ETV Bharat / state

ರಾಜ್ಯ ಸರ್ಕಾರ ಕುಸಿಯುವ ಹಂತಕ್ಕೆ ತಲುಪಿದೆ: ಸಿ.ಪಿ.ಯೋಗೇಶ್ವರ್​​ - CP Yogeshwar

ರಾಜ್ಯ ಸರ್ಕಾರ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ವಾಗ್ದಾಳಿ ನಡೆಸಿದರು.

author img

By ETV Bharat Karnataka Team

Published : Jul 6, 2024, 1:40 PM IST

ಸಿ.ಪಿ.ಯೋಗೇಶ್ವರ್​​
ಸಿ.ಪಿ.ಯೋಗೇಶ್ವರ್​​ (ETV Bharat)

ರಾಮನಗರ: ರಾಜ್ಯ ಸರ್ಕಾರ ಕುಸಿಯುವ ಹಂತಕ್ಕೆ ಬಂದು ತಲುಪಿದೆ‌. ಈ ಸರ್ಕಾರದಲ್ಲಿ ಬಹಳ ಗೊಂದಲ ಇದ್ದು, ದಿನಬೆಳಗಾದರೇ ಸಾಕು 108 ಹಗರಣಗಳು ಹೊರಗಡೆ ಬರ್ತಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರ ಈಗ ಐಸಿಯುನಲ್ಲಿದ್ದು, ಪ್ರತಿ ದಿನ ನೂರೆಂಟು ಹಗರಣಗಳು ಬೆಳಕಿಗೆ ಬರುತ್ತಲಿವೆ. ಮೂಡಾ, ‌ವಾಲ್ಮಿಕಿ ‌ಇಲಾಖೆ ಹಗರಣ ಹೊರ ಬಂದಿವೆ. ಒಂದೇ ವರ್ಷದಲ್ಲಿ ಜನವಿರೋಧಿ ಸರ್ಕಾರ ಎಂದು ಖ್ಯಾತಿ ಗಳಿಸಿದೆ. ಡಿಕೆ ಶಿವಕುಮಾರ್ ಸತತ ಮೂರು ದಿನ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ಮನಸ್ಸಲ್ಲಿ ಇಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಮತದಾರರಿಗೆ ಆಸೆ ಆಮಿಷ ತೋರಿಸಿ, ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಲ್ಲಿ ಭಯ ಬರುವಂತಹ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಒಂದು ವರ್ಷ ಅವಧಿಯಲ್ಲಿ ಸರ್ಕಾರ ಮಾಡಿರುವ ಯೋಜನೆ ಅನುಷ್ಠಾನ‌ದ ಬಗ್ಗೆ ಮಾತಾಡಿಲ್ಲ ಎಂದು ದೂರಿದರು.

ಮತದಾರರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅವರಿಷ್ಟ ಬಂದ‌ಂತೆ ನಡೆದುಕೊಂಡಿದ್ದಾರೆ. ಸರ್ಕಾರಿ ಯಂತ್ರವನ್ನು ಸ್ವಂತ ಸ್ವತ್ತಾಗಿ ದುರುಪಯೋಗ ಮಾಡಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರೋಟೊಕಾಲ್ ಕೂಡ ಪಾಲನೆ ಆಗಿಲ್ಲ. ನನ್ನನ್ನು ಕರೆದಿಲ್ಲ, ನಗರಸಭಾ ಅಧ್ಯಕ್ಷರನ್ನೂ ಕರೆದಿಲ್ಲ ಎಂದು ಕಿಡಿಕಾರಿದರು. 40 ವರ್ಷದಿಂದ ಡಿಕೆಶಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ. ಉಪಚುನಾವಣೆ ಹಿನ್ನೆ‌ಲೆ ಇಲ್ಲಿ ಬಂದು ಡ್ರಾಮಾ ಮಾಡ್ತಿದ್ದಾರೆ. ಮುಂದೆ ಈ ರೀತಿ ‌ಅನೌಪಚಾರಿಕವಾಗಿ ಸಭೆ ಮಾಡೋದನ್ನು ವಿರೋಧ ಮಾಡುತ್ತೇವೆ ಎಂದರು.

ಜನಸ್ಪಂದನ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನ ಮಾಡಿಲ್ಲ. ಜನಸ್ಪಂದನ ಕಾರ್ಯಕ್ರಮ ಆದಾಗ ನಿಯಮಗಳನ್ನು ಗಾಳಿಗೆ ತೂರಿದ್ದು, ಕೇವಲ ಚುನಾವಣೆಗಾಗಿಯೇ ಮಾತ್ರ ಚನ್ನಪಟ್ಟಣದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದಾರೆ. ಜನಸ್ಪಂದನ ಸಭೆಗೆ ನನ್ನ ವಿರೋಧ ಇಲ್ಲ. ಜನಸ್ಪಂದನ ಮಾಡಿದ ರೀತಿಯ ಬಗ್ಗೆ ವಿರೋಧ ಇದೆ ಎಂದು ಅಸಮಾಧಾನ ಹೊರಹಾಕಿದರು.

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ವಾರ ಇದರ ಬಗ್ಗೆ ಹೆಚ್​ಡಿಕೆ ಬಳಿ ಚರ್ಚೆ ಮಾಡಿದ್ದೇನೆ. ಬಹಳ ಬೇಗ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡಬೇಕು‌ ಎಂದು ಹೇಳಿದ್ದೇನೆ. ಅವರೂ ಕೂಡ ನೀವೇ ನಿಂತುಕೊಳ್ಳಿ ಅಂತ ಹೇಳಿದ್ದಾರೆ. ನಾನು ಅವರ ಅನುಮೋದನೆಗಾಗಿ ಕಾಯುತ್ತಾ ಇದ್ದೀನಿ. ಹೆಚ್‌ಡಿ ಕುಮಾರಸ್ವಾಮಿಯವರ ಸಹಮತ ಬೇಕಾಗುತ್ತದೆ. ಇನ್ನೂ ಎರಡು ಮೂರು ದಿನಗಳಲ್ಲಿ ಈ ವಿಚಾರ ಸ್ಪಷ್ಟವಾಗಲಿದೆ. ಸೋಮವಾರದಿಂದ ನಾನು ನನ್ನ ಚುನಾವಣಾ ಕಾರ್ಯಕ್ರಮ ಶುರು ಮಾಡುತ್ತೇನೆ. ಎಲ್ಲಾ ನಾಯಕರನ್ನು ಭೇಟಿ ಮಾಡುತ್ತೇನೆ,‌ ಕಾರ್ಯಕರ್ತರ ಭೇಟಿ ಮಾಡ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಮಕ್ಕಳ ಜೀವಕ್ಕೆ ಹಾನಿಯಾಗುವ ಕೃತ್ಯಗಳಿಗೆ ಮುಂದಾಗಬಾರದು: ಹೈಕೋರ್ಟ್ - High Court

ರಾಮನಗರ: ರಾಜ್ಯ ಸರ್ಕಾರ ಕುಸಿಯುವ ಹಂತಕ್ಕೆ ಬಂದು ತಲುಪಿದೆ‌. ಈ ಸರ್ಕಾರದಲ್ಲಿ ಬಹಳ ಗೊಂದಲ ಇದ್ದು, ದಿನಬೆಳಗಾದರೇ ಸಾಕು 108 ಹಗರಣಗಳು ಹೊರಗಡೆ ಬರ್ತಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರ ಈಗ ಐಸಿಯುನಲ್ಲಿದ್ದು, ಪ್ರತಿ ದಿನ ನೂರೆಂಟು ಹಗರಣಗಳು ಬೆಳಕಿಗೆ ಬರುತ್ತಲಿವೆ. ಮೂಡಾ, ‌ವಾಲ್ಮಿಕಿ ‌ಇಲಾಖೆ ಹಗರಣ ಹೊರ ಬಂದಿವೆ. ಒಂದೇ ವರ್ಷದಲ್ಲಿ ಜನವಿರೋಧಿ ಸರ್ಕಾರ ಎಂದು ಖ್ಯಾತಿ ಗಳಿಸಿದೆ. ಡಿಕೆ ಶಿವಕುಮಾರ್ ಸತತ ಮೂರು ದಿನ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ಮನಸ್ಸಲ್ಲಿ ಇಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಮತದಾರರಿಗೆ ಆಸೆ ಆಮಿಷ ತೋರಿಸಿ, ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಲ್ಲಿ ಭಯ ಬರುವಂತಹ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಒಂದು ವರ್ಷ ಅವಧಿಯಲ್ಲಿ ಸರ್ಕಾರ ಮಾಡಿರುವ ಯೋಜನೆ ಅನುಷ್ಠಾನ‌ದ ಬಗ್ಗೆ ಮಾತಾಡಿಲ್ಲ ಎಂದು ದೂರಿದರು.

ಮತದಾರರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅವರಿಷ್ಟ ಬಂದ‌ಂತೆ ನಡೆದುಕೊಂಡಿದ್ದಾರೆ. ಸರ್ಕಾರಿ ಯಂತ್ರವನ್ನು ಸ್ವಂತ ಸ್ವತ್ತಾಗಿ ದುರುಪಯೋಗ ಮಾಡಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರೋಟೊಕಾಲ್ ಕೂಡ ಪಾಲನೆ ಆಗಿಲ್ಲ. ನನ್ನನ್ನು ಕರೆದಿಲ್ಲ, ನಗರಸಭಾ ಅಧ್ಯಕ್ಷರನ್ನೂ ಕರೆದಿಲ್ಲ ಎಂದು ಕಿಡಿಕಾರಿದರು. 40 ವರ್ಷದಿಂದ ಡಿಕೆಶಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ. ಉಪಚುನಾವಣೆ ಹಿನ್ನೆ‌ಲೆ ಇಲ್ಲಿ ಬಂದು ಡ್ರಾಮಾ ಮಾಡ್ತಿದ್ದಾರೆ. ಮುಂದೆ ಈ ರೀತಿ ‌ಅನೌಪಚಾರಿಕವಾಗಿ ಸಭೆ ಮಾಡೋದನ್ನು ವಿರೋಧ ಮಾಡುತ್ತೇವೆ ಎಂದರು.

ಜನಸ್ಪಂದನ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನ ಮಾಡಿಲ್ಲ. ಜನಸ್ಪಂದನ ಕಾರ್ಯಕ್ರಮ ಆದಾಗ ನಿಯಮಗಳನ್ನು ಗಾಳಿಗೆ ತೂರಿದ್ದು, ಕೇವಲ ಚುನಾವಣೆಗಾಗಿಯೇ ಮಾತ್ರ ಚನ್ನಪಟ್ಟಣದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದಾರೆ. ಜನಸ್ಪಂದನ ಸಭೆಗೆ ನನ್ನ ವಿರೋಧ ಇಲ್ಲ. ಜನಸ್ಪಂದನ ಮಾಡಿದ ರೀತಿಯ ಬಗ್ಗೆ ವಿರೋಧ ಇದೆ ಎಂದು ಅಸಮಾಧಾನ ಹೊರಹಾಕಿದರು.

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ವಾರ ಇದರ ಬಗ್ಗೆ ಹೆಚ್​ಡಿಕೆ ಬಳಿ ಚರ್ಚೆ ಮಾಡಿದ್ದೇನೆ. ಬಹಳ ಬೇಗ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡಬೇಕು‌ ಎಂದು ಹೇಳಿದ್ದೇನೆ. ಅವರೂ ಕೂಡ ನೀವೇ ನಿಂತುಕೊಳ್ಳಿ ಅಂತ ಹೇಳಿದ್ದಾರೆ. ನಾನು ಅವರ ಅನುಮೋದನೆಗಾಗಿ ಕಾಯುತ್ತಾ ಇದ್ದೀನಿ. ಹೆಚ್‌ಡಿ ಕುಮಾರಸ್ವಾಮಿಯವರ ಸಹಮತ ಬೇಕಾಗುತ್ತದೆ. ಇನ್ನೂ ಎರಡು ಮೂರು ದಿನಗಳಲ್ಲಿ ಈ ವಿಚಾರ ಸ್ಪಷ್ಟವಾಗಲಿದೆ. ಸೋಮವಾರದಿಂದ ನಾನು ನನ್ನ ಚುನಾವಣಾ ಕಾರ್ಯಕ್ರಮ ಶುರು ಮಾಡುತ್ತೇನೆ. ಎಲ್ಲಾ ನಾಯಕರನ್ನು ಭೇಟಿ ಮಾಡುತ್ತೇನೆ,‌ ಕಾರ್ಯಕರ್ತರ ಭೇಟಿ ಮಾಡ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಮಕ್ಕಳ ಜೀವಕ್ಕೆ ಹಾನಿಯಾಗುವ ಕೃತ್ಯಗಳಿಗೆ ಮುಂದಾಗಬಾರದು: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.