ETV Bharat / bharat

ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಬಾಲಕಿಯರ ಶವ ಪತ್ತೆ: ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ, ಅಖಿಲೇಶ್​ ಕಿಡಿ - farrukhabad Dalit Girl death

author img

By ETV Bharat Karnataka Team

Published : Aug 29, 2024, 4:23 PM IST

ದಲಿತ ಬಾಲಕಿಯರಿಬ್ಬರ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯನ್ನು ಸಮಾಜವಾದಿ ಪಕ್ಷದ ನಾಯಕ ಅಖಲೇಶ್​ ಯಾದವ್​, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಖಂಡಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

rahul-gandhi-akhilesh-yadav-slam-up-govt-after-dalit-girls-bodies-found-hanging-from-tree
ರಾಹುಲ್​ ಗಾಂಧಿ, ಅಖಿಲೇಶ್​ (ಈಟಿವಿ ಭಾರತ್​​)

ಫರುಖಾಬಾದ್​: ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಟೀಕಿಸಿದ್ದಾರೆ. ಉತ್ತರ ಪ್ರದೇಶದ ಫತೇಗಢ್​ನಲ್ಲಿ ದಲಿತ ಬಾಲಕಿಯರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಖಂಡಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಘಟನೆ ಸಂಬಂಧ ಎಕ್ಸ್​ಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಖಿಲೇಶ್​ ಯಾದವ್​, 'ಘಟನೆ ಕುರಿತು ಯೋಗಿ ಸರ್ಕಾರ ಮೌನವಹಿಸಿದೆ. ಫರೂಖಾಬಾದ್​ನಲ್ಲಿ ಇಬ್ಬರು ದಲಿತ ಬಾಲಕಿಯರ ಅನುಮಾನಾಸ್ಪದ ಸಾವು ಕುರಿತು ಬಿಜೆಪಿ ಸರ್ಕಾರ ಮೌನವಹಿಸಿದೆ. ಇದಕ್ಕೆ ಎರಡು ಕಾರಣವಿರಬಹುದು. ಒಂದು ಬಿಜೆಪಿ ಮಹಿಳಾ ವಿರೋಧಿ ಆಲೋಚನೆ ಹಾಗೂ ವರ್ತನೆ ಮತ್ತು ಇನ್ನೊಂದು ಕಾರಣ ಮೃತರು ದಲಿತರಾಗಿರುವುದು. ಅಲ್ಲದೇ ಘಟನೆ ಕುರಿತು ಸಂತಾಪ ಮತ್ತು ಧ್ವನಿ ಎತ್ತಲು ಸಮಾಜವಾದಿ ಪಕ್ಷದಿಂದ ಅಲ್ಲಿಗೆ ನಿಯೋಗ ಕಳುಹಿಸುವುದಾಗಿ ತಿಳಿಸಿದ್ದಾರೆ.

ಇದೇ ಘಟನೆ ಕುರಿತು ರಾಹುಲ್​ ಗಾಂಧಿ ಕೂಡ ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. 'ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧವಾಗಿದೆ. ನ್ಯಾಯ ಆದ್ಯತೆ ಅಲ್ಲ ಎಂದು ಭಾವಿಸಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ದುರ್ಬಲ ಮತ್ತು ವಂಚಿತರ ವಿರುದ್ಧದ ಬಹುತೇಕ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಗಿ ಸರ್ಕಾರ ಪತನವಾಗುತ್ತಿದೆ. ಜನರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯಾವುದೆ ಆಶಾಭಾವನೆ ಉಳಿದಿಲ್ಲ. ಬಿಜೆಪಿ ಯಾವಾಗಲೇ ಮಹಿಳೆಯರ ವಿಷಯಕ್ಕೆ ದನಿಯಾದರೆ ಅಲ್ಲಿ ಕೇವಲ ರಾಜಕೀಯವಿರುತ್ತದೆ. ಇದೇ ಕಾರಣಕ್ಕೆ ಬಿಜೆಪಿ ವಿರೋಧಿ ರಾಜ್ಯದಲ್ಲಿ ಮಾತ್ರ ಬಿಜೆಪಿ ಮಹಿಳಾ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ. ಆದರೆ, ಬಿಜೆಪಿ ಆಡಳಿತ ರಾಜ್ಯದಲ್ಲಿ ಅದು ಬಾಯಿ, ಕಣ್ಣು , ಕಿವಿ ಹಾಗೂ ಪ್ರಕರಣದ ಎಲ್ಲಾ ನೈತಿಕತೆಯನ್ನು ಬಂದ್​ ಮಾಡುತ್ತದೆ ಎಂದು ಅಖಿಲೇಶ್​ ಯಾದವ್​ ಪೋಸ್ಟ್​ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಕೂಡ ಭಾರತದ ಎಲ್ಲಾ ಮಗಳಿಗೆ ಸುರಕ್ಷತೆ ಹಕ್ಕು ನೀಡಬೇಕಿದ್ದು, ಎಲ್ಲಾ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ನೀಡುವುದು ಹಕ್ಕಾಗಿದೆ. ಆಡಳಿತ ಯಾಕೆ ಹರಿಬಿರಿಯಲ್ಲಿ ಬಾಲಕಿಯರ ಅಂತ್ಯಕ್ರಿಯೆ ನಡೆಸಿತು ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿನ ದಲಿತರ ಸ್ಥಿತಿ ಕುರಿತು ಮಾತನಾಡಿರುವ ಪ್ರಿಯಾಂಕಾಮ ಉನ್ನಾವೋ ಅಥವಾ ಫಾರುಖಾಬಾದ್​, ಹತ್ರಾಸ್​ ಎಲ್ಲಾದರಲ್ಲೂ ಅದೇ ಕ್ರೂರ ಘಟನೆಗಳು ಮರುಗಳಿಸಿವೆ. ದಲಿತರು, ಹಿಂದುಳಿದ ವರ್ಗದವರು, ವಂಚಿತರು, ಬಡವರು, ಹೆಣ್ಣುಮಕ್ಕಳು ಅಥವಾ ಯಾರೇ ದುರ್ಬಲರು ಇದೀಗ ನ್ಯಾಯದ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಘಟನೆ ಸಂಬಂಧ ಆಮ್​ ಆದ್ಮಿ ಪಕ್ಷ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಏನಿದು ಘಟನೆ: ಮಂಗಳವಾರ ಬೆಳಗ್ಗೆ ಆಗಸ್ಟ್ 27ರಂದು 15 ಮತ್ತು 18 ವರ್ಷದ ಇಬ್ಬರು ದಲಿತ ಬಾಲಕಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮರದಲ್ಲಿ ಪತ್ತೆಯಾಗಿದ್ದರು. ಕಯಂಗಂಜ್​ನ ಮಾವಿನ ತೋಪಿನಲ್ಲಿ ಈ ಬಾಲಕಿಯರ ಶವಗಳು ಪತ್ತೆಯಾಗಿದ್ದರು ಎಂದು ಫಾರುಖಾಬಾದ್​ ಎಸ್​ಪಿ ಅಲೋಕ್​ ಪ್ರಿಯದರ್ಶಿನಿ ತಿಳಿಸಿದ್ದರು. ತಮ್ಮ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕಿಯರ ತಂದೆ ಆರೋಪಿಸಿದ್ದರು. ಆದರೆ, ಪೊಲೀಸರು ಪ್ರಾಥಮಿಕ ಹಂತದಲ್ಲಿ ಇದು ಆತ್ಮಹತ್ಯೆಯಂತೆ ಕಂಡಿದ್ದು, ತನಿಖೆ ನಡೆಸಲಾಗುವುದು ಎಂದಿದ್ದರು.

ಇದನ್ನೂ ಓದಿ: ಭಾರಿ ಮಳೆಗೆ ನಲುಗಿದ ಗುಜರಾತ್​: ಇದುವೆರೆಗೆ 28 ಜನರು ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ

ಫರುಖಾಬಾದ್​: ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಟೀಕಿಸಿದ್ದಾರೆ. ಉತ್ತರ ಪ್ರದೇಶದ ಫತೇಗಢ್​ನಲ್ಲಿ ದಲಿತ ಬಾಲಕಿಯರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಖಂಡಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಘಟನೆ ಸಂಬಂಧ ಎಕ್ಸ್​ಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಖಿಲೇಶ್​ ಯಾದವ್​, 'ಘಟನೆ ಕುರಿತು ಯೋಗಿ ಸರ್ಕಾರ ಮೌನವಹಿಸಿದೆ. ಫರೂಖಾಬಾದ್​ನಲ್ಲಿ ಇಬ್ಬರು ದಲಿತ ಬಾಲಕಿಯರ ಅನುಮಾನಾಸ್ಪದ ಸಾವು ಕುರಿತು ಬಿಜೆಪಿ ಸರ್ಕಾರ ಮೌನವಹಿಸಿದೆ. ಇದಕ್ಕೆ ಎರಡು ಕಾರಣವಿರಬಹುದು. ಒಂದು ಬಿಜೆಪಿ ಮಹಿಳಾ ವಿರೋಧಿ ಆಲೋಚನೆ ಹಾಗೂ ವರ್ತನೆ ಮತ್ತು ಇನ್ನೊಂದು ಕಾರಣ ಮೃತರು ದಲಿತರಾಗಿರುವುದು. ಅಲ್ಲದೇ ಘಟನೆ ಕುರಿತು ಸಂತಾಪ ಮತ್ತು ಧ್ವನಿ ಎತ್ತಲು ಸಮಾಜವಾದಿ ಪಕ್ಷದಿಂದ ಅಲ್ಲಿಗೆ ನಿಯೋಗ ಕಳುಹಿಸುವುದಾಗಿ ತಿಳಿಸಿದ್ದಾರೆ.

ಇದೇ ಘಟನೆ ಕುರಿತು ರಾಹುಲ್​ ಗಾಂಧಿ ಕೂಡ ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. 'ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧವಾಗಿದೆ. ನ್ಯಾಯ ಆದ್ಯತೆ ಅಲ್ಲ ಎಂದು ಭಾವಿಸಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ದುರ್ಬಲ ಮತ್ತು ವಂಚಿತರ ವಿರುದ್ಧದ ಬಹುತೇಕ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಗಿ ಸರ್ಕಾರ ಪತನವಾಗುತ್ತಿದೆ. ಜನರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯಾವುದೆ ಆಶಾಭಾವನೆ ಉಳಿದಿಲ್ಲ. ಬಿಜೆಪಿ ಯಾವಾಗಲೇ ಮಹಿಳೆಯರ ವಿಷಯಕ್ಕೆ ದನಿಯಾದರೆ ಅಲ್ಲಿ ಕೇವಲ ರಾಜಕೀಯವಿರುತ್ತದೆ. ಇದೇ ಕಾರಣಕ್ಕೆ ಬಿಜೆಪಿ ವಿರೋಧಿ ರಾಜ್ಯದಲ್ಲಿ ಮಾತ್ರ ಬಿಜೆಪಿ ಮಹಿಳಾ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ. ಆದರೆ, ಬಿಜೆಪಿ ಆಡಳಿತ ರಾಜ್ಯದಲ್ಲಿ ಅದು ಬಾಯಿ, ಕಣ್ಣು , ಕಿವಿ ಹಾಗೂ ಪ್ರಕರಣದ ಎಲ್ಲಾ ನೈತಿಕತೆಯನ್ನು ಬಂದ್​ ಮಾಡುತ್ತದೆ ಎಂದು ಅಖಿಲೇಶ್​ ಯಾದವ್​ ಪೋಸ್ಟ್​ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಕೂಡ ಭಾರತದ ಎಲ್ಲಾ ಮಗಳಿಗೆ ಸುರಕ್ಷತೆ ಹಕ್ಕು ನೀಡಬೇಕಿದ್ದು, ಎಲ್ಲಾ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ನೀಡುವುದು ಹಕ್ಕಾಗಿದೆ. ಆಡಳಿತ ಯಾಕೆ ಹರಿಬಿರಿಯಲ್ಲಿ ಬಾಲಕಿಯರ ಅಂತ್ಯಕ್ರಿಯೆ ನಡೆಸಿತು ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿನ ದಲಿತರ ಸ್ಥಿತಿ ಕುರಿತು ಮಾತನಾಡಿರುವ ಪ್ರಿಯಾಂಕಾಮ ಉನ್ನಾವೋ ಅಥವಾ ಫಾರುಖಾಬಾದ್​, ಹತ್ರಾಸ್​ ಎಲ್ಲಾದರಲ್ಲೂ ಅದೇ ಕ್ರೂರ ಘಟನೆಗಳು ಮರುಗಳಿಸಿವೆ. ದಲಿತರು, ಹಿಂದುಳಿದ ವರ್ಗದವರು, ವಂಚಿತರು, ಬಡವರು, ಹೆಣ್ಣುಮಕ್ಕಳು ಅಥವಾ ಯಾರೇ ದುರ್ಬಲರು ಇದೀಗ ನ್ಯಾಯದ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಘಟನೆ ಸಂಬಂಧ ಆಮ್​ ಆದ್ಮಿ ಪಕ್ಷ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಏನಿದು ಘಟನೆ: ಮಂಗಳವಾರ ಬೆಳಗ್ಗೆ ಆಗಸ್ಟ್ 27ರಂದು 15 ಮತ್ತು 18 ವರ್ಷದ ಇಬ್ಬರು ದಲಿತ ಬಾಲಕಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮರದಲ್ಲಿ ಪತ್ತೆಯಾಗಿದ್ದರು. ಕಯಂಗಂಜ್​ನ ಮಾವಿನ ತೋಪಿನಲ್ಲಿ ಈ ಬಾಲಕಿಯರ ಶವಗಳು ಪತ್ತೆಯಾಗಿದ್ದರು ಎಂದು ಫಾರುಖಾಬಾದ್​ ಎಸ್​ಪಿ ಅಲೋಕ್​ ಪ್ರಿಯದರ್ಶಿನಿ ತಿಳಿಸಿದ್ದರು. ತಮ್ಮ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕಿಯರ ತಂದೆ ಆರೋಪಿಸಿದ್ದರು. ಆದರೆ, ಪೊಲೀಸರು ಪ್ರಾಥಮಿಕ ಹಂತದಲ್ಲಿ ಇದು ಆತ್ಮಹತ್ಯೆಯಂತೆ ಕಂಡಿದ್ದು, ತನಿಖೆ ನಡೆಸಲಾಗುವುದು ಎಂದಿದ್ದರು.

ಇದನ್ನೂ ಓದಿ: ಭಾರಿ ಮಳೆಗೆ ನಲುಗಿದ ಗುಜರಾತ್​: ಇದುವೆರೆಗೆ 28 ಜನರು ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.