ETV Bharat / bharat

ಕುರಿ ವಿತರಣೆ ಯೋಜನೆ ಹೆಸರಲ್ಲಿ 700 ಕೋಟಿ ರೂ ಹಗರಣ: ತನಿಖೆ ತೀವ್ರಗೊಳಿಸಿದ ಎಸಿಬಿ - sheep scheme scam

author img

By ETV Bharat Karnataka Team

Published : Jun 6, 2024, 12:19 PM IST

ತೆಲಂಗಾಣದಲ್ಲಿ ಕುರಿ ವಿತರಣೆ ಯೋಜನೆಯಲ್ಲಿ 700 ಕೋಟಿ ರೂ ಹಗರಣ ನಡೆದಿದೆ ಎಂದು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಕುರಿ ವಿತರಣೆ ಯೋಜನೆ ಹಗರಣ
ಕುರಿ ವಿತರಣೆ ಯೋಜನೆ ಹಗರಣ (ETV Bharat)

ಹೈದರಾಬಾದ್​: ತೆಲಂಗಾಣದಲ್ಲಿ ನಡೆದಿದೆ ಎನ್ನಲಾದ ಕುರಿ ವಿತರಣೆ ಯೋಜನೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 700 ಕೋಟಿ ರೂ ಹಗರಣ ನಡೆದಿದೆ ಎಂದು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

ಸರ್ಕಾರದ ಯೋಜನೆಯಡಿ ನಡೆದಿರುವ ಈ ಹಗರಣದ ಹಿಂದೆ ಪ್ರಬಲ ನಾಯಕರ ಕೈವಾಡವಿದೆ ಎಂದೂ ಶಂಕಿಸಲಾಗಿದೆ. ಈ ಯೋಜನೆಗೆ ಅನಧಿಕೃತ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯೊಂದರ ವ್ಯವಸ್ಥಾಪಕ ಮೊಹಿದುದ್ದೀನ್, ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದು, ಆತನನ್ನು ವಾಪಸ್ ಕರೆತರಲು ಲುಕೌಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಮೊಹಿದುದ್ದಿನ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮಹತ್ವದ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ ಎಂದು ಎಸಿಬಿ ತಿಳಿಸಿದೆ.

ಬಂಧಿತ ಆರೋಪಿಗಳು ಮತ್ತು ಮೊಹಿದುದ್ದೀನ್ ಅವರ ಬ್ಯಾಂಕ್ ವಹಿವಾಟಿನ ಮೇಲೆ ಎಸಿಬಿ ಗಮನ ಹರಿಸಿದ್ದು, ಹಗರಣದ ಹಣವನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಮರೆಡ್ಡಿ ಪ್ರಾದೇಶಿಕ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ರವಿ, ಮೇಡ್ಚಲ್ ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಆದಿತ್ಯ ಕೇಶವಸಾಯಿ, ರಂಗಾರೆಡ್ಡಿ ಜಿಲ್ಲಾ ಅಂತರ್ಜಲ ಅಧಿಕಾರಿ ಪಸುಲ ರಘುಪತಿ ರೆಡ್ಡಿ, ಪ್ರೌಢ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಂಗು ಗಣೇಶ್, ಪಶುಸಂಗೋಪನಾ ಜಂಟಿ ನಿರ್ದೇಶಕ ಡಾ.ಅಂಜಿಲಪ್ಪ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಯ್ಯ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ರಾಜ್ಯ ಕುರಿ ಮತ್ತು ಮೇಕೆ ಅಭಿವೃದ್ಧಿ ಸಂಘದ ಎಂಡಿಯಾಗಿ ಕೆಲಸ ಮಾಡಿದ್ದ ರಾಮಚಂದರ್ ನಾಯ್ಕ್ ಹಾಗೂ ಮಾಜಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕಲ್ಯಾಣ್ ಅವರನ್ನು ಇತ್ತೀಚೆಗೆ ಅಧಿಕಾರಿಗಳು ಬಂಧಿಸಿದ್ದಾರೆ.

ಸದ್ಯ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಮೊಹಿದುದ್ದಿನ್​ನನ್ನು ಭಾರತಕ್ಕೆ ಕರೆತರಲು ಕಸರತ್ತು ನಡೆಸಿದೆ.

ಇದನ್ನೂ ಓದಿ: ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ: ಸಿಬಿಐನಿಂದ ಎಫ್ಐಆರ್ ದಾಖಲು - Valmiki Corporation case

ಹೈದರಾಬಾದ್​: ತೆಲಂಗಾಣದಲ್ಲಿ ನಡೆದಿದೆ ಎನ್ನಲಾದ ಕುರಿ ವಿತರಣೆ ಯೋಜನೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 700 ಕೋಟಿ ರೂ ಹಗರಣ ನಡೆದಿದೆ ಎಂದು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

ಸರ್ಕಾರದ ಯೋಜನೆಯಡಿ ನಡೆದಿರುವ ಈ ಹಗರಣದ ಹಿಂದೆ ಪ್ರಬಲ ನಾಯಕರ ಕೈವಾಡವಿದೆ ಎಂದೂ ಶಂಕಿಸಲಾಗಿದೆ. ಈ ಯೋಜನೆಗೆ ಅನಧಿಕೃತ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯೊಂದರ ವ್ಯವಸ್ಥಾಪಕ ಮೊಹಿದುದ್ದೀನ್, ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದು, ಆತನನ್ನು ವಾಪಸ್ ಕರೆತರಲು ಲುಕೌಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಮೊಹಿದುದ್ದಿನ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮಹತ್ವದ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ ಎಂದು ಎಸಿಬಿ ತಿಳಿಸಿದೆ.

ಬಂಧಿತ ಆರೋಪಿಗಳು ಮತ್ತು ಮೊಹಿದುದ್ದೀನ್ ಅವರ ಬ್ಯಾಂಕ್ ವಹಿವಾಟಿನ ಮೇಲೆ ಎಸಿಬಿ ಗಮನ ಹರಿಸಿದ್ದು, ಹಗರಣದ ಹಣವನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಮರೆಡ್ಡಿ ಪ್ರಾದೇಶಿಕ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ರವಿ, ಮೇಡ್ಚಲ್ ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಆದಿತ್ಯ ಕೇಶವಸಾಯಿ, ರಂಗಾರೆಡ್ಡಿ ಜಿಲ್ಲಾ ಅಂತರ್ಜಲ ಅಧಿಕಾರಿ ಪಸುಲ ರಘುಪತಿ ರೆಡ್ಡಿ, ಪ್ರೌಢ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಂಗು ಗಣೇಶ್, ಪಶುಸಂಗೋಪನಾ ಜಂಟಿ ನಿರ್ದೇಶಕ ಡಾ.ಅಂಜಿಲಪ್ಪ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಯ್ಯ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ರಾಜ್ಯ ಕುರಿ ಮತ್ತು ಮೇಕೆ ಅಭಿವೃದ್ಧಿ ಸಂಘದ ಎಂಡಿಯಾಗಿ ಕೆಲಸ ಮಾಡಿದ್ದ ರಾಮಚಂದರ್ ನಾಯ್ಕ್ ಹಾಗೂ ಮಾಜಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕಲ್ಯಾಣ್ ಅವರನ್ನು ಇತ್ತೀಚೆಗೆ ಅಧಿಕಾರಿಗಳು ಬಂಧಿಸಿದ್ದಾರೆ.

ಸದ್ಯ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಮೊಹಿದುದ್ದಿನ್​ನನ್ನು ಭಾರತಕ್ಕೆ ಕರೆತರಲು ಕಸರತ್ತು ನಡೆಸಿದೆ.

ಇದನ್ನೂ ಓದಿ: ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ: ಸಿಬಿಐನಿಂದ ಎಫ್ಐಆರ್ ದಾಖಲು - Valmiki Corporation case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.