ETV Bharat / state

ಶೌಚಕ್ಕೆ ಸರ್ಜಿಕಲ್ ಚೇರ್ ಕೇಳಿದ ನಟ ದರ್ಶನ್: ಡಿಐಜಿ ಟಿ.ಪಿ ಶೇಷ ಹೇಳಿದ್ದೇನು? - T P Shesha

author img

By ETV Bharat Karnataka Team

Published : Aug 31, 2024, 10:42 PM IST

Updated : Aug 31, 2024, 10:54 PM IST

ಅವಶ್ಯಕತೆ ಇದ್ದರೆ ದರ್ಶನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ದರ್ಶನ್​ ಮಾತ್ರವಲ್ಲ, ಇತರೆ ಕೈದಿಗಳಿಗೂ ವಿಶೇಷ ಸೌಲಭ್ಯ ಸಿಗಬಾರದು ಎಂದು ಎಲ್ಲಾ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಡಿಐಜಿ ಟಿ.ಪಿ ಶೇಷ ತಿಳಿಸಿದರು.

ಡಿಐಜಿ ಟಿ.ಪಿ ಶೇಷ
ಡಿಐಜಿ ಟಿ.ಪಿ ಶೇಷ (ETV Bharat)
ಡಿಐಜಿ ಟಿ.ಪಿ ಶೇಷ (ETV Bharat)

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್​ ಆದ ಹಿನ್ನೆಲೆ ಶನಿವಾರ ಡಿಐಜಿ ಟಿ.ಪಿ ಶೇಷ ಜೈಲಿಗೆ ಭೇಟಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ' ಎಂದು ದರ್ಶನ್​ ಹೇಳಿದ್ದಾರೆ. ಈ ಬಗ್ಗೆ ಮೆಡಿಕಲ್​ ರೆಕಾರ್ಡ್​ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ, ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್​ಗೂ ಕೊಡಿಸುತ್ತೇವೆ ಎಂದರು.

ಇಂದು ದರ್ಶನ್​ ನೋಡಲು ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ತಂಗಿಯ ಪತಿ ಆಗಮಿಸಿದ್ದರು. ಅವರು ಸಿಸಿಟಿವಿ ಕಣ್ಗಾವಲಿನಲ್ಲಿ ದರ್ಶನ್​ ಜೊತೆ ಮಾತನಾಡಿದ್ದಾರೆ. ದರ್ಶನ್​ಗೆ ಬಟ್ಟೆ, ಸಾಬೂನು, ಶಾಂಪೂ ಮತ್ತು ಡ್ರೈಫ್ರೂಟ್ಸ್​ ಕೊಟ್ಟಿದ್ದಾರೆ. ಬ್ಲಾಂಕೆಟ್ ತಂದಿದ್ದರು, ಅದನ್ನು ಕೊಡಲು ಅನುಮತಿಸಿಲ್ಲ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆದಂತೆ ಬಳ್ಳಾರಿ ಕಾರಗೃಹದಲ್ಲಿ ದರ್ಶನ್​ ಮಾತ್ರವಲ್ಲ, ಇತರೆ ಕೈದಿಗಳಿಗೂ ವಿಶೇಷ ಸೌಲಭ್ಯ ಸಿಗಬಾರದು ಎಂದು ಎಲ್ಲಾ ಸಿಬ್ಬಂದಿಗೆ ಸೂಚನೆ ಕೊಟ್ಟಿರುವುದಾಗಿ ಹೇಳಿದರು.

ಇದನ್ನೂ ಓದಿ: ದರ್ಶನ್‌ ನೋಡಲು ವಕೀಲರ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ - VIJAYALAKSHMI VISITS BELLARY JAIL

ಡಿಐಜಿ ಟಿ.ಪಿ ಶೇಷ (ETV Bharat)

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್​ ಆದ ಹಿನ್ನೆಲೆ ಶನಿವಾರ ಡಿಐಜಿ ಟಿ.ಪಿ ಶೇಷ ಜೈಲಿಗೆ ಭೇಟಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ' ಎಂದು ದರ್ಶನ್​ ಹೇಳಿದ್ದಾರೆ. ಈ ಬಗ್ಗೆ ಮೆಡಿಕಲ್​ ರೆಕಾರ್ಡ್​ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ, ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್​ಗೂ ಕೊಡಿಸುತ್ತೇವೆ ಎಂದರು.

ಇಂದು ದರ್ಶನ್​ ನೋಡಲು ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ತಂಗಿಯ ಪತಿ ಆಗಮಿಸಿದ್ದರು. ಅವರು ಸಿಸಿಟಿವಿ ಕಣ್ಗಾವಲಿನಲ್ಲಿ ದರ್ಶನ್​ ಜೊತೆ ಮಾತನಾಡಿದ್ದಾರೆ. ದರ್ಶನ್​ಗೆ ಬಟ್ಟೆ, ಸಾಬೂನು, ಶಾಂಪೂ ಮತ್ತು ಡ್ರೈಫ್ರೂಟ್ಸ್​ ಕೊಟ್ಟಿದ್ದಾರೆ. ಬ್ಲಾಂಕೆಟ್ ತಂದಿದ್ದರು, ಅದನ್ನು ಕೊಡಲು ಅನುಮತಿಸಿಲ್ಲ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆದಂತೆ ಬಳ್ಳಾರಿ ಕಾರಗೃಹದಲ್ಲಿ ದರ್ಶನ್​ ಮಾತ್ರವಲ್ಲ, ಇತರೆ ಕೈದಿಗಳಿಗೂ ವಿಶೇಷ ಸೌಲಭ್ಯ ಸಿಗಬಾರದು ಎಂದು ಎಲ್ಲಾ ಸಿಬ್ಬಂದಿಗೆ ಸೂಚನೆ ಕೊಟ್ಟಿರುವುದಾಗಿ ಹೇಳಿದರು.

ಇದನ್ನೂ ಓದಿ: ದರ್ಶನ್‌ ನೋಡಲು ವಕೀಲರ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ - VIJAYALAKSHMI VISITS BELLARY JAIL

Last Updated : Aug 31, 2024, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.