ETV Bharat / state

ದೂಧಸಾಗರ ಬಳಿ ಹಳಿ ತಪ್ಪಿದ ರೈಲು: ಅಮರಾವತಿ ರೈಲಿನ‌ 1,200 ಪ್ರಯಾಣಿಕರಿಗೆ 25 ಬಸ್ ವ್ಯವಸ್ಥೆ - Dudhsagar Train Derail Update

author img

By ETV Bharat Karnataka Team

Published : Aug 12, 2024, 8:39 PM IST

ದೂಧಸಾಗರ ಬಳಿ ಗೂಡ್ಸ್​ ರೈಲು ಹಳಿ ತಪ್ಪಿದ್ದರಿಂದ ಸಂಚಾರ ಕಡಿತಗೊಂಡಿದೆ. ಅಮರಾವತಿ ರೈಲಿನ 1,200 ಪ್ರಯಾಣಿಕರಿಗೆ 25 ಬಸ್​ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗಿದೆ.

Bus
ಬಸ್​ (ETV Bharat)
ವಾಕರಸಾ ಸಂಸ್ಥೆ ಸಾರಿಗೆ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ (ETV Bharat)

ಹುಬ್ಬಳ್ಳಿ: ಕರ್ನಾಟಕ-ಗೋವಾ ಮಾರ್ಗದಲ್ಲಿನ ದೂಧ್‌ಸಾಗರ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಸಂಚಾರ ಕಡಿತಗೊಂಡಿದೆ. ಹೀಗಾಗಿ ಇಂದು‌ 1,200 ಪ್ರಯಾಣಿಕರನ್ನು ವಾಸ್ಕೋ‌ ಹಾಗೂ ಮಡಗಾಂವ್​ಗೆ ವಿಶೇಷ ಬಸ್​ಗಳ ಮೂಲಕ ಕಳುಹಿಸಲಾಯಿತು.

ಕರ್ನಾಟಕ ಹಾಗೂ ಗೋವಾ ಸಂಪರ್ಕಿಸುವ ದೂಧ್​ಸಾಗರ ರೈಲು ಮಾರ್ಗದಲ್ಲಿ ರೈಲು ಹಳಿ ತಪ್ಪಿದ್ದರಿಂದ ಉಭಯ ರಾಜ್ಯಗಳ ನಡುವೆ ರೈಲು ಸಂಪರ್ಕ ಕಡಿತವಾಗಿದೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶಾಲಿಮಾರ್ ನಿಂದ ವಾಸ್ಕೊಗೆ ಹೋಗಬೇಕಾಗಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲನ್ನು ಹುಬ್ಬಳ್ಳಿಯಲ್ಲಿ ನಿಲ್ಲಿಸಿದ್ದು, ಅದರಲ್ಲಿ 1,200 ಪ್ರಯಾಣಿಕರನ್ನು ಕಳುಹಿಸಲಾಗಿದೆ. ಶನಿವಾರವೂ ಕೂಡ 27 ವಿಶೇಷ ಸಾರಿಗೆ ಬಸ್​ಗಳ ಮೂಲಕ 1,300ಕ್ಕೂ ಹೆಚ್ಚು ಪ್ರಯಾಣಿಕರನ್ನು ವಾಸ್ಕೋ, ಮಡಗಾಂವ್, ಪಣಜಿಗೆ ಕಳುಹಿಸಲಾಗಿತ್ತು.

ಸಾರಿಗೆ ಸಂಸ್ಥೆ ಹಾಗೂ ರೈಲ್ವೆ ‌ಇಲಾಖೆ ಸಹಯೋಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೆ ತಮ್ಮ ತಮ್ಮ ಸ್ಥಳಗಳಿಗೆ ತಲುಪಿದ್ದಾರೆ.

ರೈಲು ಹುಬ್ಬಳ್ಳಿಗೆ ಆಗಮಿಸುವುದಕ್ಕೆ ಮುಂಚಿತವಾಗಿಯೇ ಬಸ್​​ಗಳನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಂಡ ಒಟ್ಟು 25 ಬಸ್‌ಗಳು ವಾಸ್ಕೋ, ಮಡಗಾಂವ್​ ಹಾಗೂ ಪಣಜಿ ಕಡೆಗೆ ತೆರಳಿದವು.

"ಇವತ್ತು 25 ಬಸ್​ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಶನಿವಾರ 27 ಬಸ್​ಗಳನ್ನ ವ್ಯವಸ್ಥೆ ಮಾಡಿದ್ದೆವು. ಒಟ್ಟು ಇಲ್ಲಿಯವರೆಗೂ ಹೊರ ರಾಜ್ಯಗಳ ಪ್ರಯಾಣಿಕರ ಅನುಕೂಲಕ್ಕಾಗಿ 52 ಬಸ್​ಗಳನ್ನು ವ್ಯವಸ್ಥೆ ಮಾಡುವ ಮೂಲಕ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಲಾಗಿದೆ" ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.

ಇದನ್ನೂ ಓದಿ: ದೂಧಸಾಗರ್ ಬಳಿ ಹಳಿ‌ ತಪ್ಪಿದ ಗೂಡ್ಸ್ ರೈಲು: ಬೋಗಿ ಪಲ್ಟಿ

ವಾಕರಸಾ ಸಂಸ್ಥೆ ಸಾರಿಗೆ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ (ETV Bharat)

ಹುಬ್ಬಳ್ಳಿ: ಕರ್ನಾಟಕ-ಗೋವಾ ಮಾರ್ಗದಲ್ಲಿನ ದೂಧ್‌ಸಾಗರ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಸಂಚಾರ ಕಡಿತಗೊಂಡಿದೆ. ಹೀಗಾಗಿ ಇಂದು‌ 1,200 ಪ್ರಯಾಣಿಕರನ್ನು ವಾಸ್ಕೋ‌ ಹಾಗೂ ಮಡಗಾಂವ್​ಗೆ ವಿಶೇಷ ಬಸ್​ಗಳ ಮೂಲಕ ಕಳುಹಿಸಲಾಯಿತು.

ಕರ್ನಾಟಕ ಹಾಗೂ ಗೋವಾ ಸಂಪರ್ಕಿಸುವ ದೂಧ್​ಸಾಗರ ರೈಲು ಮಾರ್ಗದಲ್ಲಿ ರೈಲು ಹಳಿ ತಪ್ಪಿದ್ದರಿಂದ ಉಭಯ ರಾಜ್ಯಗಳ ನಡುವೆ ರೈಲು ಸಂಪರ್ಕ ಕಡಿತವಾಗಿದೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶಾಲಿಮಾರ್ ನಿಂದ ವಾಸ್ಕೊಗೆ ಹೋಗಬೇಕಾಗಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲನ್ನು ಹುಬ್ಬಳ್ಳಿಯಲ್ಲಿ ನಿಲ್ಲಿಸಿದ್ದು, ಅದರಲ್ಲಿ 1,200 ಪ್ರಯಾಣಿಕರನ್ನು ಕಳುಹಿಸಲಾಗಿದೆ. ಶನಿವಾರವೂ ಕೂಡ 27 ವಿಶೇಷ ಸಾರಿಗೆ ಬಸ್​ಗಳ ಮೂಲಕ 1,300ಕ್ಕೂ ಹೆಚ್ಚು ಪ್ರಯಾಣಿಕರನ್ನು ವಾಸ್ಕೋ, ಮಡಗಾಂವ್, ಪಣಜಿಗೆ ಕಳುಹಿಸಲಾಗಿತ್ತು.

ಸಾರಿಗೆ ಸಂಸ್ಥೆ ಹಾಗೂ ರೈಲ್ವೆ ‌ಇಲಾಖೆ ಸಹಯೋಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೆ ತಮ್ಮ ತಮ್ಮ ಸ್ಥಳಗಳಿಗೆ ತಲುಪಿದ್ದಾರೆ.

ರೈಲು ಹುಬ್ಬಳ್ಳಿಗೆ ಆಗಮಿಸುವುದಕ್ಕೆ ಮುಂಚಿತವಾಗಿಯೇ ಬಸ್​​ಗಳನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಂಡ ಒಟ್ಟು 25 ಬಸ್‌ಗಳು ವಾಸ್ಕೋ, ಮಡಗಾಂವ್​ ಹಾಗೂ ಪಣಜಿ ಕಡೆಗೆ ತೆರಳಿದವು.

"ಇವತ್ತು 25 ಬಸ್​ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಶನಿವಾರ 27 ಬಸ್​ಗಳನ್ನ ವ್ಯವಸ್ಥೆ ಮಾಡಿದ್ದೆವು. ಒಟ್ಟು ಇಲ್ಲಿಯವರೆಗೂ ಹೊರ ರಾಜ್ಯಗಳ ಪ್ರಯಾಣಿಕರ ಅನುಕೂಲಕ್ಕಾಗಿ 52 ಬಸ್​ಗಳನ್ನು ವ್ಯವಸ್ಥೆ ಮಾಡುವ ಮೂಲಕ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಲಾಗಿದೆ" ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.

ಇದನ್ನೂ ಓದಿ: ದೂಧಸಾಗರ್ ಬಳಿ ಹಳಿ‌ ತಪ್ಪಿದ ಗೂಡ್ಸ್ ರೈಲು: ಬೋಗಿ ಪಲ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.