ETV Bharat / sports

ಬೆಂಗಳೂರು ಬ್ಲಾಸ್ಟರ್ಸ್ ಮಣಿಸಿ ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್ - Maharaja Trophy KSCA T20

author img

By PTI

Published : Sep 2, 2024, 8:01 AM IST

ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಕ್ರಿಕೆಟ್​ ಟೂರ್ನಿಯ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಿಸಿ ಚೊಚ್ಚಲ ಮಹಾರಾಜ ಟ್ರೋಫಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

Maharaja Trophy
ಮೈಸೂರು ವಾರಿಯರ್ಸ್ ಗೆಲುವಿನ ಸಂಭ್ರಮ (Maharaja Trophy X Handle)

ಬೆಂಗಳೂರು: ನಾಯಕ ಕರುಣ್ ನಾಯರ್ ಮತ್ತು ಎಸ್‌.ಯು.ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಭಾನುವಾರ ಇಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಮೂರನೇ ಆವೃತ್ತಿಯ ಅಂತಿಮ​ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್​ ಅಗರ್ವಾಲ್​ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್​ಗಿಳಿದ ಮೈಸೂರು ವಾರಿಯರ್ಸ್, 29 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಕಾರ್ತಿಕ್​ ಸಿ.ಎ. 3 ರನ್​ಗೆ ಔಟಾದರು. ಆದರೆ ಬಳಿಕ ಒಂದಾದ ಎಸ್​.ಯು.ಕಾರ್ತಿಕ್ (44 ಎಸೆತಗಳಲ್ಲಿ 71 ರನ್​) ಹಾಗೂ ನಾಯಕ ಕರುಣ್ ನಾಯರ್​​ (45 ಎಸೆತಗಳಲ್ಲಿ 66 ರನ್​) ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್​ಗೆ 81 ರನ್​ ಸೇರಿಸಿತು.

ಕಾರ್ತಿಕ್ ಔಟಾದ ಬಳಿಕ ಅಬ್ಬರದ ಬ್ಯಾಟಿಂಗ್ ತೋರಿದ ಕರುಣ್ ನಾಯರ್ (66), ಅರ್ಧಶತಕ ಬಾರಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 207 ರನ್​ ಮೊತ್ತ ಕಲೆ ಹಾಕಿತು.

ಬೆಂಗಳೂರು ಬ್ಲಾಸ್ಟರ್ಸ್ ವೈಫಲ್ಯ: 208 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. 26 ರನ್​ ಆಗುವಷ್ಟರಲ್ಲಿ ನಾಯಕ ಮಯಾಂಕ್​ (6) ಪ್ರಮುಖ ಸೇರಿ ಮೂವರು ಬ್ಯಾಟರ್​ಗಳು ಪೆವಿಲಿಯನ್​ ಸೇರಿದರು. ಈ ಹಂತದಲ್ಲಿ ಆರಂಭಿಕ ಆಟಗಾರ ಎಲ್​.ಆರ್​.ಚೇತನ್​ ಕೊಂಚ ಹೋರಾಟ ಪ್ರದರ್ಶಿಸಿ, ಅರ್ಧಶತಕ (51) ಬಾರಿಸಿದರೂ ಸಾಕಾಗಲಿಲ್ಲ.

ಅಂತಿಮ ಹಂತದಲ್ಲಿ ಅನಿರುದ್ಧ್​ ಜೋಶಿ 18 ರನ್,​ ಕ್ರಾಂತಿ ಕುಮಾರ್​ 39 ಹಾಗೂ ನವೀನ್​ ಎಂ.ಜಿ. 17 ರನ್​ ಗಳಿಸಿದರೂ ಸಹ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಲಾಗಲಿಲ್ಲ. ತಂಡದ ಐವರು ಅಗ್ರ ಬ್ಯಾಟರ್​ಗಳು ಎರಡಂಕಿ ಮೊತ್ತವನ್ನೂ ತಲುಪದೇ ನಿರಾಸೆ ಮೂಡಿಸಿದರು. 20 ಓವರ್​ಗಳಲ್ಲಿ 8 ವಿಕೆಟ್​ಗೆ 162 ರನ್​ ಮಾತ್ರ ಗಳಿಸಲು ಶಕ್ತವಾದ ಬೆಂಗಳೂರು ಬ್ಲಾಸ್ಟರ್ಸ್, 45 ರನ್​ಗಳ ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಮೈಸೂರು ವಾರಿಯರ್ಸ್ ಪರ ವಿದ್ಯಾಧರ್ ಪಾಟೀಲ್ 19ಕ್ಕೆ 3 ಹಾಗೂ ಕೆ.ಗೌತಮ್​ 23ಕ್ಕೆ 2 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್​ನಲ್ಲಿ ಮಿಂಚಿದ ಎಸ್​.ಯು.ಕಾರ್ತಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರುಣ್​ ನಾಯರ್​ ಪ್ಲೇಯರ್​ ಆಫ್​ ದಿ ಸಿರೀಸ್​ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 207/4 (ಎಸ್‌.ಯು.ಕಾರ್ತಿಕ್ 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44 ರನ್​)

ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 162/8 (ಎಲ್‌.ಆರ್.ಚೇತನ್ 51 ರನ್​; ವಿದ್ಯಾಧರ್ ಪಾಟೀಲ್ 19ಕ್ಕೆ 3, ಕೆ.ಗೌತಮ್ 23ಕ್ಕೆ 2 ವಿಕೆಟ್).

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ; ನಿಶದ್ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು - Paralympics 2024

ಬೆಂಗಳೂರು: ನಾಯಕ ಕರುಣ್ ನಾಯರ್ ಮತ್ತು ಎಸ್‌.ಯು.ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಭಾನುವಾರ ಇಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಮೂರನೇ ಆವೃತ್ತಿಯ ಅಂತಿಮ​ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್​ ಅಗರ್ವಾಲ್​ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್​ಗಿಳಿದ ಮೈಸೂರು ವಾರಿಯರ್ಸ್, 29 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಕಾರ್ತಿಕ್​ ಸಿ.ಎ. 3 ರನ್​ಗೆ ಔಟಾದರು. ಆದರೆ ಬಳಿಕ ಒಂದಾದ ಎಸ್​.ಯು.ಕಾರ್ತಿಕ್ (44 ಎಸೆತಗಳಲ್ಲಿ 71 ರನ್​) ಹಾಗೂ ನಾಯಕ ಕರುಣ್ ನಾಯರ್​​ (45 ಎಸೆತಗಳಲ್ಲಿ 66 ರನ್​) ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್​ಗೆ 81 ರನ್​ ಸೇರಿಸಿತು.

ಕಾರ್ತಿಕ್ ಔಟಾದ ಬಳಿಕ ಅಬ್ಬರದ ಬ್ಯಾಟಿಂಗ್ ತೋರಿದ ಕರುಣ್ ನಾಯರ್ (66), ಅರ್ಧಶತಕ ಬಾರಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 207 ರನ್​ ಮೊತ್ತ ಕಲೆ ಹಾಕಿತು.

ಬೆಂಗಳೂರು ಬ್ಲಾಸ್ಟರ್ಸ್ ವೈಫಲ್ಯ: 208 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. 26 ರನ್​ ಆಗುವಷ್ಟರಲ್ಲಿ ನಾಯಕ ಮಯಾಂಕ್​ (6) ಪ್ರಮುಖ ಸೇರಿ ಮೂವರು ಬ್ಯಾಟರ್​ಗಳು ಪೆವಿಲಿಯನ್​ ಸೇರಿದರು. ಈ ಹಂತದಲ್ಲಿ ಆರಂಭಿಕ ಆಟಗಾರ ಎಲ್​.ಆರ್​.ಚೇತನ್​ ಕೊಂಚ ಹೋರಾಟ ಪ್ರದರ್ಶಿಸಿ, ಅರ್ಧಶತಕ (51) ಬಾರಿಸಿದರೂ ಸಾಕಾಗಲಿಲ್ಲ.

ಅಂತಿಮ ಹಂತದಲ್ಲಿ ಅನಿರುದ್ಧ್​ ಜೋಶಿ 18 ರನ್,​ ಕ್ರಾಂತಿ ಕುಮಾರ್​ 39 ಹಾಗೂ ನವೀನ್​ ಎಂ.ಜಿ. 17 ರನ್​ ಗಳಿಸಿದರೂ ಸಹ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಲಾಗಲಿಲ್ಲ. ತಂಡದ ಐವರು ಅಗ್ರ ಬ್ಯಾಟರ್​ಗಳು ಎರಡಂಕಿ ಮೊತ್ತವನ್ನೂ ತಲುಪದೇ ನಿರಾಸೆ ಮೂಡಿಸಿದರು. 20 ಓವರ್​ಗಳಲ್ಲಿ 8 ವಿಕೆಟ್​ಗೆ 162 ರನ್​ ಮಾತ್ರ ಗಳಿಸಲು ಶಕ್ತವಾದ ಬೆಂಗಳೂರು ಬ್ಲಾಸ್ಟರ್ಸ್, 45 ರನ್​ಗಳ ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಮೈಸೂರು ವಾರಿಯರ್ಸ್ ಪರ ವಿದ್ಯಾಧರ್ ಪಾಟೀಲ್ 19ಕ್ಕೆ 3 ಹಾಗೂ ಕೆ.ಗೌತಮ್​ 23ಕ್ಕೆ 2 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್​ನಲ್ಲಿ ಮಿಂಚಿದ ಎಸ್​.ಯು.ಕಾರ್ತಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರುಣ್​ ನಾಯರ್​ ಪ್ಲೇಯರ್​ ಆಫ್​ ದಿ ಸಿರೀಸ್​ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 207/4 (ಎಸ್‌.ಯು.ಕಾರ್ತಿಕ್ 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44 ರನ್​)

ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 162/8 (ಎಲ್‌.ಆರ್.ಚೇತನ್ 51 ರನ್​; ವಿದ್ಯಾಧರ್ ಪಾಟೀಲ್ 19ಕ್ಕೆ 3, ಕೆ.ಗೌತಮ್ 23ಕ್ಕೆ 2 ವಿಕೆಟ್).

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ; ನಿಶದ್ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು - Paralympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.