ETV Bharat / entertainment

ಐಸಿ814 ಕಂದಹಾರ್ ಹೈಜಾಕ್: ಅಂದು ಅಪಹರಣಗೊಂಡ ವಿಮಾನದಲ್ಲಿದ್ದ ಪೂಜಾ ಕಟಾರಿಯಾ ಹೇಳಿದ್ದಿಷ್ಟು! - IC814 The Kandahar Hijack - IC814 THE KANDAHAR HIJACK

ಆಗಸ್ಟ್ 29ರಂದು ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಐಸಿ814 - ದಿ ಕಂದಹಾರ್ ಹೈಜಾಕ್' ವೆಬ್ ಸರಣಿ ವಿವಾದಕ್ಕೊಳಗಾಗಿತ್ತು. ಈ ಮಧ್ಯೆ ಹೈಜಾಕ್​​​ನಲ್ಲಿ ಬದುಕುಳಿದ ಚಂಡೀಗಢದ ಪೂಜಾ ಕಟಾರಿಯಾ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ, ಜೊತೆಗೆ ಸರಣಿ ಸುತ್ತಲಿನ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

Kandahar Hijack - File Photo
ಕಂದಹಾರ್ ಹೈಜಾಕ್ - ಸಾಂದರ್ಭಿಕ ಚಿತ್ರ (ANI)
author img

By ETV Bharat Entertainment Team

Published : Sep 4, 2024, 4:39 PM IST

'ಐಸಿ 814 - ದಿ ಕಂದಹಾರ್ ಹೈಜಾಕ್' ವೆಬ್ ಸರಣಿ ಒಟಿಟಿ ಪ್ಲ್ಯಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 29ರಂದು ಬಿಡುಡೆಗೊಂಡಿದ್ದು, ತೀವ್ರ ಟೀಕೆ ವ್ಯಕ್ತವಾಗಿತ್ತು. ಭಯೋತ್ಪಾದಕರ ಹೆಸರು ಬದಲಾವಣೆ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿತ್ತು. ವಿವಾದ ಉಲ್ಭಣಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಪಹರಣಕಾರರ ನಿಜ ಹೆಸರುಗಳನ್ನು ಬಳಸಲು ಸೂಚಿಸಿತ್ತು. ನಂತರ ಚಿತ್ರತಂಡ ಸೀರೀಸ್​ನಲ್ಲಿ ಭಯೋತ್ಪಾದಕರ ನಿಜ ಹೆಸರನ್ನು ಬಳಸಿದೆ.

ಜನರ ಪ್ರಕಾರ, ವಿಮಾನವನ್ನು ಹೈಜಾಕ್ ಮಾಡಿದವರು ಭಯೋತ್ಪಾದಕರು. ಅವರೆಲ್ಲರೂ ಮುಸ್ಲಿಮರು. ಆದರೆ ನಿರ್ಮಾಪಕರು ಅವರ ಹೆಸರನ್ನು 'ಶಂಕರ್' ಮತ್ತು 'ಭೋಲಾ' ಎಂದು ಬದಲಾಯಿಸಿದ್ದರು. ಇದು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿತ್ತು. ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿ ಹೆಸರುಗಳನ್ನು ಸರಿಪಡಿಸಿತು.

ಇದೇ ವೇಳೆ, ಚಂಡೀಗಢದ ಪೂಜಾ ಕಟಾರಿಯಾ ಎಂಬುವವರು ಕಂದಹಾರ್ ಹೈಜಾಕ್​​​ನ ಸಂಪೂರ್ಣ ಕಥೆ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ಹೈಚಾಕ್​ ಆದಾಗ ಪೂಜಾ ವಿಮಾನದಲ್ಲಿದ್ದರು. ತಮ್ಮ ಅನುಭವದ ಜೊತೆಗೆ ನೆಟ್‌ಫ್ಲಿಕ್ಸ್ ಐಸಿ814 ಕಂದಹಾರ್ ಹೈಜಾಕ್ ವಿವಾದದ ಬಗ್ಗೆಯೂ ಪೂಜಾ ಪ್ರತಿಕ್ರಿಯಿಸಿದ್ದಾರೆ.

ಅಪಹರಣದ ವೇಳೆ ವಿಮಾನದಲ್ಲಿದ್ದ ಪೂಜಾ ಕಟಾರಿಯಾ ಮಾತನಾಡಿ, ''ವಿಮಾನದಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ತಿಳಿಸಿದರು. ತಲೆ ತಗ್ಗಿಸಿ ಸುಮ್ಮನೆ ಕೂರುವಂತೆ ತಿಳಿಸಿದರು. ನಾವು ಕಂದಹಾರ್​​​ನಲ್ಲಿದ್ದೇವೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನಮಗೆ ಬಹಳ ಭಯವಾಗಿತ್ತು. 'ಬರ್ಗರ್' ಎಂಬ ಭಯೋತ್ಪಾದಕ ಕೊಂಚ ಫ್ರೆಂಡ್ಲಿಯಾಗಿದ್ದ. ಜನರಿಗೆ ಪ್ಯಾನಿಕ್ ಅಟ್ಯಾಕ್ ಆಗದಂತೆ ಆತ ನೋಡಿಕೊಂಡ''.

ಇದನ್ನೂ ಓದಿ: ಕೇಂದ್ರದ ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​: IC814 ವೆಬ್​ಸಿರೀಸ್​ನಲ್ಲಿ ಅಪಹರಣಕಾರರ ನಿಜ ಹೆಸರು ಬಳಕೆ - IC814 Web Series

''ಬರ್ಗರ್ ಹೆಸರಿನ ಭಯೋತ್ಪಾದಕ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಅಂತ್ಯಾಕ್ಷರಿ ಹಾಡಲು ಹೇಳಿದ. ಮತ್ತೋರ್ವ (ಡಾಕ್ಟರ್​​) ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಭಾಷಣ ಮಾಡಿದ. ಅವರಲ್ಲಿ ಇತರ ಭಯೋತ್ಪಾದಕರ ಹೆಸರುಗಳು 'ಭೋಲಾ' ಮತ್ತು 'ಶಂಕರ್'. ಒಬ್ಬರನ್ನೊಬ್ಬರು ಈ ಹೆಸರಿನಿಂದ ಕರೆದುಕೊಳ್ಳುತ್ತಿದ್ದರು. ನಾವು ಹೊರಗೆ ಬಂದ ನಂತರವೇ ಇಡೀ ಘಟನೆ ತಿಳಿಯಿತು. ವಿಮಾನದೊಳಗಿದ್ದ ನಮಗೆ ನಾವು ಎಲ್ಲಿದ್ದೇವೆ ಎಂಬುದು ಸಹ ತಿಳಿಯುವುದು ಕಷ್ಟಕರವಾಗಿತ್ತು. ಸುಮಾರು ಏಳು ದಿನಗಳ ಕಾಲ ನಮ್ಮನ್ನು ಒತ್ತೆಯಾಳಾಗಿಟ್ಟಿದ್ದರು. ಈ ಸಮಯದಲ್ಲಿ ತಿನ್ನಲು ಸೇಬು ಸಿಕ್ಕಿತ್ತಷ್ಟೇ" ಎಂದು ತಿಳಿಸಿದರು.

ಇದನ್ನೂ ಓದಿ: ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್​ವುಡ್​ನಲ್ಲೂ ಕಮಿಟಿ ರಚಿಸಿ : ಸಿಎಂಗೆ FIRE ಒತ್ತಾಯ - FIRE URGES TO FORM COMMITTEE

ಇನ್ನೂ ವೆಬ್ ಸೀರಿಸ್ ವಿವಾದದ ಕುರಿತು ಮಾತನಾಡಿದ ಪೂಜಾ, ಈ ವೆಬ್ ಸೀರೀಸ್ ಬಗ್ಗೆ ಜನರಿಗೇಕೆ ಕೋಪ ಬರುತ್ತಿದೆಯೋ ಗೊತ್ತಿಲ್ಲ. ವಿಮಾನದಲ್ಲಿ ಈ ಹೆಸರುಗಳಿಂದಲೇ ಅವರನ್ನು ಕರೆದುಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಪರಸ್ಪರ ಭೋಲಾ, ಶಂಕರ್, ಬರ್ಗರ್, ಡಾಕ್ಟರ್ ಎಂದು ಕರೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

'ಐಸಿ 814 - ದಿ ಕಂದಹಾರ್ ಹೈಜಾಕ್' ವೆಬ್ ಸರಣಿ ಒಟಿಟಿ ಪ್ಲ್ಯಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 29ರಂದು ಬಿಡುಡೆಗೊಂಡಿದ್ದು, ತೀವ್ರ ಟೀಕೆ ವ್ಯಕ್ತವಾಗಿತ್ತು. ಭಯೋತ್ಪಾದಕರ ಹೆಸರು ಬದಲಾವಣೆ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿತ್ತು. ವಿವಾದ ಉಲ್ಭಣಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಪಹರಣಕಾರರ ನಿಜ ಹೆಸರುಗಳನ್ನು ಬಳಸಲು ಸೂಚಿಸಿತ್ತು. ನಂತರ ಚಿತ್ರತಂಡ ಸೀರೀಸ್​ನಲ್ಲಿ ಭಯೋತ್ಪಾದಕರ ನಿಜ ಹೆಸರನ್ನು ಬಳಸಿದೆ.

ಜನರ ಪ್ರಕಾರ, ವಿಮಾನವನ್ನು ಹೈಜಾಕ್ ಮಾಡಿದವರು ಭಯೋತ್ಪಾದಕರು. ಅವರೆಲ್ಲರೂ ಮುಸ್ಲಿಮರು. ಆದರೆ ನಿರ್ಮಾಪಕರು ಅವರ ಹೆಸರನ್ನು 'ಶಂಕರ್' ಮತ್ತು 'ಭೋಲಾ' ಎಂದು ಬದಲಾಯಿಸಿದ್ದರು. ಇದು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿತ್ತು. ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿ ಹೆಸರುಗಳನ್ನು ಸರಿಪಡಿಸಿತು.

ಇದೇ ವೇಳೆ, ಚಂಡೀಗಢದ ಪೂಜಾ ಕಟಾರಿಯಾ ಎಂಬುವವರು ಕಂದಹಾರ್ ಹೈಜಾಕ್​​​ನ ಸಂಪೂರ್ಣ ಕಥೆ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ಹೈಚಾಕ್​ ಆದಾಗ ಪೂಜಾ ವಿಮಾನದಲ್ಲಿದ್ದರು. ತಮ್ಮ ಅನುಭವದ ಜೊತೆಗೆ ನೆಟ್‌ಫ್ಲಿಕ್ಸ್ ಐಸಿ814 ಕಂದಹಾರ್ ಹೈಜಾಕ್ ವಿವಾದದ ಬಗ್ಗೆಯೂ ಪೂಜಾ ಪ್ರತಿಕ್ರಿಯಿಸಿದ್ದಾರೆ.

ಅಪಹರಣದ ವೇಳೆ ವಿಮಾನದಲ್ಲಿದ್ದ ಪೂಜಾ ಕಟಾರಿಯಾ ಮಾತನಾಡಿ, ''ವಿಮಾನದಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ತಿಳಿಸಿದರು. ತಲೆ ತಗ್ಗಿಸಿ ಸುಮ್ಮನೆ ಕೂರುವಂತೆ ತಿಳಿಸಿದರು. ನಾವು ಕಂದಹಾರ್​​​ನಲ್ಲಿದ್ದೇವೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನಮಗೆ ಬಹಳ ಭಯವಾಗಿತ್ತು. 'ಬರ್ಗರ್' ಎಂಬ ಭಯೋತ್ಪಾದಕ ಕೊಂಚ ಫ್ರೆಂಡ್ಲಿಯಾಗಿದ್ದ. ಜನರಿಗೆ ಪ್ಯಾನಿಕ್ ಅಟ್ಯಾಕ್ ಆಗದಂತೆ ಆತ ನೋಡಿಕೊಂಡ''.

ಇದನ್ನೂ ಓದಿ: ಕೇಂದ್ರದ ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​: IC814 ವೆಬ್​ಸಿರೀಸ್​ನಲ್ಲಿ ಅಪಹರಣಕಾರರ ನಿಜ ಹೆಸರು ಬಳಕೆ - IC814 Web Series

''ಬರ್ಗರ್ ಹೆಸರಿನ ಭಯೋತ್ಪಾದಕ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಅಂತ್ಯಾಕ್ಷರಿ ಹಾಡಲು ಹೇಳಿದ. ಮತ್ತೋರ್ವ (ಡಾಕ್ಟರ್​​) ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಭಾಷಣ ಮಾಡಿದ. ಅವರಲ್ಲಿ ಇತರ ಭಯೋತ್ಪಾದಕರ ಹೆಸರುಗಳು 'ಭೋಲಾ' ಮತ್ತು 'ಶಂಕರ್'. ಒಬ್ಬರನ್ನೊಬ್ಬರು ಈ ಹೆಸರಿನಿಂದ ಕರೆದುಕೊಳ್ಳುತ್ತಿದ್ದರು. ನಾವು ಹೊರಗೆ ಬಂದ ನಂತರವೇ ಇಡೀ ಘಟನೆ ತಿಳಿಯಿತು. ವಿಮಾನದೊಳಗಿದ್ದ ನಮಗೆ ನಾವು ಎಲ್ಲಿದ್ದೇವೆ ಎಂಬುದು ಸಹ ತಿಳಿಯುವುದು ಕಷ್ಟಕರವಾಗಿತ್ತು. ಸುಮಾರು ಏಳು ದಿನಗಳ ಕಾಲ ನಮ್ಮನ್ನು ಒತ್ತೆಯಾಳಾಗಿಟ್ಟಿದ್ದರು. ಈ ಸಮಯದಲ್ಲಿ ತಿನ್ನಲು ಸೇಬು ಸಿಕ್ಕಿತ್ತಷ್ಟೇ" ಎಂದು ತಿಳಿಸಿದರು.

ಇದನ್ನೂ ಓದಿ: ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್​ವುಡ್​ನಲ್ಲೂ ಕಮಿಟಿ ರಚಿಸಿ : ಸಿಎಂಗೆ FIRE ಒತ್ತಾಯ - FIRE URGES TO FORM COMMITTEE

ಇನ್ನೂ ವೆಬ್ ಸೀರಿಸ್ ವಿವಾದದ ಕುರಿತು ಮಾತನಾಡಿದ ಪೂಜಾ, ಈ ವೆಬ್ ಸೀರೀಸ್ ಬಗ್ಗೆ ಜನರಿಗೇಕೆ ಕೋಪ ಬರುತ್ತಿದೆಯೋ ಗೊತ್ತಿಲ್ಲ. ವಿಮಾನದಲ್ಲಿ ಈ ಹೆಸರುಗಳಿಂದಲೇ ಅವರನ್ನು ಕರೆದುಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಪರಸ್ಪರ ಭೋಲಾ, ಶಂಕರ್, ಬರ್ಗರ್, ಡಾಕ್ಟರ್ ಎಂದು ಕರೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.