ETV Bharat / state

ಸುಮಲತಾ ಅಂಬರೀಶ್ ಗೆ ಕುಮಾರಸ್ವಾಮಿ ಟಿಕೆಟ್ ಕೊಡಿಸಿ ಮೈತ್ರಿ ಧರ್ಮಪಾಲನೆ ಮಾಡಲಿ: ಬೇಲೂರು ಸೋಮಶೇಖರ್

author img

By ETV Bharat Karnataka Team

Published : Mar 17, 2024, 6:32 PM IST

ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಅನ್ನು ಸುಮಲತಾ ಅಂಬರೀಶ್ ಅವರಿಗೆ ನೀಡಬೇಕು ಎಂದು ಬೇಲೂರು ಸೋಮಶೇಖರ್ ಒತ್ತಾಯಿಸಿದ್ದಾರೆ.

ಬೇಲೂರು ಸೋಮಶೇಖರ್
ಬೇಲೂರು ಸೋಮಶೇಖರ್

ಕುಮಾರಸ್ವಾಮಿ ಟಿಕೆಟ್ ಕೊಡಿಸಿ ಮೈತ್ರಿ ಧರ್ಮಪಾಲನೆ ಮಾಡಲಿ

ಮಂಡ್ಯ : ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆ ಟಿಕೆಟ್​ ಕೊಡಿಸಿ ಮೈತ್ರಿ ಧರ್ಮ ಪಾಲನೆ ಮಾಡಲಿ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೇಲೂರು ಸೋಮಶೇಖರ್, ರಾಮನಗರದಲ್ಲಿ ತಮ್ಮ ಬಾವ ಡಾ. ಸಿ.ಎನ್​ ಮಂಜುನಾಥ್​ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಸನದಲ್ಲಿ ತಮ್ಮ ಅಣ್ಣನ ಮಗ ಹಾಲಿ ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ‌ ಅವರ ಅಕ್ಕ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೊಡಿಸಿ ಮೈತ್ರಿ ಧರ್ಮ‌ ಪಾಲನೆ ಮಾಡಲಿ ಎಂದು ಆಗ್ರಹಿಸಿದರು.

ಈಗಾಗಲೇ ಸುಮಲತಾ ಅಂಬರೀಶ್​ ಅವರು ಮೈತ್ರಿ ಧರ್ಮ‌ ಪಾಲನೆಯನ್ನು ಜೆಡಿಎಸ್​ ನವರು ಮಾಡಿದರೆ, ನಾವು ಮಾಡುತ್ತೇವೆ ಎಂದು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. ಆದರೇ ಜೆಡಿಎಸ್​ ನಾಯಕರು 2019ರಲ್ಲಿ ನಡೆದ ಲೋಕಸಭೆ ಚುನಾವಣೆ ಅಜೆಂಡವನ್ನು ಇಂದು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಅಜೆಂಡವನ್ನು ಮುನ್ನೆಲೆಗೆ ತೆಗೆದುಕೊಂಡು ಹೋದರೆ ಮೈತ್ರಿ ಧರ್ಮ ಪಾಲನೆ ಮಾಡುವುದು ಹೇಗೆ? ಎಂದು ಬೇಲೂರು ಸೋಮಶೇಖರ್ ಪ್ರಶ್ನಿಸಿದ್ದಾರೆ.

ವಿಷಯಾಧಾರಿತ ಮತ್ತು ಮಾನವೀಯತೆ ದೃಷ್ಟಿಯಿಂದ ಚುನವಣೆ ನಡೆಬೇಕು. ಸುಮಲತಾ ಅವರು ನನ್ನೊಂದಿಗೆ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಜೆಡಿಎಸ್​ ನವರು ಮೈತ್ರಿ ಧರ್ಮ ಪಾಲನೆ ಮಾಡು ನಿಟ್ಟಿನಲ್ಲಿ ಬಂದರೆ ಸ್ವಾಗತ. ಚುನಾವಣೆಯಲ್ಲಿ ಸುಮಲತಾ ಅವರು ಸ್ಫರ್ಧೆ ಮಾಡುವುದು ಖಚಿತ. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಫರ್ಧೆ ಮಾಡುತ್ತಾರೆ. ಟಿಕೆಟ್​ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರೆ ಎಂದು ಬೇಲೂರು ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಬಿಎಸ್​ವೈ ಮತ್ತು ಈಶ್ವರಪ್ಪ ಸ್ನೇಹ ಅಗಾಧವಾದದ್ದು, ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿಯುತ್ತದೆ: ಬೊಮ್ಮಾಯಿ

ಕುಮಾರಸ್ವಾಮಿ ಟಿಕೆಟ್ ಕೊಡಿಸಿ ಮೈತ್ರಿ ಧರ್ಮಪಾಲನೆ ಮಾಡಲಿ

ಮಂಡ್ಯ : ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆ ಟಿಕೆಟ್​ ಕೊಡಿಸಿ ಮೈತ್ರಿ ಧರ್ಮ ಪಾಲನೆ ಮಾಡಲಿ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೇಲೂರು ಸೋಮಶೇಖರ್, ರಾಮನಗರದಲ್ಲಿ ತಮ್ಮ ಬಾವ ಡಾ. ಸಿ.ಎನ್​ ಮಂಜುನಾಥ್​ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಸನದಲ್ಲಿ ತಮ್ಮ ಅಣ್ಣನ ಮಗ ಹಾಲಿ ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ‌ ಅವರ ಅಕ್ಕ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೊಡಿಸಿ ಮೈತ್ರಿ ಧರ್ಮ‌ ಪಾಲನೆ ಮಾಡಲಿ ಎಂದು ಆಗ್ರಹಿಸಿದರು.

ಈಗಾಗಲೇ ಸುಮಲತಾ ಅಂಬರೀಶ್​ ಅವರು ಮೈತ್ರಿ ಧರ್ಮ‌ ಪಾಲನೆಯನ್ನು ಜೆಡಿಎಸ್​ ನವರು ಮಾಡಿದರೆ, ನಾವು ಮಾಡುತ್ತೇವೆ ಎಂದು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. ಆದರೇ ಜೆಡಿಎಸ್​ ನಾಯಕರು 2019ರಲ್ಲಿ ನಡೆದ ಲೋಕಸಭೆ ಚುನಾವಣೆ ಅಜೆಂಡವನ್ನು ಇಂದು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಅಜೆಂಡವನ್ನು ಮುನ್ನೆಲೆಗೆ ತೆಗೆದುಕೊಂಡು ಹೋದರೆ ಮೈತ್ರಿ ಧರ್ಮ ಪಾಲನೆ ಮಾಡುವುದು ಹೇಗೆ? ಎಂದು ಬೇಲೂರು ಸೋಮಶೇಖರ್ ಪ್ರಶ್ನಿಸಿದ್ದಾರೆ.

ವಿಷಯಾಧಾರಿತ ಮತ್ತು ಮಾನವೀಯತೆ ದೃಷ್ಟಿಯಿಂದ ಚುನವಣೆ ನಡೆಬೇಕು. ಸುಮಲತಾ ಅವರು ನನ್ನೊಂದಿಗೆ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಜೆಡಿಎಸ್​ ನವರು ಮೈತ್ರಿ ಧರ್ಮ ಪಾಲನೆ ಮಾಡು ನಿಟ್ಟಿನಲ್ಲಿ ಬಂದರೆ ಸ್ವಾಗತ. ಚುನಾವಣೆಯಲ್ಲಿ ಸುಮಲತಾ ಅವರು ಸ್ಫರ್ಧೆ ಮಾಡುವುದು ಖಚಿತ. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಫರ್ಧೆ ಮಾಡುತ್ತಾರೆ. ಟಿಕೆಟ್​ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರೆ ಎಂದು ಬೇಲೂರು ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಬಿಎಸ್​ವೈ ಮತ್ತು ಈಶ್ವರಪ್ಪ ಸ್ನೇಹ ಅಗಾಧವಾದದ್ದು, ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿಯುತ್ತದೆ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.