ETV Bharat / spiritual

ಹೌದು ಗಣೇಶ ಚೌತಿ ಯಾವಾಗ?: ಸೆಪ್ಟೆಂಬರ್ 6ಕ್ಕಾ ಅಥವಾ 7ಕ್ಕಾ?: ಜ್ಯೋತಿಷಿಗಳು, ವಿದ್ವಾಂಸರ ಉತ್ತರ ಹೀಗಿದೆ! - GANESH CHATURTHI DATE THIS YEAR

author img

By ETV Bharat Karnataka Team

Published : Sep 4, 2024, 3:28 PM IST

ಗಣಪ ಬಂದ ಕಾಯಿ ಕಡುಬು ತಂದ.. ಹೌದು ಗಣೇಶನ ಹಬ್ಬ ಸಮೀಪಿಸಿದೆ. ಅಂದ ಹಾಗೇ ನೀವು ಗಣೇಶೋತ್ಸವವನ್ನು ಯಾವಾಗ ಆಚರಿಸುತ್ತೀರಿ. ಆರನೇ ತಾರೀಖಾ? ಅಥವಾ ಏಳರಂದಾ, ಜ್ಯೋತಿಷಿಗಳು ಗಣೇಶನ ಪ್ರತಿಷ್ಠಾಪನೆ ಯಾವಾಗ ಮಾಡಿದರೆ ಬೆಸ್ಟ್​ ಅಂತಾ ಹೇಳಿದ್ದಾರೆ, ಇಲ್ಲಿದೆ ಅದೆಲ್ಲದಕ್ಕೆ ಉತ್ತರ.

Is Ganesh Chaturthi September 6 Or 7
ವಿನಾಯಕ ಚೌತಿ ಯಾವಾಗ?: ಸೆಪ್ಟೆಂಬರ್ 6 ಅಥವಾ 7ಕ್ಕಾ?: ಜ್ಯೋತಿಷಿಗಳು, ವಿದ್ವಾಂಸರ ಉತ್ತರ ಹೀಗಿದೆ! (Getty Images)

ಗಣೇಶ ಚತುರ್ಥಿ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ಈ ಹಬ್ಬವು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿ ತಿಥಿಯವರೆಗೆ ನಡೆಯುತ್ತದೆ. ಒಂಬತ್ತು ದಿನಗಳ ಭವ್ಯವಾದ ಗಣೇಶ ಹಬ್ಬದ ವಿವಿಧ ಆಚರಣೆಗಳ ಬಳಿಕ 10ನೇ ದಿನ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ. ಗಣೇಶ ಪ್ರತಿಷ್ಟಾಪನೆ ಆದ ಬಳಿಕ ಕೆಲವು ಕಡೆ ಅಂದೇ ಸಂಜೆ ನಿಜ್ಜನಗೊಳಿಸುತ್ತಾರೆ. ಮತ್ತೆ ಕೆಲವು ಕಡೆ 3, 5, 7 9 10, 13 ಹೀಗೆ ಅವರವರ ಸ್ಥಳೀಯ ಆಚರಣಾ ಸಂಪ್ರದಾಯದ ಪ್ರಕಾರ ನಿಮಜ್ಜನ ಮಾಡುತ್ತಾರೆ. ಇದೇನೇ ಇರಲಿ ವಿನಾಯಕ ಚೌತಿಯನ್ನು ಯಾವ ದಿನ ಆಚರಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಒಂದಷ್ಟು ಸಂದೇಹಗಳಿವೆ. ಈ ಹಿನ್ನೆಲೆಯಲ್ಲಿ ಪಂಚಾಂಗಗಳು ಏನು ಹೇಳುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಿನಾಯಕ ಚೌತಿ ಯಾವಾಗ?: ಪಂಚಾಂಗದ ಪ್ರಕಾರ, ಚತುರ್ಥಿ ತಿಥಿ ಸೆಪ್ಟೆಂಬರ್ 6ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 7, 2024 ರಂದು ಶನಿವಾರ ಸಂಜೆ 5:35 ರವರೆಗೆ ಮುಂದುವರಿಯುತ್ತದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಸೂರ್ಯೋದಯದ ತಿಥಿಯ ದಿನದಂದೇ ಹಬ್ಬವನ್ನು ಆಚರಿಸುವುದು ವಾಡಿಕೆ. ಅದಕ್ಕಾಗಿಯೇ ಜ್ಯೋತಿಷಿಗಳು ವಿನಾಯಕ ಚೌತಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಬೇಕು ಎಂದು ಸೂಚಿಸುತ್ತಾರೆ.

ಗಣೇಶ ಪೂಜೆಗೆ ಶುಭ ಮುಹೂರ್ತ, ಪಂಚಾಂಗ​ ಮತ್ತು ಜ್ಯೋತಿಷಿಗಳು ಸೂಚಿಸಿದಂತೆ ವಿನಾಯಕ ಪೂಜೆಗೆ ಸೆಪ್ಟೆಂಬರ್ 7 ರಂದು 1:03 AM ನಿಂದ 01:34 PM ವರೆಗೆ ಶುಭ ಸಮಯವಾಗಿದ್ದು, ಈ ಸಂದರ್ಭದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಪ್ರಾರ್ಥನೆ ಸಲ್ಲಿಸಿದರೆ ಒಳ್ಳೆಯದು ಎಂದು ಸೂಚಿಸಿದ್ದಾರೆ. ಈ ಸಮಯದಲ್ಲಿ ಹಬ್ಬದ ಆಚರಣೆ ಅಂದರೆ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ.

ಭಾದ್ರಪದ ಶುದ್ಧ ಚೌತಿ ದಿನವೇ ಶಿವನು ವಿನಾಯಕನಿಗೆ ಗಣಾಧಿಪತನವನ್ನು ವರ್ಗಾಯಿಸಿದ್ದೇಕೆ?: ಪರಮೇಶ್ವರ ವಿನಾಯಕನಿಗೆ ಭಾದ್ರಪದ ಶುದ್ಧ ಚೌತಿ ದಿನವೇ ಗಣಾಧಿಪತವನ್ನ ವರ್ಗಾಯಿಸಿದ ಎಂಬ ನಂಬಿಕೆ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆತಡೆಗಳು ಬರಬಾರದು ಎಂಬ ಹಾರೈಕೆಯಿಂದ ಈ ದಿನದಂದು ಗಣಪತಿಯನ್ನು ಪೂಜಿಸುತ್ತಾರೆ.

ಆದ್ದರಿಂದಲೇ ಗಜಾನನನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ಯಾವುದೇ ಪೂಜೆ, ಉಪವಾಸ ಅಥವಾ ಶುಭ ಕಾರ್ಯಗಳನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಗಣಪತಿಯನ್ನು ಪೂಜಿಸದೇ ಯಾವುದೇ ಕೆಲಸವನ್ನು ಪ್ರಾರಂಭಿಸಬೇಡಿ. ಹಾಗಾಗಿಯೇ ಎಲ್ಲ ಹಬ್ಬಗಳಲ್ಲೂ ವಿನಾಯಕ ಚತುರ್ಥಿಗೆ ಮೊದಲ ಸ್ಥಾನ ಹಾಗೂ ಆದ್ಯತೆ ನೀಡುತ್ತಾರೆ. ಆದ್ದರಿಂದ ನಾವೆಲ್ಲರೂ ಹಬ್ಬ ಯಾವಾಗ ಎಂಬ ಸಂದೇಹಗಳನ್ನು ಬದಿಗಿಟ್ಟು ಪಂಚಾಂಗಗಳ ಸಲಹೆಯಂತೆ ಸೆಪ್ಟೆಂಬರ್ 7 ರಂದು ವಿನಾಯಕ ಚೌತಿಯನ್ನು ಹಬ್ಬವನ್ನು ಆಚರಿಸಿದರೆ ಸರಿ ಇರುತ್ತೆಯೇನೋ. ಆ ಗಣಸಾಧಿಗಳ ಆಶೀರ್ವಾದದಿಂದ ಯಾವುದೇ ಅಡೆತಡೆಯಿಲ್ಲದೆ ಮುನ್ನಡೆಯೋಣ.

ಓಂ ಶ್ರೀ ಮಹಾ ಗಣಾಧಿಪತಯೇ ನಮಃ

ಪ್ರಮುಖ ಸೂಚನೆ : ಮೇಲಿನ ವಿವರಗಳನ್ನು ವಿವಿಧ ವಿಜ್ಞಾನಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಕೆಲವು ತಜ್ಞರು ಒದಗಿಸಿದ್ದಾರೆ. ಆದಾಗ್ಯೂ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು. ಈ ನಂಬಿಕೆ, ಅಪ ನಂಬಿಕೆ ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು.

ಇದನ್ನು ಓದಿ: ಬುಧವಾರದ ಭವಿಷ್ಯ: ಈ ರಾಶಿಯವರಿಗೆ ಇರುವ ಕಾನೂನು ತೊಡಕುಗಳಿಗೆ ಇಂದು ಪರಿಹಾರ - Wednesday Horoscope

ಗಣೇಶ ಚತುರ್ಥಿ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ಈ ಹಬ್ಬವು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿ ತಿಥಿಯವರೆಗೆ ನಡೆಯುತ್ತದೆ. ಒಂಬತ್ತು ದಿನಗಳ ಭವ್ಯವಾದ ಗಣೇಶ ಹಬ್ಬದ ವಿವಿಧ ಆಚರಣೆಗಳ ಬಳಿಕ 10ನೇ ದಿನ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ. ಗಣೇಶ ಪ್ರತಿಷ್ಟಾಪನೆ ಆದ ಬಳಿಕ ಕೆಲವು ಕಡೆ ಅಂದೇ ಸಂಜೆ ನಿಜ್ಜನಗೊಳಿಸುತ್ತಾರೆ. ಮತ್ತೆ ಕೆಲವು ಕಡೆ 3, 5, 7 9 10, 13 ಹೀಗೆ ಅವರವರ ಸ್ಥಳೀಯ ಆಚರಣಾ ಸಂಪ್ರದಾಯದ ಪ್ರಕಾರ ನಿಮಜ್ಜನ ಮಾಡುತ್ತಾರೆ. ಇದೇನೇ ಇರಲಿ ವಿನಾಯಕ ಚೌತಿಯನ್ನು ಯಾವ ದಿನ ಆಚರಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಒಂದಷ್ಟು ಸಂದೇಹಗಳಿವೆ. ಈ ಹಿನ್ನೆಲೆಯಲ್ಲಿ ಪಂಚಾಂಗಗಳು ಏನು ಹೇಳುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಿನಾಯಕ ಚೌತಿ ಯಾವಾಗ?: ಪಂಚಾಂಗದ ಪ್ರಕಾರ, ಚತುರ್ಥಿ ತಿಥಿ ಸೆಪ್ಟೆಂಬರ್ 6ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 7, 2024 ರಂದು ಶನಿವಾರ ಸಂಜೆ 5:35 ರವರೆಗೆ ಮುಂದುವರಿಯುತ್ತದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಸೂರ್ಯೋದಯದ ತಿಥಿಯ ದಿನದಂದೇ ಹಬ್ಬವನ್ನು ಆಚರಿಸುವುದು ವಾಡಿಕೆ. ಅದಕ್ಕಾಗಿಯೇ ಜ್ಯೋತಿಷಿಗಳು ವಿನಾಯಕ ಚೌತಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಬೇಕು ಎಂದು ಸೂಚಿಸುತ್ತಾರೆ.

ಗಣೇಶ ಪೂಜೆಗೆ ಶುಭ ಮುಹೂರ್ತ, ಪಂಚಾಂಗ​ ಮತ್ತು ಜ್ಯೋತಿಷಿಗಳು ಸೂಚಿಸಿದಂತೆ ವಿನಾಯಕ ಪೂಜೆಗೆ ಸೆಪ್ಟೆಂಬರ್ 7 ರಂದು 1:03 AM ನಿಂದ 01:34 PM ವರೆಗೆ ಶುಭ ಸಮಯವಾಗಿದ್ದು, ಈ ಸಂದರ್ಭದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಪ್ರಾರ್ಥನೆ ಸಲ್ಲಿಸಿದರೆ ಒಳ್ಳೆಯದು ಎಂದು ಸೂಚಿಸಿದ್ದಾರೆ. ಈ ಸಮಯದಲ್ಲಿ ಹಬ್ಬದ ಆಚರಣೆ ಅಂದರೆ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ.

ಭಾದ್ರಪದ ಶುದ್ಧ ಚೌತಿ ದಿನವೇ ಶಿವನು ವಿನಾಯಕನಿಗೆ ಗಣಾಧಿಪತನವನ್ನು ವರ್ಗಾಯಿಸಿದ್ದೇಕೆ?: ಪರಮೇಶ್ವರ ವಿನಾಯಕನಿಗೆ ಭಾದ್ರಪದ ಶುದ್ಧ ಚೌತಿ ದಿನವೇ ಗಣಾಧಿಪತವನ್ನ ವರ್ಗಾಯಿಸಿದ ಎಂಬ ನಂಬಿಕೆ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆತಡೆಗಳು ಬರಬಾರದು ಎಂಬ ಹಾರೈಕೆಯಿಂದ ಈ ದಿನದಂದು ಗಣಪತಿಯನ್ನು ಪೂಜಿಸುತ್ತಾರೆ.

ಆದ್ದರಿಂದಲೇ ಗಜಾನನನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ಯಾವುದೇ ಪೂಜೆ, ಉಪವಾಸ ಅಥವಾ ಶುಭ ಕಾರ್ಯಗಳನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಗಣಪತಿಯನ್ನು ಪೂಜಿಸದೇ ಯಾವುದೇ ಕೆಲಸವನ್ನು ಪ್ರಾರಂಭಿಸಬೇಡಿ. ಹಾಗಾಗಿಯೇ ಎಲ್ಲ ಹಬ್ಬಗಳಲ್ಲೂ ವಿನಾಯಕ ಚತುರ್ಥಿಗೆ ಮೊದಲ ಸ್ಥಾನ ಹಾಗೂ ಆದ್ಯತೆ ನೀಡುತ್ತಾರೆ. ಆದ್ದರಿಂದ ನಾವೆಲ್ಲರೂ ಹಬ್ಬ ಯಾವಾಗ ಎಂಬ ಸಂದೇಹಗಳನ್ನು ಬದಿಗಿಟ್ಟು ಪಂಚಾಂಗಗಳ ಸಲಹೆಯಂತೆ ಸೆಪ್ಟೆಂಬರ್ 7 ರಂದು ವಿನಾಯಕ ಚೌತಿಯನ್ನು ಹಬ್ಬವನ್ನು ಆಚರಿಸಿದರೆ ಸರಿ ಇರುತ್ತೆಯೇನೋ. ಆ ಗಣಸಾಧಿಗಳ ಆಶೀರ್ವಾದದಿಂದ ಯಾವುದೇ ಅಡೆತಡೆಯಿಲ್ಲದೆ ಮುನ್ನಡೆಯೋಣ.

ಓಂ ಶ್ರೀ ಮಹಾ ಗಣಾಧಿಪತಯೇ ನಮಃ

ಪ್ರಮುಖ ಸೂಚನೆ : ಮೇಲಿನ ವಿವರಗಳನ್ನು ವಿವಿಧ ವಿಜ್ಞಾನಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಕೆಲವು ತಜ್ಞರು ಒದಗಿಸಿದ್ದಾರೆ. ಆದಾಗ್ಯೂ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು. ಈ ನಂಬಿಕೆ, ಅಪ ನಂಬಿಕೆ ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು.

ಇದನ್ನು ಓದಿ: ಬುಧವಾರದ ಭವಿಷ್ಯ: ಈ ರಾಶಿಯವರಿಗೆ ಇರುವ ಕಾನೂನು ತೊಡಕುಗಳಿಗೆ ಇಂದು ಪರಿಹಾರ - Wednesday Horoscope

ETV Bharat Logo

Copyright © 2024 Ushodaya Enterprises Pvt. Ltd., All Rights Reserved.