ETV Bharat / entertainment

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​​' ವೀಕ್ಷಿಸಲಿಚ್ಛಿಸಿದ ಕಿರಣ್ ರಾವ್

author img

By ETV Bharat Karnataka Team

Published : Mar 13, 2024, 3:47 PM IST

ಈ ಹಿಂದೆ ಸ್ತ್ರೀದ್ವೇಷ ವೈಭವೀಕರಿಸುವಂತಹ ಚಿತ್ರಗಳನ್ನು ಟೀಕಿಸಿದ್ದ ಕಿರಣ್ ರಾವ್ ಅವರೀಗ ಸಂದೀಪ್​​ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​​ ಚಿತ್ರವನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ.

Kiran Rao expresses desire to watch Animal movie
ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​​' ವೀಕ್ಷಿಸಲಿಚ್ಛಿಸಿದ ಕಿರಣ್ ರಾವ್

ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಕಿರಣ್ ರಾವ್, ಫೈನಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬ್ಲಾಕ್​ಬಸ್ಟರ್ ಹಿಟ್​ ಸಿನಿಮಾ 'ಅನಿಮಲ್​​' ಅನ್ನು ನೋಡಲು ಬಯಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅನಿಮಲ್​​ ಚಿತ್ರವನ್ನು ಇನ್ನೂ ನೋಡಿಲ್ಲ. ಪ್ರೇಕ್ಷಕರು ಸಿನಿಮಾ ಆನಂದಿಸಿರೋ ಹಿನ್ನೆಲೆ ವೀಕ್ಷಿಸಲು ಬಯಸುವುದಾಗಿ ಹೇಳಿದ್ದಾರೆ.

ತಮ್ಮ ಲಾಪತಾ ಲೇಡಿಸ್ ಸಿನಿಮಾ ಸ್ವೀಕರಿಸಿದ ಸಕಾರಾತ್ಮಕ ಸ್ಪಂದನೆಗೆ ಪ್ರತಿಕ್ರಿಯಿಸಿದ ಕಿರಣ್ ರಾವ್​, ವಿಮರ್ಶಕರು ಹಾಗೂ ಪ್ರೇಕ್ಷಕರು ಚಿತ್ರವನ್ನು ಇಷ್ಟಪಡುವುದು ಸಹಜ ವಿಚಾರವಲ್ಲ. ಪ್ರೇಕ್ಷಕರು ಆ್ಯಕ್ಷನ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಹಾಗಂತ ವಿಮರ್ಶಕರೂ ಹಾಗೆ ಮಾಡಬೇಕಾಗಿಲ್ಲ. ಆಶ್ಚರ್ಯ ಎಂಬಂತೆ, ನಮ್ಮ ಈ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಇಷ್ಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

"ಲಾಪತಾ ಲೇಡಿಸ್ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದ್ದು, ನಾನು ಕೃತಜ್ಞನಾಗಿದ್ದೇನೆ. ವಿಮರ್ಶಕರು ಕೂಡ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟಾಗ, ವಿಮರ್ಶಕರೂ ಅದನ್ನು ಇಷ್ಟಪಡುವ ಅಗತ್ಯವಿಲ್ಲ. ಪ್ರೇಕ್ಷಕರು ಆ್ಯಕ್ಷನ್-ಪ್ಯಾಕ್ಡ್, ವಿಎಫ್‌ಎಕ್ಸ್ ಹೆಚ್ಚಿರುವ ಚಿತ್ರಗಳನ್ನು ಇಷ್ಟಪಡುತ್ತಾರೆ. ಅನಿಮಲ್‌ನಂತಹ ಚಿತ್ರಗಳು ಚಿತ್ರಗಳು ವೀಕ್ಷಕರ ಆದ್ಯತೆಯಾಗಿದೆ. ನಾನು ಕೂಡ ಈ ಸಿನಿಮಾವನ್ನು ವೀಕ್ಷಿಸಲು ಬಯಸುತ್ತೇನೆ. ಇದು ಅವಶ್ಯಕವಾಗಿದೆ. ಜನರು ಸಿನಿಮಾ ಇಷ್ಟಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ಕಲೆ ಉತ್ತಮವಾಗಿದೆ ಎಂದು ಕೇಳಿದ್ದೇನೆ. ರಣ್​​ಬೀರ್ ಕಪೂರ್ ಸಹ ಉತ್ತಮ ನಟ. ನನಗಿದು ಇಂಟ್ರೆಸ್ಟಿಂಗ್​ ಎನಿಸಬಹುದು ಎಂದು ತಿಳಿಸಿದ್ದಾರೆ.

2023ರಲ್ಲಿ, ಹೆಸರಾಂತ ಭಾರತೀಯ ಸಂಸ್ಥೆಯೊಂದು ನಡೆಸಿದ ಅಧ್ಯಯನ ಉಲ್ಲೇಖಿಸಿ ಕಿರಣ್​ ರಾವ್​​ ಮಾತನಾಡಿದ್ದರು. ಆನ್, ಆಫ್ ಸ್ಕ್ರೀನ್​​ನಲ್ಲಿ ಮಹಿಳೆಯರ ಚಿತ್ರಣ ಹೇಗಿದೆ ಎಂಬುದರ ಬಗ್ಗೆ ದನಿ ಎತ್ತಿದ್ದರು. ಆ ಸಂದರ್ಭ ಸಂದೀಪ್​ ವಂಗಾ ಅವರ ಕಬೀರ್ ಸಿಂಗ್ ಚಿತ್ರವನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ. ಕೆಲ ದಿನಗಳವರೆಗೆ ಕಿರಣ್ ​ - ಸಂದೀಪ್​ ಶೀತಲ ಸಮರ ನಡೆಯಿತು.

ಇದನ್ನೂ ಓದಿ: ಮಾಲಿವುಡ್​ಗೆ ಅನುಷ್ಕಾ ಶೆಟ್ಟಿ ಎಂಟ್ರಿ: ಪ್ಯಾನ್​​ ಇಂಡಿಯಾವಲ್ಲದೇ, ಕೊರಿಯನ್​ನಲ್ಲೂ ಸಿನಿಮಾ ಬಿಡುಗಡೆ

ಕಿರಣ್​ ಹೇಳಿಕೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಸಂದೀಪ್, 1990ರ ಅಮೀರ್​ ಖಾನ್​​ ಅವರ ದಿಲ್‌ ಚಿತ್ರದಲ್ಲಿನ ಕೆಲ ಸಾಲುಗಳು ಎಷ್ಟರ ಮಟ್ಟಿಗೆ ಸ್ತ್ರೀದ್ವೇಷದ್ದಾಗಿತ್ತು ಎಂಬುದನ್ನು 'ಹೋಗಿ ಅಮೀರ್ ಖಾನ್ ಅವರನ್ನು ಕೇಳಿ' ಎಂದು ತಿಳಿಸಿದ್ದರು. ಈ ಮಧ್ಯೆ 'ಅಮೀರ್ ಅವರ ಹಳೆಯ ಕ್ಷಮೆಯಾಚನೆ' ಕೂಡ ವೈರಲ್ ಆಗಿತ್ತು. ಅದರಲ್ಲಿ, ಅಮೀರ್​ ಖಾನ್​​ ಮಹಿಳೆಯರನ್ನು ಉತ್ತಮವಾಗಿ ಚಿತ್ರಿಸದೇ ಬೇಜವಾಬ್ದಾರಿ ಚಿತ್ರಗಳ ಭಾಗವಾಗಿರುವುದಕ್ಕೆ 'ನಾಚಿಕೆಪಡುತ್ತೇನೆ' ಎಂದು ತಿಳಿಸಿದ್ದರು.

ಇದನ್ನೂ ಓದಿ: ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು

ನಂತರ ಕಿರಣ್ ಪ್ರತಿಕ್ರಿಯಿಸಿ, ಸಂದೀಪ್ ಅವರ ಚಿತ್ರಗಳನ್ನು ವೀಕ್ಷಿಸದ ಕಾರಣ ನಾನೆಂದಿಗೂ ಟೀಕೆ ಮಾಡಿಲ್ಲ. ಅವರ ಯಾವುದೇ ಸಿನಿಮಾವನ್ನು ಹೆಸರಿಸಿಲ್ಲ. ಇನ್ನು ಅಮೀರ್​ ಕ್ಷಮೆಯಾಚಿಸಿದ್ದಾರೆ, ಆದರೆ ಅವರ ಕೆಲಸಕ್ಕೆ ನಾನು 'ಜವಾಬ್ದಾರಳಲ್ಲ' ಎಂದು ತಿಳಿಸಿದ್ದರು.

ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಕಿರಣ್ ರಾವ್, ಫೈನಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬ್ಲಾಕ್​ಬಸ್ಟರ್ ಹಿಟ್​ ಸಿನಿಮಾ 'ಅನಿಮಲ್​​' ಅನ್ನು ನೋಡಲು ಬಯಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅನಿಮಲ್​​ ಚಿತ್ರವನ್ನು ಇನ್ನೂ ನೋಡಿಲ್ಲ. ಪ್ರೇಕ್ಷಕರು ಸಿನಿಮಾ ಆನಂದಿಸಿರೋ ಹಿನ್ನೆಲೆ ವೀಕ್ಷಿಸಲು ಬಯಸುವುದಾಗಿ ಹೇಳಿದ್ದಾರೆ.

ತಮ್ಮ ಲಾಪತಾ ಲೇಡಿಸ್ ಸಿನಿಮಾ ಸ್ವೀಕರಿಸಿದ ಸಕಾರಾತ್ಮಕ ಸ್ಪಂದನೆಗೆ ಪ್ರತಿಕ್ರಿಯಿಸಿದ ಕಿರಣ್ ರಾವ್​, ವಿಮರ್ಶಕರು ಹಾಗೂ ಪ್ರೇಕ್ಷಕರು ಚಿತ್ರವನ್ನು ಇಷ್ಟಪಡುವುದು ಸಹಜ ವಿಚಾರವಲ್ಲ. ಪ್ರೇಕ್ಷಕರು ಆ್ಯಕ್ಷನ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಹಾಗಂತ ವಿಮರ್ಶಕರೂ ಹಾಗೆ ಮಾಡಬೇಕಾಗಿಲ್ಲ. ಆಶ್ಚರ್ಯ ಎಂಬಂತೆ, ನಮ್ಮ ಈ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಇಷ್ಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

"ಲಾಪತಾ ಲೇಡಿಸ್ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದ್ದು, ನಾನು ಕೃತಜ್ಞನಾಗಿದ್ದೇನೆ. ವಿಮರ್ಶಕರು ಕೂಡ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟಾಗ, ವಿಮರ್ಶಕರೂ ಅದನ್ನು ಇಷ್ಟಪಡುವ ಅಗತ್ಯವಿಲ್ಲ. ಪ್ರೇಕ್ಷಕರು ಆ್ಯಕ್ಷನ್-ಪ್ಯಾಕ್ಡ್, ವಿಎಫ್‌ಎಕ್ಸ್ ಹೆಚ್ಚಿರುವ ಚಿತ್ರಗಳನ್ನು ಇಷ್ಟಪಡುತ್ತಾರೆ. ಅನಿಮಲ್‌ನಂತಹ ಚಿತ್ರಗಳು ಚಿತ್ರಗಳು ವೀಕ್ಷಕರ ಆದ್ಯತೆಯಾಗಿದೆ. ನಾನು ಕೂಡ ಈ ಸಿನಿಮಾವನ್ನು ವೀಕ್ಷಿಸಲು ಬಯಸುತ್ತೇನೆ. ಇದು ಅವಶ್ಯಕವಾಗಿದೆ. ಜನರು ಸಿನಿಮಾ ಇಷ್ಟಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ಕಲೆ ಉತ್ತಮವಾಗಿದೆ ಎಂದು ಕೇಳಿದ್ದೇನೆ. ರಣ್​​ಬೀರ್ ಕಪೂರ್ ಸಹ ಉತ್ತಮ ನಟ. ನನಗಿದು ಇಂಟ್ರೆಸ್ಟಿಂಗ್​ ಎನಿಸಬಹುದು ಎಂದು ತಿಳಿಸಿದ್ದಾರೆ.

2023ರಲ್ಲಿ, ಹೆಸರಾಂತ ಭಾರತೀಯ ಸಂಸ್ಥೆಯೊಂದು ನಡೆಸಿದ ಅಧ್ಯಯನ ಉಲ್ಲೇಖಿಸಿ ಕಿರಣ್​ ರಾವ್​​ ಮಾತನಾಡಿದ್ದರು. ಆನ್, ಆಫ್ ಸ್ಕ್ರೀನ್​​ನಲ್ಲಿ ಮಹಿಳೆಯರ ಚಿತ್ರಣ ಹೇಗಿದೆ ಎಂಬುದರ ಬಗ್ಗೆ ದನಿ ಎತ್ತಿದ್ದರು. ಆ ಸಂದರ್ಭ ಸಂದೀಪ್​ ವಂಗಾ ಅವರ ಕಬೀರ್ ಸಿಂಗ್ ಚಿತ್ರವನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ. ಕೆಲ ದಿನಗಳವರೆಗೆ ಕಿರಣ್ ​ - ಸಂದೀಪ್​ ಶೀತಲ ಸಮರ ನಡೆಯಿತು.

ಇದನ್ನೂ ಓದಿ: ಮಾಲಿವುಡ್​ಗೆ ಅನುಷ್ಕಾ ಶೆಟ್ಟಿ ಎಂಟ್ರಿ: ಪ್ಯಾನ್​​ ಇಂಡಿಯಾವಲ್ಲದೇ, ಕೊರಿಯನ್​ನಲ್ಲೂ ಸಿನಿಮಾ ಬಿಡುಗಡೆ

ಕಿರಣ್​ ಹೇಳಿಕೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಸಂದೀಪ್, 1990ರ ಅಮೀರ್​ ಖಾನ್​​ ಅವರ ದಿಲ್‌ ಚಿತ್ರದಲ್ಲಿನ ಕೆಲ ಸಾಲುಗಳು ಎಷ್ಟರ ಮಟ್ಟಿಗೆ ಸ್ತ್ರೀದ್ವೇಷದ್ದಾಗಿತ್ತು ಎಂಬುದನ್ನು 'ಹೋಗಿ ಅಮೀರ್ ಖಾನ್ ಅವರನ್ನು ಕೇಳಿ' ಎಂದು ತಿಳಿಸಿದ್ದರು. ಈ ಮಧ್ಯೆ 'ಅಮೀರ್ ಅವರ ಹಳೆಯ ಕ್ಷಮೆಯಾಚನೆ' ಕೂಡ ವೈರಲ್ ಆಗಿತ್ತು. ಅದರಲ್ಲಿ, ಅಮೀರ್​ ಖಾನ್​​ ಮಹಿಳೆಯರನ್ನು ಉತ್ತಮವಾಗಿ ಚಿತ್ರಿಸದೇ ಬೇಜವಾಬ್ದಾರಿ ಚಿತ್ರಗಳ ಭಾಗವಾಗಿರುವುದಕ್ಕೆ 'ನಾಚಿಕೆಪಡುತ್ತೇನೆ' ಎಂದು ತಿಳಿಸಿದ್ದರು.

ಇದನ್ನೂ ಓದಿ: ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು

ನಂತರ ಕಿರಣ್ ಪ್ರತಿಕ್ರಿಯಿಸಿ, ಸಂದೀಪ್ ಅವರ ಚಿತ್ರಗಳನ್ನು ವೀಕ್ಷಿಸದ ಕಾರಣ ನಾನೆಂದಿಗೂ ಟೀಕೆ ಮಾಡಿಲ್ಲ. ಅವರ ಯಾವುದೇ ಸಿನಿಮಾವನ್ನು ಹೆಸರಿಸಿಲ್ಲ. ಇನ್ನು ಅಮೀರ್​ ಕ್ಷಮೆಯಾಚಿಸಿದ್ದಾರೆ, ಆದರೆ ಅವರ ಕೆಲಸಕ್ಕೆ ನಾನು 'ಜವಾಬ್ದಾರಳಲ್ಲ' ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.