ETV Bharat / state

ಬಾಗಲಕೋಟೆ: ಗದ್ದಿಗೌಡರ ದಾಖಲೆಯ ಓಟಕ್ಕೆ ಬ್ರೇಕ್ ಹಾಕ್ತಾರಾ ಸಂಯುಕ್ತಾ ಪಾಟೀಲ್? - Bagalkote Lok Sabha Constituency

author img

By ETV Bharat Karnataka Team

Published : Jun 3, 2024, 4:46 PM IST

ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿ.ಸಿ.ಗದ್ದಿಗೌಡರ, ಕಾಂಗ್ರೆಸ್​ನಿಂದ ಸಂಯುಕ್ತಾ ಪಾಟೀಲ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕ ಜೋರಾಗಿ ನಡೆಯುತ್ತಿದೆ.

BAGALKOTE LOK SABHA CONSTITUENCY
ಪಿ.ಸಿ.ಗದ್ದಿಗೌಡರ ಮತ್ತು ಸಂಯುಕ್ತಾ ಪಾಟೀಲ (ETV Bharat)

ಬಾಗಲಕೋಟ: ಬಾಗಲಕೋಟೆ ಕ್ಷೇತ್ರದಿಂದ 5ನೇ ಬಾರಿ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಪ್ರತಿಸ್ಪರ್ಧಿ. ಕಳೆದ ಚುನಾವಣೆಗಳಲ್ಲಿ ಅನಾಯಾಸದ ಜಯ ಸಾಧಿಸಿರುವ ಗದ್ದಿಗೌಡರ​ಗೆ ಈ ಬಾರಿ ಕೈ ಅಭ್ಯರ್ಥಿ ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳಿವೆ.

ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿ ಗದ್ದಿಗೌಡರ ಈ ಬಾರಿ ಅಬ್ಬರದ ಪ್ರಚಾರ ಮಾಡಿದ್ದರು. ಲಿಂಗಾಯತ ಗಾಣಿಗ ಸಮುದಾಯದ ಇವರು ಎಲ್ಲ ಪಕ್ಷಗಳ ನಾಯಕರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದ್ವೇಷ ರಾಜಕಾರಣ ಮಾಡದ ಹಾಗೂ ಯಾರ ವಿರುದ್ಧವೂ ಮಾತನಾಡದ ಇವರಿಗೆ ಬೇರೆ ಪಕ್ಷಗಳ ಕೆಲವು ನಾಯಕರ ಬೆಂಬಲವೂ ಇದೆ ಎನ್ನಲಾಗುತ್ತಿದೆ.

ಲಿಂಗಾಯತ ಗಾಣಿಗ ಸಮಾಜದವರು ಈ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಅಲ್ಲವಾದರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ‌ ಪ್ರಭಾವ ಬೀರಿದ್ದಾರೆ. ಈ ಸಮುದಾಯದವರು ಯಾವುದೇ ಪಕ್ಷದಲ್ಲಿ ದ್ದರೂ ಗದ್ದಿಗೌಡರ ಪರ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಈ ಬಾರಿ ಕ್ಷೇತ್ರದಲ್ಲಿ ಶೇ 70.1ರಷ್ಟು ಮತದಾನವಾಗಿದೆ. 2019ರಲ್ಲಿ ಇಲ್ಲಿ ಶೇ.70.69ರಷ್ಟು ಮತದಾನವಾಗಿತ್ತು.

ಜಿಲ್ಲೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಬಲವಾಗಿದ್ದರಿಂದ ಅದೇ ಸಮುದಾಯದ ಸಂಯುಕ್ತಾ ಪಾಟೀಲ್ ಕಣದಲ್ಲಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕುರುಬರು, ಅಲ್ಪಸಂಖ್ಯಾತರು, ಎಸ್​​ಸಿ ಎಸ್​​ಟಿ ಮತದಾರರು‌ ನಿರ್ಣಾಯಕರಾಗಿದ್ದು, ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಅಲ್ಲದೇ 8 ಲೋಕಸಭಾ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಪಕ್ಷದ ಶಾಸಕರಿರುವುದು ಪಕ್ಷಕ್ಕೆ ಪ್ಲಸ್ ಆಗಿದೆ.

ಸಂಯುಕ್ತಾ ಪಾಟೀಲ ಹೊರ ಜಿಲ್ಲೆಯ ಅಭ್ಯರ್ಥಿ ಎಂಬ ಅಸಮಾಧಾನ ಹಾಗು ಒಂದೊಮ್ಮೆ ಇವರು ಗೆದ್ದರೆ ಮುಂದೆ ಜಿಲ್ಲೆಯ ರಾಜಕೀಯ ಹಿಡಿತ ಕೈ ತಪ್ಪುತ್ತದೆಂದು ಕಾಂಗ್ರೆಸ್​ನ ಕೆಲವು ನಾಯಕರು ಭಾವಿಸಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇನ್ನು ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಪಂಚಮಸಾಲಿ ಸಮುದಾಯವರು ಕಾಂಗ್ರೆಸ್ ಮೇಲೆ ಅಸಮಾಧಾನಗೊಂಡಿದ್ದರು. ಸಚಿವ ಶಿವಾನಂದ ಪಾಟೀಲ ಮತ್ತು ಅಭ್ಯರ್ಥಿ ಸಂಯುಕ್ತಾ ಪಾಟೀಲ ಅಸಮಾಧಾನ ಶಮನಕ್ಕೆ ಪ್ರಯತ್ನಪಟ್ಟಿರುವುದು ಎಷ್ಟರಮಟ್ಟಿಗೆ ಫಲ ಕೊಡಲಿದೆ ನೋಡಬೇಕಿದೆ.

ಹೊಸ ಮುಖಕ್ಕೆ ಮಣೆ?: ಕಳೆದ 20 ವರ್ಷಗಳಲ್ಲಿ ಗದ್ದಿಗೌಡರನ್ನು ನೋಡಿ ಜನರು ಬೇಸತ್ತಿದ್ದಾರೆ. ಹೊಸ ಮುಖ ಮತ್ತು ಯುವತಿ ಎಂಬ ಕಾರಣಕ್ಕೆ ಈ ಬಾರಿ ಕ್ಷೇತ್ರದಾದ್ಯಂತ ಸಂಯುಕ್ತ ಪಾಟೀಲ್ ಪ್ರಚಾರ ಮಾಡಿದ ವೈಖರಿಯನ್ನೂ ಜನ ಗಮನಿಸಿ ಕಾಂಗ್ರೆಸ್​ ಪರ ಮತ ಹಾಕಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.

ಮೋದಿ ಅಲೆ ಹಾಗೂ ಕ್ಷೇತ್ರದಲ್ಲಿನ ಕೆಲ ಅಭಿವೃದ್ಧಿ ಕೆಲಸಗಳು ಗದ್ದಿಗೌಡರ ಅವರ ಕೈ ಹಿಡಿದರೆ, ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು ಸಂಯುಕ್ತಾ ಅವರಿಗೆ ಮತ ತರುತ್ತವೆ ಎಂಬುದರ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ಒಟ್ಟಿನಲ್ಲಿ ಎರಡೂ ಪಕ್ಷದವರು ಸುಮಾರು 30 ರಿಂದ 40 ಸಾವಿರ ಮತಗಳ ಅಂತರದಿಂದ ಜಯ ಗಳಿಸುವ ವಿಶ್ವಾದಲ್ಲಿದ್ದಾರೆ.

ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election

ಬಾಗಲಕೋಟ: ಬಾಗಲಕೋಟೆ ಕ್ಷೇತ್ರದಿಂದ 5ನೇ ಬಾರಿ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಪ್ರತಿಸ್ಪರ್ಧಿ. ಕಳೆದ ಚುನಾವಣೆಗಳಲ್ಲಿ ಅನಾಯಾಸದ ಜಯ ಸಾಧಿಸಿರುವ ಗದ್ದಿಗೌಡರ​ಗೆ ಈ ಬಾರಿ ಕೈ ಅಭ್ಯರ್ಥಿ ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳಿವೆ.

ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿ ಗದ್ದಿಗೌಡರ ಈ ಬಾರಿ ಅಬ್ಬರದ ಪ್ರಚಾರ ಮಾಡಿದ್ದರು. ಲಿಂಗಾಯತ ಗಾಣಿಗ ಸಮುದಾಯದ ಇವರು ಎಲ್ಲ ಪಕ್ಷಗಳ ನಾಯಕರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದ್ವೇಷ ರಾಜಕಾರಣ ಮಾಡದ ಹಾಗೂ ಯಾರ ವಿರುದ್ಧವೂ ಮಾತನಾಡದ ಇವರಿಗೆ ಬೇರೆ ಪಕ್ಷಗಳ ಕೆಲವು ನಾಯಕರ ಬೆಂಬಲವೂ ಇದೆ ಎನ್ನಲಾಗುತ್ತಿದೆ.

ಲಿಂಗಾಯತ ಗಾಣಿಗ ಸಮಾಜದವರು ಈ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಅಲ್ಲವಾದರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ‌ ಪ್ರಭಾವ ಬೀರಿದ್ದಾರೆ. ಈ ಸಮುದಾಯದವರು ಯಾವುದೇ ಪಕ್ಷದಲ್ಲಿ ದ್ದರೂ ಗದ್ದಿಗೌಡರ ಪರ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಈ ಬಾರಿ ಕ್ಷೇತ್ರದಲ್ಲಿ ಶೇ 70.1ರಷ್ಟು ಮತದಾನವಾಗಿದೆ. 2019ರಲ್ಲಿ ಇಲ್ಲಿ ಶೇ.70.69ರಷ್ಟು ಮತದಾನವಾಗಿತ್ತು.

ಜಿಲ್ಲೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಬಲವಾಗಿದ್ದರಿಂದ ಅದೇ ಸಮುದಾಯದ ಸಂಯುಕ್ತಾ ಪಾಟೀಲ್ ಕಣದಲ್ಲಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕುರುಬರು, ಅಲ್ಪಸಂಖ್ಯಾತರು, ಎಸ್​​ಸಿ ಎಸ್​​ಟಿ ಮತದಾರರು‌ ನಿರ್ಣಾಯಕರಾಗಿದ್ದು, ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಅಲ್ಲದೇ 8 ಲೋಕಸಭಾ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಪಕ್ಷದ ಶಾಸಕರಿರುವುದು ಪಕ್ಷಕ್ಕೆ ಪ್ಲಸ್ ಆಗಿದೆ.

ಸಂಯುಕ್ತಾ ಪಾಟೀಲ ಹೊರ ಜಿಲ್ಲೆಯ ಅಭ್ಯರ್ಥಿ ಎಂಬ ಅಸಮಾಧಾನ ಹಾಗು ಒಂದೊಮ್ಮೆ ಇವರು ಗೆದ್ದರೆ ಮುಂದೆ ಜಿಲ್ಲೆಯ ರಾಜಕೀಯ ಹಿಡಿತ ಕೈ ತಪ್ಪುತ್ತದೆಂದು ಕಾಂಗ್ರೆಸ್​ನ ಕೆಲವು ನಾಯಕರು ಭಾವಿಸಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇನ್ನು ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಪಂಚಮಸಾಲಿ ಸಮುದಾಯವರು ಕಾಂಗ್ರೆಸ್ ಮೇಲೆ ಅಸಮಾಧಾನಗೊಂಡಿದ್ದರು. ಸಚಿವ ಶಿವಾನಂದ ಪಾಟೀಲ ಮತ್ತು ಅಭ್ಯರ್ಥಿ ಸಂಯುಕ್ತಾ ಪಾಟೀಲ ಅಸಮಾಧಾನ ಶಮನಕ್ಕೆ ಪ್ರಯತ್ನಪಟ್ಟಿರುವುದು ಎಷ್ಟರಮಟ್ಟಿಗೆ ಫಲ ಕೊಡಲಿದೆ ನೋಡಬೇಕಿದೆ.

ಹೊಸ ಮುಖಕ್ಕೆ ಮಣೆ?: ಕಳೆದ 20 ವರ್ಷಗಳಲ್ಲಿ ಗದ್ದಿಗೌಡರನ್ನು ನೋಡಿ ಜನರು ಬೇಸತ್ತಿದ್ದಾರೆ. ಹೊಸ ಮುಖ ಮತ್ತು ಯುವತಿ ಎಂಬ ಕಾರಣಕ್ಕೆ ಈ ಬಾರಿ ಕ್ಷೇತ್ರದಾದ್ಯಂತ ಸಂಯುಕ್ತ ಪಾಟೀಲ್ ಪ್ರಚಾರ ಮಾಡಿದ ವೈಖರಿಯನ್ನೂ ಜನ ಗಮನಿಸಿ ಕಾಂಗ್ರೆಸ್​ ಪರ ಮತ ಹಾಕಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.

ಮೋದಿ ಅಲೆ ಹಾಗೂ ಕ್ಷೇತ್ರದಲ್ಲಿನ ಕೆಲ ಅಭಿವೃದ್ಧಿ ಕೆಲಸಗಳು ಗದ್ದಿಗೌಡರ ಅವರ ಕೈ ಹಿಡಿದರೆ, ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು ಸಂಯುಕ್ತಾ ಅವರಿಗೆ ಮತ ತರುತ್ತವೆ ಎಂಬುದರ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ಒಟ್ಟಿನಲ್ಲಿ ಎರಡೂ ಪಕ್ಷದವರು ಸುಮಾರು 30 ರಿಂದ 40 ಸಾವಿರ ಮತಗಳ ಅಂತರದಿಂದ ಜಯ ಗಳಿಸುವ ವಿಶ್ವಾದಲ್ಲಿದ್ದಾರೆ.

ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.