ ಚೆಸ್ ವಿಶ್ವಚಾಂಪಿಯನ್, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ವಿಶ್ವನಾಥನ್ ಆನಂದ್ ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವರ್ಷದ ಘಟಿಕೋತ್ಸವ ಕ್ಯಾಂಪಸ್​​ನಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಚೆಸ್ ಕ್ರೀಡೆ ಕಲಿಯಲು ಪ್ರಾರಂಭಿಸಿದಾಗ ತುಂಬಾ ಸರಳ ವಿಧಾನಗಳಿದ್ದವು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಹೊಸ ತಂತ್ರಜ್ಞಾನದ ಹಾಗೆ ಚೆಸ್​ನಲ್ಲೂ ಎಷ್ಟೋ ಕಾರ್ಯವಿಧಾನ ಬದಲಾಗಿದೆ. ಈಗ ಚೆಸ್ ಕ್ರೀಡೆಯಲ್ಲೂ ಸಾಕಷ್ಟು ಹೊಸ ಪಟ್ಟುಗಳು ಮುನ್ನೆಲೆಗೆ ಬಂದಿದ್ದು, ವಿಜ್ಞಾನದ ಹಾಗೆ ಒಂದೇ ವಿಧಾನ ಉಪಯೋಗಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್‌ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನಗಳು ಈಗ ಸಾಕಷ್ಟು ಮುನ್ನೆಲೆಗೆ ಬರುತ್ತಿವೆ. ಆದರ ಜೊತೆ ಹೊಸ ಹೊಸ ತಲೆಮಾರು ತನನ್ನು ತಾನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದರಿಂದ ಜಾಗತಿಕವಾಗಿ ಜೀವನದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದೆ ಎಂದು ಹೇಳಿದರು.

ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬೆಳೆಯಲು ಇನ್ನಷ್ಟು ಸಂಪನ್ಮೂಲಗಳನ್ನು ಮೂಲಸೌಕರ್ಯಗಳನ್ನು ಕ್ರೋಢೀಕರಿಸಿಕೊಂಡು ಮುನ್ನಡೆಯಬೇಕಿದೆ. ಸಾರ್ವಜನಿಕವಾಗಿ ಕೂಡ ಅನುಕೂಲವಾಗುವಂತಹ ಸಂಶೋಧನೆ ಭಾರತಕ್ಕೆ ಅವಶ್ಯಕತೆಯಿದೆ. ಹೊಸ ಹೊಸ ಉದ್ಯೋಗ, ನವೀನ ವ್ಯಾಪಾರ ವಹಿವಾಟು ಮತ್ತು ಇನ್ನಷ್ಟು ಬಲಾಢ್ಯ ಆರ್ಥಿಕತೆಯನ್ನು ಬೆಳೆಸಲು ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಿದೆ ಎಂದರು.

ಐಐಎಸ್​ಸಿ ಸೇರಿದಂತೆ ಎಲ್ಲ ಸಂಶೋಧನಾ ಸಂಸ್ಥೆಗಳು ಒಟ್ಟುಗೂಡಿ ಕಾರ್ಯಪ್ರವೃತ್ತರಾಗಬೇಕಿದೆ. ಅದರಿಂದ ಭಾರತದ ಜಾಗತಿಕ ನಾಯಕತ್ವ ಸಾಧ್ಯವಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಕೂಡ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.

1,136 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಸಮಾರಂಭದಲ್ಲಿ ಒಟ್ಟು 1,136 ಪದವಿಗಳನ್ನು ಪ್ರದಾನ ಮಾಡಲಾಯಿತು. ಅದರಲ್ಲಿ 465 ಸಂಶೋಧನಾ, 571 ಸ್ನಾತಕೋತ್ತರ ಕೋರ್ಸ್ ಪದವಿಗಳು ಮತ್ತು 100 ಪದವಿಪೂರ್ವ ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಯಿತು. ಶೈಕ್ಷಣಿಕ ಉತ್ಕೃಷ್ಟತೆಗಾಗಿ 57 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಸಹ ನೀಡಲಾಯಿತು.

ಇದನ್ನೂ ಓದಿ: ಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ - VTU CONVOCATION

ಬೆಂಗಳೂರು: ಚೆಸ್ ಮತ್ತು ವಿಜ್ಞಾನ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಕ್ರೀಡಾಪಟುಗಳು ವಿಜ್ಞಾನ ವಿದ್ಯಾರ್ಥಿಗಳ ಹಾಗೆ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಚೆಸ್ ಕ್ರೀಡೆಯಲ್ಲಿ ಕಂಪ್ಯೂಟರ್​ಗಳ ಬಳಕೆಯಿದೆ. ಚೆಸ್ ಕ್ರೀಡೆ ಅಭ್ಯಸಿಸುವ ಪ್ರೋಗ್ರಾಮ್ ಕೂಡ ಚಾಲ್ತಿಯಲ್ಲಿದೆ. ಸೂಪರ್ ಕಂಪ್ಯೂಟರ್ ಬೆಸ್ಟ್ ಚೆಸ್ ಪಟುವನ್ನು ಸೋಲಿಸಿ ದಾಖಲೆ ಬರೆದಿರುವುದು ಸಾಮ್ಯತೆಗೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ಐದು ಬಾರಿ ಚೆಸ್ ವಿಶ್ವಚಾಂಪಿಯನ್, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ವಿಶ್ವನಾಥನ್ ಆನಂದ್ ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವರ್ಷದ ಘಟಿಕೋತ್ಸವ ಕ್ಯಾಂಪಸ್​​ನಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಚೆಸ್ ಕ್ರೀಡೆ ಕಲಿಯಲು ಪ್ರಾರಂಭಿಸಿದಾಗ ತುಂಬಾ ಸರಳ ವಿಧಾನಗಳಿದ್ದವು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಹೊಸ ತಂತ್ರಜ್ಞಾನದ ಹಾಗೆ ಚೆಸ್​ನಲ್ಲೂ ಎಷ್ಟೋ ಕಾರ್ಯವಿಧಾನ ಬದಲಾಗಿದೆ. ಈಗ ಚೆಸ್ ಕ್ರೀಡೆಯಲ್ಲೂ ಸಾಕಷ್ಟು ಹೊಸ ಪಟ್ಟುಗಳು ಮುನ್ನೆಲೆಗೆ ಬಂದಿದ್ದು, ವಿಜ್ಞಾನದ ಹಾಗೆ ಒಂದೇ ವಿಧಾನ ಉಪಯೋಗಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್‌ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನಗಳು ಈಗ ಸಾಕಷ್ಟು ಮುನ್ನೆಲೆಗೆ ಬರುತ್ತಿವೆ. ಆದರ ಜೊತೆ ಹೊಸ ಹೊಸ ತಲೆಮಾರು ತನನ್ನು ತಾನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದರಿಂದ ಜಾಗತಿಕವಾಗಿ ಜೀವನದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದೆ ಎಂದು ಹೇಳಿದರು.

ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬೆಳೆಯಲು ಇನ್ನಷ್ಟು ಸಂಪನ್ಮೂಲಗಳನ್ನು ಮೂಲಸೌಕರ್ಯಗಳನ್ನು ಕ್ರೋಢೀಕರಿಸಿಕೊಂಡು ಮುನ್ನಡೆಯಬೇಕಿದೆ. ಸಾರ್ವಜನಿಕವಾಗಿ ಕೂಡ ಅನುಕೂಲವಾಗುವಂತಹ ಸಂಶೋಧನೆ ಭಾರತಕ್ಕೆ ಅವಶ್ಯಕತೆಯಿದೆ. ಹೊಸ ಹೊಸ ಉದ್ಯೋಗ, ನವೀನ ವ್ಯಾಪಾರ ವಹಿವಾಟು ಮತ್ತು ಇನ್ನಷ್ಟು ಬಲಾಢ್ಯ ಆರ್ಥಿಕತೆಯನ್ನು ಬೆಳೆಸಲು ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಿದೆ ಎಂದರು.

ಐಐಎಸ್​ಸಿ ಸೇರಿದಂತೆ ಎಲ್ಲ ಸಂಶೋಧನಾ ಸಂಸ್ಥೆಗಳು ಒಟ್ಟುಗೂಡಿ ಕಾರ್ಯಪ್ರವೃತ್ತರಾಗಬೇಕಿದೆ. ಅದರಿಂದ ಭಾರತದ ಜಾಗತಿಕ ನಾಯಕತ್ವ ಸಾಧ್ಯವಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಕೂಡ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.

1,136 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಸಮಾರಂಭದಲ್ಲಿ ಒಟ್ಟು 1,136 ಪದವಿಗಳನ್ನು ಪ್ರದಾನ ಮಾಡಲಾಯಿತು. ಅದರಲ್ಲಿ 465 ಸಂಶೋಧನಾ, 571 ಸ್ನಾತಕೋತ್ತರ ಕೋರ್ಸ್ ಪದವಿಗಳು ಮತ್ತು 100 ಪದವಿಪೂರ್ವ ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಯಿತು. ಶೈಕ್ಷಣಿಕ ಉತ್ಕೃಷ್ಟತೆಗಾಗಿ 57 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಸಹ ನೀಡಲಾಯಿತು.

ಇದನ್ನೂ ಓದಿ: ಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ - VTU CONVOCATION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.