ETV Bharat / bharat

ಚುನಾವಣಾ ಬಾಂಡ್​: ಎಸ್​ಐಟಿ ತನಿಖೆ ಕೋರಿದ ಪಿಐಎಲ್​ ಜುಲೈ 22ರಂದು ಸುಪ್ರೀಂನಲ್ಲಿ ವಿಚಾರಣೆ - Electoral Bonds Case

author img

By ANI

Published : Jul 19, 2024, 1:19 PM IST

ಚುನಾವಣಾ ಬಾಂಡ್​ ಯೋಜನೆಯ ಬಗ್ಗೆ ಸಲ್ಲಿಸಲಾದ ಪಿಐಎಲ್​ ವಿಚಾರಣೆ ಜುಲೈ 22ರಂದು ನಡೆಯಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಚುನಾವಣಾ ಬಾಂಡ್​ ಯೋಜನೆಯನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ ಅರ್ಜಿಗಳ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠವು, ಜುಲೈ 22 ರಂದು ಪಿಐಎಲ್​ಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿತು. ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಎರಡು ಎನ್​​ಜಿಒಗಳು ಈ ಪ್ರಕರಣದಲ್ಲಿ ಪಿಐಎಲ್​ ಸಲ್ಲಿಸಿದ ಅರ್ಜಿದಾರರಾಗಿವೆ. ಇದಲ್ಲದೆ, ಇದೇ ರೀತಿಯ ಮತ್ತೊಂದು ಮನವಿ ಬಂದಿದ್ದು, ಅದನ್ನು ಕೂಡ ಒಟ್ಟಾಗಿ ಜುಲೈ 22 ರಂದು ವಿಚಾರಣೆ ನಡೆಸಲಾಗುವುದು.

ಚುನಾವಣಾ ಬಾಂಡ್​ಗಳು ರಾಜಕೀಯ ಪಕ್ಷಗಳು, ಸರ್ಕಾರಿ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳ ನಡುವೆ ಹಿತಾಸಕ್ತಿಗಳ ಸಾಧನೆಗಾಗಿ ಬಳಸಲಾಗಿದೆ ಎಂದು ಪಿಐಎಲ್​ನಲ್ಲಿ ಆರೋಪಿಸಲಾಗಿದೆ. ಅಂದರೆ ವ್ಯವಸ್ಥೆಯಲ್ಲಿನ ಭಾಗೀದಾರರು ಪರಸ್ಪರ ಲಾಭಕ್ಕಾಗಿ ಚುನಾವಣಾ ಬಾಂಡ್​ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಚುನಾವಣಾ ಬಾಂಡ್​ ಯೋಜನೆ ಒಂದು ಹಗರಣವಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಶೆಲ್ ಕಂಪನಿಗಳ ಬಗ್ಗೆ ಮತ್ತು ನಷ್ಟದಲ್ಲಿರುವ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಎನ್​ಜಿಒಗಳು ತನ್ನ ಅರ್ಜಿಯಲ್ಲಿ ಒತ್ತಾಯಿಸಿವೆ. ಇದರಲ್ಲಿ ಭಾಗಿಯಾಗಿರುವ ಕಂಪನಿಗಳು ದೇಣಿಗೆ ನೀಡಿದ ಹಣವನ್ನು ಮರುಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಕೋರಲಾಗಿದೆ.

ಏನಿದು ಚುನಾವಣಾ ಬಾಂಡ್ ಯೋಜನೆ ಪ್ರಕರಣ?: ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದುಗೊಳಿಸಿ ಸರ್ವಾನುಮತದ ತೀರ್ಪು ನೀಡಿದೆ. ಚುನಾವಣಾ ಬಾಂಡ್​ ಯೋಜನೆ ಅಸಂವಿಧಾನಿಕ ಎಂದು ಅದು ಹೇಳಿತ್ತು. ಈ ಯೋಜನೆಯನ್ನು ಮೊದಲು 2017 ರಲ್ಲಿ ಹಣಕಾಸು ಮಸೂದೆಯ ರೂಪದಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಪರಿಚಯಿಸಿದ್ದರು. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ನಗದು ದೇಣಿಗೆಗಳಿಗೆ ಪರ್ಯಾಯವಾಗಿ 2018 ರ ಜನವರಿ 2 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ : ಅಲೌಕಿಕ ಶಕ್ತಿಗಳೊಂದಿಗೆ '​ದೇವ'ರಾಗಲು ಬಯಸುವ ಮನುಷ್ಯ - ಭಾಗವತ್; ಇದು ಮೋದಿಯತ್ತ ಅಗ್ನಿ ಕ್ಷಿಪಣಿ ಎಂದ ಕಾಂಗ್ರೆಸ್​ - Mohan Bhagwat

ನವದೆಹಲಿ: ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಚುನಾವಣಾ ಬಾಂಡ್​ ಯೋಜನೆಯನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ ಅರ್ಜಿಗಳ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠವು, ಜುಲೈ 22 ರಂದು ಪಿಐಎಲ್​ಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿತು. ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಎರಡು ಎನ್​​ಜಿಒಗಳು ಈ ಪ್ರಕರಣದಲ್ಲಿ ಪಿಐಎಲ್​ ಸಲ್ಲಿಸಿದ ಅರ್ಜಿದಾರರಾಗಿವೆ. ಇದಲ್ಲದೆ, ಇದೇ ರೀತಿಯ ಮತ್ತೊಂದು ಮನವಿ ಬಂದಿದ್ದು, ಅದನ್ನು ಕೂಡ ಒಟ್ಟಾಗಿ ಜುಲೈ 22 ರಂದು ವಿಚಾರಣೆ ನಡೆಸಲಾಗುವುದು.

ಚುನಾವಣಾ ಬಾಂಡ್​ಗಳು ರಾಜಕೀಯ ಪಕ್ಷಗಳು, ಸರ್ಕಾರಿ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳ ನಡುವೆ ಹಿತಾಸಕ್ತಿಗಳ ಸಾಧನೆಗಾಗಿ ಬಳಸಲಾಗಿದೆ ಎಂದು ಪಿಐಎಲ್​ನಲ್ಲಿ ಆರೋಪಿಸಲಾಗಿದೆ. ಅಂದರೆ ವ್ಯವಸ್ಥೆಯಲ್ಲಿನ ಭಾಗೀದಾರರು ಪರಸ್ಪರ ಲಾಭಕ್ಕಾಗಿ ಚುನಾವಣಾ ಬಾಂಡ್​ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಚುನಾವಣಾ ಬಾಂಡ್​ ಯೋಜನೆ ಒಂದು ಹಗರಣವಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಶೆಲ್ ಕಂಪನಿಗಳ ಬಗ್ಗೆ ಮತ್ತು ನಷ್ಟದಲ್ಲಿರುವ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಎನ್​ಜಿಒಗಳು ತನ್ನ ಅರ್ಜಿಯಲ್ಲಿ ಒತ್ತಾಯಿಸಿವೆ. ಇದರಲ್ಲಿ ಭಾಗಿಯಾಗಿರುವ ಕಂಪನಿಗಳು ದೇಣಿಗೆ ನೀಡಿದ ಹಣವನ್ನು ಮರುಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಕೋರಲಾಗಿದೆ.

ಏನಿದು ಚುನಾವಣಾ ಬಾಂಡ್ ಯೋಜನೆ ಪ್ರಕರಣ?: ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದುಗೊಳಿಸಿ ಸರ್ವಾನುಮತದ ತೀರ್ಪು ನೀಡಿದೆ. ಚುನಾವಣಾ ಬಾಂಡ್​ ಯೋಜನೆ ಅಸಂವಿಧಾನಿಕ ಎಂದು ಅದು ಹೇಳಿತ್ತು. ಈ ಯೋಜನೆಯನ್ನು ಮೊದಲು 2017 ರಲ್ಲಿ ಹಣಕಾಸು ಮಸೂದೆಯ ರೂಪದಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಪರಿಚಯಿಸಿದ್ದರು. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ನಗದು ದೇಣಿಗೆಗಳಿಗೆ ಪರ್ಯಾಯವಾಗಿ 2018 ರ ಜನವರಿ 2 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ : ಅಲೌಕಿಕ ಶಕ್ತಿಗಳೊಂದಿಗೆ '​ದೇವ'ರಾಗಲು ಬಯಸುವ ಮನುಷ್ಯ - ಭಾಗವತ್; ಇದು ಮೋದಿಯತ್ತ ಅಗ್ನಿ ಕ್ಷಿಪಣಿ ಎಂದ ಕಾಂಗ್ರೆಸ್​ - Mohan Bhagwat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.