ETV Bharat / opinion

ಪಶ್ಚಿಮ ಏಷ್ಯಾ ತಲ್ಲಣ: ಹಮಾಸ್​, ಹಿಜ್ಬುಲ್ಲಾ, ಹೌತಿಗಳ ವಿರುದ್ಧ ಇಸ್ರೇಲ್ ಫೈಟ್ - West Asia Crisis

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಭಾರತದ ನಿವೃತ್ತ ಮೇಜರ್ ಜನರಲ್ ಹರ್ಷ ಕಾಕರ್ ಅವರು ಬರೆದ ಲೇಖನ ಇಲ್ಲಿದೆ.

author img

By ETV Bharat Karnataka Team

Published : 2 hours ago

West Asia has been on the boil
ಪಶ್ಚಿಮ ಏಷ್ಯಾ ತಲ್ಲಣ (AP)

ಪಶ್ಚಿಮ ಏಷ್ಯಾ ಬಿಕ್ಕಟ್ಟು ಮುಂದುವರೆದಿದೆ. ಇರಾಕ್ ಮತ್ತು ಸಿರಿಯಾದಾದ್ಯಂತ ಹರಡಿರುವ ಹಮಾಸ್​, ಹಿಜ್ಬುಲ್ಲಾ ಮತ್ತು ಹೌತಿ ಉಗ್ರರನ್ನು ಇಸ್ರೇಲ್ ಮಟ್ಟಹಾಕುತ್ತಿದೆ. ಕಳೆದ ಅಕ್ಟೋಬರ್​ 7ರಂದು ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ಭೀಕರ ದಾಳಿ ನಡೆಸುವ ಮೂಲಕ ಈ ಸಂಘರ್ಷಕ್ಕೆ ನಾದಿ ಹಾಡಿದ್ದರು. ಇದರ ಪರಿಣಾಮ, ಆರಂಭದಲ್ಲಿ ಇಸ್ರೇಲ್​​ ಗಾಜಾದಲ್ಲಿ ಹಮಾಸ್​ ವಿರುದ್ಧ ಹೋರಾಟ ಆರಂಭಿಸಿತ್ತು. ಆದರೆ, ಹಮಾಸ್​ಗೆ ಹಿಜ್ಬುಲ್ಲಾ ಬೆಂಬಲ ದೊರೆತ ಬಳಿಕ ಸಂಘರ್ಷ ಲೆಬನಾನ್​ವರೆಗೆ ವಿಸ್ತರಿಸಿದೆ. ಇಸ್ರೇಲ್​ ತನ್ನ ದಾಳಿಯನ್ನು ಸ್ಥಳೀಯವಾಗಿಸುವ ಗುರಿ ಹೊಂದಿದ್ದರೂ ಈ ಗುಂಪುಗಳಿಗೆ ಇರಾನ್​ ನೀಡುತ್ತಿರುವ ಬೆಂಬಲ ಇಸ್ರೇಲ್​ ಹೋರಾಟವನ್ನು ತೀವ್ರಗೊಳಿಸುವಂತೆ ಮಾಡಿತು.

ಏಪ್ರಿಲ್​ 1ರಂದು ಇಸ್ರೇಲ್​ ಡಮಾಸ್ಕಸ್‌ನಲ್ಲಿರುವ ಇರಾನ್‌ನ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ವೇಳೆ ಇರಾನಿನ ಐಆರ್​ಜಿಸಿ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಕ್ಕೆ ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಒಂದು ವೇಳೆ ದಾಳಿಯನ್ನು ನಿರ್ಲಕ್ಷ್ಯ ಮಾಡಿದಲ್ಲಿ ಇರಾನ್​ ನಾಯಕತ್ವ ವೈಫಲ್ಯ ಬಹಿರಂಗವಾಗುವುದರ ಜೊತೆಗೆ ಇಸ್ರೇಲ್​ಗೆ ಮತ್ತಷ್ಟು ಶಕ್ತಿ ತುಂಬುತ್ತದೆ.

ಇದರ ಫಲವಾಗಿ ಎರಡು ದೇಶಗಳ ನಡುವೆ ದಾಳಿ ತೀವ್ರವಾದರೆ ಇದು ಅನೇಕ ಅಪಾಯಗಳಿಗೂ ಕಾರಣವಾಗುತ್ತದೆ. ಇರಾನ್​ ಏಪ್ರಿಲ್​ 13ರಂದು ಇಸ್ರೇಲ್​ ಮೇಲೆ 300 ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದರ ಉದ್ದೇಶ ಸಂಘರ್ಷವನ್ನು ದೊಡ್ಡದಾಗಿಸುವುದಲ್ಲ. ಬದಲಾಗಿ, ಆಂತರಿಕ ಒತ್ತಡ ನಿಗ್ರಹಿಸುವುದಾಗಿತ್ತು. ಇರಾನ್ ಹಾರಿಸಿದ ಬಹುತೇಕ ಕ್ಷಿಪಣಿ ಮತ್ತು ಡ್ರೋನ್​ಗಳನ್ನು ಇಸ್ರೇಲ್‌ ತನ್ನ ಬಲಾಢ್ಯ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿದೆ. ಇಸ್ರೇಲ್​ ಏಪ್ರಿಲ್​ 19ರಂದು ನಿಗದಿತ ಪ್ರತಿ ದಾಳಿ ನಡೆಸಿದ್ದು, ಇರಾನಿನ ಎಸ್​-300 ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಿದೆ. ಇಸ್ರೇಲ್​ನ ಭವಿಷ್ಯದ ಗುರಿ ಇರಾನ್‌ನ ಕಾರ್ಯತಂತ್ರದ ಸ್ಥಾಪನೆಗಳಾಗಿರಬಹುದು ಎಂಬ ಸಂದೇಶವೂ ಟೆಲ್​ ಅವಿವ್‌ನಿಂದ ಹೊರಬಿದ್ದಿದೆ.

ಇತ್ತೀಚಿಗೆ ಇಸ್ರೇಲ್ ಸೇನೆ ಹಮಾಸ್​ ಮತ್ತು ಹಿಜ್ಭುಲ್ಲಾ ಪ್ರಮುಖ ನಾಯಕರು ಸೇರಿದಂತೆ ಲೆಬನಾನ್​ ಮೇಲೆ ದಾಳಿ ನಡೆಸಿತ್ತು. ಟೆಹ್ರಾನ್‌ನಲ್ಲಿ ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾದಾಗ ಇರಾನ್ ಪ್ರತಿಕ್ರಿಯಿಸಲಿಲ್ಲ. ಇದು ಟೆಲ್ ಅವಿವ್‌ಗೆ ಮತ್ತಷ್ಟು ಧೈರ್ಯ ತುಂಬಿದೆ. ಇರಾನ್‌ನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಜೊತೆಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಯಿತು. ಇದು ಇಸ್ರೇಲ್‌ ಮೇಲಿನ ಆಕ್ರಮಣಕ್ಕೆ ಲೆಬನಾನ್​ಗೆ ಒತ್ತಾಯಿಸಿತು. ಟೆಹ್ರಾನ್ ತನ್ನ ಪ್ರಾಕ್ಸಿಗಳಿಂದ ಒತ್ತಡಕ್ಕೊಳಗಾಯಿತು.

ಈ ಸೋಲಿನ ಕಾರ್ಯನಿರ್ವಹಣೆ ಹಿಜ್ಬುಲ್ಲಾದ ನಿಯಂತ್ರಣ ನಷ್ಟವನ್ನು ತೋರಿಸಿತು. ಶಾಂತಿ ಮಾತುಕತೆ ವೇಳೆಯೇ ಲೆಬನಾನ್ ಮತ್ತು ಗಾಜಾ ವಿರುದ್ಧದ ದಾಳಿ ನಡೆಸಿದ ಇಸ್ರೇಲ್​ ಅಮೆರಿಕದ ಒತ್ತಡಕ್ಕೆ ಒಳಗಾಗಲಿಲ್ಲ. ಹಿಜ್ಬುಲ್ಲಾ ಮತ್ತು ಇಸ್ರೇಲ್​ ಶಾಂತಿ ಮಾತುಕತೆ ಸಮೀಪವಿದ್ದಾಗ ನಡೆದ ಈ ದಾಳಿ ಇಸ್ರೇಲ್​ ಮಿಲಿಟರಿ ಶಕ್ತಿ ತಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ, ಶಾಂತಿ ಮಾತುಕತೆ ಇಲ್ಲ ಎಂಬುದನ್ನು ಸ್ಪಷ್ಟವಾಗಿಸಿತು.

ಇದರ ನಡುವೆ ಇಸ್ರೇಲ್‌ಗೆ​ ಇರಾನ್​ ಮೇಲೆ ಪ್ರತೀಕಾರದ ಹಕ್ಕಿದೆ ಎಂದು ಅಮೆರಿಕ ಹೇಳಿದೆ. ಆದರೆ, ಇರಾನ್​ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸದಂತೆಯೂ ಎಚ್ಚರಿಸಿದೆ. ಇದು ಇಸ್ರೇಲ್​ ಪ್ರಧಾನಿ ನೆತನ್ಯಾಹುಗೂ ತಲೆಬಿಸಿಯಾಗಿದೆ. ಏಕೆಂದರೆ, ನೆತನ್ಯಾಹು ಇದನ್ನು ನಾಶಪಡಿಸುವ ಗುರಿ ಹೊಂದಿದ್ದರು ಎನ್ನಲಾಗಿದೆ.

ಇಸ್ರೇಲ್ ಪ್ರಬಲ ಮಿಲಿಟರಿ ಶಕ್ತಿ ಹೊಂದಿದ್ದರೂ ಸಣ್ಣ ರಾಷ್ಟ್ರವಾಗಿರುವುದರಿಂದ ಕಾರ್ಯತಂತ್ರದ ಆಳ ಹೊಂದಿಲ್ಲ. ಇದೇ ಕಾರಣಕ್ಕೆ ಅದು ತಮ್ಮ ನೆಲದಿಂದ ದೂರ ಸರಿದು ಬಫರ್​ ವಲಯದ ವಿಸ್ತರಣೆಗೆ ಮುಂದಾಗಿದೆ. ಸದ್ಯ ಲೆಬನಾನ್​ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಬಫರ್​ ಜೋನ್​ ಸೃಷ್ಟಿ ಮಾಡುವ ಮೂಲಕ ತನ್ನ ಗಡಿಯಂಚಲ್ಲಿ ವಾಸಿಸುತ್ತಿರುವ ಜನರ ರಕ್ಷಣೆ ಮಾಡುತ್ತಿದೆ.

ಇರಾನ್​ ದೊಡ್ಡ ದೇಶವಾದರೂ ತನ್ನ ಕಾರ್ಯಾಚರಣೆಯಿಂದ ಅರಬ್​ ರಾಷ್ಟ್ರಗಳನ್ನು ದೂರ ಇಟ್ಟಿದೆ. ಇದರಿಂದ ಇಸ್ರೇಲ್​ ದಾಳಿ ನಡೆಸಿದಾಗ ಅವುಗಳು ಇರಾನ್ ಮೇಲೆ ಸಹಾನುಭೂತಿ ಮತ್ತು ಬೆಂಬಲ ಪಡೆಯುವ ಸಾಧ್ಯತೆ ಇಲ್ಲ.

ಇಸ್ರೇಲ್​ ಅನ್ನು ಒತ್ತಡಕ್ಕೆ ಸಿಲುಕಿಸಬೇಕೆಂಬ ಉದ್ದೇಶದಿಂದ ಇರಾನ್ ರಾಕೆಟ್​ ದಾಳಿ ನಡೆಸಿದೆ. ಅಮೆರಿಕ ಈ ಸಂಘರ್ಷದಲ್ಲಿ ಮಧ್ಯ ಪ್ರವೇಶಿಸುವುದನ್ನು ಇರಾನ್​ ಬಯಸುವುದಿಲ್ಲ. ಈ ದೌರ್ಬಲ್ಯವನ್ನು ಬಳಸಿಕೊಂಡು, ಇಸ್ರೇಲ್​ ಮೊದಲು ಗಾಜಾದ ಮೇಲೆ ಹಿಡಿತ ಸಾಧಿಸಿ ನಂತರ ಹಿಜ್ಬುಲ್ಲಾದೊಂದಿಗಿನ ಸಂಘರ್ಷ ವಿಸ್ತರಿಸಿದೆ.

ಈ ಸಂಘರ್ಷವು ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು. ಭಾರತ ಇರಾನ್‌ನ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ, ಇದನ್ನು ಇಸ್ರೇಲ್​ ಗುರಿಯಾಗಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಸಂಘರ್ಷದ ಕುರಿತು ಭಾರತ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸಂವಾದ ಮತ್ತು ಸಂಯಮ ಬಯಸಿದೆ. ಮುಂಬರುವ ದಿನಗಳಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ಭಾರತದ ನೆರವು ಪಡೆದು, ದೇಶಕ್ಕೆ ಸಮಸ್ಯೆಯಾಗಿರುವ ನೆರೆಹೊರೆಯ ರಾಷ್ಟ್ರಗಳು: ಇಲ್ಲಿವೆ ಕಾರಣಗಳು

ಪಶ್ಚಿಮ ಏಷ್ಯಾ ಬಿಕ್ಕಟ್ಟು ಮುಂದುವರೆದಿದೆ. ಇರಾಕ್ ಮತ್ತು ಸಿರಿಯಾದಾದ್ಯಂತ ಹರಡಿರುವ ಹಮಾಸ್​, ಹಿಜ್ಬುಲ್ಲಾ ಮತ್ತು ಹೌತಿ ಉಗ್ರರನ್ನು ಇಸ್ರೇಲ್ ಮಟ್ಟಹಾಕುತ್ತಿದೆ. ಕಳೆದ ಅಕ್ಟೋಬರ್​ 7ರಂದು ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ಭೀಕರ ದಾಳಿ ನಡೆಸುವ ಮೂಲಕ ಈ ಸಂಘರ್ಷಕ್ಕೆ ನಾದಿ ಹಾಡಿದ್ದರು. ಇದರ ಪರಿಣಾಮ, ಆರಂಭದಲ್ಲಿ ಇಸ್ರೇಲ್​​ ಗಾಜಾದಲ್ಲಿ ಹಮಾಸ್​ ವಿರುದ್ಧ ಹೋರಾಟ ಆರಂಭಿಸಿತ್ತು. ಆದರೆ, ಹಮಾಸ್​ಗೆ ಹಿಜ್ಬುಲ್ಲಾ ಬೆಂಬಲ ದೊರೆತ ಬಳಿಕ ಸಂಘರ್ಷ ಲೆಬನಾನ್​ವರೆಗೆ ವಿಸ್ತರಿಸಿದೆ. ಇಸ್ರೇಲ್​ ತನ್ನ ದಾಳಿಯನ್ನು ಸ್ಥಳೀಯವಾಗಿಸುವ ಗುರಿ ಹೊಂದಿದ್ದರೂ ಈ ಗುಂಪುಗಳಿಗೆ ಇರಾನ್​ ನೀಡುತ್ತಿರುವ ಬೆಂಬಲ ಇಸ್ರೇಲ್​ ಹೋರಾಟವನ್ನು ತೀವ್ರಗೊಳಿಸುವಂತೆ ಮಾಡಿತು.

ಏಪ್ರಿಲ್​ 1ರಂದು ಇಸ್ರೇಲ್​ ಡಮಾಸ್ಕಸ್‌ನಲ್ಲಿರುವ ಇರಾನ್‌ನ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ವೇಳೆ ಇರಾನಿನ ಐಆರ್​ಜಿಸಿ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಕ್ಕೆ ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಒಂದು ವೇಳೆ ದಾಳಿಯನ್ನು ನಿರ್ಲಕ್ಷ್ಯ ಮಾಡಿದಲ್ಲಿ ಇರಾನ್​ ನಾಯಕತ್ವ ವೈಫಲ್ಯ ಬಹಿರಂಗವಾಗುವುದರ ಜೊತೆಗೆ ಇಸ್ರೇಲ್​ಗೆ ಮತ್ತಷ್ಟು ಶಕ್ತಿ ತುಂಬುತ್ತದೆ.

ಇದರ ಫಲವಾಗಿ ಎರಡು ದೇಶಗಳ ನಡುವೆ ದಾಳಿ ತೀವ್ರವಾದರೆ ಇದು ಅನೇಕ ಅಪಾಯಗಳಿಗೂ ಕಾರಣವಾಗುತ್ತದೆ. ಇರಾನ್​ ಏಪ್ರಿಲ್​ 13ರಂದು ಇಸ್ರೇಲ್​ ಮೇಲೆ 300 ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದರ ಉದ್ದೇಶ ಸಂಘರ್ಷವನ್ನು ದೊಡ್ಡದಾಗಿಸುವುದಲ್ಲ. ಬದಲಾಗಿ, ಆಂತರಿಕ ಒತ್ತಡ ನಿಗ್ರಹಿಸುವುದಾಗಿತ್ತು. ಇರಾನ್ ಹಾರಿಸಿದ ಬಹುತೇಕ ಕ್ಷಿಪಣಿ ಮತ್ತು ಡ್ರೋನ್​ಗಳನ್ನು ಇಸ್ರೇಲ್‌ ತನ್ನ ಬಲಾಢ್ಯ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿದೆ. ಇಸ್ರೇಲ್​ ಏಪ್ರಿಲ್​ 19ರಂದು ನಿಗದಿತ ಪ್ರತಿ ದಾಳಿ ನಡೆಸಿದ್ದು, ಇರಾನಿನ ಎಸ್​-300 ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಿದೆ. ಇಸ್ರೇಲ್​ನ ಭವಿಷ್ಯದ ಗುರಿ ಇರಾನ್‌ನ ಕಾರ್ಯತಂತ್ರದ ಸ್ಥಾಪನೆಗಳಾಗಿರಬಹುದು ಎಂಬ ಸಂದೇಶವೂ ಟೆಲ್​ ಅವಿವ್‌ನಿಂದ ಹೊರಬಿದ್ದಿದೆ.

ಇತ್ತೀಚಿಗೆ ಇಸ್ರೇಲ್ ಸೇನೆ ಹಮಾಸ್​ ಮತ್ತು ಹಿಜ್ಭುಲ್ಲಾ ಪ್ರಮುಖ ನಾಯಕರು ಸೇರಿದಂತೆ ಲೆಬನಾನ್​ ಮೇಲೆ ದಾಳಿ ನಡೆಸಿತ್ತು. ಟೆಹ್ರಾನ್‌ನಲ್ಲಿ ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾದಾಗ ಇರಾನ್ ಪ್ರತಿಕ್ರಿಯಿಸಲಿಲ್ಲ. ಇದು ಟೆಲ್ ಅವಿವ್‌ಗೆ ಮತ್ತಷ್ಟು ಧೈರ್ಯ ತುಂಬಿದೆ. ಇರಾನ್‌ನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಜೊತೆಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಯಿತು. ಇದು ಇಸ್ರೇಲ್‌ ಮೇಲಿನ ಆಕ್ರಮಣಕ್ಕೆ ಲೆಬನಾನ್​ಗೆ ಒತ್ತಾಯಿಸಿತು. ಟೆಹ್ರಾನ್ ತನ್ನ ಪ್ರಾಕ್ಸಿಗಳಿಂದ ಒತ್ತಡಕ್ಕೊಳಗಾಯಿತು.

ಈ ಸೋಲಿನ ಕಾರ್ಯನಿರ್ವಹಣೆ ಹಿಜ್ಬುಲ್ಲಾದ ನಿಯಂತ್ರಣ ನಷ್ಟವನ್ನು ತೋರಿಸಿತು. ಶಾಂತಿ ಮಾತುಕತೆ ವೇಳೆಯೇ ಲೆಬನಾನ್ ಮತ್ತು ಗಾಜಾ ವಿರುದ್ಧದ ದಾಳಿ ನಡೆಸಿದ ಇಸ್ರೇಲ್​ ಅಮೆರಿಕದ ಒತ್ತಡಕ್ಕೆ ಒಳಗಾಗಲಿಲ್ಲ. ಹಿಜ್ಬುಲ್ಲಾ ಮತ್ತು ಇಸ್ರೇಲ್​ ಶಾಂತಿ ಮಾತುಕತೆ ಸಮೀಪವಿದ್ದಾಗ ನಡೆದ ಈ ದಾಳಿ ಇಸ್ರೇಲ್​ ಮಿಲಿಟರಿ ಶಕ್ತಿ ತಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ, ಶಾಂತಿ ಮಾತುಕತೆ ಇಲ್ಲ ಎಂಬುದನ್ನು ಸ್ಪಷ್ಟವಾಗಿಸಿತು.

ಇದರ ನಡುವೆ ಇಸ್ರೇಲ್‌ಗೆ​ ಇರಾನ್​ ಮೇಲೆ ಪ್ರತೀಕಾರದ ಹಕ್ಕಿದೆ ಎಂದು ಅಮೆರಿಕ ಹೇಳಿದೆ. ಆದರೆ, ಇರಾನ್​ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸದಂತೆಯೂ ಎಚ್ಚರಿಸಿದೆ. ಇದು ಇಸ್ರೇಲ್​ ಪ್ರಧಾನಿ ನೆತನ್ಯಾಹುಗೂ ತಲೆಬಿಸಿಯಾಗಿದೆ. ಏಕೆಂದರೆ, ನೆತನ್ಯಾಹು ಇದನ್ನು ನಾಶಪಡಿಸುವ ಗುರಿ ಹೊಂದಿದ್ದರು ಎನ್ನಲಾಗಿದೆ.

ಇಸ್ರೇಲ್ ಪ್ರಬಲ ಮಿಲಿಟರಿ ಶಕ್ತಿ ಹೊಂದಿದ್ದರೂ ಸಣ್ಣ ರಾಷ್ಟ್ರವಾಗಿರುವುದರಿಂದ ಕಾರ್ಯತಂತ್ರದ ಆಳ ಹೊಂದಿಲ್ಲ. ಇದೇ ಕಾರಣಕ್ಕೆ ಅದು ತಮ್ಮ ನೆಲದಿಂದ ದೂರ ಸರಿದು ಬಫರ್​ ವಲಯದ ವಿಸ್ತರಣೆಗೆ ಮುಂದಾಗಿದೆ. ಸದ್ಯ ಲೆಬನಾನ್​ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಬಫರ್​ ಜೋನ್​ ಸೃಷ್ಟಿ ಮಾಡುವ ಮೂಲಕ ತನ್ನ ಗಡಿಯಂಚಲ್ಲಿ ವಾಸಿಸುತ್ತಿರುವ ಜನರ ರಕ್ಷಣೆ ಮಾಡುತ್ತಿದೆ.

ಇರಾನ್​ ದೊಡ್ಡ ದೇಶವಾದರೂ ತನ್ನ ಕಾರ್ಯಾಚರಣೆಯಿಂದ ಅರಬ್​ ರಾಷ್ಟ್ರಗಳನ್ನು ದೂರ ಇಟ್ಟಿದೆ. ಇದರಿಂದ ಇಸ್ರೇಲ್​ ದಾಳಿ ನಡೆಸಿದಾಗ ಅವುಗಳು ಇರಾನ್ ಮೇಲೆ ಸಹಾನುಭೂತಿ ಮತ್ತು ಬೆಂಬಲ ಪಡೆಯುವ ಸಾಧ್ಯತೆ ಇಲ್ಲ.

ಇಸ್ರೇಲ್​ ಅನ್ನು ಒತ್ತಡಕ್ಕೆ ಸಿಲುಕಿಸಬೇಕೆಂಬ ಉದ್ದೇಶದಿಂದ ಇರಾನ್ ರಾಕೆಟ್​ ದಾಳಿ ನಡೆಸಿದೆ. ಅಮೆರಿಕ ಈ ಸಂಘರ್ಷದಲ್ಲಿ ಮಧ್ಯ ಪ್ರವೇಶಿಸುವುದನ್ನು ಇರಾನ್​ ಬಯಸುವುದಿಲ್ಲ. ಈ ದೌರ್ಬಲ್ಯವನ್ನು ಬಳಸಿಕೊಂಡು, ಇಸ್ರೇಲ್​ ಮೊದಲು ಗಾಜಾದ ಮೇಲೆ ಹಿಡಿತ ಸಾಧಿಸಿ ನಂತರ ಹಿಜ್ಬುಲ್ಲಾದೊಂದಿಗಿನ ಸಂಘರ್ಷ ವಿಸ್ತರಿಸಿದೆ.

ಈ ಸಂಘರ್ಷವು ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು. ಭಾರತ ಇರಾನ್‌ನ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ, ಇದನ್ನು ಇಸ್ರೇಲ್​ ಗುರಿಯಾಗಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಸಂಘರ್ಷದ ಕುರಿತು ಭಾರತ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸಂವಾದ ಮತ್ತು ಸಂಯಮ ಬಯಸಿದೆ. ಮುಂಬರುವ ದಿನಗಳಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ಭಾರತದ ನೆರವು ಪಡೆದು, ದೇಶಕ್ಕೆ ಸಮಸ್ಯೆಯಾಗಿರುವ ನೆರೆಹೊರೆಯ ರಾಷ್ಟ್ರಗಳು: ಇಲ್ಲಿವೆ ಕಾರಣಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.