ETV Bharat / bharat

ಸೆಲ್ಫಿ ಗೀಳಿಗೆ 100 ಅಡಿ ಕಮರಿಗೆ ಬಿದ್ದ ಯುವತಿ, ದೇವರಾದ ರಕ್ಷಣಾ ತಂಡ! - GIRL FELL INTO THE VALLEY

author img

By ETV Bharat Karnataka Team

Published : Aug 4, 2024, 7:34 PM IST

Girl Fell In Gorge: ಕಳೆದ ಕೆಲವು ದಿನಗಳಿಂದ ಸೆಲ್ಫಿ ಗೀಳಿಗೆ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಆದರೂ ಅಪಾಯದ ಸ್ಥಳಗಳಿಗೆ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

BORNE GHAT INCIDENT  SATARA SELFIE ACCIDENT  SELFIE RESCUE TEAM  GIRL FELL IN GORGE
ಸೆಲ್ಫಿ ಗೀಳಿಗೆ 100 ಅಡಿ ಕಮರಿಗೆ ಬಿದ್ದ ಯುವತಿ (ETV Bharat)
ಸೆಲ್ಫಿ ಗೀಳಿಗೆ 100 ಅಡಿ ಕಮರಿಗೆ ಬಿದ್ದ ಯುವತಿ (ETV Bharat)

ಸತಾರಾ (ಮಹಾರಾಷ್ಟ್ರ): ಸೆಲ್ಫಿ ಗೀಳಿಗೆ ಯುವತಿಯೊಬ್ಬಳು ತನ್ನ ಪ್ರಾಣವನ್ನು ಸಂಕಷ್ಟಕ್ಕೆ ದೂಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಸಜ್ಜನಗಡ-ತೋಸೆಘರ್ ಮಾರ್ಗದ ಬೋರ್ನ್ ಘಾಟ್​ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಯುವತಿ ನೇರವಾಗಿ ಕಣಿವೆಗೆ ಬಿದ್ದಿದ್ದಾಳೆ. ಶನಿವಾರ (ಆಗಸ್ಟ್ 3) ಸಂಜೆ 6 ಗಂಟೆ ಸುಮಾರಿಗೆ ಮಂಕಿ ಪಾಯಿಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ತಂಡ, ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಮತ್ತು ಸತಾರಾ ಗ್ರಾಮಾಂತರ ಪೊಲೀಸರು ಕಣಿವೆಯಲ್ಲಿ ಬಿದ್ದ ಯುವತಿಯ ಜೀವವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಯುವತಿಯ ಹೆಸರು ರೂಪಾಲಿ ದೇಶಮುಖ ಎಂದು ತಿಳಿದುಬಂದಿದೆ.

ಸೆಲ್ಫಿ ತೆಗೆಯುವಾಗ ಕಣಿವೆಯಲ್ಲಿ ಬಿದ್ದ ಯುವತಿ: ಸತಾರಾ ಜಿಲ್ಲೆಯ ಪ್ರವಾಸಿ ಸ್ಥಳಗಳು ಜನಸಾಗರದಿಂದ ತುಂಬಿ ತುಳುಕುತ್ತಿವೆ. ಆದರೆ, ಯುವಕ-ಯುವತಿಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಪ್ರವಾಸಿ ತಾಣಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯುವತಿಯೊಬ್ಬಳು ಕಾಲು ಜಾರಿ 100 ಅಡಿ ಕಮರಿಗೆ ಬಿದ್ದಿದ್ದಾಳೆ.

ಯುವತಿಯನ್ನು ರಕ್ಷಿಸಿದ ರಕ್ಷಣಾ ತಂಡ: ಯುವತಿ ಕಣಿವೆಗೆ ಬಿದ್ದ ತಕ್ಷಣ ರಕ್ಷಣಾ ತಂಡ ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಸತಾರಾ ಗ್ರಾಮಾಂತರ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿತು. ಅವರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಮತ್ತು ಕಣಿವೆಯಿಂದ ಯುವತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದರು. ಯುವತಿ ಕಣಿವೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸತಾರಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೋಸೆಘರ್​ಗೆ ತೆರಳುತ್ತಿದ್ದ ವೇಳೆ ಘಟನೆ: ಗಾಯಾಳು ಯುವತಿ ರೂಪಾಲಿ ದೇಶಮುಖ್ ಸೇರಿದಂತೆ ಒಟ್ಟು ಏಳು ಮಂದಿ ಸ್ಕಾರ್ಪಿಯೋ ಕಾರಿನಲ್ಲಿ ತೋಸೆಘರ್​ಗೆ ಕಡೆಗೆ ಹೋಗುತ್ತಿದ್ದರು. ಬೋರ್ನ್ ಘಾಟ್‌ನಲ್ಲಿ ನಿಲ್ಲಿಸಿದ ನಂತರ ರೂಪಾಲಿ ದೇಶಮುಖ್ ಸೆಲ್ಫಿ ತೆಗೆದುಕೊಳ್ಳುವಾಗ ಕಣಿವೆಗೆ ಬಿದ್ದಿದ್ದಾಳೆ. ಬಳಿಕ ಯುವತಿಯನ್ನು ಕಣಿವೆಯಿಂದ ಹಗ್ಗ ಕಟ್ಟಿಕೊಂಡು ಮೇಲಕ್ಕೆ ಎಳೆದಿದ್ದಾರೆ.

300 ಅಡಿ ಆಳದ ಕಮರಿಗೆ ಬಿದ್ದ ಯುವತಿ: ಕೆಲ ದಿನಗಳ ಹಿಂದೆ ರಾಯಗಡದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮುಂಬೈನ ಯುವತಿ ಅನ್ವಿ ಕಾಮ್ದಾರ್ ತನ್ನ ಏಳು ಸಹೋದ್ಯೋಗಿಗಳೊಂದಿಗೆ ವಾರ್ಷಿಕ ರಜೆಗಾಗಿ ಮಂಗಾವ್‌ನ ಕುಂಭೆಗೆ ಬಂದಿದ್ದರು. ಬಂಡೆಯೊಂದರಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ರೀಲ್ ಮಾಡುವಾಗ ಯುವತಿ 300 ಅಡಿ ಕಮರಿಗೆ ಬಿದ್ದಿದ್ದರು. ಈ ಬಗ್ಗೆ ಆಕೆಯ ಸಹೋದ್ಯೋಗಿಗಳು ಮಂಗಾವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಮಂಗಾವ್ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ನಿವೃತ್ತಿ ಬೋರಾಡೆ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅವರು ಸ್ಥಳೀಯ ರಕ್ಷಣಾ ತಂಡಗಳನ್ನು ಮಾಹಿತಿ ನೀಡಿದರು. ರಕ್ಷಣಾ ತಂಡಗಳು ಹಗ್ಗದ ಸಹಾಯದಿಂದ ಕಣಿವೆಗೆ ಇಳಿದಿದ್ದರು. ಈ ವೇಳೆ ಅನ್ವಿ ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿತ್ತು. ಕೂಡಲೇ ಆಕೆಯನ್ನು ಸ್ಟ್ರೆಚರ್ ಸಹಾಯದಿಂದ ಮೇಲಕ್ಕೆ ಎಳೆದಿದ್ದಾರೆ. ಆದರೆ, ಆಕೆಯನ್ನು ಮಂಗಾವ್‌ನ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದ್ದರು.

ಓದಿ: ಅಂತಿಮ ಹಂತದಲ್ಲಿ ವಯನಾಡ್​ ರಕ್ಷಣಾ ಕಾರ್ಯ, ಇನ್ನೂ 206ಮಂದಿ ಕಣ್ಮರೆ: ಸಿಎಂ ಪಿಣರಾಯಿ - rescue operations in Wayanad

ಸೆಲ್ಫಿ ಗೀಳಿಗೆ 100 ಅಡಿ ಕಮರಿಗೆ ಬಿದ್ದ ಯುವತಿ (ETV Bharat)

ಸತಾರಾ (ಮಹಾರಾಷ್ಟ್ರ): ಸೆಲ್ಫಿ ಗೀಳಿಗೆ ಯುವತಿಯೊಬ್ಬಳು ತನ್ನ ಪ್ರಾಣವನ್ನು ಸಂಕಷ್ಟಕ್ಕೆ ದೂಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಸಜ್ಜನಗಡ-ತೋಸೆಘರ್ ಮಾರ್ಗದ ಬೋರ್ನ್ ಘಾಟ್​ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಯುವತಿ ನೇರವಾಗಿ ಕಣಿವೆಗೆ ಬಿದ್ದಿದ್ದಾಳೆ. ಶನಿವಾರ (ಆಗಸ್ಟ್ 3) ಸಂಜೆ 6 ಗಂಟೆ ಸುಮಾರಿಗೆ ಮಂಕಿ ಪಾಯಿಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ತಂಡ, ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಮತ್ತು ಸತಾರಾ ಗ್ರಾಮಾಂತರ ಪೊಲೀಸರು ಕಣಿವೆಯಲ್ಲಿ ಬಿದ್ದ ಯುವತಿಯ ಜೀವವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಯುವತಿಯ ಹೆಸರು ರೂಪಾಲಿ ದೇಶಮುಖ ಎಂದು ತಿಳಿದುಬಂದಿದೆ.

ಸೆಲ್ಫಿ ತೆಗೆಯುವಾಗ ಕಣಿವೆಯಲ್ಲಿ ಬಿದ್ದ ಯುವತಿ: ಸತಾರಾ ಜಿಲ್ಲೆಯ ಪ್ರವಾಸಿ ಸ್ಥಳಗಳು ಜನಸಾಗರದಿಂದ ತುಂಬಿ ತುಳುಕುತ್ತಿವೆ. ಆದರೆ, ಯುವಕ-ಯುವತಿಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಪ್ರವಾಸಿ ತಾಣಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯುವತಿಯೊಬ್ಬಳು ಕಾಲು ಜಾರಿ 100 ಅಡಿ ಕಮರಿಗೆ ಬಿದ್ದಿದ್ದಾಳೆ.

ಯುವತಿಯನ್ನು ರಕ್ಷಿಸಿದ ರಕ್ಷಣಾ ತಂಡ: ಯುವತಿ ಕಣಿವೆಗೆ ಬಿದ್ದ ತಕ್ಷಣ ರಕ್ಷಣಾ ತಂಡ ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಸತಾರಾ ಗ್ರಾಮಾಂತರ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿತು. ಅವರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಮತ್ತು ಕಣಿವೆಯಿಂದ ಯುವತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದರು. ಯುವತಿ ಕಣಿವೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸತಾರಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೋಸೆಘರ್​ಗೆ ತೆರಳುತ್ತಿದ್ದ ವೇಳೆ ಘಟನೆ: ಗಾಯಾಳು ಯುವತಿ ರೂಪಾಲಿ ದೇಶಮುಖ್ ಸೇರಿದಂತೆ ಒಟ್ಟು ಏಳು ಮಂದಿ ಸ್ಕಾರ್ಪಿಯೋ ಕಾರಿನಲ್ಲಿ ತೋಸೆಘರ್​ಗೆ ಕಡೆಗೆ ಹೋಗುತ್ತಿದ್ದರು. ಬೋರ್ನ್ ಘಾಟ್‌ನಲ್ಲಿ ನಿಲ್ಲಿಸಿದ ನಂತರ ರೂಪಾಲಿ ದೇಶಮುಖ್ ಸೆಲ್ಫಿ ತೆಗೆದುಕೊಳ್ಳುವಾಗ ಕಣಿವೆಗೆ ಬಿದ್ದಿದ್ದಾಳೆ. ಬಳಿಕ ಯುವತಿಯನ್ನು ಕಣಿವೆಯಿಂದ ಹಗ್ಗ ಕಟ್ಟಿಕೊಂಡು ಮೇಲಕ್ಕೆ ಎಳೆದಿದ್ದಾರೆ.

300 ಅಡಿ ಆಳದ ಕಮರಿಗೆ ಬಿದ್ದ ಯುವತಿ: ಕೆಲ ದಿನಗಳ ಹಿಂದೆ ರಾಯಗಡದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮುಂಬೈನ ಯುವತಿ ಅನ್ವಿ ಕಾಮ್ದಾರ್ ತನ್ನ ಏಳು ಸಹೋದ್ಯೋಗಿಗಳೊಂದಿಗೆ ವಾರ್ಷಿಕ ರಜೆಗಾಗಿ ಮಂಗಾವ್‌ನ ಕುಂಭೆಗೆ ಬಂದಿದ್ದರು. ಬಂಡೆಯೊಂದರಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ರೀಲ್ ಮಾಡುವಾಗ ಯುವತಿ 300 ಅಡಿ ಕಮರಿಗೆ ಬಿದ್ದಿದ್ದರು. ಈ ಬಗ್ಗೆ ಆಕೆಯ ಸಹೋದ್ಯೋಗಿಗಳು ಮಂಗಾವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಮಂಗಾವ್ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ನಿವೃತ್ತಿ ಬೋರಾಡೆ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅವರು ಸ್ಥಳೀಯ ರಕ್ಷಣಾ ತಂಡಗಳನ್ನು ಮಾಹಿತಿ ನೀಡಿದರು. ರಕ್ಷಣಾ ತಂಡಗಳು ಹಗ್ಗದ ಸಹಾಯದಿಂದ ಕಣಿವೆಗೆ ಇಳಿದಿದ್ದರು. ಈ ವೇಳೆ ಅನ್ವಿ ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿತ್ತು. ಕೂಡಲೇ ಆಕೆಯನ್ನು ಸ್ಟ್ರೆಚರ್ ಸಹಾಯದಿಂದ ಮೇಲಕ್ಕೆ ಎಳೆದಿದ್ದಾರೆ. ಆದರೆ, ಆಕೆಯನ್ನು ಮಂಗಾವ್‌ನ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದ್ದರು.

ಓದಿ: ಅಂತಿಮ ಹಂತದಲ್ಲಿ ವಯನಾಡ್​ ರಕ್ಷಣಾ ಕಾರ್ಯ, ಇನ್ನೂ 206ಮಂದಿ ಕಣ್ಮರೆ: ಸಿಎಂ ಪಿಣರಾಯಿ - rescue operations in Wayanad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.