ETV Bharat / lifestyle

ನವರಾತ್ರಿಯಲ್ಲಿ ಉಪವಾಸ ಮಾಡುತ್ತಿದ್ದೀರಾ?: ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ! - Navaratri Fasting

author img

By lifestyle

Published : 3 hours ago

Dasara Navaratri Celebrations 2024: ನೀವು ನವರಾತ್ರಿಯಲ್ಲಿ ಉಪವಾಸ ಮಾಡುತ್ತೀರಾ? ಹಾಗಾದ್ರೆ ಈ ಸ್ಟೋರಿ ನಿಮಗಾಗಿ! ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ಅವರು, ಶರನ್ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಈ ತಪ್ಪುಗಳನ್ನು ಮಾಡಬಾರದೆಂದು ಸಲಹೆ ನೀಡುತ್ತಾರೆ.

IMPORTANT RULES TO FOLLOW NAVARATRI  NAVRATRI FASTING RULES  THINGS TO AVOID DURING DASARA  NAVRATRI PUJA OFFERINGS
ದುರ್ಗಾ ದೇವಿಯ ಸಂಗ್ರಹ ಚಿತ್ರ (ETV Bharat)

Dasara Navaratri Celebrations 2024: ಹಿಂದೂಗಳು ಶರನ್ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ನವರಾತ್ರಿ ಆಚರಣೆಗಳು ಅಕ್ಟೋಬರ್ 3ರಂದು ಆರಂಭವಾಗಿ ಅ.12ರಂದು ಮುಕ್ತಾಯವಾಗುತ್ತದೆ.

ದುರ್ಗಾ ದೇವಿಯನ್ನು ಪೂಜಿಸುವುದರಿಂದ ಎಲ್ಲ ತೊಂದರೆಗಳು ದೂರವಾಗುತ್ತವೆ. ಮತ್ತು ಮನೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಇರುತ್ತಾರೆ ಎಂಬುದು ಭಕ್ತರ ನಂಬಿಕೆ. ಆದರೆ, ಉಪವಾಸ ಮಾಡುವವರು ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅಮ್ಮನ ಕೃಪೆ ಪೂರ್ಣ ಪ್ರಮಾಣದಲ್ಲಿ ದೊರೆಯುವುದಿಲ್ಲ. ದುರ್ಗಾ ಮಾತೆಯ ಭಕ್ತರು ಒಂಬತ್ತು ದಿನಗಳ ಕಾಲ ದೇವಿಯ ಸೇವೆ ಮಾಡುವಾಗ ಕೆಲವು ತಪ್ಪು ಮಾಡಬಾರದು ಎಂದು ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ಹೇಳುತ್ತಾರೆ.

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡದಿರಿ:

  • ಅಕ್ಟೋಬರ್ 3ರಂದು ದೇವಿಯ ಪೂಜೆಗೆ ಬೇಕಾದ ಸಾಮಗ್ರಿಯನ್ನು ಅನೇಕರು ತಿಳಿಯದೆ ತರುತ್ತಾರೆ. ಆದರೆ, ಇದನ್ನು ಮಾಡಬೇಡಿ. ಹಿಂದಿನ ದಿನ ಅಂದರೆ ಅಕ್ಟೋಬರ್ 2ರಂದು ಸಂಜೆ ತಂದಿಟ್ಟುಕೊಳ್ಳಿ.
  • ತಣ್ಣೀರಿನ ಸ್ನಾನ ಒಳ್ಳೆಯದು. ತಣ್ಣೀರಿನಿಂದ ಸ್ನಾನ ಮಾಡಲಾಗದವರು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ.
  • ಕೆಲವರು ಶರನ್ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಉಪವಾಸ ಆಚರಿಸುತ್ತಾರೆ. ದೇವಿ ಭಾಗವತದ ಪ್ರಕಾರ, ದೇವಿಯನ್ನು ಪೂಜಿಸುವವರು ದೇವಿ ನವರಾತ್ರಿಯಲ್ಲಿ ಉಪವಾಸ ಮಾಡಬಾರದು. ಒಂದೇ ಬಾರಿಗೆ ಆಹಾರ ಪಡೆಯಬಹುದು. ಮತ್ತು ಅನ್ನದ ಕುರಿತಂತೆ ನಿರ್ಲಕ್ಷ್ಯ ಮಾಡಬಾರದು.
  • ಉಪವಾಸ ಮಾಡುವವರು ಹಾಸಿಗೆಯ ಮೇಲೆ ಮಲಗಬಾರದು. ದುರ್ಬಲ ಮತ್ತು ವಯಸ್ಸಾದವರು ಹಾಸಿಗೆಯಲ್ಲಿ ಮಲಗಬಹುದು.
  • ದೇವಿಯನ್ನು ಪೂಜಿಸುವವರು ಹಳ್ಳ ಅಥವಾ ನದಿ ದಾಟಬೇಡಿ.
  • ನವರಾತ್ರಿಯಲ್ಲಿ ಉಪವಾಸ ಮಾಡುವವರು ಶಾಂತವಾಗಿರಬೇಕು. ಯಾರಾದರೂ ನಿಮ್ಮನ್ನು ಕೆಣಕಿದರೆ, ಕೋಪಗೊಳ್ಳಬೇಡಿ. ಹಾಗೆಯೇ ಜೋರಾಗಿ ಕೂಗಿ ಮನೆಯಲ್ಲಿ ಹಿರಿಯರನ್ನು ಬೈಯಬಾರದು. ಹೀಗೆ ಮಾಡಿದರೆ ಪೂಜೆಯ ಫಲ ಸಿಗುವುದಿಲ್ಲ ಎಂದು ದೇವಿ ಭಾಗವತದಲ್ಲಿ ಹೇಳಲಾಗಿದೆ.
  • ನವರಾತ್ರಿಯಲ್ಲಿ ಅಮ್ಮನ ಆರಾಧಕರು ಮುಟ್ಟಾಗಿರುವ ಮಹಿಳೆಯರನ್ನು ಮುಟ್ಟಬಾರದು.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಮಾಂಸಾಹಾರ ಸೇವಿಸಬಾರದು. ಸಸ್ಯಾಹಾರ ಮಾತ್ರ ಸೇವಿಸಿ.
  • ಮಹಿಳೆಯರು ಬಾಗಿಲ ಬಳಿ ಕೂತು ಕೂದಲು ಬಾಚಿಕೊಳ್ಳಬಾರದು. ಅಲ್ಲದೆ, ಕೂದಲುಗಳನ್ನು ಕೆಳಗೆ ಬೀಳಿಸಿ ಮನೆಯ ಸುತ್ತಲೂ ಓಡಾಡಿದರೆ, ಅಮ್ಮನ ಕೃಪೆ ಕಡಿಮೆಯಾಗುತ್ತದೆ.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೊಸರಿನಿಂದ ಮಾಡಿದ ರೈತಾ ತಿನ್ನಬಾರದು. ಈ ನಿಯಮಗಳನ್ನು ಪಾಲಿಸಿ ಪೂಜೆ ಮಾಡಿದರೆ ಸಂಪೂರ್ಣ ಅನುಗ್ರಹ ಸಿಗುತ್ತದೆ ಎಂದು ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ತಿಳಿಸಿದ್ದಾರೆ.

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ತಿಳಿಸಿದ ವಿವರಗಳು ಜ್ಯೋತಿಷಿಗಳವು. ಇದಲ್ಲದೆ, ಇದರಲ್ಲಿ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.

ಇದನ್ನೂ ಓದಿ: ಶರನ್ನವರಾತ್ರಿಯಲ್ಲಿ ಅಮ್ಮನ ಹೊಸ ರೂಪಗಳೇನು?: ಯಾವ ದಿನ ಯಾವ ನೈವೇದ್ಯ ಮಾಡಬೇಕು? - DEVI NAVARATRI AVATARS 2024

Dasara Navaratri Celebrations 2024: ಹಿಂದೂಗಳು ಶರನ್ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ನವರಾತ್ರಿ ಆಚರಣೆಗಳು ಅಕ್ಟೋಬರ್ 3ರಂದು ಆರಂಭವಾಗಿ ಅ.12ರಂದು ಮುಕ್ತಾಯವಾಗುತ್ತದೆ.

ದುರ್ಗಾ ದೇವಿಯನ್ನು ಪೂಜಿಸುವುದರಿಂದ ಎಲ್ಲ ತೊಂದರೆಗಳು ದೂರವಾಗುತ್ತವೆ. ಮತ್ತು ಮನೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಇರುತ್ತಾರೆ ಎಂಬುದು ಭಕ್ತರ ನಂಬಿಕೆ. ಆದರೆ, ಉಪವಾಸ ಮಾಡುವವರು ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅಮ್ಮನ ಕೃಪೆ ಪೂರ್ಣ ಪ್ರಮಾಣದಲ್ಲಿ ದೊರೆಯುವುದಿಲ್ಲ. ದುರ್ಗಾ ಮಾತೆಯ ಭಕ್ತರು ಒಂಬತ್ತು ದಿನಗಳ ಕಾಲ ದೇವಿಯ ಸೇವೆ ಮಾಡುವಾಗ ಕೆಲವು ತಪ್ಪು ಮಾಡಬಾರದು ಎಂದು ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ಹೇಳುತ್ತಾರೆ.

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡದಿರಿ:

  • ಅಕ್ಟೋಬರ್ 3ರಂದು ದೇವಿಯ ಪೂಜೆಗೆ ಬೇಕಾದ ಸಾಮಗ್ರಿಯನ್ನು ಅನೇಕರು ತಿಳಿಯದೆ ತರುತ್ತಾರೆ. ಆದರೆ, ಇದನ್ನು ಮಾಡಬೇಡಿ. ಹಿಂದಿನ ದಿನ ಅಂದರೆ ಅಕ್ಟೋಬರ್ 2ರಂದು ಸಂಜೆ ತಂದಿಟ್ಟುಕೊಳ್ಳಿ.
  • ತಣ್ಣೀರಿನ ಸ್ನಾನ ಒಳ್ಳೆಯದು. ತಣ್ಣೀರಿನಿಂದ ಸ್ನಾನ ಮಾಡಲಾಗದವರು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ.
  • ಕೆಲವರು ಶರನ್ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಉಪವಾಸ ಆಚರಿಸುತ್ತಾರೆ. ದೇವಿ ಭಾಗವತದ ಪ್ರಕಾರ, ದೇವಿಯನ್ನು ಪೂಜಿಸುವವರು ದೇವಿ ನವರಾತ್ರಿಯಲ್ಲಿ ಉಪವಾಸ ಮಾಡಬಾರದು. ಒಂದೇ ಬಾರಿಗೆ ಆಹಾರ ಪಡೆಯಬಹುದು. ಮತ್ತು ಅನ್ನದ ಕುರಿತಂತೆ ನಿರ್ಲಕ್ಷ್ಯ ಮಾಡಬಾರದು.
  • ಉಪವಾಸ ಮಾಡುವವರು ಹಾಸಿಗೆಯ ಮೇಲೆ ಮಲಗಬಾರದು. ದುರ್ಬಲ ಮತ್ತು ವಯಸ್ಸಾದವರು ಹಾಸಿಗೆಯಲ್ಲಿ ಮಲಗಬಹುದು.
  • ದೇವಿಯನ್ನು ಪೂಜಿಸುವವರು ಹಳ್ಳ ಅಥವಾ ನದಿ ದಾಟಬೇಡಿ.
  • ನವರಾತ್ರಿಯಲ್ಲಿ ಉಪವಾಸ ಮಾಡುವವರು ಶಾಂತವಾಗಿರಬೇಕು. ಯಾರಾದರೂ ನಿಮ್ಮನ್ನು ಕೆಣಕಿದರೆ, ಕೋಪಗೊಳ್ಳಬೇಡಿ. ಹಾಗೆಯೇ ಜೋರಾಗಿ ಕೂಗಿ ಮನೆಯಲ್ಲಿ ಹಿರಿಯರನ್ನು ಬೈಯಬಾರದು. ಹೀಗೆ ಮಾಡಿದರೆ ಪೂಜೆಯ ಫಲ ಸಿಗುವುದಿಲ್ಲ ಎಂದು ದೇವಿ ಭಾಗವತದಲ್ಲಿ ಹೇಳಲಾಗಿದೆ.
  • ನವರಾತ್ರಿಯಲ್ಲಿ ಅಮ್ಮನ ಆರಾಧಕರು ಮುಟ್ಟಾಗಿರುವ ಮಹಿಳೆಯರನ್ನು ಮುಟ್ಟಬಾರದು.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಮಾಂಸಾಹಾರ ಸೇವಿಸಬಾರದು. ಸಸ್ಯಾಹಾರ ಮಾತ್ರ ಸೇವಿಸಿ.
  • ಮಹಿಳೆಯರು ಬಾಗಿಲ ಬಳಿ ಕೂತು ಕೂದಲು ಬಾಚಿಕೊಳ್ಳಬಾರದು. ಅಲ್ಲದೆ, ಕೂದಲುಗಳನ್ನು ಕೆಳಗೆ ಬೀಳಿಸಿ ಮನೆಯ ಸುತ್ತಲೂ ಓಡಾಡಿದರೆ, ಅಮ್ಮನ ಕೃಪೆ ಕಡಿಮೆಯಾಗುತ್ತದೆ.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೊಸರಿನಿಂದ ಮಾಡಿದ ರೈತಾ ತಿನ್ನಬಾರದು. ಈ ನಿಯಮಗಳನ್ನು ಪಾಲಿಸಿ ಪೂಜೆ ಮಾಡಿದರೆ ಸಂಪೂರ್ಣ ಅನುಗ್ರಹ ಸಿಗುತ್ತದೆ ಎಂದು ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ತಿಳಿಸಿದ್ದಾರೆ.

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ತಿಳಿಸಿದ ವಿವರಗಳು ಜ್ಯೋತಿಷಿಗಳವು. ಇದಲ್ಲದೆ, ಇದರಲ್ಲಿ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.

ಇದನ್ನೂ ಓದಿ: ಶರನ್ನವರಾತ್ರಿಯಲ್ಲಿ ಅಮ್ಮನ ಹೊಸ ರೂಪಗಳೇನು?: ಯಾವ ದಿನ ಯಾವ ನೈವೇದ್ಯ ಮಾಡಬೇಕು? - DEVI NAVARATRI AVATARS 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.