ETV Bharat / sports

ದ್ರಾವಿಡ್ ಕೋಚ್​​ ಸ್ಥಾನದಿಂದ ಹೊರ ಹೋಗುವುದನ್ನ ನನ್ನಿಂದ ನೋಡಲು ಸಾಧ್ಯವಿಲ್ಲ:​ ರೋಹಿತ್​ ಶರ್ಮಾ ಭಾವುಕ - T20 World Cup 2024

Rohit Sharma On Rahul Dravid: ರೋಹಿತ್ - ದ್ರಾವಿಡ್ ಯುಗದಲ್ಲಿ ಭಾರತಕ್ಕೆ ಯಾವುದೇ ICC ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ತಂಡದ ಬೆಳವಣಿಗೆಯಲ್ಲಿ ಮುಖ್ಯ ಕೋಚ್ ಕೊಡುಗೆ ದೊಡ್ಡದಾಗಿದೆ. ಈ ನಡುವೆ ರೋಹಿತ್​ ಶರ್ಮಾ, ರಾಹುಲ್​ ದ್ರಾವಿಡ್ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

author img

By ETV Bharat Karnataka Team

Published : Jun 5, 2024, 12:30 PM IST

ROHIT SHARMA ON RAHUL DRAVID  RAHUL DRAVID EXIT AS HEAD COACH  INDIA NEW HEAD COACH UPDATE
ರೋಹಿತ್​ ಶರ್ಮಾ ಭಾವುಕ (ಕೃಪೆ: ANI)

ನ್ಯೂಯಾರ್ಕ್​ (ಅಮೆರಿಕ): ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಅವರು ತಂಡಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕೋಚ್​ ಹುದ್ದೆಯಿಂದ ಹೊರಹೋಗುವ ರಾಹುಲ್ ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೇನೆ ಎಂದು ಭಾರತೀಯ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ ತಂಡದೊಂದಿಗೆ ಟಿ-20 ವಿಶ್ವಕಪ್ ತನ್ನ ಕೊನೆಯ ಟೂರ್ನಿಯಾಗಿದೆ ಎಂದು ದ್ರಾವಿಡ್ ಸೋಮವಾರ ಸ್ಪಷ್ಟಪಡಿಸಿದ್ದರು. ಅವರು ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಅಂದರೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕ ರೋಹಿತ್​​ ಶರ್ಮಾ, ತನ್ನ ಮೊದಲ ನಾಯಕ ಹಾಗೂ ಮುಖ್ಯ ಕೋಚ್​​​​​ ಬಗ್ಗೆ ಮಾತನಾಡುವಾಗ ಭಾವುಕರಾದರು. ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಅವರನ್ನು ನೋಡಲಾಗುತ್ತಿದೆ. ಆದರೆ, ಅವರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದರು.

"ನಾನು ಅವರನ್ನು ತಂಡದ ಕೋಚ್​ ಆಗಿ ಉಳಿಸಿಕೊಳ್ಳಲು ಮತ್ತು ಮನವೊಲಿಸಲು ಪ್ರಯತ್ನಿಸಿದೆ. ಆದರೆ, ನಿಸ್ಸಂಶಯವಾಗಿ ಅವರು ಕಾಳಜಿ ವಹಿಸಬೇಕಾದ ಬಹಳಷ್ಟು ವಿಷಯಗಳಿವೆ. ವೈಯಕ್ತಿಕವಾಗಿ ಅವರೊಂದಿಗೆ ನನ್ನ ಸಮಯವನ್ನು ಆನಂದಿಸಿರುವೆ. ಅವರು ಹೊರ ಹೋಗುವುದು ನನ್ನಿಂದ ನೋಡಲು ಸಾಧ್ಯವಿಲ್ಲ" ಎಂದು T20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮುನ್ನಾದಿನದಂದು ರೋಹಿತ್ ಶರ್ಮಾ ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಿಸಿಕೊಂಡ ರೋಹಿತ್, ರಾಹುಲ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ್ದೇನೆ ಎಂದರು. "ನಾನು ಐರ್ಲೆಂಡ್‌ಗೆ ಪದಾರ್ಪಣೆ ಮಾಡಿದಾಗ ಅವರು ನನ್ನ ಮೊದಲ ನಾಯಕರಾಗಿದ್ದರು. ನಾನು ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಬಂದಾಗ ಅವರ ಆಟವನ್ನು ಹತ್ತಿರದಿಂದ ನೋಡಿದ್ದೇನೆ. ನಮಗೆಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ " ಎಂದು ಹೇಳಿದರು.

ನಾವು ಅವರ ಆಟವನ್ನು ಬೆಳೆಯುತ್ತಲೇ ನೋಡಿದ್ದೇವೆ ಮತ್ತು ಆಟಗಾರನಾಗಿ ಅವರು ವೈಯಕ್ತಿಕವಾಗಿ ಏನು ಸಾಧಿಸಿದ್ದಾರೆಂದು ನಮಗೆ ತಿಳಿದಿದೆ. ಕಳೆದ ಕೆಲವು ವರ್ಷಗಳಿಂದ ತಂಡಕ್ಕೆ ಅವರು ನೀಡಿದ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ, ಅವರು ತಂಡವನ್ನು ಕಠಿಣ ಪರಿಸ್ಥಿತಿಗಳಿಂದ ಹೊರತರುವಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ರೋಹಿತ್ - ದ್ರಾವಿಡ್ ಯುಗದಲ್ಲಿ ಭಾರತಕ್ಕೆ ಯಾವುದೇ ಜಾಗತಿಕ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ತಂಡದ ಬೆಳವಣಿಗೆಯಲ್ಲಿ ಮುಖ್ಯ ಕೋಚ್ ಕೊಡುಗೆ ದೊಡ್ಡದಾಗಿದೆ. ದ್ರಾವಿಡ್​ ಅವರು ತಮ್ಮ ವೃತ್ತಿಜೀವನದ ಉದ್ದಕ್ಕೂ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರು ಕೋಚ್ ಆಗಿ ಇಲ್ಲಿಗೆ ಬಂದಾಗ, ನಾನು ಅವರಿಂದ ಹೊಸತನ್ನು ಕಲಿಯಲು ಬಯಸಿದ್ದೆ. ಇದು ಬಹಳ ಫಲಪ್ರದವಾಯಿತು. ದೊಡ್ಡ ಟ್ರೋಫಿಗಳನ್ನು ಹೊರತುಪಡಿಸಿ, ಎಲ್ಲ ಪ್ರಮುಖ ಪಂದ್ಯಾವಳಿಗಳು ಮತ್ತು ಸರಣಿಗಳನ್ನು ಗೆದ್ದಿದ್ದೇವೆ. 2021ರ ನವೆಂಬರ್‌ನಲ್ಲಿ ತಂಡವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸಿದ ನಂತರ ದ್ರಾವಿಡ್ ಅವರೊಂದಿಗಿನ ಕೆಲಸವನ್ನು ನಾವೆಲ್ಲರೂ ಆನಂದಿಸಿದ್ದೇವೆ ಎಂದು ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದರು.

2007 ರಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದ್ದ ಭಾರತ, A ಗುಂಪಿನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. 2013 ರ ICC ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಮತ್ತೊಂದು ICC ಟ್ರೋಫಿ ಗೆಲುವಿನತ್ತ ಚಿತ್ತ ಹರಿಸಿದೆ.

ಓದಿ: ಟಿ20 ವಿಶ್ವಕಪ್​: ಇಂದು ಭಾರತ - ಐರ್ಲೆಂಡ್​ ಹಣಾಹಣಿ; ಶುಭಾರಂಭಕ್ಕೆ ರೋಹಿತ್​ ಪಡೆ ಸಜ್ಜು - India vs Ireland

ನ್ಯೂಯಾರ್ಕ್​ (ಅಮೆರಿಕ): ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಅವರು ತಂಡಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕೋಚ್​ ಹುದ್ದೆಯಿಂದ ಹೊರಹೋಗುವ ರಾಹುಲ್ ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೇನೆ ಎಂದು ಭಾರತೀಯ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ ತಂಡದೊಂದಿಗೆ ಟಿ-20 ವಿಶ್ವಕಪ್ ತನ್ನ ಕೊನೆಯ ಟೂರ್ನಿಯಾಗಿದೆ ಎಂದು ದ್ರಾವಿಡ್ ಸೋಮವಾರ ಸ್ಪಷ್ಟಪಡಿಸಿದ್ದರು. ಅವರು ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಅಂದರೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕ ರೋಹಿತ್​​ ಶರ್ಮಾ, ತನ್ನ ಮೊದಲ ನಾಯಕ ಹಾಗೂ ಮುಖ್ಯ ಕೋಚ್​​​​​ ಬಗ್ಗೆ ಮಾತನಾಡುವಾಗ ಭಾವುಕರಾದರು. ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಅವರನ್ನು ನೋಡಲಾಗುತ್ತಿದೆ. ಆದರೆ, ಅವರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದರು.

"ನಾನು ಅವರನ್ನು ತಂಡದ ಕೋಚ್​ ಆಗಿ ಉಳಿಸಿಕೊಳ್ಳಲು ಮತ್ತು ಮನವೊಲಿಸಲು ಪ್ರಯತ್ನಿಸಿದೆ. ಆದರೆ, ನಿಸ್ಸಂಶಯವಾಗಿ ಅವರು ಕಾಳಜಿ ವಹಿಸಬೇಕಾದ ಬಹಳಷ್ಟು ವಿಷಯಗಳಿವೆ. ವೈಯಕ್ತಿಕವಾಗಿ ಅವರೊಂದಿಗೆ ನನ್ನ ಸಮಯವನ್ನು ಆನಂದಿಸಿರುವೆ. ಅವರು ಹೊರ ಹೋಗುವುದು ನನ್ನಿಂದ ನೋಡಲು ಸಾಧ್ಯವಿಲ್ಲ" ಎಂದು T20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮುನ್ನಾದಿನದಂದು ರೋಹಿತ್ ಶರ್ಮಾ ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಿಸಿಕೊಂಡ ರೋಹಿತ್, ರಾಹುಲ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ್ದೇನೆ ಎಂದರು. "ನಾನು ಐರ್ಲೆಂಡ್‌ಗೆ ಪದಾರ್ಪಣೆ ಮಾಡಿದಾಗ ಅವರು ನನ್ನ ಮೊದಲ ನಾಯಕರಾಗಿದ್ದರು. ನಾನು ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಬಂದಾಗ ಅವರ ಆಟವನ್ನು ಹತ್ತಿರದಿಂದ ನೋಡಿದ್ದೇನೆ. ನಮಗೆಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ " ಎಂದು ಹೇಳಿದರು.

ನಾವು ಅವರ ಆಟವನ್ನು ಬೆಳೆಯುತ್ತಲೇ ನೋಡಿದ್ದೇವೆ ಮತ್ತು ಆಟಗಾರನಾಗಿ ಅವರು ವೈಯಕ್ತಿಕವಾಗಿ ಏನು ಸಾಧಿಸಿದ್ದಾರೆಂದು ನಮಗೆ ತಿಳಿದಿದೆ. ಕಳೆದ ಕೆಲವು ವರ್ಷಗಳಿಂದ ತಂಡಕ್ಕೆ ಅವರು ನೀಡಿದ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ, ಅವರು ತಂಡವನ್ನು ಕಠಿಣ ಪರಿಸ್ಥಿತಿಗಳಿಂದ ಹೊರತರುವಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ರೋಹಿತ್ - ದ್ರಾವಿಡ್ ಯುಗದಲ್ಲಿ ಭಾರತಕ್ಕೆ ಯಾವುದೇ ಜಾಗತಿಕ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ತಂಡದ ಬೆಳವಣಿಗೆಯಲ್ಲಿ ಮುಖ್ಯ ಕೋಚ್ ಕೊಡುಗೆ ದೊಡ್ಡದಾಗಿದೆ. ದ್ರಾವಿಡ್​ ಅವರು ತಮ್ಮ ವೃತ್ತಿಜೀವನದ ಉದ್ದಕ್ಕೂ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರು ಕೋಚ್ ಆಗಿ ಇಲ್ಲಿಗೆ ಬಂದಾಗ, ನಾನು ಅವರಿಂದ ಹೊಸತನ್ನು ಕಲಿಯಲು ಬಯಸಿದ್ದೆ. ಇದು ಬಹಳ ಫಲಪ್ರದವಾಯಿತು. ದೊಡ್ಡ ಟ್ರೋಫಿಗಳನ್ನು ಹೊರತುಪಡಿಸಿ, ಎಲ್ಲ ಪ್ರಮುಖ ಪಂದ್ಯಾವಳಿಗಳು ಮತ್ತು ಸರಣಿಗಳನ್ನು ಗೆದ್ದಿದ್ದೇವೆ. 2021ರ ನವೆಂಬರ್‌ನಲ್ಲಿ ತಂಡವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸಿದ ನಂತರ ದ್ರಾವಿಡ್ ಅವರೊಂದಿಗಿನ ಕೆಲಸವನ್ನು ನಾವೆಲ್ಲರೂ ಆನಂದಿಸಿದ್ದೇವೆ ಎಂದು ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದರು.

2007 ರಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದ್ದ ಭಾರತ, A ಗುಂಪಿನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. 2013 ರ ICC ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಮತ್ತೊಂದು ICC ಟ್ರೋಫಿ ಗೆಲುವಿನತ್ತ ಚಿತ್ತ ಹರಿಸಿದೆ.

ಓದಿ: ಟಿ20 ವಿಶ್ವಕಪ್​: ಇಂದು ಭಾರತ - ಐರ್ಲೆಂಡ್​ ಹಣಾಹಣಿ; ಶುಭಾರಂಭಕ್ಕೆ ರೋಹಿತ್​ ಪಡೆ ಸಜ್ಜು - India vs Ireland

ETV Bharat Logo

Copyright © 2024 Ushodaya Enterprises Pvt. Ltd., All Rights Reserved.