ETV Bharat / spiritual

ಇಂದು ಈ ರಾಶಿಯವರಿಗೆ ನಿರೀಕ್ಷೆ ಮೀರಿ ಧನಾತ್ಮಕ ಫಲಿತಾಂಶ!: ಹೀಗಿದೆ ಮಂಗಳವಾರದ ನಿಮ್ಮ ದಿನ ಭವಿಷ್ಯ

ಮಂಗಳವಾರದ ದಿನ ಭವಿಷ್ಯ ಮತ್ತು ಪಂಚಾಂಗ ಹೀಗಿದೆ...

author img

By ETV Bharat Karnataka Team

Published : 3 hours ago

ಮಂಗಳವಾರದ ರಾಶಿ ಭವಿಷ್ಯ
ಮಂಗಳವಾರದ ರಾಶಿ ಭವಿಷ್ಯ (ETV Bharat)

ಇಂದಿನ ಪಂಚಾಂಗ

15-10-2024, ಮಂಗಳವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಅಶ್ವಿನಿ

ಪಕ್ಷ: ಶುಕ್ಲ

ತಿಥಿ: ತ್ರಯೋದಶಿ

ನಕ್ಷತ್ರ: ಪೂರ್ವಾಭಾದ್ರಪದ

ಸೂರ್ಯೋದಯ : ಬೆಳಗ್ಗೆ 06:08 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 12:03 ರಿಂದ 01:32 ಗಂಟೆವರೆಗೆ

ರಾಹುಕಾಲ : ಸಾಯಂಕಾಲ 03:01 ರಿಂದ 04:29 ಗಂಟೆವರೆಗೆ

ದುರ್ಮುಹೂರ್ತಂ : ಬೆಳಗ್ಗೆ 08:32 ರಿಂದ 09:20 ಗಂಟೆವರೆಗೆ ಹಾಗೂ 11:44 ರಿಂದ 12:32 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:58 ಗಂಟೆಗೆ

ರಾಶಿ ಫಲ:

ಮೇಷ: ಇಂದು ನೀವು ಯಶಸ್ಸು ಪಡೆಯುತ್ತೀರಿ ಮತ್ತು ಅದನ್ನು ದೈವಿಕ ಬೆಂಬಲವಿಲ್ಲದೆ ನಿಮ್ಮದೇ ಪರಿಶ್ರಮದಿಂದ ಮಾಡುತ್ತೀರಿ. ನೀವು ವಿಜ್ಞಾನ ಅಥವಾ ಕಲಾ ವಿದ್ಯಾರ್ಥಿಗಳಾಗಿರಬಹುದು, ಆದರೆ ವಿಷಯದ ಆಳ ಜ್ಞಾನದಿಂದ ಮಾತ್ರ ಶ್ರೇಷ್ಠರಾಗುತ್ತೀರಿ. ನೀವು ನಂತರ ಓದಲು ನಿರ್ಧರಿಸುವ ಸಾಧ್ಯತೆಗಳಿವೆ.

ವೃಷಭ: ನೀವು ಇತರರನ್ನು ಮೆಚ್ಚಿಸಲು ಅಥವಾ ಪ್ರಭಾವ ಬೀರಲು ಕಷ್ಟ ಎಂದು ಕಾಣುತ್ತೀರಿ. ನೀವು ಒಳ್ಳೆಯದನ್ನು ಮಾಡಲು ಬಯಸಿದ್ದರೂ ಪ್ರಾರಂಭಿಕ ಹಿನ್ನಡೆಗಳನ್ನು ಅನುಭವಿಸಬಹುದು, ಆದರೆ ನೀವು ನಂತರ ಯಶಸ್ವಿಯಾಗುತ್ತೀರಿ.

ಮಿಥುನ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಇಡೀ ದಿನ ಆಕ್ರಮಿಸುತ್ತವೆ. ನೀವು ಸಾಮಾಜಿಕ ಸೇವೆ ಮತ್ತು ದತ್ತಿ ಕೆಲಸದಲ್ಲಿ ವೆಚ್ಚಗಳನ್ನು ಎದುರಿಸುತ್ತೀರಿ. ವ್ಯಾಪಾರ ವ್ಯವಹಾರಗಳಿಗೆ ಇದು ಒಳ್ಳೆಯ ಸಮಯ.

ಕರ್ಕಾಟಕ: ನೀವು ಕೆಲ ಸಾಮಾನ್ಯ ಸನ್ನಿವೇಶಗಳನ್ನು ಅಸಾಮಾನ್ಯ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಬೇಕು. ಈ ಮಧ್ಯಾಹ್ನ ಸಾರ್ವಜನಿಕ ಮನಃಶಾಸ್ತ್ರದಲ್ಲಿ ಹೊಸ ಪಾಠಗಳನ್ನು ಕಲಿಯಬಹುದು. ಆದರೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ನಿಷ್ಪಕ್ಷಪಾತ ಮನಸ್ಸಿನಿಂದ ಸರಿ ತಪ್ಪುಗಳನ್ನು ಅಳೆಯಿರಿ.

ಸಿಂಹ: ನೀವು ಆಗಾಗ ಕೋಪಗೊಳ್ಳುವುದು ಸರಿಯಲ್ಲ. ನಿಮ್ಮ ಮಾನಸಿಕ ಸ್ಥಿತಿ ಮುಖ್ಯವಾಗಿ ಬೆಳಗ್ಗೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂದು ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವ್ಯಸ್ತರಾಗಿರುತ್ತೀರಿ. ಮತ್ತು ಇದು ನಿಮ್ಮ ಒತ್ತಡಗಳಿಗೆ ಸೇರ್ಪಡೆಯಾಗುತ್ತದೆ.

ಕನ್ಯಾ: ಕ್ಷುಲ್ಲಕ ವಿಷಯಗಳಿಗೆ ಖಿನ್ನರಾಗಬೇಡಿ. ಅದು ಜನರೊಂದಿಗೆ ಬಾಂಧವ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ನ್ಯಾಯಾಲಯದ ಹೊರಗಿನ ಇತ್ಯರ್ಥ ಎಲ್ಲ ಕಾನೂನು ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಜೆಯಲ್ಲಿ ಕೊಂಚ ಹಣ ಖರ್ಚು ಮಾಡಿ ಮನರಂಜನೆ ಪಡೆಯಿರಿ.

ತುಲಾ: ನೀವು ನಿಮ್ಮ ಜೀವನದ ಮಂದ, ಪ್ರತಿನಿತ್ಯದ ದಿನಚರಿಯಿಂದ ಓಡಿಹೋಗಲು ಮತ್ತು ಬಿಡುವು ಪಡೆದು ರಜಾ ಬಯಸುತ್ತಿದ್ದೀರಿ. ಈ ಭಾವನೆಗೆ ಪೂರಕವಾಗಿ ನೀವು ಬಯಸಿದ ಪ್ರವಾಸ ನಿಮಗೆ ಅನುಕೂಲಕರ ಮತ್ತು ನಿಮ್ಮ ಜ್ಞಾನ ಹಾಗೂ ಅನುಭವ ಹೆಚ್ಚಿಸುತ್ತದೆ.

ವೃಶ್ಚಿಕ: ಪ್ರಸ್ತುತ ನಿಮ್ಮ ಅಸಾಧಾರಣ ಜೀವನವನ್ನು ಶ್ಲಾಘಿಸುವುದು ಮತ್ತು ನಿಮ್ಮನ್ನು ಸಂತೋಷಗೊಳಿಸುವುದು ಒಳ್ಳೆಯದು. ಇದರೊಂದಿಗೆ ನಿಮ್ಮ ಸಂಗಾತಿ ಬೆರೆತರೆ ಇಡೀ ಅನುಭವಕ್ಕೆ ಪ್ರಣಯದ ಸ್ಪರ್ಶ ದೊರೆಯುತ್ತದೆ. ಕೆಲಸದಲ್ಲಿ ಜನರು ನಿಮ್ಮನ್ನು ಸಂಸ್ಥೆಯ ಸಂಪತ್ತು ಎಂದು ಶ್ಲಾಘಿಸುತ್ತಾರೆ.

ಧನು: ನೀವು ಇಂದು ಏನೇ ಕೈಗೊಂಡರೂ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಫಲಿತಾಂಶ ಗಳಿಸುತ್ತೀರಿ. ನೀವು ಇತರರನ್ನು ಅವರ ಕೊಡುಗೆಗೆ ಪ್ರಶಂಸೆ ಮಾಡಲು ಒಂದು ಕ್ಷಣವೂ ಯೋಚಿಸುವುದಿಲ್ಲ. ಪ್ರೀತಿಪಾತ್ರರು ನಿಮ್ಮ ಗಮನದ ಕೇಂದ್ರವಾಗುತ್ತಾರೆ.

ಮಕರ: ಜೀವನಕ್ಕೆ ಸಕಾರಾತ್ಮಕ ಪ್ರವೃತ್ತಿ, ಪರಿಶ್ರಮ, ಹಿತೈಷಿಗಳು ಅಥವಾ ಸಮಯ ನಿರ್ವಹಣೆ ಜೀವನವನ್ನು ಒಗ್ಗೂಡಿಸುವ ಎಲ್ಲವೂ ನಿಮಗೆ ಪೂರಕವಾಗಿವೆ. ಆದರೆ ಸುಲಭವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ನೀವು ಅವರಿಗೆ ಎಷ್ಟು ಮುಖ್ಯ ಎನ್ನುವುದನ್ನು ತೋರುತ್ತದೆ.

ಕುಂಭ: ನೀವು ಭ್ರಮೆಯಲ್ಲಿ ಬದುಕುತ್ತೀರಿ ಮತ್ತು ವಾಸ್ತವದಿಂದ ದೂರ ಸರಿಯುತ್ತೀರಿ. ಅವಾಸ್ತವಿಕ ಇಚ್ಛೆಗಳನ್ನು ಮಾಡಬೇಡಿ; ಇಲ್ಲದಿದ್ದರೆ ನೀವು ವಿಷಯಗಳು ಹೇಗಿವೆ ಎಂದು ತಿಳಿದಾಗ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮ್ಮಲ್ಲಿ ಏನಿದೆಯೋ ಅದರ ಕುರಿತು ಸಂತೋಷವಾಗಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವುದರಿಂದ ನೀವು ಸರಾಗವಾಗಿ ಮುನ್ನಡೆಯುತ್ತೀರಿ.

ಮೀನ: ನೀವು ಸಣ್ಣ ಸಂಘರ್ಷಗಳನ್ನು ಇಡೀ ದಿನ ಪರಿಹರಿಸಬೇಕಾಗುತ್ತದೆ. ಅವು ಪರಿಹಾರವಾದ ನಂತರವೂ ಈ ಸಂಘರ್ಷಗಳಿಂದ ಹೊರಬರಲು ನಿಮಗೆ ಸಮಯ ಬೇಕಾಗುತ್ತದೆ. ಕೆಲಸದಲ್ಲಿ ಪ್ರಗತಿ ಸಾಧಿಸಬೇಕಾದರೆ ನಿಮ್ಮ ಮೂಡ್ ಬದಲಾವಣೆಗಳ ಕುರಿತು ನೀವು ಎಚ್ಚರ ವಹಿಸಬೇಕು.

ಇದನ್ನೂ ಓದಿ: ದೇವರಗಟ್ಟು ಬನ್ನಿ ಉತ್ಸವ: ದಂಡ ಕಾಳಗದಲ್ಲಿ 70 ಮಂದಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ಇಂದಿನ ಪಂಚಾಂಗ

15-10-2024, ಮಂಗಳವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಅಶ್ವಿನಿ

ಪಕ್ಷ: ಶುಕ್ಲ

ತಿಥಿ: ತ್ರಯೋದಶಿ

ನಕ್ಷತ್ರ: ಪೂರ್ವಾಭಾದ್ರಪದ

ಸೂರ್ಯೋದಯ : ಬೆಳಗ್ಗೆ 06:08 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 12:03 ರಿಂದ 01:32 ಗಂಟೆವರೆಗೆ

ರಾಹುಕಾಲ : ಸಾಯಂಕಾಲ 03:01 ರಿಂದ 04:29 ಗಂಟೆವರೆಗೆ

ದುರ್ಮುಹೂರ್ತಂ : ಬೆಳಗ್ಗೆ 08:32 ರಿಂದ 09:20 ಗಂಟೆವರೆಗೆ ಹಾಗೂ 11:44 ರಿಂದ 12:32 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:58 ಗಂಟೆಗೆ

ರಾಶಿ ಫಲ:

ಮೇಷ: ಇಂದು ನೀವು ಯಶಸ್ಸು ಪಡೆಯುತ್ತೀರಿ ಮತ್ತು ಅದನ್ನು ದೈವಿಕ ಬೆಂಬಲವಿಲ್ಲದೆ ನಿಮ್ಮದೇ ಪರಿಶ್ರಮದಿಂದ ಮಾಡುತ್ತೀರಿ. ನೀವು ವಿಜ್ಞಾನ ಅಥವಾ ಕಲಾ ವಿದ್ಯಾರ್ಥಿಗಳಾಗಿರಬಹುದು, ಆದರೆ ವಿಷಯದ ಆಳ ಜ್ಞಾನದಿಂದ ಮಾತ್ರ ಶ್ರೇಷ್ಠರಾಗುತ್ತೀರಿ. ನೀವು ನಂತರ ಓದಲು ನಿರ್ಧರಿಸುವ ಸಾಧ್ಯತೆಗಳಿವೆ.

ವೃಷಭ: ನೀವು ಇತರರನ್ನು ಮೆಚ್ಚಿಸಲು ಅಥವಾ ಪ್ರಭಾವ ಬೀರಲು ಕಷ್ಟ ಎಂದು ಕಾಣುತ್ತೀರಿ. ನೀವು ಒಳ್ಳೆಯದನ್ನು ಮಾಡಲು ಬಯಸಿದ್ದರೂ ಪ್ರಾರಂಭಿಕ ಹಿನ್ನಡೆಗಳನ್ನು ಅನುಭವಿಸಬಹುದು, ಆದರೆ ನೀವು ನಂತರ ಯಶಸ್ವಿಯಾಗುತ್ತೀರಿ.

ಮಿಥುನ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಇಡೀ ದಿನ ಆಕ್ರಮಿಸುತ್ತವೆ. ನೀವು ಸಾಮಾಜಿಕ ಸೇವೆ ಮತ್ತು ದತ್ತಿ ಕೆಲಸದಲ್ಲಿ ವೆಚ್ಚಗಳನ್ನು ಎದುರಿಸುತ್ತೀರಿ. ವ್ಯಾಪಾರ ವ್ಯವಹಾರಗಳಿಗೆ ಇದು ಒಳ್ಳೆಯ ಸಮಯ.

ಕರ್ಕಾಟಕ: ನೀವು ಕೆಲ ಸಾಮಾನ್ಯ ಸನ್ನಿವೇಶಗಳನ್ನು ಅಸಾಮಾನ್ಯ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಬೇಕು. ಈ ಮಧ್ಯಾಹ್ನ ಸಾರ್ವಜನಿಕ ಮನಃಶಾಸ್ತ್ರದಲ್ಲಿ ಹೊಸ ಪಾಠಗಳನ್ನು ಕಲಿಯಬಹುದು. ಆದರೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ನಿಷ್ಪಕ್ಷಪಾತ ಮನಸ್ಸಿನಿಂದ ಸರಿ ತಪ್ಪುಗಳನ್ನು ಅಳೆಯಿರಿ.

ಸಿಂಹ: ನೀವು ಆಗಾಗ ಕೋಪಗೊಳ್ಳುವುದು ಸರಿಯಲ್ಲ. ನಿಮ್ಮ ಮಾನಸಿಕ ಸ್ಥಿತಿ ಮುಖ್ಯವಾಗಿ ಬೆಳಗ್ಗೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂದು ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವ್ಯಸ್ತರಾಗಿರುತ್ತೀರಿ. ಮತ್ತು ಇದು ನಿಮ್ಮ ಒತ್ತಡಗಳಿಗೆ ಸೇರ್ಪಡೆಯಾಗುತ್ತದೆ.

ಕನ್ಯಾ: ಕ್ಷುಲ್ಲಕ ವಿಷಯಗಳಿಗೆ ಖಿನ್ನರಾಗಬೇಡಿ. ಅದು ಜನರೊಂದಿಗೆ ಬಾಂಧವ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ನ್ಯಾಯಾಲಯದ ಹೊರಗಿನ ಇತ್ಯರ್ಥ ಎಲ್ಲ ಕಾನೂನು ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಜೆಯಲ್ಲಿ ಕೊಂಚ ಹಣ ಖರ್ಚು ಮಾಡಿ ಮನರಂಜನೆ ಪಡೆಯಿರಿ.

ತುಲಾ: ನೀವು ನಿಮ್ಮ ಜೀವನದ ಮಂದ, ಪ್ರತಿನಿತ್ಯದ ದಿನಚರಿಯಿಂದ ಓಡಿಹೋಗಲು ಮತ್ತು ಬಿಡುವು ಪಡೆದು ರಜಾ ಬಯಸುತ್ತಿದ್ದೀರಿ. ಈ ಭಾವನೆಗೆ ಪೂರಕವಾಗಿ ನೀವು ಬಯಸಿದ ಪ್ರವಾಸ ನಿಮಗೆ ಅನುಕೂಲಕರ ಮತ್ತು ನಿಮ್ಮ ಜ್ಞಾನ ಹಾಗೂ ಅನುಭವ ಹೆಚ್ಚಿಸುತ್ತದೆ.

ವೃಶ್ಚಿಕ: ಪ್ರಸ್ತುತ ನಿಮ್ಮ ಅಸಾಧಾರಣ ಜೀವನವನ್ನು ಶ್ಲಾಘಿಸುವುದು ಮತ್ತು ನಿಮ್ಮನ್ನು ಸಂತೋಷಗೊಳಿಸುವುದು ಒಳ್ಳೆಯದು. ಇದರೊಂದಿಗೆ ನಿಮ್ಮ ಸಂಗಾತಿ ಬೆರೆತರೆ ಇಡೀ ಅನುಭವಕ್ಕೆ ಪ್ರಣಯದ ಸ್ಪರ್ಶ ದೊರೆಯುತ್ತದೆ. ಕೆಲಸದಲ್ಲಿ ಜನರು ನಿಮ್ಮನ್ನು ಸಂಸ್ಥೆಯ ಸಂಪತ್ತು ಎಂದು ಶ್ಲಾಘಿಸುತ್ತಾರೆ.

ಧನು: ನೀವು ಇಂದು ಏನೇ ಕೈಗೊಂಡರೂ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಫಲಿತಾಂಶ ಗಳಿಸುತ್ತೀರಿ. ನೀವು ಇತರರನ್ನು ಅವರ ಕೊಡುಗೆಗೆ ಪ್ರಶಂಸೆ ಮಾಡಲು ಒಂದು ಕ್ಷಣವೂ ಯೋಚಿಸುವುದಿಲ್ಲ. ಪ್ರೀತಿಪಾತ್ರರು ನಿಮ್ಮ ಗಮನದ ಕೇಂದ್ರವಾಗುತ್ತಾರೆ.

ಮಕರ: ಜೀವನಕ್ಕೆ ಸಕಾರಾತ್ಮಕ ಪ್ರವೃತ್ತಿ, ಪರಿಶ್ರಮ, ಹಿತೈಷಿಗಳು ಅಥವಾ ಸಮಯ ನಿರ್ವಹಣೆ ಜೀವನವನ್ನು ಒಗ್ಗೂಡಿಸುವ ಎಲ್ಲವೂ ನಿಮಗೆ ಪೂರಕವಾಗಿವೆ. ಆದರೆ ಸುಲಭವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ನೀವು ಅವರಿಗೆ ಎಷ್ಟು ಮುಖ್ಯ ಎನ್ನುವುದನ್ನು ತೋರುತ್ತದೆ.

ಕುಂಭ: ನೀವು ಭ್ರಮೆಯಲ್ಲಿ ಬದುಕುತ್ತೀರಿ ಮತ್ತು ವಾಸ್ತವದಿಂದ ದೂರ ಸರಿಯುತ್ತೀರಿ. ಅವಾಸ್ತವಿಕ ಇಚ್ಛೆಗಳನ್ನು ಮಾಡಬೇಡಿ; ಇಲ್ಲದಿದ್ದರೆ ನೀವು ವಿಷಯಗಳು ಹೇಗಿವೆ ಎಂದು ತಿಳಿದಾಗ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮ್ಮಲ್ಲಿ ಏನಿದೆಯೋ ಅದರ ಕುರಿತು ಸಂತೋಷವಾಗಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವುದರಿಂದ ನೀವು ಸರಾಗವಾಗಿ ಮುನ್ನಡೆಯುತ್ತೀರಿ.

ಮೀನ: ನೀವು ಸಣ್ಣ ಸಂಘರ್ಷಗಳನ್ನು ಇಡೀ ದಿನ ಪರಿಹರಿಸಬೇಕಾಗುತ್ತದೆ. ಅವು ಪರಿಹಾರವಾದ ನಂತರವೂ ಈ ಸಂಘರ್ಷಗಳಿಂದ ಹೊರಬರಲು ನಿಮಗೆ ಸಮಯ ಬೇಕಾಗುತ್ತದೆ. ಕೆಲಸದಲ್ಲಿ ಪ್ರಗತಿ ಸಾಧಿಸಬೇಕಾದರೆ ನಿಮ್ಮ ಮೂಡ್ ಬದಲಾವಣೆಗಳ ಕುರಿತು ನೀವು ಎಚ್ಚರ ವಹಿಸಬೇಕು.

ಇದನ್ನೂ ಓದಿ: ದೇವರಗಟ್ಟು ಬನ್ನಿ ಉತ್ಸವ: ದಂಡ ಕಾಳಗದಲ್ಲಿ 70 ಮಂದಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.