ETV Bharat / state

ಅನಾಥೆಯ ಬಾಳಲ್ಲಿ ಬೆಳಕಾಗಿ ಬಂದ ಯುವಕ : ಮಂತ್ರ ಮಾಂಗಲ್ಯದಡಿ ಮದುವೆ ಮಾಡಿಸಿದ ಜಿಲ್ಲಾಡಳಿತ

author img

By ETV Bharat Karnataka Team

Published : Feb 21, 2024, 9:29 PM IST

ಅನಾಥೆಯೊಬ್ಬರಿಗೆ ದಾವಣಗೆರೆ ಜಿಲ್ಲಾಡಳಿತವು ಮಂತ್ರ ಮಾಂಗಲ್ಯದಡಿ ಮದುವೆ ಮಾಡಿಸಿದೆ.

ಮಂತ್ರ ಮಾಂಗಲ್ಯದಡಿಯಲ್ಲಿ ಮದುವೆ
ಮಂತ್ರ ಮಾಂಗಲ್ಯದಡಿಯಲ್ಲಿ ಮದುವೆ
ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್

ದಾವಣಗೆರೆ : ಅವರು ಅನಾಥೆಯರು, ಸಂತ್ರಸ್ತೆಯರು, ರಾಜ್ಯ ಮಹಿಳಾ ನಿಲಯದಲ್ಲಿ ಬದುಕು ಕಟ್ಟಿಕೊಂಡವರು. ತಂದೆ ತಾಯಿ ಇಲ್ಲದೆಯೂ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರು. ಸಂತಸದ ವಿಚಾರ ಏನಂದ್ರೆ ಅನಾಥ ಹೆಣ್ಣುಮಕ್ಕಳಿಗೆ ದಾವಣಗೆರೆ ಜಿಲ್ಲಾಡಳಿತ ಆಸರೆಯಾಗಿದೆ. ಅನಾಥೆಯರ ಬಾಳಿನಲ್ಲಿ ಬೆಳಕಾಗಿ ಬಂದ ಯುವಕನಿಗೆ ದಾವಣಗೆರೆ ಜಿಲ್ಲಾಡಳಿತ ಸಂವಿಧಾನದ ಪ್ರಸ್ತಾವನೆ ಓದಿಸಿ, ಮಂತ್ರ ಮಾಂಗಲ್ಯದಡಿಯಲ್ಲಿ ಮದುವೆ ಮಾಡಿಸಿದೆ. ಇಲ್ಲಿಯ ತನಕ ಒಟ್ಟು 43 ಮದುವೆಗಳನ್ನು ಮಾಡಿಸಿ, ಇಡೀ ರಾಜ್ಯದಲ್ಲಿ ದಾಖಲೆ ನಿರ್ಮಿಸಿದೆ.

ಬೆಣ್ಣೆನಗರಿ ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿಂದು ಈ ಮದುವೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಜಿಲ್ಲಾಡಳಿತದ ಸಮ್ಮುಖದಲ್ಲಿ ಇಲ್ಲೊಂದು ವಿಶೇಷ ಮದುವೆ ನೆರವೇರಿತು. ತಂದೆ ತಾಯಿಯನ್ನು ಕಳೆದುಕೊಂಡಿದ್ದ ದಿವ್ಯಾ (24 ವರ್ಷ) ಎಂಬುವವರು ನಗರದ ಹೊರವಲಯದಲ್ಲಿರುವ ರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿದ್ದರು.

ಹುಟ್ಟು ಅನಾಥೆಯಾಗಿರುವ ದಿವ್ಯಾ ದಾವಣಗೆರೆ ನಗರದ ರಾಮನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ರಾಜ್ಯ ಮಹಿಳಾ ನಿಲಯಕ್ಕೆ ತುಮಕೂರಿನಿಂದ ವರ್ಗಾವಣೆಗೊಂಡಿದ್ದರು. ಮದುವೆ ವಯಸ್ಸಿಗೆ ಬಂದ ಹಿನ್ನೆಲೆ ಮದುವೆ ಮಾಡಿಸಬೇಕಾಗಿ ಬಂದಿತ್ತು. ಈಗ ದಿವ್ಯಳ ಬಾಳಲ್ಲಿ ಚಿತ್ರದುರ್ಗದ ಮುದ್ಲಾಪುರ ಗ್ರಾಮದ ಟಿ. ನಾಗರಾಜ್ ಬೆಳಕಾಗಿ ಬಂದಿದ್ದಾರೆ.

ಎಸ್​ಪಿ ಉಮಾ ಪ್ರಶಾಂತ್

ವರನ ಹಿನ್ನೆಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಎಲ್ಲಾ ಸರಿ ಎಂದು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಜಿಲ್ಲಾಡಳಿತದ ಅನುಮತಿ ಪಡೆದು, ಈ ಇಬ್ಬರ ಸಂಬಂಧಿಕರೊಂದಿಗೆ ಮಾತನಾಡಿದರು. ಅವರ ಒಪ್ಪಿಗೆ ಮೇರೆಗೆ ಇಂದು ಮಹಿಳಾ ನಿಲಯದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದಡಿಯಲ್ಲಿ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್, ಎಸ್​ಪಿ ಉಮಾ ಪ್ರಶಾಂತ್, ಮಹಿಳಾ ಇಲಾಖೆ ಡಿಡಿ ವಾಸಂತಿ ಉಪ್ಪಾರ ಅವರು ತಮ್ಮ ಸ್ವಂತ ಮಗಳಂತೆ ಧಾರೆ ಎರೆದುಕೊಟ್ಟಿದ್ದು ವಿಶೇಷವಾಗಿತ್ತು.

ಇಲ್ಲಿಯ ತನಕ ಎಷ್ಟು ಮದುವೆ ಮಾಡಲಾಗಿದೆ ಗೊತ್ತಾ? : ಈ ರಾಜ್ಯ ಮಹಿಳಾ ನಿಲಯದಲ್ಲಿ ಅನಾಥರ 43 ವಿವಾಹಗಳು, 6 ನಾಮಕರಣ ಕಾರ್ಯಕ್ರಮಗಳು ನಡೆದಿವೆ. ಇಂದು ನಡೆದ ದಿವ್ಯಾ-ನಾಗರಾಜ್ ಮದುವೆ 43ನೇ ಕಲ್ಯಾಣ ಕಾರ್ಯಕ್ರಮವಾಗಿದೆ. ಇಂದು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿದೆ. ಈ ಅನಾಥರ ಕಲ್ಯಾಣ ಕಾರ್ಯಗಳಿಂದ ಮಹಿಳಾ ಮತ್ತು ಮಕ್ಕಳ ನಿಲಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್ ನೀಡಿದ್ದು, ಇಲಾಖೆ ಮೂರು ವರ್ಷಗಳ ನಂತರ ಬಡ್ಡಿ ಸಮೇತ ವಾಪಸ್ ನೀಡಲಿದೆ.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಾಸಂತಿ ಉಪ್ಪಾರ್, "ದಿವ್ಯಾಳಿಗೆ ನಾಗರಾಜ್ ಎಂಬುವರೊಂದಿಗೆ ಮದುವೆ ಮಾಡಿಸಿದ್ದೇವೆ. ಇಲ್ಲಿ ತನಕ 43 ಮದುವೆ ಮಾಡಿಸಿದ್ದೇವೆ. ಮಂತ್ರ ಮಾಂಗಲ್ಯದಡಿಯಲ್ಲಿ ಇಲ್ಲಿಯವರೆಗೆ ಮೂರು ಮದುವೆ ಮಾಡಿಸಿದ್ದೇವೆ. ಇಲ್ಲಿ ಜಾತಿ, ಮತ, ಆಸ್ತಿ, ಅಂತಸ್ತು, ಯಾವುದನ್ನು ನೋಡದೆ ಮದುವೆ ಮಾಡಿಸಲಾಗುತ್ತದೆ. ನಮ್ಮಲ್ಲಿ ಹೆಣ್ಣುಬೇಕೆಂದು ಬರುವವರು ಕುಲ, ಜಾತಿ, ಪಂಥ, ಧರ್ಮ ಕೇಳದೆ ವಧುವನ್ನು ವರಿಸುತ್ತಾರೆ. ಮದುವೆ ಆಗುತ್ತೇವೆ ಎಂದು ಬರುವ ಗಂಡುಮಕ್ಕಳ ಹಿನ್ನೆಲೆಯನ್ನು ತಿಳಿದುಕೊಂಡು ಜಿಲ್ಲಾಡಳಿತದ ಅನುಮತಿ ಪಡೆದು ವಧುವನ್ನು ಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ವಾಸಂತಿ ಉಪ್ಪಾರ್

ಮದುವೆಯಲ್ಲಿ ಭೂರಿ ಭೋಜನ : ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ ಅದ್ಧೂರಿಯಾಗಿತ್ತು. ತಂದೆ ತಾಯಿ ಮರಣದ ಹಿನ್ನೆಲೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಜಿಲ್ಲಾಡಳಿತ ಈ ಕಲ್ಯಾಣ ಕಾರ್ಯ ನೆರವೇರಿಸಿದೆ. ಯುವತಿ ದಿವ್ಯಾ, ಚಿತ್ರದುರ್ಗದ ನಾಗರಾಜ್ ರ ಕಲ್ಯಾಣ ಕಾರ್ಯಕ್ರಮ ನಡೆದಿದೆ. ಪಾಯಸ, ಜಿಲೇಬಿ, ಪೂರಿ, ಪನ್ನೀರ್ ಮಸಾಲ, ಅನ್ನ-ಸಾಂಬಾರ್ ಬೊಂಬಾಟ್ ಭೋಜನ ಸಿದ್ಧಪಡಿಸಲಾಗಿತ್ತು.

ಈ ವೇಳೆ ಜಿಲ್ಲಾಧಿಕಾರಿ ಡಾ. ಎಂ ವಿ ವೆಂಕಟೇಶ್ ಪ್ರತಿಕ್ರಿಯಿಸಿ, "ಇಂದು ದಾವಣಗೆರೆಯಲ್ಲಿ ವಿಶೇಷವಾದಂತಹ, ಅರ್ಥಪೂರ್ಣವಾದಂತಹ ಮಂತ್ರ ಮಾಂಗಲ್ಯದಡಿ ಜಿಲ್ಲಾಡಳಿತ ಮದುವೆ ಮಾಡಿಸಿದೆ. ನಾಗರಾಜ್, ದಿವ್ಯಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ದಿವ್ಯಾ ಅವರು ಮಹಿಳಾ ನಿಲಯದ ಅಭ್ಯರ್ಥಿ ಆಗಿದ್ದು, ಸರ್ಕಾರದ ವತಿಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿ, ಸಿಇಓ, ಎಸ್ಪಿ ಎಲ್ಲರೂ ನಿಂತು ಮಂತ್ರಮಾಂಗಲ್ಯದಡಿಯಲ್ಲಿ ಮದುವೆ ಮಾಡಿಸಿದ್ದೇವೆ.

ನವದಂಪತಿಯ ಜೀವನಕ್ಕೆ ಶುಭವಾಗಲಿ. ಸಂತೋಷದಿಂದ ಸಂಭ್ರಮದಿಂದ ಇರಲಿ ಎಂದು ಹಾರೈಸಿದ್ದೇವೆ. ಜಿಲ್ಲೆಯಲ್ಲಿ ಎರಡನೇ ಸರಳ ವಿವಾಹವಾಗಿದೆ. ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸರಳತೆಯನ್ನು ಅನುಸರಿಸಬೇಕೆಂದು ಸಂದೇಶ ರವಾನಿಸಿದರು.

ಇದನ್ನೂ ಓದಿ : ಸಂವಿಧಾನ ದಿನದಂದು 'ಮಂತ್ರ ಮಾಂಗಲ್ಯ'ದ ಮೂಲಕ ಚಾಮರಾಜನಗರ ಎಡಿಸಿ ಮದುವೆ

ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್

ದಾವಣಗೆರೆ : ಅವರು ಅನಾಥೆಯರು, ಸಂತ್ರಸ್ತೆಯರು, ರಾಜ್ಯ ಮಹಿಳಾ ನಿಲಯದಲ್ಲಿ ಬದುಕು ಕಟ್ಟಿಕೊಂಡವರು. ತಂದೆ ತಾಯಿ ಇಲ್ಲದೆಯೂ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರು. ಸಂತಸದ ವಿಚಾರ ಏನಂದ್ರೆ ಅನಾಥ ಹೆಣ್ಣುಮಕ್ಕಳಿಗೆ ದಾವಣಗೆರೆ ಜಿಲ್ಲಾಡಳಿತ ಆಸರೆಯಾಗಿದೆ. ಅನಾಥೆಯರ ಬಾಳಿನಲ್ಲಿ ಬೆಳಕಾಗಿ ಬಂದ ಯುವಕನಿಗೆ ದಾವಣಗೆರೆ ಜಿಲ್ಲಾಡಳಿತ ಸಂವಿಧಾನದ ಪ್ರಸ್ತಾವನೆ ಓದಿಸಿ, ಮಂತ್ರ ಮಾಂಗಲ್ಯದಡಿಯಲ್ಲಿ ಮದುವೆ ಮಾಡಿಸಿದೆ. ಇಲ್ಲಿಯ ತನಕ ಒಟ್ಟು 43 ಮದುವೆಗಳನ್ನು ಮಾಡಿಸಿ, ಇಡೀ ರಾಜ್ಯದಲ್ಲಿ ದಾಖಲೆ ನಿರ್ಮಿಸಿದೆ.

ಬೆಣ್ಣೆನಗರಿ ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿಂದು ಈ ಮದುವೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಜಿಲ್ಲಾಡಳಿತದ ಸಮ್ಮುಖದಲ್ಲಿ ಇಲ್ಲೊಂದು ವಿಶೇಷ ಮದುವೆ ನೆರವೇರಿತು. ತಂದೆ ತಾಯಿಯನ್ನು ಕಳೆದುಕೊಂಡಿದ್ದ ದಿವ್ಯಾ (24 ವರ್ಷ) ಎಂಬುವವರು ನಗರದ ಹೊರವಲಯದಲ್ಲಿರುವ ರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿದ್ದರು.

ಹುಟ್ಟು ಅನಾಥೆಯಾಗಿರುವ ದಿವ್ಯಾ ದಾವಣಗೆರೆ ನಗರದ ರಾಮನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ರಾಜ್ಯ ಮಹಿಳಾ ನಿಲಯಕ್ಕೆ ತುಮಕೂರಿನಿಂದ ವರ್ಗಾವಣೆಗೊಂಡಿದ್ದರು. ಮದುವೆ ವಯಸ್ಸಿಗೆ ಬಂದ ಹಿನ್ನೆಲೆ ಮದುವೆ ಮಾಡಿಸಬೇಕಾಗಿ ಬಂದಿತ್ತು. ಈಗ ದಿವ್ಯಳ ಬಾಳಲ್ಲಿ ಚಿತ್ರದುರ್ಗದ ಮುದ್ಲಾಪುರ ಗ್ರಾಮದ ಟಿ. ನಾಗರಾಜ್ ಬೆಳಕಾಗಿ ಬಂದಿದ್ದಾರೆ.

ಎಸ್​ಪಿ ಉಮಾ ಪ್ರಶಾಂತ್

ವರನ ಹಿನ್ನೆಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಎಲ್ಲಾ ಸರಿ ಎಂದು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಜಿಲ್ಲಾಡಳಿತದ ಅನುಮತಿ ಪಡೆದು, ಈ ಇಬ್ಬರ ಸಂಬಂಧಿಕರೊಂದಿಗೆ ಮಾತನಾಡಿದರು. ಅವರ ಒಪ್ಪಿಗೆ ಮೇರೆಗೆ ಇಂದು ಮಹಿಳಾ ನಿಲಯದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದಡಿಯಲ್ಲಿ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್, ಎಸ್​ಪಿ ಉಮಾ ಪ್ರಶಾಂತ್, ಮಹಿಳಾ ಇಲಾಖೆ ಡಿಡಿ ವಾಸಂತಿ ಉಪ್ಪಾರ ಅವರು ತಮ್ಮ ಸ್ವಂತ ಮಗಳಂತೆ ಧಾರೆ ಎರೆದುಕೊಟ್ಟಿದ್ದು ವಿಶೇಷವಾಗಿತ್ತು.

ಇಲ್ಲಿಯ ತನಕ ಎಷ್ಟು ಮದುವೆ ಮಾಡಲಾಗಿದೆ ಗೊತ್ತಾ? : ಈ ರಾಜ್ಯ ಮಹಿಳಾ ನಿಲಯದಲ್ಲಿ ಅನಾಥರ 43 ವಿವಾಹಗಳು, 6 ನಾಮಕರಣ ಕಾರ್ಯಕ್ರಮಗಳು ನಡೆದಿವೆ. ಇಂದು ನಡೆದ ದಿವ್ಯಾ-ನಾಗರಾಜ್ ಮದುವೆ 43ನೇ ಕಲ್ಯಾಣ ಕಾರ್ಯಕ್ರಮವಾಗಿದೆ. ಇಂದು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿದೆ. ಈ ಅನಾಥರ ಕಲ್ಯಾಣ ಕಾರ್ಯಗಳಿಂದ ಮಹಿಳಾ ಮತ್ತು ಮಕ್ಕಳ ನಿಲಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್ ನೀಡಿದ್ದು, ಇಲಾಖೆ ಮೂರು ವರ್ಷಗಳ ನಂತರ ಬಡ್ಡಿ ಸಮೇತ ವಾಪಸ್ ನೀಡಲಿದೆ.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಾಸಂತಿ ಉಪ್ಪಾರ್, "ದಿವ್ಯಾಳಿಗೆ ನಾಗರಾಜ್ ಎಂಬುವರೊಂದಿಗೆ ಮದುವೆ ಮಾಡಿಸಿದ್ದೇವೆ. ಇಲ್ಲಿ ತನಕ 43 ಮದುವೆ ಮಾಡಿಸಿದ್ದೇವೆ. ಮಂತ್ರ ಮಾಂಗಲ್ಯದಡಿಯಲ್ಲಿ ಇಲ್ಲಿಯವರೆಗೆ ಮೂರು ಮದುವೆ ಮಾಡಿಸಿದ್ದೇವೆ. ಇಲ್ಲಿ ಜಾತಿ, ಮತ, ಆಸ್ತಿ, ಅಂತಸ್ತು, ಯಾವುದನ್ನು ನೋಡದೆ ಮದುವೆ ಮಾಡಿಸಲಾಗುತ್ತದೆ. ನಮ್ಮಲ್ಲಿ ಹೆಣ್ಣುಬೇಕೆಂದು ಬರುವವರು ಕುಲ, ಜಾತಿ, ಪಂಥ, ಧರ್ಮ ಕೇಳದೆ ವಧುವನ್ನು ವರಿಸುತ್ತಾರೆ. ಮದುವೆ ಆಗುತ್ತೇವೆ ಎಂದು ಬರುವ ಗಂಡುಮಕ್ಕಳ ಹಿನ್ನೆಲೆಯನ್ನು ತಿಳಿದುಕೊಂಡು ಜಿಲ್ಲಾಡಳಿತದ ಅನುಮತಿ ಪಡೆದು ವಧುವನ್ನು ಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ವಾಸಂತಿ ಉಪ್ಪಾರ್

ಮದುವೆಯಲ್ಲಿ ಭೂರಿ ಭೋಜನ : ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ ಅದ್ಧೂರಿಯಾಗಿತ್ತು. ತಂದೆ ತಾಯಿ ಮರಣದ ಹಿನ್ನೆಲೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಜಿಲ್ಲಾಡಳಿತ ಈ ಕಲ್ಯಾಣ ಕಾರ್ಯ ನೆರವೇರಿಸಿದೆ. ಯುವತಿ ದಿವ್ಯಾ, ಚಿತ್ರದುರ್ಗದ ನಾಗರಾಜ್ ರ ಕಲ್ಯಾಣ ಕಾರ್ಯಕ್ರಮ ನಡೆದಿದೆ. ಪಾಯಸ, ಜಿಲೇಬಿ, ಪೂರಿ, ಪನ್ನೀರ್ ಮಸಾಲ, ಅನ್ನ-ಸಾಂಬಾರ್ ಬೊಂಬಾಟ್ ಭೋಜನ ಸಿದ್ಧಪಡಿಸಲಾಗಿತ್ತು.

ಈ ವೇಳೆ ಜಿಲ್ಲಾಧಿಕಾರಿ ಡಾ. ಎಂ ವಿ ವೆಂಕಟೇಶ್ ಪ್ರತಿಕ್ರಿಯಿಸಿ, "ಇಂದು ದಾವಣಗೆರೆಯಲ್ಲಿ ವಿಶೇಷವಾದಂತಹ, ಅರ್ಥಪೂರ್ಣವಾದಂತಹ ಮಂತ್ರ ಮಾಂಗಲ್ಯದಡಿ ಜಿಲ್ಲಾಡಳಿತ ಮದುವೆ ಮಾಡಿಸಿದೆ. ನಾಗರಾಜ್, ದಿವ್ಯಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ದಿವ್ಯಾ ಅವರು ಮಹಿಳಾ ನಿಲಯದ ಅಭ್ಯರ್ಥಿ ಆಗಿದ್ದು, ಸರ್ಕಾರದ ವತಿಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿ, ಸಿಇಓ, ಎಸ್ಪಿ ಎಲ್ಲರೂ ನಿಂತು ಮಂತ್ರಮಾಂಗಲ್ಯದಡಿಯಲ್ಲಿ ಮದುವೆ ಮಾಡಿಸಿದ್ದೇವೆ.

ನವದಂಪತಿಯ ಜೀವನಕ್ಕೆ ಶುಭವಾಗಲಿ. ಸಂತೋಷದಿಂದ ಸಂಭ್ರಮದಿಂದ ಇರಲಿ ಎಂದು ಹಾರೈಸಿದ್ದೇವೆ. ಜಿಲ್ಲೆಯಲ್ಲಿ ಎರಡನೇ ಸರಳ ವಿವಾಹವಾಗಿದೆ. ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸರಳತೆಯನ್ನು ಅನುಸರಿಸಬೇಕೆಂದು ಸಂದೇಶ ರವಾನಿಸಿದರು.

ಇದನ್ನೂ ಓದಿ : ಸಂವಿಧಾನ ದಿನದಂದು 'ಮಂತ್ರ ಮಾಂಗಲ್ಯ'ದ ಮೂಲಕ ಚಾಮರಾಜನಗರ ಎಡಿಸಿ ಮದುವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.