ETV Bharat / health

ಕರಿಬೇವು ಇನ್ಮುಂದೆ ಒಗ್ಗರಣೆಗಲ್ಲ ಖಾಲಿ ಹೊಟ್ಟೆಗೆ ಸೇವಿಸಿ: ಬಾಯಿ ದುರ್ವಾಸನೆಯಿಂದ ಹಿಡಿದು ಶುಗರ್​ ಕಂಟ್ರೋಲ್​ವರೆಗೂ ಇದುವೇ ರಾಮಬಾಣ - chewing curry leaves

author img

By ETV Bharat Karnataka Team

Published : Jul 15, 2024, 9:55 AM IST

ಆಹಾರ ಅಧಿಕ ರುಚಿಯಾಗಲು ಒಗ್ಗರಣೆಗೆ ಹಾಕುವ ಕರಿಬೇವಿನ ಸೀದಾ ಸೇವನೆಯಿಂದ ಹತ್ತಾರು ಆರೋಗ್ಯ ಲಾಭಗಳನ್ನು ಪಡೆಯಬಹುದು. ಹಾಗಾದರೆ ಕರಿಬೇವನ್ನು ಖಾಲಿ ಹೊಟ್ಟೆಗೆ ತಿನ್ನುವುದರಿಂದ ಸಿಗುವ ಉಪಯೋಗವನ್ನು ನೋಡೋಣ..

ಖಾಲಿ ಹೊಟ್ಟೆಗೆ ಕರಿಬೇವು ಸೇವನೆಯಿಂದ ಆರೋಗ್ಯ ವೃದ್ಧಿ
ಖಾಲಿ ಹೊಟ್ಟೆಗೆ ಕರಿಬೇವು ಸೇವನೆಯಿಂದ ಆರೋಗ್ಯ ವೃದ್ಧಿ (ETV Bharat)

ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ . ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.

ಒಳ್ಳೆಯ ಬ್ಯಾಕ್ಟೀರಿಯಗಳ ಹೆಚ್ಚಳ: ಮುಂಜಾನೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ಸೇವಿಸುವುರಿಂದ ನಿಮ್ಮ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೇರಳವಾಗುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಜತೆಗೆ ಅಜೀರ್ಣ, ವಾಯು, ಅನಿಲದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ದೇಹದಿಂದ ವಿಷಾಂಶವನ್ನು ಹೊರ ಹಾಕುವ ಕರಿಬೇವು: ಕರಿಬೇವಿನ ಎಲೆಗಳಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಬೇಡವಾದ ವಿಷವಿದ್ದರೆ ಹೊರಹಾಕುತ್ತದೆ. ಇದರಿಂದ ಆರೋಗ್ಯಕರವಾಗಿರಬಹುದು. ಅಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ: ಕರಿಬೇವಿನ ಎಲೆಗಳನ್ನು ಹಾಗೇ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂಬುದನ್ನು ವೈದ್ಯರು ತಿಳಿಸಿದ್ದಾರೆ. 'ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಟ್ರಾನ್ಸ್‌ಲೇಶನಲ್ ರಿಸರ್ಚ' ನಲ್ಲಿ ಪ್ರಕಟವಾದ 2013ರ ಸಂಶೋಧನೆ ಟೈಪ್ 2 ಮಧುಮೇಹ ಹೊಂದಿರುವ ಜನರು ಮೂರು ತಿಂಗಳ ಕಾಲ ದಿನಕ್ಕೆ ಎರಡು ಬಾರಿ 10 ಕರಿಬೇವಿನ ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂಬುದನ್ನು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ ನಮ್ಮ ಹೈದರಾಬಾದ್‌ನ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮಧುಮೇಹ ವಿಭಾಗದ ಪ್ರಾಧ್ಯಾಪಕ ಡಾ.ಸುನೀಲ್ ರಾವ್ ಕೂಡ ಭಾಗವಹಿಸಿದ್ದರು.

ಆರೋಗ್ಯಕರ ತೂಕ: ಕರಿಬೇವಿನ ಎಲೆಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಹಸಿವನ್ನು ದೀರ್ಘಕಾಲದವರೆಗೆ ತಡೆಯುತ್ತದೆ. ಕರಿಬೇವು ತಿಂದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು.

ಬಲವಾದ ಕೂದಲಿಗಾಗಿ: ಹೊರಗಿನ ಮಾಲಿನ್ಯ, ಕೆಲಸದ ಒತ್ತಡ, ಆಹಾರ ಪದ್ಧತಿಗಳಿಂದ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕರಿಬೇವು ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವದರಿಂದ ತಲೆ ಕೂದಲು ಉದುರುವುದನ್ನು ನಿಯಂತ್ರಣದಲ್ಲಿ ಇಡಬಹುದು. ಕರಿಬೇವಿನ ಎಲೆಗಳಲ್ಲಿ ಇರುವ ಬೀಟಾ-ಕ್ಯಾರೋಟಿನ್​ ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳು ಕೂದಲಿನ ಬುಡವನ್ನು ಒಳಗಿನಿಂದ ಪೋಷಿಸಿ ಬಲ ನೀಡುತ್ತದೆ.

ಬಾಯಿ ದುರ್ವಾಸನೆಗೆ ಹೋಗಲಾಡಿಸಲು ಉತ್ತಮ: ಬಾಯಿಯ ದುರ್ವಾಸನೆ ಸಣ್ಣ ಸಮಸ್ಯೆಯಂದರು ಅನುಭವಿಸುವವರಿಗೆ ಅದರ ಪರಿಣಾಮ ಏನು ಅಂತಾ ಗೊತ್ತು. ಇಂಥವರಿಗೆ ಕರಿಬೇವು ಸೇವನೆ ಉತ್ತಮ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಕರಿಬೇವು ತಿನ್ನುವುದರ ಮೂಲಕ ತಾಜಾ ಉಸಿರನ್ನು ಪಡೆಯಬಹುದು.

ಇವುಗಳಲ್ಲದೇ, ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಇ ಮುಂತಾದ ಹಲವಾರು ಪೋಷಕಾಂಶಗಳಿವೆ. ನಿತ್ಯ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಯಕೃತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕರಿಬೇವಿನ ಎಲೆಗಳನ್ನು ಜಗಿಯಲು ನಿಮಗೆ ಕಷ್ಟವಾಗುತ್ತಿದ್ದರೆ, ನೀವು ಅವುಗಳನ್ನು ಒಣ ಗಿಡಮೂಲಿಕೆ ಚಹಾಗಳ ರೂಪದಲ್ಲಿ ತೆಗೆದುಕೊಳ್ಳಬಹುದು. ಇಲ್ಲವೇ.. ಒಂದಿಷ್ಟು ಎಲೆಗಳನ್ನು ನೀರಿಗೆ ಬೆರೆಸಿ ಕುಡಿಯಬಹುದು.

ಓದುಗರಿಗೆ ಸೂಚನೆ: ಇಲ್ಲಿ ನೀಡಲಾಗಿರುವ ಎಲ್ಲ ಆರೋಗ್ಯ ಮಾಹಿತಿ ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆಗಳು, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆ ಅಧಿಕಾವಗಿದ್ದರೆ ನೀವು ಮನೆ ಮದ್ದು ಬಿಟ್ಟು ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ ನಿಂಬೆ ರಸ: ಖಾಯಿಲೆಯಿಂದ ಪಡೆಯಿರಿ ಮುಕ್ತಿ: ಇನ್ನೂ ಏನೇನೆಲ್ಲ ಪ್ರಯೋಜನ ಗೊತ್ತಾ? - HOW TO USEFULL LEMON WATER

ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ . ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.

ಒಳ್ಳೆಯ ಬ್ಯಾಕ್ಟೀರಿಯಗಳ ಹೆಚ್ಚಳ: ಮುಂಜಾನೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ಸೇವಿಸುವುರಿಂದ ನಿಮ್ಮ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೇರಳವಾಗುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಜತೆಗೆ ಅಜೀರ್ಣ, ವಾಯು, ಅನಿಲದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ದೇಹದಿಂದ ವಿಷಾಂಶವನ್ನು ಹೊರ ಹಾಕುವ ಕರಿಬೇವು: ಕರಿಬೇವಿನ ಎಲೆಗಳಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಬೇಡವಾದ ವಿಷವಿದ್ದರೆ ಹೊರಹಾಕುತ್ತದೆ. ಇದರಿಂದ ಆರೋಗ್ಯಕರವಾಗಿರಬಹುದು. ಅಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ: ಕರಿಬೇವಿನ ಎಲೆಗಳನ್ನು ಹಾಗೇ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂಬುದನ್ನು ವೈದ್ಯರು ತಿಳಿಸಿದ್ದಾರೆ. 'ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಟ್ರಾನ್ಸ್‌ಲೇಶನಲ್ ರಿಸರ್ಚ' ನಲ್ಲಿ ಪ್ರಕಟವಾದ 2013ರ ಸಂಶೋಧನೆ ಟೈಪ್ 2 ಮಧುಮೇಹ ಹೊಂದಿರುವ ಜನರು ಮೂರು ತಿಂಗಳ ಕಾಲ ದಿನಕ್ಕೆ ಎರಡು ಬಾರಿ 10 ಕರಿಬೇವಿನ ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂಬುದನ್ನು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ ನಮ್ಮ ಹೈದರಾಬಾದ್‌ನ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮಧುಮೇಹ ವಿಭಾಗದ ಪ್ರಾಧ್ಯಾಪಕ ಡಾ.ಸುನೀಲ್ ರಾವ್ ಕೂಡ ಭಾಗವಹಿಸಿದ್ದರು.

ಆರೋಗ್ಯಕರ ತೂಕ: ಕರಿಬೇವಿನ ಎಲೆಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಹಸಿವನ್ನು ದೀರ್ಘಕಾಲದವರೆಗೆ ತಡೆಯುತ್ತದೆ. ಕರಿಬೇವು ತಿಂದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು.

ಬಲವಾದ ಕೂದಲಿಗಾಗಿ: ಹೊರಗಿನ ಮಾಲಿನ್ಯ, ಕೆಲಸದ ಒತ್ತಡ, ಆಹಾರ ಪದ್ಧತಿಗಳಿಂದ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕರಿಬೇವು ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವದರಿಂದ ತಲೆ ಕೂದಲು ಉದುರುವುದನ್ನು ನಿಯಂತ್ರಣದಲ್ಲಿ ಇಡಬಹುದು. ಕರಿಬೇವಿನ ಎಲೆಗಳಲ್ಲಿ ಇರುವ ಬೀಟಾ-ಕ್ಯಾರೋಟಿನ್​ ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳು ಕೂದಲಿನ ಬುಡವನ್ನು ಒಳಗಿನಿಂದ ಪೋಷಿಸಿ ಬಲ ನೀಡುತ್ತದೆ.

ಬಾಯಿ ದುರ್ವಾಸನೆಗೆ ಹೋಗಲಾಡಿಸಲು ಉತ್ತಮ: ಬಾಯಿಯ ದುರ್ವಾಸನೆ ಸಣ್ಣ ಸಮಸ್ಯೆಯಂದರು ಅನುಭವಿಸುವವರಿಗೆ ಅದರ ಪರಿಣಾಮ ಏನು ಅಂತಾ ಗೊತ್ತು. ಇಂಥವರಿಗೆ ಕರಿಬೇವು ಸೇವನೆ ಉತ್ತಮ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಕರಿಬೇವು ತಿನ್ನುವುದರ ಮೂಲಕ ತಾಜಾ ಉಸಿರನ್ನು ಪಡೆಯಬಹುದು.

ಇವುಗಳಲ್ಲದೇ, ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಇ ಮುಂತಾದ ಹಲವಾರು ಪೋಷಕಾಂಶಗಳಿವೆ. ನಿತ್ಯ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಯಕೃತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕರಿಬೇವಿನ ಎಲೆಗಳನ್ನು ಜಗಿಯಲು ನಿಮಗೆ ಕಷ್ಟವಾಗುತ್ತಿದ್ದರೆ, ನೀವು ಅವುಗಳನ್ನು ಒಣ ಗಿಡಮೂಲಿಕೆ ಚಹಾಗಳ ರೂಪದಲ್ಲಿ ತೆಗೆದುಕೊಳ್ಳಬಹುದು. ಇಲ್ಲವೇ.. ಒಂದಿಷ್ಟು ಎಲೆಗಳನ್ನು ನೀರಿಗೆ ಬೆರೆಸಿ ಕುಡಿಯಬಹುದು.

ಓದುಗರಿಗೆ ಸೂಚನೆ: ಇಲ್ಲಿ ನೀಡಲಾಗಿರುವ ಎಲ್ಲ ಆರೋಗ್ಯ ಮಾಹಿತಿ ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆಗಳು, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆ ಅಧಿಕಾವಗಿದ್ದರೆ ನೀವು ಮನೆ ಮದ್ದು ಬಿಟ್ಟು ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಕುಡಿಯಿರಿ ನಿಂಬೆ ರಸ: ಖಾಯಿಲೆಯಿಂದ ಪಡೆಯಿರಿ ಮುಕ್ತಿ: ಇನ್ನೂ ಏನೇನೆಲ್ಲ ಪ್ರಯೋಜನ ಗೊತ್ತಾ? - HOW TO USEFULL LEMON WATER

ETV Bharat Logo

Copyright © 2024 Ushodaya Enterprises Pvt. Ltd., All Rights Reserved.