ETV Bharat / bharat

ಕಾರ್ಗಿಲ್ ವಿಜಯಕ್ಕೆ 25 ವರ್ಷ​: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಪ್ರಧಾನಿ ಮೋದಿ ನಮನ - Kargil Vijay Diwas

author img

By ETV Bharat Karnataka Team

Published : Jul 26, 2024, 10:42 AM IST

ದ್ರಾಸ್‌​ನ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಇಂದು ಭೇಟಿ ನೀಡಿದ ಪ್ರಧಾನಿ ಮೋದಿ, ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.

Modi will attend the 25th celebrations of the Kargil war at Drass
ಪ್ರಧಾನಿ ನರೇಂದ್ರ ಮೋದಿ (ಐಎಎನ್​ಎಸ್​​)

ನವದೆಹಲಿ: ಇಂದು ಕಾರ್ಗಿಲ್​ ವಿಜಯ್​ ದಿವಸ್​. ಭಾರತ ದೇಶ ಪಾಕಿಸ್ತಾನ ವಿರುದ್ಧದ ಭೀಕರ ಯುದ್ಧ ಜಯಿಸಿ ಇಂದಿಗೆ 25 ವರ್ಷ. ಈ ವಿಶೇಷ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾಶ್ಮೀರಕ್ಕೆ ಬೆಳಗ್ಗೆ 9.20ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ, ಎಂಐ- 17 ಹೆಲಿಕ್ಯಾಪ್ಟರ್​ ಮೂಲಕ ದ್ರಾಸ್‌​ಗೆ ಆಗಮಿಸಿದರು. ಕಾಶ್ಮೀರದ ತಾಂತ್ರಿಕ ಪ್ರದೇಶಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಅವರನ್ನು ಲೆ.ಗವರ್ನರ್​ ಮನೋಜ್​ ಸಿನ್ಹಾ, ಮುಖ್ಯ ಕಾರ್ಯದರ್ಶಿ ಅಟಲ್​ ಡುಲ್ಲೊ ಮತ್ತು ಡಿಜಿಪಿ ಆರ್​​ಆರ್​ ಸ್ವೈನ್​ ಬರಮಾಡಿಕೊಂಡರು. ಜಮ್ಮು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಪಕ್ಷದ ಇತರ ಕೆಲವು ಹಿರಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ್ರಾಸ್‌​ನಲ್ಲಿನ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್​ ಉಪೇಂದ್ರ ದ್ವಿವೇದಿ ಉಪಸ್ಥಿತರಿದ್ದರು.

ಕಾರ್ಗಿಲ್​ ವಿಜಯ ದಿನಸ್​ನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾ ತಂಡಗಳನ್ನು ಉದ್ದೇಶಿಸಿ ಮಾತನಾಡಿದರು. ಲಡಾಖ್​ ಲೆ.ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿ.ಡಿ ಮಿಶ್ರಾ ಹಾಗೂ ಸೇನಾ ಮುಖ್ಯಸ್ಥರು ಮತ್ತು ಸೇನಾ ಹಿರಿಯ ಕಮಾಂಡರ್​ಗಳು ಭಾಗಿಯಾಗಿದ್ದಾರೆ.

ಶಿಂಕುನ್​ ಲಾ ಟನಲ್​ಗೆ ಶಂಕುಸ್ಥಾಪನೆ: ಇದೇ ವೇಳೆ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿಯಾಗಿರುವ ಸಿಯಾಚಿನ್​ ಗ್ಲೇಸಿಯರ್​ಗೆ ಭೇಟಿ ನೀಡಲಿದ್ದಾರೆ. ಲಡಾಖ್​ನ ಭೇಟಿಯಲ್ಲಿ ಪ್ರಧಾನಿ ಮೋದಿ, ವರ್ಚುವಲ್​ ಆಗಿ ಶಿಂಕುನ್​ ಲಾ ಟನಲ್​ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಶಿಂಕುನ್​ ಲಾ ಟನಲ್​​ ಜಗತ್ತಿನ ಅತಿ ಎತ್ತರದ ಟನಲ್​ ಆಗಿದ್ದು, ಲಡಾಖ್‌ನಲ್ಲಿ ನಿಮು ಪಡುಮ್ ದರ್ಚಾ ರಸ್ತೆಯಲ್ಲಿ ನಿರ್ಮಾಣವಾಗಲಿದೆ. 4.1 ಕಿ.ಮೀ ಉದ್ದದ ಈ ಕೊಳವೆ ಸುರಂಗ ಸಮುದ್ರ ಮಟ್ಟದಿಂದ 15,800 ಅಡಿ ಎತ್ತರದಲ್ಲಿದೆ. ಇದು ಲೇಹ್​​ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಟನಲ್ ಪೂರ್ಣಗೊಂಡ ಬಳಿಕ​ ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯನ್ನು ಲಡಾಖ್‌ನ ಝನ್ಸ್ಕರ್ ಕಣಿವೆ ಸಂಪರ್ಕಿಸುತ್ತದೆ. ಲೇಹ್​ಗೆ ಸದ್ಯ ಶ್ರೀನಗರ ಜೋಜಿಲಾ ಕಾರ್ಗಿಲ್ ಲೇಹ್ ಮತ್ತು ಮನಾಲಿ ಅಟಲ್ ಟನಲ್​ ಸರ್ಚು ಲೇಹ್ ಸಂಪರ್ಕ ಮಾರ್ಗವಿದೆ.

ಕಾರ್ಗಿಲ್​ ವಿಜಯ್​ ದಿವಸ್ ಮಹತ್ವ​: 1999ರಲ್ಲಿ ಮೂರು ತಿಂಗಳ ಕಾಲ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತೀಯ ಭೂಸೇನೆ, ವಾಯುಸೇನೆಯೊಂದಿಗೆ ಪಾಕಿಸ್ತಾನವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈ ಭೀಕರ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ವೀರಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​

ನವದೆಹಲಿ: ಇಂದು ಕಾರ್ಗಿಲ್​ ವಿಜಯ್​ ದಿವಸ್​. ಭಾರತ ದೇಶ ಪಾಕಿಸ್ತಾನ ವಿರುದ್ಧದ ಭೀಕರ ಯುದ್ಧ ಜಯಿಸಿ ಇಂದಿಗೆ 25 ವರ್ಷ. ಈ ವಿಶೇಷ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾಶ್ಮೀರಕ್ಕೆ ಬೆಳಗ್ಗೆ 9.20ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ, ಎಂಐ- 17 ಹೆಲಿಕ್ಯಾಪ್ಟರ್​ ಮೂಲಕ ದ್ರಾಸ್‌​ಗೆ ಆಗಮಿಸಿದರು. ಕಾಶ್ಮೀರದ ತಾಂತ್ರಿಕ ಪ್ರದೇಶಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಅವರನ್ನು ಲೆ.ಗವರ್ನರ್​ ಮನೋಜ್​ ಸಿನ್ಹಾ, ಮುಖ್ಯ ಕಾರ್ಯದರ್ಶಿ ಅಟಲ್​ ಡುಲ್ಲೊ ಮತ್ತು ಡಿಜಿಪಿ ಆರ್​​ಆರ್​ ಸ್ವೈನ್​ ಬರಮಾಡಿಕೊಂಡರು. ಜಮ್ಮು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಪಕ್ಷದ ಇತರ ಕೆಲವು ಹಿರಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ್ರಾಸ್‌​ನಲ್ಲಿನ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್​ ಉಪೇಂದ್ರ ದ್ವಿವೇದಿ ಉಪಸ್ಥಿತರಿದ್ದರು.

ಕಾರ್ಗಿಲ್​ ವಿಜಯ ದಿನಸ್​ನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾ ತಂಡಗಳನ್ನು ಉದ್ದೇಶಿಸಿ ಮಾತನಾಡಿದರು. ಲಡಾಖ್​ ಲೆ.ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿ.ಡಿ ಮಿಶ್ರಾ ಹಾಗೂ ಸೇನಾ ಮುಖ್ಯಸ್ಥರು ಮತ್ತು ಸೇನಾ ಹಿರಿಯ ಕಮಾಂಡರ್​ಗಳು ಭಾಗಿಯಾಗಿದ್ದಾರೆ.

ಶಿಂಕುನ್​ ಲಾ ಟನಲ್​ಗೆ ಶಂಕುಸ್ಥಾಪನೆ: ಇದೇ ವೇಳೆ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿಯಾಗಿರುವ ಸಿಯಾಚಿನ್​ ಗ್ಲೇಸಿಯರ್​ಗೆ ಭೇಟಿ ನೀಡಲಿದ್ದಾರೆ. ಲಡಾಖ್​ನ ಭೇಟಿಯಲ್ಲಿ ಪ್ರಧಾನಿ ಮೋದಿ, ವರ್ಚುವಲ್​ ಆಗಿ ಶಿಂಕುನ್​ ಲಾ ಟನಲ್​ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಶಿಂಕುನ್​ ಲಾ ಟನಲ್​​ ಜಗತ್ತಿನ ಅತಿ ಎತ್ತರದ ಟನಲ್​ ಆಗಿದ್ದು, ಲಡಾಖ್‌ನಲ್ಲಿ ನಿಮು ಪಡುಮ್ ದರ್ಚಾ ರಸ್ತೆಯಲ್ಲಿ ನಿರ್ಮಾಣವಾಗಲಿದೆ. 4.1 ಕಿ.ಮೀ ಉದ್ದದ ಈ ಕೊಳವೆ ಸುರಂಗ ಸಮುದ್ರ ಮಟ್ಟದಿಂದ 15,800 ಅಡಿ ಎತ್ತರದಲ್ಲಿದೆ. ಇದು ಲೇಹ್​​ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಟನಲ್ ಪೂರ್ಣಗೊಂಡ ಬಳಿಕ​ ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯನ್ನು ಲಡಾಖ್‌ನ ಝನ್ಸ್ಕರ್ ಕಣಿವೆ ಸಂಪರ್ಕಿಸುತ್ತದೆ. ಲೇಹ್​ಗೆ ಸದ್ಯ ಶ್ರೀನಗರ ಜೋಜಿಲಾ ಕಾರ್ಗಿಲ್ ಲೇಹ್ ಮತ್ತು ಮನಾಲಿ ಅಟಲ್ ಟನಲ್​ ಸರ್ಚು ಲೇಹ್ ಸಂಪರ್ಕ ಮಾರ್ಗವಿದೆ.

ಕಾರ್ಗಿಲ್​ ವಿಜಯ್​ ದಿವಸ್ ಮಹತ್ವ​: 1999ರಲ್ಲಿ ಮೂರು ತಿಂಗಳ ಕಾಲ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತೀಯ ಭೂಸೇನೆ, ವಾಯುಸೇನೆಯೊಂದಿಗೆ ಪಾಕಿಸ್ತಾನವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈ ಭೀಕರ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ವೀರಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.