ETV Bharat / bharat

ಸಿಆರ್​ಪಿಸಿ ಸೆಕ್ಷನ್​ 125ರ ಅಡಿ ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು: ಸುಪ್ರೀಂಕೋರ್ಟ್​ - muslim woman alimony

ಪತಿಯಿಂದ ಪರಿತ್ಯಕ್ತ ಮುಸ್ಲಿಂ ಮಹಿಳೆಯು ಸಿಆರ್‌ಪಿಸಿ ಸೆಕ್ಷನ್ 125 ರ ಅಡಿ ಜೀವನಾಂಶ ಪಡೆದುಕೊಳ್ಳಲು ಅರ್ಹಳೇ ಇಲ್ಲವೇ? ಎಂಬುದರ ಬಗ್ಗೆ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ವಿವರ ಮುಂದಿದೆ.

author img

By ETV Bharat Karnataka Team

Published : Jul 10, 2024, 4:27 PM IST

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​ (ETV Bharat)

ನವದೆಹಲಿ: ವಿಚ್ಚೇದಿತ ಪತ್ನಿಗೆ, ಪತಿಯಿಂದ ಸಿಗುವ ಪರಿಹಾರದ ಬಗ್ಗೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಜಾತಿ, ಧರ್ಮ ಎನ್ನದೇ ಎಲ್ಲ ಮಹಿಳೆಯರೂ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಬುಧವಾರ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಇದಕ್ಕೆ ವರ್ಧಿಸುವುದಿಲ್ಲ ಎಂದು ಹೇಳಿದೆ.

ಮುಸ್ಲಿಂ ಕಾನೂನಿನ ಪ್ರಕಾರ, ಆ ಮತದ ಮಹಿಳೆಯರು ಪರಿತ್ಯಕ್ತ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂಬ ನಿಯಮವು ಸೆಕ್ಷನ್​​ 125 ರ ವಿರುದ್ಧವಾಗಿದೆ. ಜೀವನಾಂಶ ಪಡೆಯುವುದು ಮಹಿಳೆಯರ ಹಕ್ಕಾಗಿದೆ. ಸಾಮಾನ್ಯ ಕಾನೂನಿನ ಪ್ರಕಾರ ಮುಸ್ಲಿಂ ಮಹಿಳೆಯೂ ಇದಕ್ಕೆ ಅರ್ಹಳು ಎಂದು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಹೇಳಿದೆ. ಇಬ್ಬರೂ ಜಡ್ಜ್​ಗಳು ಪ್ರತ್ಯೇಕವಾಗಿ ತೀರ್ಪು ನೀಡಿದ್ದರೂ, ಏಕಮತವಾದ ಆದೇಶ ಬಂದಿದೆ.

ಪ್ರಕರಣ ಹಿನ್ನೆಲೆ: ತೆಲಂಗಾಣಕ್ಕೆ ಸೇರಿದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 10 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶವನ್ನು ಪಾವತಿಸಲು ಸೂಚಿಸಿದ್ದ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ಕೋರ್ಟ್​, ತೆಲಂಗಾಣ ಹೈಕೋರ್ಟ್​ ಆದೇಶವನ್ನು ಎತ್ತಿಹಿಡಿಯಿತು.

ಅರ್ಜಿದಾರ ಸಲ್ಲಿಸಿದ ಮೇಲ್ಮನವಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯು ಸಿಆರ್​ಪಿಸಿಯ ಸೆಕ್ಷನ್ 125 ರ ಅಡಿ ಜೀವನಾಂಶ ಕೋರಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986 ಪ್ರಕಾರ, ಮುಸ್ಲಿಂ ಮಹಿಳೆಗೆ ಈ ಹಕ್ಕಿಲ್ಲ ಎಂದು ವಾದಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿ, ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986, ಸಿಆರ್‌ಪಿಸಿಯ ಸೆಕ್ಷನ್ 125 ಕ್ಕಿಂತಲೂ ಉತ್ತಮವಾಗಿದೆ. ಅದರ ಪ್ರಕಾರ ಅವರು ಜೀವನಾಂಶ ಕೋರಬಹುದು. ಸಿಆರ್​ಪಿಸಿ ನಿಯಮಗಳು ಮುಸ್ಲಿಂ ಮಹಿಳೆಗೆ ವರ್ಧಿಸುವುದಿಲ್ಲ ಎಂದಿದ್ದರು.

ಕೋರ್ಟ್​ ಹೇಳಿದ್ದೇನು?: 1985 ರಲ್ಲಿ ಶಾ ಬಾನೋ ತೀರ್ಪಿನ ನಂತರ ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ ಬದಲಿಸಲಾಗಿದೆ. ವಿಚ್ಛೇದನದ ನಂತರ ಪತಿಯಿಂದ ಮುಸ್ಲಿಂ ಮಹಿಳೆ ಸೇರಿದಂತೆ ಎಲ್ಲ ಮಹಿಳೆಯರೂ ಜೀವನಾಂಶವನ್ನು ಸಿಆರ್​ಪಿಸಿ ಅಡಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಹೀಗಾಗಿ ಮೇಲ್ಮನವಿ ವಜಾ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ - Bhavani Revanna

ನವದೆಹಲಿ: ವಿಚ್ಚೇದಿತ ಪತ್ನಿಗೆ, ಪತಿಯಿಂದ ಸಿಗುವ ಪರಿಹಾರದ ಬಗ್ಗೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಜಾತಿ, ಧರ್ಮ ಎನ್ನದೇ ಎಲ್ಲ ಮಹಿಳೆಯರೂ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಬುಧವಾರ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಇದಕ್ಕೆ ವರ್ಧಿಸುವುದಿಲ್ಲ ಎಂದು ಹೇಳಿದೆ.

ಮುಸ್ಲಿಂ ಕಾನೂನಿನ ಪ್ರಕಾರ, ಆ ಮತದ ಮಹಿಳೆಯರು ಪರಿತ್ಯಕ್ತ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂಬ ನಿಯಮವು ಸೆಕ್ಷನ್​​ 125 ರ ವಿರುದ್ಧವಾಗಿದೆ. ಜೀವನಾಂಶ ಪಡೆಯುವುದು ಮಹಿಳೆಯರ ಹಕ್ಕಾಗಿದೆ. ಸಾಮಾನ್ಯ ಕಾನೂನಿನ ಪ್ರಕಾರ ಮುಸ್ಲಿಂ ಮಹಿಳೆಯೂ ಇದಕ್ಕೆ ಅರ್ಹಳು ಎಂದು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಹೇಳಿದೆ. ಇಬ್ಬರೂ ಜಡ್ಜ್​ಗಳು ಪ್ರತ್ಯೇಕವಾಗಿ ತೀರ್ಪು ನೀಡಿದ್ದರೂ, ಏಕಮತವಾದ ಆದೇಶ ಬಂದಿದೆ.

ಪ್ರಕರಣ ಹಿನ್ನೆಲೆ: ತೆಲಂಗಾಣಕ್ಕೆ ಸೇರಿದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 10 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶವನ್ನು ಪಾವತಿಸಲು ಸೂಚಿಸಿದ್ದ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ಕೋರ್ಟ್​, ತೆಲಂಗಾಣ ಹೈಕೋರ್ಟ್​ ಆದೇಶವನ್ನು ಎತ್ತಿಹಿಡಿಯಿತು.

ಅರ್ಜಿದಾರ ಸಲ್ಲಿಸಿದ ಮೇಲ್ಮನವಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯು ಸಿಆರ್​ಪಿಸಿಯ ಸೆಕ್ಷನ್ 125 ರ ಅಡಿ ಜೀವನಾಂಶ ಕೋರಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986 ಪ್ರಕಾರ, ಮುಸ್ಲಿಂ ಮಹಿಳೆಗೆ ಈ ಹಕ್ಕಿಲ್ಲ ಎಂದು ವಾದಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿ, ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986, ಸಿಆರ್‌ಪಿಸಿಯ ಸೆಕ್ಷನ್ 125 ಕ್ಕಿಂತಲೂ ಉತ್ತಮವಾಗಿದೆ. ಅದರ ಪ್ರಕಾರ ಅವರು ಜೀವನಾಂಶ ಕೋರಬಹುದು. ಸಿಆರ್​ಪಿಸಿ ನಿಯಮಗಳು ಮುಸ್ಲಿಂ ಮಹಿಳೆಗೆ ವರ್ಧಿಸುವುದಿಲ್ಲ ಎಂದಿದ್ದರು.

ಕೋರ್ಟ್​ ಹೇಳಿದ್ದೇನು?: 1985 ರಲ್ಲಿ ಶಾ ಬಾನೋ ತೀರ್ಪಿನ ನಂತರ ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ ಬದಲಿಸಲಾಗಿದೆ. ವಿಚ್ಛೇದನದ ನಂತರ ಪತಿಯಿಂದ ಮುಸ್ಲಿಂ ಮಹಿಳೆ ಸೇರಿದಂತೆ ಎಲ್ಲ ಮಹಿಳೆಯರೂ ಜೀವನಾಂಶವನ್ನು ಸಿಆರ್​ಪಿಸಿ ಅಡಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಹೀಗಾಗಿ ಮೇಲ್ಮನವಿ ವಜಾ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ - Bhavani Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.