ETV Bharat / bharat

ಚಂಡೀಗಢ ಗ್ರೆನೇಡ್​ ದಾಳಿ ಪ್ರಕರಣ; ಅಮೃತ್​ಸರ್​ನಲ್ಲಿ ಪ್ರಮುಖ ಆರೋಪಿ ಸೆರೆ - Chandigarh Explosion Case

author img

By ETV Bharat Karnataka Team

Published : Sep 13, 2024, 2:06 PM IST

ಸೆಪ್ಟೆಂಬರ್​ 11ರಂದು ಚಂಡೀಗಢದ ಸೆಕ್ಟರ್​ 10ರ ಪ್ರದೇಶಕ್ಕೆ ಆಟೋ ರಿಕ್ಷಾದಲ್ಲಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದರು.

Punjab Police Arrest Chandigarh Explosion Case Main Accused
ಬಂಧನ ವೇಳೆ ಆರೋಪಿಯಿಂದ ವಶಕ್ಕೆ ಪಡೆದ ಬಂದೂಕು, ಗುಂಡು (Punjab Police)

ಚಂಡೀಗಢ: ಇಲ್ಲಿನ ಸೆಕ್ಟರ್​ 10ರ ಪ್ರದೇಶದ ಮನೆಯಲ್ಲಿ ಕಡಿಮೆ ತೀವ್ರತೆಯ ಗ್ರೆನೇಡ್​​ ಸ್ಪೋಟ ನಡೆಸಿದ ಪ್ರಮುಖ ಆರೋಪಿಯನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಈ ಸ್ಪೋಟ ನಡೆದಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದರು. ಈ ಘಟನೆಯ ಆರೋಪಿಗಳಿಗೆ ಸುಳಿವು ನೀಡಿದರೆ 2 ಲಕ್ಷ ರೂ ಬಹುಮಾನ ನೀಡುವುದಾಗಿ ಗುರುವಾರ ಚಂಡೀಗಢ ಪೊಲೀಸರು ಘೋಷಿಸಿದ್ದರು.

ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯೊಂದಿಗಿನ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಮೃತ್​ಸರ್​ ಗ್ರಾಮಾಂತರ ಪ್ರದೇಶದ ನಿವಾಸಿ ರೋಹನ್​ ಮಸಿಹ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಂಧನದ ವೇಳೆ ಪ್ರಮುಖ ಆರೋಪಿಯಿಂದ 9ಎಂಎಂ ಗ್ಲಾಕ್​ ಪಿಸ್ತೂಲ್​ ಜೊತೆ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪಿತೂರಿ ಪ್ರಕರಣ ಸಂಬಂಧ ಸಂಪೂರ್ಣ ತನಖೆಯನ್ನು ಚಂಡೀಗಢ ಪೊಲೀಸರೊಂದಿಗೆ ಜಂಟಿಯಾಗಿ ನಡೆಸಲಾಗುವುದು ಎಂದು ಪಂಜಾಬ್​ ಪೊಲೀಸರು ಹೇಳಿದ್ದಾರೆ.

ಸದ್ಯ ಆರೋಪಿಯನ್ನು ಅಮೃತಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶದ ವಶದಲ್ಲಿರಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ರೋಹನ್​ ಗ್ರೆನೇಡ್​ ಸ್ಪೋಟ ನಡೆಸಿರುವ ಕುರಿತು ಒಪ್ಪಿಕೊಂಡಿದ್ದಾನೆ.(ಐಎಎನ್​ಎಸ್​)

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಹೈ ಕಮಿಷನ್​ ಮೇಲೆ ದಾಳಿ ಪ್ರಕರಣ: ಪಂಜಾಬ್​ನಲ್ಲಿ ಎನ್​ಐಎ ಶೋಧ

ಚಂಡೀಗಢ: ಇಲ್ಲಿನ ಸೆಕ್ಟರ್​ 10ರ ಪ್ರದೇಶದ ಮನೆಯಲ್ಲಿ ಕಡಿಮೆ ತೀವ್ರತೆಯ ಗ್ರೆನೇಡ್​​ ಸ್ಪೋಟ ನಡೆಸಿದ ಪ್ರಮುಖ ಆರೋಪಿಯನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಈ ಸ್ಪೋಟ ನಡೆದಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದರು. ಈ ಘಟನೆಯ ಆರೋಪಿಗಳಿಗೆ ಸುಳಿವು ನೀಡಿದರೆ 2 ಲಕ್ಷ ರೂ ಬಹುಮಾನ ನೀಡುವುದಾಗಿ ಗುರುವಾರ ಚಂಡೀಗಢ ಪೊಲೀಸರು ಘೋಷಿಸಿದ್ದರು.

ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯೊಂದಿಗಿನ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಮೃತ್​ಸರ್​ ಗ್ರಾಮಾಂತರ ಪ್ರದೇಶದ ನಿವಾಸಿ ರೋಹನ್​ ಮಸಿಹ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಂಧನದ ವೇಳೆ ಪ್ರಮುಖ ಆರೋಪಿಯಿಂದ 9ಎಂಎಂ ಗ್ಲಾಕ್​ ಪಿಸ್ತೂಲ್​ ಜೊತೆ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪಿತೂರಿ ಪ್ರಕರಣ ಸಂಬಂಧ ಸಂಪೂರ್ಣ ತನಖೆಯನ್ನು ಚಂಡೀಗಢ ಪೊಲೀಸರೊಂದಿಗೆ ಜಂಟಿಯಾಗಿ ನಡೆಸಲಾಗುವುದು ಎಂದು ಪಂಜಾಬ್​ ಪೊಲೀಸರು ಹೇಳಿದ್ದಾರೆ.

ಸದ್ಯ ಆರೋಪಿಯನ್ನು ಅಮೃತಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶದ ವಶದಲ್ಲಿರಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ರೋಹನ್​ ಗ್ರೆನೇಡ್​ ಸ್ಪೋಟ ನಡೆಸಿರುವ ಕುರಿತು ಒಪ್ಪಿಕೊಂಡಿದ್ದಾನೆ.(ಐಎಎನ್​ಎಸ್​)

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಹೈ ಕಮಿಷನ್​ ಮೇಲೆ ದಾಳಿ ಪ್ರಕರಣ: ಪಂಜಾಬ್​ನಲ್ಲಿ ಎನ್​ಐಎ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.