ETV Bharat / sports

ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ನಾಯಕನಾಗಿ ಮುಂದುವರೆದ ಮಯಾಂಕ್​ - Karnataka squad announced for Ranji

author img

By ETV Bharat Sports Team

Published : 3 hours ago

Updated : 3 hours ago

ಅಕ್ಟೋಬರ್​ 11 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಗೊಳಿಸಲಾಗಿದೆ. ಈ ಬಾರಿಯೂ ಮಯಾಂಕ್​ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Getty Images)

ಬೆಂಗಳೂರು: 2024-25ರ ಸೀಸನ್‌ನ ರಣಜಿ ಟ್ರೋಫಿ ಟೂರ್ನಿಗೆ ರಾಜ್ಯ ತಂಡದ 16 ಆಟಗಾರರ ಪಟ್ಟಿಯನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪ್ರಕಟಿಸಿದೆ. ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ನಾಯಕನಾಗಿ ಮುಂದುವರೆದಿದ್ದು, ಉಳಿದಂತೆ ಮನೀಶ್ ಪಾಂಡೆ, ಪ್ರಸಿಧ್ ಕೃಷ್ಣ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ ಕುಮಾರ್, ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೂ ಯುವ ಆಟಗಾರರಾದ ಅಭಿಲಾಶ್ ಶೆಟ್ಟಿ, ಹಾರ್ದಿಕ್ ರಾಜ್, ಮೊಹ್ಸಿನ್ ಖಾನ್ ಹದಿನಾರರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್‌ ಸಿ ನಲ್ಲಿ ಕರ್ನಾಟಕ ತಂಡವಿದೆ.

ಆಟಗಾರರ ಪಟ್ಟಿ ಇಂತಿದೆ

ಮಯಾಂಕ್ ಅಗರ್ವಾಲ್ (C)
ನಿಕಿನ್ ಜೋಸ್.ಎಸ್.ಜೆ.
ದೇವದತ್ ಪಡಿಕ್ಕಲ್
ಸ್ಮರಣ್.ಆರ್
ಮನೀಶ್ ಪಾಂಡೆ (VC)
ಶ್ರೇಯಸ್ ಗೋಪಾಲ್
ಸುಜಯ್ ಸತೇರಿ (WK)
ಹಾರ್ದಿಕ್ ರಾಜ್
ವೈಶಾಕ್.ವಿ
ಪ್ರಸಿಧ್ ಕೃಷ್ಣ
ಕೌಶಿಕ್.ವಿ
ಲವನಿತ್ ಸಿಸೋಡಿಯಾ (WK)
ಮೊಹ್ಸಿನ್ ಖಾನ್
ವಿದ್ಯಾಧರ್ ಪಾಟೀಲ್
ಕಿಶನ್ ಎಸ್.ಬೆದರೆ
ಅಭಿಲಾಶ್ ಶೆಟ್ಟಿ

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ, ಕೆಳಗೆಬಿದ್ದು ಯುವ ಕ್ರಿಕೆಟಿಗ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ - Young Cricketer Died

ಬೆಂಗಳೂರು: 2024-25ರ ಸೀಸನ್‌ನ ರಣಜಿ ಟ್ರೋಫಿ ಟೂರ್ನಿಗೆ ರಾಜ್ಯ ತಂಡದ 16 ಆಟಗಾರರ ಪಟ್ಟಿಯನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪ್ರಕಟಿಸಿದೆ. ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ನಾಯಕನಾಗಿ ಮುಂದುವರೆದಿದ್ದು, ಉಳಿದಂತೆ ಮನೀಶ್ ಪಾಂಡೆ, ಪ್ರಸಿಧ್ ಕೃಷ್ಣ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ ಕುಮಾರ್, ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೂ ಯುವ ಆಟಗಾರರಾದ ಅಭಿಲಾಶ್ ಶೆಟ್ಟಿ, ಹಾರ್ದಿಕ್ ರಾಜ್, ಮೊಹ್ಸಿನ್ ಖಾನ್ ಹದಿನಾರರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್‌ ಸಿ ನಲ್ಲಿ ಕರ್ನಾಟಕ ತಂಡವಿದೆ.

ಆಟಗಾರರ ಪಟ್ಟಿ ಇಂತಿದೆ

ಮಯಾಂಕ್ ಅಗರ್ವಾಲ್ (C)
ನಿಕಿನ್ ಜೋಸ್.ಎಸ್.ಜೆ.
ದೇವದತ್ ಪಡಿಕ್ಕಲ್
ಸ್ಮರಣ್.ಆರ್
ಮನೀಶ್ ಪಾಂಡೆ (VC)
ಶ್ರೇಯಸ್ ಗೋಪಾಲ್
ಸುಜಯ್ ಸತೇರಿ (WK)
ಹಾರ್ದಿಕ್ ರಾಜ್
ವೈಶಾಕ್.ವಿ
ಪ್ರಸಿಧ್ ಕೃಷ್ಣ
ಕೌಶಿಕ್.ವಿ
ಲವನಿತ್ ಸಿಸೋಡಿಯಾ (WK)
ಮೊಹ್ಸಿನ್ ಖಾನ್
ವಿದ್ಯಾಧರ್ ಪಾಟೀಲ್
ಕಿಶನ್ ಎಸ್.ಬೆದರೆ
ಅಭಿಲಾಶ್ ಶೆಟ್ಟಿ

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ, ಕೆಳಗೆಬಿದ್ದು ಯುವ ಕ್ರಿಕೆಟಿಗ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ - Young Cricketer Died

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.