ETV Bharat / state

ಬಿಲ್ ವಾಪಸ್ ಕಳುಹಿಸಿರುವ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ - CM Siddaramaiah

ರಾಜ್ಯಪಾಲರು 11 ಬಿಲ್​ಗಳನ್ನು ವಾಪಸ್ ಕಳುಹಿಸಿರುವ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

author img

By ETV Bharat Karnataka Team

Published : Aug 24, 2024, 4:08 PM IST

Updated : Aug 24, 2024, 5:18 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು: ಸದನದಲ್ಲಿ ಅಂಗೀಕಾರವಾದ 11 ಬಿಲ್​ಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗಾಂಧಿಭವನದ ಬಳಿ ಮಾತನಾಡಿದ ಅವರು, ಸದನದಲ್ಲಿ ಪಾಸ್ ಆಗಿರುವ ಬಿಲ್ ಅವು. ವಿವರಣೆ ಕೇಳಿದ್ರೆ ಕೊಡ್ತಾ ಇದ್ದೆವು. ಆದರೆ ವಾಪಸ್ ಕಳುಹಿಸಿದ್ದಾರೆ ಎಂದರು.

ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಡಿಸಿಎಂ, ಕೆಲವು ಸಚಿವರುಗಳು ದೆಹಲಿಗೆ ಹೋಗಿದ್ದೆವು. ರಾಜ್ಯದ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಮುಡಾ ಪ್ರಕರಣದ ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರಾಸಿಕ್ಯೂಷನ್ ಸಂವಿಧಾನ ಮತ್ತು ಕಾನೂನು ಬಾಹಿರ. ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕೋರ್ಟ್​ನಲ್ಲಿ ಪ್ರಶ್ನಿಸಿ ಅರ್ಜಿ ಹಾಕಲಾಗಿದೆ. ಆ.29ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಬಿಜೆಪಿಗರು ಪಾದಯಾತ್ರೆ ಮಾಡಿದ್ರು. ನಾವು ಅದನ್ನು ರಾಜಕೀಯವಾಗಿ ಎದುರಿಸಿದ್ದೇವೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ​ಅನುಮತಿ ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಸಿಎಂ ಹೇಳಿದರು.

ಬಸ್ ಟಿಕೆಟ್​ ದರ ಏರಿಕೆ ವಿಚಾರವಾಗಿ ಮಾತನಾಡಿ, ನೀವೇ ಎಲ್ಲ ಹೇಳ್ತಿದ್ದೀರಿ. ಈಗ ನೀರಿನ ದರ ಏರಿಕೆ ಅಂದ್ರಿ, ಇನ್ನೂ ಏರಿಸಿಲ್ಲ. ಬಹಳ ವರ್ಷದಿಂದ ಏರಿಸಿಲ್ಲ. ಬಿಡಬ್ಲ್ಯೂಎಸ್​ಎಸ್​ಬಿನಲ್ಲಿ ಕಷ್ಟದ ಪರಿಸ್ಥಿತಿ ಇದೆ. ಹೀಗಾಗಿ ಡಿಸಿಎಂ ಹಾಗೆ ಹೇಳಿದ್ದಾರೆ ಎಂದರು.

ಕೆಪಿಎಸ್​ಸಿ ಪರೀಕ್ಷೆ ಮುಂದಕ್ಕೆ ಹಾಕಲ್ಲ: ಕೆಪಿಎಸ್​ಸಿ ಪರೀಕ್ಷೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, ಗೊಂದಲ ಏನೂ ಇಲ್ಲ. ಕೆಲವು ಜನ ಪರೀಕ್ಷೆ ಮುಂದಕ್ಕೆ ಹಾಕಬೇಕು ಅಂತ ಹೇಳ್ತಾ ಇದ್ದಾರೆ. ನಾವು ಈಗ ಮುಂದಕ್ಕೆ ಹಾಕಲ್ಲ. ಒಂದು ಪತ್ರಿಕೆ ಮಾತ್ರ ಮುಂದೂಡಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನು ಸಿಎಂ ಆದ್ರೆ ಬರಗಾಲ ಬರುತ್ತೆ ಅಂತ ಮೌಢ್ಯ ಬಿತ್ತುವ ಕುಟಿಲ ಯತ್ನ ಮಾಡಲಾಗಿತ್ತು: ಸಿಎಂ - CM Siddaramaiah Slam

ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು: ಸದನದಲ್ಲಿ ಅಂಗೀಕಾರವಾದ 11 ಬಿಲ್​ಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗಾಂಧಿಭವನದ ಬಳಿ ಮಾತನಾಡಿದ ಅವರು, ಸದನದಲ್ಲಿ ಪಾಸ್ ಆಗಿರುವ ಬಿಲ್ ಅವು. ವಿವರಣೆ ಕೇಳಿದ್ರೆ ಕೊಡ್ತಾ ಇದ್ದೆವು. ಆದರೆ ವಾಪಸ್ ಕಳುಹಿಸಿದ್ದಾರೆ ಎಂದರು.

ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಡಿಸಿಎಂ, ಕೆಲವು ಸಚಿವರುಗಳು ದೆಹಲಿಗೆ ಹೋಗಿದ್ದೆವು. ರಾಜ್ಯದ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಮುಡಾ ಪ್ರಕರಣದ ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರಾಸಿಕ್ಯೂಷನ್ ಸಂವಿಧಾನ ಮತ್ತು ಕಾನೂನು ಬಾಹಿರ. ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕೋರ್ಟ್​ನಲ್ಲಿ ಪ್ರಶ್ನಿಸಿ ಅರ್ಜಿ ಹಾಕಲಾಗಿದೆ. ಆ.29ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಬಿಜೆಪಿಗರು ಪಾದಯಾತ್ರೆ ಮಾಡಿದ್ರು. ನಾವು ಅದನ್ನು ರಾಜಕೀಯವಾಗಿ ಎದುರಿಸಿದ್ದೇವೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ​ಅನುಮತಿ ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಸಿಎಂ ಹೇಳಿದರು.

ಬಸ್ ಟಿಕೆಟ್​ ದರ ಏರಿಕೆ ವಿಚಾರವಾಗಿ ಮಾತನಾಡಿ, ನೀವೇ ಎಲ್ಲ ಹೇಳ್ತಿದ್ದೀರಿ. ಈಗ ನೀರಿನ ದರ ಏರಿಕೆ ಅಂದ್ರಿ, ಇನ್ನೂ ಏರಿಸಿಲ್ಲ. ಬಹಳ ವರ್ಷದಿಂದ ಏರಿಸಿಲ್ಲ. ಬಿಡಬ್ಲ್ಯೂಎಸ್​ಎಸ್​ಬಿನಲ್ಲಿ ಕಷ್ಟದ ಪರಿಸ್ಥಿತಿ ಇದೆ. ಹೀಗಾಗಿ ಡಿಸಿಎಂ ಹಾಗೆ ಹೇಳಿದ್ದಾರೆ ಎಂದರು.

ಕೆಪಿಎಸ್​ಸಿ ಪರೀಕ್ಷೆ ಮುಂದಕ್ಕೆ ಹಾಕಲ್ಲ: ಕೆಪಿಎಸ್​ಸಿ ಪರೀಕ್ಷೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, ಗೊಂದಲ ಏನೂ ಇಲ್ಲ. ಕೆಲವು ಜನ ಪರೀಕ್ಷೆ ಮುಂದಕ್ಕೆ ಹಾಕಬೇಕು ಅಂತ ಹೇಳ್ತಾ ಇದ್ದಾರೆ. ನಾವು ಈಗ ಮುಂದಕ್ಕೆ ಹಾಕಲ್ಲ. ಒಂದು ಪತ್ರಿಕೆ ಮಾತ್ರ ಮುಂದೂಡಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನು ಸಿಎಂ ಆದ್ರೆ ಬರಗಾಲ ಬರುತ್ತೆ ಅಂತ ಮೌಢ್ಯ ಬಿತ್ತುವ ಕುಟಿಲ ಯತ್ನ ಮಾಡಲಾಗಿತ್ತು: ಸಿಎಂ - CM Siddaramaiah Slam

Last Updated : Aug 24, 2024, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.