ETV Bharat / state

ಮಂಡ್ಯ: ಕೆರೆ ನೀರಿನಲ್ಲಿ ಬೈಕ್​​ ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು

ಮಂಡ್ಯ ಜಿಲ್ಲೆಯಲ್ಲಿ, ಕೋಡಿ ಬಿದ್ದ ಕೆರೆ ನೀರಿನಲ್ಲಿ ಬೈಕ್​​ ಸಮೇತ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಕೆರೆ ನೀರಿನಲ್ಲಿ ಬೈಕ್​​ ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು
ಕೆರೆ ನೀರಿನಲ್ಲಿ ಬೈಕ್​​ ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು (ETV Bharat)
author img

By ETV Bharat Karnataka Team

Published : 2 hours ago

ಮಂಡ್ಯ: ಸತತ ಮಳೆಗೆ ಕೋಡಿ ಬಿದ್ದ ಕೆರೆ ನೀರಿನಲ್ಲಿ ಬೈಕ್​​ ಸಮೇತ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಆಣೆಚೆನ್ನಾಪುರ ಗ್ರಾಮದಲ್ಲಿ ನಡೆದಿದೆ.

ಕಂಬದಹಳ್ಳಿ ಗ್ರಾಮದ ರಾಮಚಂದ್ರ (67ವರ್ಷ) ರಭಸದ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.

ಲೋಕಪಾವನಿ ನದಿಯಲ್ಲಿ ಕೊಚ್ಚಿ ಹೋಗಿ ಸಿಲುಕಿರುವ ಎತ್ತಿನ ಗಾಡಿ
ಲೋಕಪಾವನಿ ನದಿಯಲ್ಲಿ ಕೊಚ್ಚಿ ಹೋಗಿ ಸಿಲುಕಿರುವ ಎತ್ತಿನ ಗಾಡಿ (ETV Bharat)

ತಡರಾತ್ರಿ ಸುರಿದ ಬಾರಿ ಮಳೆಗೆ ಗ್ರಾಮದ ಕೆರೆಕೋಡಿ ತುಂಬಿ ಹರಿಯುತ್ತಿತ್ತು. ರಾಮಚಂದ್ರ ಅವರು ರಸ್ತೆಯಲ್ಲಿ ಸಂಚರಿಸುವಾಗ ಸ್ಥಳೀಯರು ಎಚ್ಚರಿಕೆ ನೀಡಿದದ್ದರೂ ನಿರ್ಲಕ್ಷ್ಯ ಮಾಡಿ ಮುಂದೆ ಸಾಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಬಿಂಡಿಗನವಿಲೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯವರ ಸಹಾಯದೊಂದಿಗೆ ನೀರಿನಿಂದ ಶವವನ್ನು ಹೊರತೆಗೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಲ್ಲಿ ಕೊಚ್ಚಿ ಹೋಗಿ ಬದುಕುಳಿದ ರೈತ, ಎತ್ತುಗಳು: ನದಿ ನೀರಿನ ರಭಸಕ್ಕೆ 200 ಮೀ. ರೈತ ಮತ್ತು ಎತ್ತಿನ ಗಾಡಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿ ಬಳಿಯ ಲೋಕಪಾವನಿ ನದಿಯಲ್ಲಿ ನಡೆದಿದೆ‌. ಸ್ಥಳೀಯರ ಮತ್ತು ಪೊಲೀಸರ ನೆರವಿನಿಂದ ರೈತ ಮತ್ತು ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ. ಲೋಕಪಾವನಿ ನದಿಯಲ್ಲಿ ಎತ್ತಿನ ಗಾಡಿ ನಿಲ್ಲಿಸಿ ಎತ್ತುಗಳ ಮೈತೊಳೆಯುವ ವೇಳೆ ಘಟನೆ ನಡೆದಿದೆ. ಸೇತುವೆ ಬಳಿ ಸಿಲುಕಿದ್ದ ಗಾಡಿಯನ್ನು ಕ್ರೇನ್ ಮೂಲಕ ಹೊರಕ್ಕೆ ತೆಗೆಯಲಾಗಿದೆ. ಯಾರೂ ಕೂಡ ನದಿ ಬಳಿಗೆ ಹೋಗದಂತೆ ರೈತರಿಗೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಸ್ಥಳದಲ್ಲೇ ಸಾವು

ಮಂಡ್ಯ: ಸತತ ಮಳೆಗೆ ಕೋಡಿ ಬಿದ್ದ ಕೆರೆ ನೀರಿನಲ್ಲಿ ಬೈಕ್​​ ಸಮೇತ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಆಣೆಚೆನ್ನಾಪುರ ಗ್ರಾಮದಲ್ಲಿ ನಡೆದಿದೆ.

ಕಂಬದಹಳ್ಳಿ ಗ್ರಾಮದ ರಾಮಚಂದ್ರ (67ವರ್ಷ) ರಭಸದ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.

ಲೋಕಪಾವನಿ ನದಿಯಲ್ಲಿ ಕೊಚ್ಚಿ ಹೋಗಿ ಸಿಲುಕಿರುವ ಎತ್ತಿನ ಗಾಡಿ
ಲೋಕಪಾವನಿ ನದಿಯಲ್ಲಿ ಕೊಚ್ಚಿ ಹೋಗಿ ಸಿಲುಕಿರುವ ಎತ್ತಿನ ಗಾಡಿ (ETV Bharat)

ತಡರಾತ್ರಿ ಸುರಿದ ಬಾರಿ ಮಳೆಗೆ ಗ್ರಾಮದ ಕೆರೆಕೋಡಿ ತುಂಬಿ ಹರಿಯುತ್ತಿತ್ತು. ರಾಮಚಂದ್ರ ಅವರು ರಸ್ತೆಯಲ್ಲಿ ಸಂಚರಿಸುವಾಗ ಸ್ಥಳೀಯರು ಎಚ್ಚರಿಕೆ ನೀಡಿದದ್ದರೂ ನಿರ್ಲಕ್ಷ್ಯ ಮಾಡಿ ಮುಂದೆ ಸಾಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಬಿಂಡಿಗನವಿಲೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯವರ ಸಹಾಯದೊಂದಿಗೆ ನೀರಿನಿಂದ ಶವವನ್ನು ಹೊರತೆಗೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಲ್ಲಿ ಕೊಚ್ಚಿ ಹೋಗಿ ಬದುಕುಳಿದ ರೈತ, ಎತ್ತುಗಳು: ನದಿ ನೀರಿನ ರಭಸಕ್ಕೆ 200 ಮೀ. ರೈತ ಮತ್ತು ಎತ್ತಿನ ಗಾಡಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿ ಬಳಿಯ ಲೋಕಪಾವನಿ ನದಿಯಲ್ಲಿ ನಡೆದಿದೆ‌. ಸ್ಥಳೀಯರ ಮತ್ತು ಪೊಲೀಸರ ನೆರವಿನಿಂದ ರೈತ ಮತ್ತು ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ. ಲೋಕಪಾವನಿ ನದಿಯಲ್ಲಿ ಎತ್ತಿನ ಗಾಡಿ ನಿಲ್ಲಿಸಿ ಎತ್ತುಗಳ ಮೈತೊಳೆಯುವ ವೇಳೆ ಘಟನೆ ನಡೆದಿದೆ. ಸೇತುವೆ ಬಳಿ ಸಿಲುಕಿದ್ದ ಗಾಡಿಯನ್ನು ಕ್ರೇನ್ ಮೂಲಕ ಹೊರಕ್ಕೆ ತೆಗೆಯಲಾಗಿದೆ. ಯಾರೂ ಕೂಡ ನದಿ ಬಳಿಗೆ ಹೋಗದಂತೆ ರೈತರಿಗೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.