ETV Bharat / bharat

ಏಕಕಾಲದಲ್ಲಿ ನಾಲ್ಕು ಸರ್ಕಾರಿ ಉದ್ಯೋಗ: ಕಷ್ಟದಲ್ಲೂ ಅರಿಳಿದ ಪ್ರತಿಭೆ ಸಾಯಿಶಿಲ್ಪಿ - Inspiring Journey for youth

author img

By ETV Bharat Karnataka Team

Published : Jul 13, 2024, 1:10 PM IST

ಕನಸಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಅವುಗಳನ್ನು ಮೆಟ್ಟಿನಿಂತು ಸಾಧನೆ ಮಾಡುವ ಹಂಬಲ ಇರುತ್ತದೆ. ಅಂತಹ ಪ್ರಯಾಣ ಸಾಯಿಶಿಲ್ಪಿ ಅವರದ್ದು.

Saishilpi's Inspiring Journey: From Challenges to Four Government Jobs at a Time
ಸಾಯಿಶಿಲ್ಪಿ (ಈಟಿವಿ ಭಾರತ್​​)

ಹೈದರಾಬಾದ್​: ಅನೇಕ ಬಾರಿ ಕಷ್ಟ ಬಂದಾಗ, ಬದುಕು ಸವಾಲಾದಾಗ ಕೈ ಚೆಲ್ಲುತ್ತೇವೆ. ಅಯ್ಯೋ ನಮಗೆ ಉತ್ತಮ ಅವಕಾಶ ಇಲ್ಲ ಎಂದು ಹಲುಬುತ್ತೇವೆ. ಆದರೆ, ಇದೆಲ್ಲವನ್ನು ಮೆಟ್ಟಿನಿಂತಾಗ ಮಾತ್ರ ಅದರ ಯಶಸ್ಸು ಕಾಣಬಹುದು. ಅನೇಕ ಬಾರಿ ಇಂತಹ ದಿಟ್ಟ ಮನಸ್ಸಿನ ಹೋರಾಟಗಾರರು ನಮಗೆ ಸ್ಪೂರ್ತಿಯಾಗುತ್ತಾರೆ. ಅಂತಹವರಲ್ಲಿ ಒಬ್ಬರು ಸಾಯಿ ಶಿಲ್ಪಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರಿಗೆ ಓದಿನಲ್ಲಿ ಅದಮ್ಯ ಆಸಕ್ತಿ. ಇದರಿಂದಲೇ ಉಸ್ಮಾನಿಯಾ ಯುನಿವರ್ಸಿಟಿ ಕಾಲೇಜಿನಿಂದ ಇಂಗ್ಲಿಷ್​ನಲ್ಲಿ ಎಂಎ ಪದವಿಯನ್ನು ಪಡೆದರು.

ಓದಿನಲ್ಲಿ ಮುಂದಿದ್ದರೂ ಸಾಯಿಶಿಲ್ಪಿಗೆ ಆರ್ಥಿಕ ಪರಿಸ್ಥಿತಿಗಳಿಂದ ಅನೇಕ ತೊಡಕುಗಳನ್ನು ಎದುರಿಸುವಂತೆ ಆಯಿತು. ಇದೇ ಕಾರಣಕ್ಕೆ ಮನೆ ಮತ್ತು ಓದಿಗೆ ಸಹಾಯಕವಾಗಲಿದೆ ಎಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ನಾಗರಿಕ ಸೇವೆ ವೃತ್ತಿ ಜೀವನದ ಮೇಲೆ ಕಣ್ಣಿಟ್ಟ ಅವರು ಇದರ ಜೊತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಮುಂದಾದರು.

ಸಾಯಿಶಿಲ್ಪಿ ಅವರ ಶ್ರದ್ಧೆ ಮತ್ತು ಕಠಿಣ ಶ್ರಮಕ್ಕೆ ಕೊನೆಗೂ ಅದ್ಬುತ ಫಲ ಸಿಕ್ಕಿದೆ. ಒಂದು ಕೆಲಸಕ್ಕೆ ಗುರಿಯಿಟ್ಟ ಸಾಯಿಶಿಲ್ಪಿ ಒಟ್ಟೊಟ್ಟಿಗೆ ನಾಲ್ಕು ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸ ಪಡೆದಿದ್ದಾರೆ. ಆರ್ಮಿ ಪಬ್ಲಿಕ್​ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕಿ ಪರೀಕ್ಷೆಯಲ್ಲಿ ಟಾಪ್​ ರ್ಯಾಂಕ್​ ಪಡೆದಿದ್ದಾರೆ. ಜೊತೆಗೆ ರಾಜ್ಯದ ಜೂನಿಯರ್​ ಲೆಕ್ಚರ್​ ಹುದ್ದೆಗೂ ಆಯ್ಕೆಯಾಗಿದ್ದಾರೆ.

ಆಕೆಯ ಯಶಸ್ಸಿನ ಕಥೆಯು ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಆಕೆಯ ತಂದೆ ವೆಂಕಟೇಶ್ವರ ಶರ್ಮಾ ಮತ್ತು ಕುಟುಂಬದ ಬೆಂಬಲವಿದ್ದು, ಆಕೆಯ ಸಾಧನೆಗೆ ಕುಟುಂಬಕ್ಕೆ ಗರ್ವ ಮತ್ತು ಹೆಮ್ಮೆ ಇದೆ. ಮನೋಬಲ ದೃಢತೆ ಮತ್ತು ಅಚಲತೆಯ ಸಾಧನೆಗೆ ಸಾಯಿಶಿಲ್ಪ ಅವರ ಈ ಪ್ರಯಾಣವು ಸಾಕ್ಷಿಯಾಗಿದೆ. ಅಲ್ಲದೇ ಇದೇ ರೀತಿ ಸಂಕಷ್ಟ ಎದುರಿಸುತ್ತಿರುವ ಹಲವು ಕನಸುಗಳನ್ನು ಹೊತ್ತ ಅನೇಕರಿಗೆ ಇದು ಪ್ರೇರಣೆಯಾಗುತ್ತದೆ.

ಕೇವಲ ಈ ಯಶಸ್ಸಿಗೆ ಸೀಮಿತವಾಗದೇ ಸಾಯಿಶಿಲ್ಪಿ ನಾಗರಿಕ ಸೇವೆ ಪರೀಕ್ಷೆ ಸಿದ್ಧತೆ ಮುಂದುವರಿಸುವ ಆಕಾಂಕ್ಷೆ ಹೊಂದಿದ್ದು, ಅದನ್ನು ಸಾಧಿಸುವ ಹುಮ್ಮಸ್ಸು ಇರುವುದಾಗಿ ತಿಳಿಸಿದ್ದಾರೆ. ದೃಢವಾದ ಅಚಲ ಮನೋಭವ ಜೊತೆಗೆ ಪರಿಶ್ರಮವು ಯಾವುದೇ ಸಾಧನೆಗೂ ಪ್ರೇರೇಪಿಸುತ್ತದೆ. ಇದು ಯಶಸ್ಸಿನ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇದರ ಜೊತೆಗೆ ಕುಟುಂಬದ ಬೆಂಬಲವೂ ಮುಖ್ಯವಾಗಿದೆ ಎನ್ನುತ್ತಾರೆ ಸಾಯಿಶಿಲ್ಪಿ.

ಇದನ್ನೂ ಓದಿ: ಏಕಕಾಲಕ್ಕೆ ನಾಲ್ಕು ಸರ್ಕಾರಿ ಉದ್ಯೋಗ ಪಡೆದ ಗೃಹಿಣಿ, ಯುವತಿ: ಹಲವರಿಗೆ ಸ್ಪೂರ್ತಿ

ಹೈದರಾಬಾದ್​: ಅನೇಕ ಬಾರಿ ಕಷ್ಟ ಬಂದಾಗ, ಬದುಕು ಸವಾಲಾದಾಗ ಕೈ ಚೆಲ್ಲುತ್ತೇವೆ. ಅಯ್ಯೋ ನಮಗೆ ಉತ್ತಮ ಅವಕಾಶ ಇಲ್ಲ ಎಂದು ಹಲುಬುತ್ತೇವೆ. ಆದರೆ, ಇದೆಲ್ಲವನ್ನು ಮೆಟ್ಟಿನಿಂತಾಗ ಮಾತ್ರ ಅದರ ಯಶಸ್ಸು ಕಾಣಬಹುದು. ಅನೇಕ ಬಾರಿ ಇಂತಹ ದಿಟ್ಟ ಮನಸ್ಸಿನ ಹೋರಾಟಗಾರರು ನಮಗೆ ಸ್ಪೂರ್ತಿಯಾಗುತ್ತಾರೆ. ಅಂತಹವರಲ್ಲಿ ಒಬ್ಬರು ಸಾಯಿ ಶಿಲ್ಪಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರಿಗೆ ಓದಿನಲ್ಲಿ ಅದಮ್ಯ ಆಸಕ್ತಿ. ಇದರಿಂದಲೇ ಉಸ್ಮಾನಿಯಾ ಯುನಿವರ್ಸಿಟಿ ಕಾಲೇಜಿನಿಂದ ಇಂಗ್ಲಿಷ್​ನಲ್ಲಿ ಎಂಎ ಪದವಿಯನ್ನು ಪಡೆದರು.

ಓದಿನಲ್ಲಿ ಮುಂದಿದ್ದರೂ ಸಾಯಿಶಿಲ್ಪಿಗೆ ಆರ್ಥಿಕ ಪರಿಸ್ಥಿತಿಗಳಿಂದ ಅನೇಕ ತೊಡಕುಗಳನ್ನು ಎದುರಿಸುವಂತೆ ಆಯಿತು. ಇದೇ ಕಾರಣಕ್ಕೆ ಮನೆ ಮತ್ತು ಓದಿಗೆ ಸಹಾಯಕವಾಗಲಿದೆ ಎಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ನಾಗರಿಕ ಸೇವೆ ವೃತ್ತಿ ಜೀವನದ ಮೇಲೆ ಕಣ್ಣಿಟ್ಟ ಅವರು ಇದರ ಜೊತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಮುಂದಾದರು.

ಸಾಯಿಶಿಲ್ಪಿ ಅವರ ಶ್ರದ್ಧೆ ಮತ್ತು ಕಠಿಣ ಶ್ರಮಕ್ಕೆ ಕೊನೆಗೂ ಅದ್ಬುತ ಫಲ ಸಿಕ್ಕಿದೆ. ಒಂದು ಕೆಲಸಕ್ಕೆ ಗುರಿಯಿಟ್ಟ ಸಾಯಿಶಿಲ್ಪಿ ಒಟ್ಟೊಟ್ಟಿಗೆ ನಾಲ್ಕು ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸ ಪಡೆದಿದ್ದಾರೆ. ಆರ್ಮಿ ಪಬ್ಲಿಕ್​ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕಿ ಪರೀಕ್ಷೆಯಲ್ಲಿ ಟಾಪ್​ ರ್ಯಾಂಕ್​ ಪಡೆದಿದ್ದಾರೆ. ಜೊತೆಗೆ ರಾಜ್ಯದ ಜೂನಿಯರ್​ ಲೆಕ್ಚರ್​ ಹುದ್ದೆಗೂ ಆಯ್ಕೆಯಾಗಿದ್ದಾರೆ.

ಆಕೆಯ ಯಶಸ್ಸಿನ ಕಥೆಯು ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಆಕೆಯ ತಂದೆ ವೆಂಕಟೇಶ್ವರ ಶರ್ಮಾ ಮತ್ತು ಕುಟುಂಬದ ಬೆಂಬಲವಿದ್ದು, ಆಕೆಯ ಸಾಧನೆಗೆ ಕುಟುಂಬಕ್ಕೆ ಗರ್ವ ಮತ್ತು ಹೆಮ್ಮೆ ಇದೆ. ಮನೋಬಲ ದೃಢತೆ ಮತ್ತು ಅಚಲತೆಯ ಸಾಧನೆಗೆ ಸಾಯಿಶಿಲ್ಪ ಅವರ ಈ ಪ್ರಯಾಣವು ಸಾಕ್ಷಿಯಾಗಿದೆ. ಅಲ್ಲದೇ ಇದೇ ರೀತಿ ಸಂಕಷ್ಟ ಎದುರಿಸುತ್ತಿರುವ ಹಲವು ಕನಸುಗಳನ್ನು ಹೊತ್ತ ಅನೇಕರಿಗೆ ಇದು ಪ್ರೇರಣೆಯಾಗುತ್ತದೆ.

ಕೇವಲ ಈ ಯಶಸ್ಸಿಗೆ ಸೀಮಿತವಾಗದೇ ಸಾಯಿಶಿಲ್ಪಿ ನಾಗರಿಕ ಸೇವೆ ಪರೀಕ್ಷೆ ಸಿದ್ಧತೆ ಮುಂದುವರಿಸುವ ಆಕಾಂಕ್ಷೆ ಹೊಂದಿದ್ದು, ಅದನ್ನು ಸಾಧಿಸುವ ಹುಮ್ಮಸ್ಸು ಇರುವುದಾಗಿ ತಿಳಿಸಿದ್ದಾರೆ. ದೃಢವಾದ ಅಚಲ ಮನೋಭವ ಜೊತೆಗೆ ಪರಿಶ್ರಮವು ಯಾವುದೇ ಸಾಧನೆಗೂ ಪ್ರೇರೇಪಿಸುತ್ತದೆ. ಇದು ಯಶಸ್ಸಿನ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇದರ ಜೊತೆಗೆ ಕುಟುಂಬದ ಬೆಂಬಲವೂ ಮುಖ್ಯವಾಗಿದೆ ಎನ್ನುತ್ತಾರೆ ಸಾಯಿಶಿಲ್ಪಿ.

ಇದನ್ನೂ ಓದಿ: ಏಕಕಾಲಕ್ಕೆ ನಾಲ್ಕು ಸರ್ಕಾರಿ ಉದ್ಯೋಗ ಪಡೆದ ಗೃಹಿಣಿ, ಯುವತಿ: ಹಲವರಿಗೆ ಸ್ಪೂರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.