ETV Bharat / entertainment

ಶೂಟಿಂಗ್​ ವೇಳೆ ಕಾರ್​ ಆಕ್ಸಿಡೆಂಟ್​​​: ಇಬ್ಬರು ನಟರು ಸೇರಿ ನಾಲ್ವರಿಗೆ ಗಾಯ - Actors Injured

author img

By ETV Bharat Karnataka Team

Published : Jul 27, 2024, 12:48 PM IST

Updated : Jul 27, 2024, 1:47 PM IST

ಶೂಟಿಂಗ್​​ ಸಂದರ್ಭ ನಡೆದ ಕಾರ್​ ಆ್ಯಕ್ಸಿಡೆಂಟ್​​ನಲ್ಲಿ ಇಬ್ಬರು ಮಲಯಾಳಂ ನಟರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

Accident site
ಘಟನಾ ಸ್ಥಳ (ETV Bharat)
ಕಾರ್​ ಆಕ್ಸಿಡೆಂಟ್ (ETV Bharat)

ಕೊಚ್ಚಿ (ಕೇರಳ): ಇಂದು ಮುಂಜಾನೆ ನಗರದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಸಂದರ್ಭ ಮಲಯಾಳಂ ನಟರಾದ ಅರ್ಜುನ್ ಅಶೋಕನ್ ಮತ್ತು ಸಂಗೀತ್ ಪ್ರತಾಪ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಎಂಜಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

"ಬ್ರೊಮ್ಯಾನ್ಸ್" ಶೀರ್ಷಿಕೆಯ ಮುಂದಿನ ಸಿನಿಮಾದ ಚೇಸ್ ಸೀನೊಂದನ್ನು ಚಿತ್ರೀಕರಿಸುವ ವೇಳೆ ನಟರು ಪ್ರಯಾಣಿಸುತ್ತಿದ್ದ ಕಾರು ಅಲ್ಲದ್ದ ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಉರುಳಿದೆ. ಕಾರಿನಲ್ಲಿದ್ದ ಅರ್ಜುನ್​​​, ಪ್ರತಾಪ್ ಸೇರಿ ಮೂವರು ಮತ್ತು ರಸ್ತೆಯಲ್ಲಿ ನಿಂತಿದ್ದ ಫುಡ್ ಡೆಲಿವರಿ ಏಜೆಂಟ್ ಸೇರಿ ಒಟ್ಟು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಾಲ್ವರ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

ಕಾರ್​ ಆಕ್ಸಿಡೆಂಟ್ (ETV Bharat)

ಕೊಚ್ಚಿ (ಕೇರಳ): ಇಂದು ಮುಂಜಾನೆ ನಗರದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಸಂದರ್ಭ ಮಲಯಾಳಂ ನಟರಾದ ಅರ್ಜುನ್ ಅಶೋಕನ್ ಮತ್ತು ಸಂಗೀತ್ ಪ್ರತಾಪ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಎಂಜಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

"ಬ್ರೊಮ್ಯಾನ್ಸ್" ಶೀರ್ಷಿಕೆಯ ಮುಂದಿನ ಸಿನಿಮಾದ ಚೇಸ್ ಸೀನೊಂದನ್ನು ಚಿತ್ರೀಕರಿಸುವ ವೇಳೆ ನಟರು ಪ್ರಯಾಣಿಸುತ್ತಿದ್ದ ಕಾರು ಅಲ್ಲದ್ದ ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಉರುಳಿದೆ. ಕಾರಿನಲ್ಲಿದ್ದ ಅರ್ಜುನ್​​​, ಪ್ರತಾಪ್ ಸೇರಿ ಮೂವರು ಮತ್ತು ರಸ್ತೆಯಲ್ಲಿ ನಿಂತಿದ್ದ ಫುಡ್ ಡೆಲಿವರಿ ಏಜೆಂಟ್ ಸೇರಿ ಒಟ್ಟು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಾಲ್ವರ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

Last Updated : Jul 27, 2024, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.