ETV Bharat / bharat

ಕೇರಳದಲ್ಲಿ ಎಟಿಎಂ ದರೋಡೆ; ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್​ ಚೇಸ್​ - Keralas Thrissur ATM Robbery

author img

By PTI

Published : 2 hours ago

ತಮಿಳುನಾಡಿನಲ್ಲಿ ಪತ್ತೆಯಾದ ಗ್ಯಾಂಗ್​ ಎಟಿಎಂ ದರೋಡೆ ಘಟನೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

tn-police-shoot-at-and-nab-suspects-in-thrissur-atm-heist
ತ್ರಿಸ್ಸೂರು ಎಟಿಎಂ ದರೋಡೆ (ETV Bharat)

ತ್ರಿಶ್ಯೂರು : ಕೇರಳದ ತ್ರಿಶ್ಯೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅಪರಿಚಿತ ದರೋಡೆ ಗುಂಪೊಂದು ಮೂರು ಕಡೆ ಎಟಿಎಂ ದರೋಡೆ ಮಾಡಿ 65 ಲಕ್ಷ ಹಣ ದೋಚಿದ್ದಾರೆ. ಈ ನಡುವೆ ತಮಿಳುನಾಡಿನಲ್ಲಿ ಕಂಟೈನರ್​ನಲ್ಲಿ ಪರಾರಿಯಾಗುತ್ತಿದ್ದ ಗ್ಯಾಂಗ್​ವೊಂದನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಚೇಸ್​ ಮಾಡಿ ಬಂಧಿಸಿದ್ದಾರೆ. ಇದೇ ಗ್ಯಾಂಗ್​ ಎಟಿಎಂ ದರೋಡೆ ಘಟನೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಕೇರಳದಲ್ಲಿ ಎಟಿಎಂಗೆ ಕನ್ನ: ತ್ರಿಶ್ಯೂರಿನ ಮಪ್ರನಂ, ತ್ರಿಶ್ಯೂರು ಪೂರ್ವ ಮತ್ತು ಕೊಲಝಿಯ ಸ್ಟೇಟ್​ ಬ್ಯಾಂಕ್​ ಆಫ್​ ಮೈಸೂರು ಎಟಿಎಂ ಅನ್ನು ಗುರಿಯಾಗಿಸಿಕೊಂಡು ಈ ದರೋಡೆ ಮಾಡಲಾಗಿದೆ. ಸರಿ ರಾತ್ರಿ ಅಂದರೆ 2 ರಿಂದ ಮುಂಜಾನೆ 4 ಗಂಟೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಮೂರು ಎಟಿಎಂಗಳಿಂದ ಒಟ್ಟಾರೆ ಸುಮಾರು 65 ಲಕ್ಷ ಹಣ ಲಪಟಾಯಿಸಿದ್ದಾರೆ. ಈ ದರೋಡೆ ವೇಳೆ ಮುನ್ನೆಚ್ಚರಿಕೆ ಕ್ರಮವಹಿಸಿರುವ ದರೋಡೆಕೋರರು ಸುಳಿವು ಲಭ್ಯವಾಗದಂತೆ ಸಿಸಿಟಿವಿ ಕ್ಯಾಮೆರಾ ನಾಶ ಮಾಡಿದ್ದಾರೆ. ಇದಾದ ಬಳಿಕ ಗ್ಯಾಸ್​ ಕಟ್ಟರ್​ ನಿಂದ ಎಟಿಎಂ ಮೆಷಿನ್​ ಅನ್ನು ಕಟ್​ ಮಾಡಿ ಹಣ ಎಗರಿಸಿದ್ದಾರೆ.

ಎಟಿಎಂನಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಸೆಂಟ್ರಲ್​ ಕಂಟ್ರೋಲ್​ ರೂಮ್ ಈ ಕುರಿತು ಪೊಲೀಸರಿಗೆ ಸುದ್ದಿ ಮುಟ್ಟಿಸಿದೆ. ತಕ್ಷಣಕ್ಕೆ ಕಾರ್ಯಾಚರಣೆಗೆ ಇಳಿದು ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಈ ದರೋಡೆ ಮಾಡಿರುವ ಗ್ಯಾಂಗ್​ ಸಂಬಂಧ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ನೆರೆಯ ತಮಿಳುನಾಡಿನಲ್ಲಿಯೂ ತನಿಖೆ ಪ್ರಾರಂಭಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಕಂಟೈನರ್​ ಟ್ರಕ್​ ಚೆಸ್​: ಕೇರಳದಲ್ಲಿ ಎಟಿಎಂ ದರೋಡೆ ಮಾಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ದೊಡ್ಡ ಕಂಟೈನರ್​​ ಟ್ರಕ್​ನಲ್ಲಿದ್ದ ಕಳ್ಳರ ಗ್ಯಾಂಗ್​ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಘಟನೆ ಸಂಬಂಧ ಕೇರಳ ಪೊಲೀಸರ ಮಾಹಿತಿ ಪಡೆದಿದ್ದ ತಮಿಳುನಾಡು ಪೊಲೀಸರು, ಅನುಮಾನಾಸ್ಪದ ವಾಹನ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಂದ ಟ್ರಕ್​​ ಮತ್ತು ಅದರೊಳಗಿದ್ದವರ ನಡೆ ಕಂಡು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಟ್ರಕ್​​ನಲ್ಲಿದ್ದವರು ನಮಕ್ಕಲ್​ ಜಿಲ್ಲೆಯ ಕುಮಾರಪಾಲ್ಯಂನಲ್ಲಿ ಕಾರು ಮತ್ತು ದ್ವಿಚಕ್ರಕ್ಕೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ.

ಕಂಟೈನರ್​ ಟ್ರಕ್​ ಅನ್ನು ಬೆನ್ನುಹತ್ತಿದ್ದ ಪೊಲೀಸರು, ಚಾಲಕನಿಗೆ ವಾಹನ ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ, ಆತ ವಾಹನ ಸಲ್ಲಿಸಲು ನಿರಾಕರಿಸಿದ್ದು, ಮತ್ತಷ್ಟು ವೇಗದ ಚಾಲನೆಗೆ ಮುಂದಾಗಿದ್ದಾನೆ. ಕಡೆಗೆ ಪೊಲೀಸರು ಫೈರಿಂಗ್​ ನಡೆಸಿದ್ದು, ಕಂಟೈನರ್​ ಟ್ರಕ್​ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಆರೋಪಿ ಸಾವನ್ನಪ್ಪಿದ್ದು, ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಕಂಟೈನರರ್​ ಟ್ರಕ್​ನಲ್ಲಿದ್ದ ಕಾರ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಗ್ಯಾಂಗ್​ ತ್ರಿಶ್ಯೂರು​ ಎಟಿಎಂ ದರೋಡೆಯಲ್ಲಿ ಭಾಗಿಯಾಗಿದೆಯಾ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 'ಗೋದ್ರಾ ರೈಲು ದಹನ ಕೇಸ್​ ಮತ್ತೆ ಮುಂದೂಡಲ್ಲ': 2025 ರ ಜನವರಿ 15ಕ್ಕೆ ದಿನ ನಿಗದಿ ಮಾಡಿದ ಸುಪ್ರೀಂಕೋರ್ಟ್

ತ್ರಿಶ್ಯೂರು : ಕೇರಳದ ತ್ರಿಶ್ಯೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅಪರಿಚಿತ ದರೋಡೆ ಗುಂಪೊಂದು ಮೂರು ಕಡೆ ಎಟಿಎಂ ದರೋಡೆ ಮಾಡಿ 65 ಲಕ್ಷ ಹಣ ದೋಚಿದ್ದಾರೆ. ಈ ನಡುವೆ ತಮಿಳುನಾಡಿನಲ್ಲಿ ಕಂಟೈನರ್​ನಲ್ಲಿ ಪರಾರಿಯಾಗುತ್ತಿದ್ದ ಗ್ಯಾಂಗ್​ವೊಂದನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಚೇಸ್​ ಮಾಡಿ ಬಂಧಿಸಿದ್ದಾರೆ. ಇದೇ ಗ್ಯಾಂಗ್​ ಎಟಿಎಂ ದರೋಡೆ ಘಟನೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಕೇರಳದಲ್ಲಿ ಎಟಿಎಂಗೆ ಕನ್ನ: ತ್ರಿಶ್ಯೂರಿನ ಮಪ್ರನಂ, ತ್ರಿಶ್ಯೂರು ಪೂರ್ವ ಮತ್ತು ಕೊಲಝಿಯ ಸ್ಟೇಟ್​ ಬ್ಯಾಂಕ್​ ಆಫ್​ ಮೈಸೂರು ಎಟಿಎಂ ಅನ್ನು ಗುರಿಯಾಗಿಸಿಕೊಂಡು ಈ ದರೋಡೆ ಮಾಡಲಾಗಿದೆ. ಸರಿ ರಾತ್ರಿ ಅಂದರೆ 2 ರಿಂದ ಮುಂಜಾನೆ 4 ಗಂಟೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಮೂರು ಎಟಿಎಂಗಳಿಂದ ಒಟ್ಟಾರೆ ಸುಮಾರು 65 ಲಕ್ಷ ಹಣ ಲಪಟಾಯಿಸಿದ್ದಾರೆ. ಈ ದರೋಡೆ ವೇಳೆ ಮುನ್ನೆಚ್ಚರಿಕೆ ಕ್ರಮವಹಿಸಿರುವ ದರೋಡೆಕೋರರು ಸುಳಿವು ಲಭ್ಯವಾಗದಂತೆ ಸಿಸಿಟಿವಿ ಕ್ಯಾಮೆರಾ ನಾಶ ಮಾಡಿದ್ದಾರೆ. ಇದಾದ ಬಳಿಕ ಗ್ಯಾಸ್​ ಕಟ್ಟರ್​ ನಿಂದ ಎಟಿಎಂ ಮೆಷಿನ್​ ಅನ್ನು ಕಟ್​ ಮಾಡಿ ಹಣ ಎಗರಿಸಿದ್ದಾರೆ.

ಎಟಿಎಂನಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಸೆಂಟ್ರಲ್​ ಕಂಟ್ರೋಲ್​ ರೂಮ್ ಈ ಕುರಿತು ಪೊಲೀಸರಿಗೆ ಸುದ್ದಿ ಮುಟ್ಟಿಸಿದೆ. ತಕ್ಷಣಕ್ಕೆ ಕಾರ್ಯಾಚರಣೆಗೆ ಇಳಿದು ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಈ ದರೋಡೆ ಮಾಡಿರುವ ಗ್ಯಾಂಗ್​ ಸಂಬಂಧ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ನೆರೆಯ ತಮಿಳುನಾಡಿನಲ್ಲಿಯೂ ತನಿಖೆ ಪ್ರಾರಂಭಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಕಂಟೈನರ್​ ಟ್ರಕ್​ ಚೆಸ್​: ಕೇರಳದಲ್ಲಿ ಎಟಿಎಂ ದರೋಡೆ ಮಾಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ದೊಡ್ಡ ಕಂಟೈನರ್​​ ಟ್ರಕ್​ನಲ್ಲಿದ್ದ ಕಳ್ಳರ ಗ್ಯಾಂಗ್​ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಘಟನೆ ಸಂಬಂಧ ಕೇರಳ ಪೊಲೀಸರ ಮಾಹಿತಿ ಪಡೆದಿದ್ದ ತಮಿಳುನಾಡು ಪೊಲೀಸರು, ಅನುಮಾನಾಸ್ಪದ ವಾಹನ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಂದ ಟ್ರಕ್​​ ಮತ್ತು ಅದರೊಳಗಿದ್ದವರ ನಡೆ ಕಂಡು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಟ್ರಕ್​​ನಲ್ಲಿದ್ದವರು ನಮಕ್ಕಲ್​ ಜಿಲ್ಲೆಯ ಕುಮಾರಪಾಲ್ಯಂನಲ್ಲಿ ಕಾರು ಮತ್ತು ದ್ವಿಚಕ್ರಕ್ಕೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ.

ಕಂಟೈನರ್​ ಟ್ರಕ್​ ಅನ್ನು ಬೆನ್ನುಹತ್ತಿದ್ದ ಪೊಲೀಸರು, ಚಾಲಕನಿಗೆ ವಾಹನ ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ, ಆತ ವಾಹನ ಸಲ್ಲಿಸಲು ನಿರಾಕರಿಸಿದ್ದು, ಮತ್ತಷ್ಟು ವೇಗದ ಚಾಲನೆಗೆ ಮುಂದಾಗಿದ್ದಾನೆ. ಕಡೆಗೆ ಪೊಲೀಸರು ಫೈರಿಂಗ್​ ನಡೆಸಿದ್ದು, ಕಂಟೈನರ್​ ಟ್ರಕ್​ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಆರೋಪಿ ಸಾವನ್ನಪ್ಪಿದ್ದು, ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಕಂಟೈನರರ್​ ಟ್ರಕ್​ನಲ್ಲಿದ್ದ ಕಾರ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಗ್ಯಾಂಗ್​ ತ್ರಿಶ್ಯೂರು​ ಎಟಿಎಂ ದರೋಡೆಯಲ್ಲಿ ಭಾಗಿಯಾಗಿದೆಯಾ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 'ಗೋದ್ರಾ ರೈಲು ದಹನ ಕೇಸ್​ ಮತ್ತೆ ಮುಂದೂಡಲ್ಲ': 2025 ರ ಜನವರಿ 15ಕ್ಕೆ ದಿನ ನಿಗದಿ ಮಾಡಿದ ಸುಪ್ರೀಂಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.