ETV Bharat / bharat

ಲಡಾಖ್‌ನ ಲೇಹ್‌ನಲ್ಲಿ 4.4 ತೀವ್ರತೆಯ ಭೂಕಂಪ: ಯಾವುದೇ ಸಾವು, ನೋವುಗಳು ವರದಿಯಾಗಿಲ್ಲ - Earthquake in Ladakh

author img

By ETV Bharat Karnataka Team

Published : Jul 3, 2024, 4:43 PM IST

ಲಡಾಖ್‌ನ ಲೇಹ್‌ನಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪನ ಕೇಂದ್ರವು, ಬೆಳಗ್ಗೆ 8.12ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

EARTHQUAKE  LADAKH EARTHQUAKE IN LADAKH
ಸಾಂದರ್ಭಿಕ ಚಿತ್ರ (ETV Bharat)

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಂದು (ಜುಲೈ 3) ಬೆಳಗ್ಗೆ ಲಡಾಖ್‌ನಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪದ ತೀವ್ರತೆ ಕಡಿಮೆ ಇರುವುದರಿಂದ ಈ ಪ್ರದೇಶದಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.

ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪನ ಕೇಂದ್ರವು, ಬೆಳಗ್ಗೆ 8.12ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 36.10 ಡಿಗ್ರಿ ಅಕ್ಷಾಂಶ ಮತ್ತು 74.81 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 150 ಕಿಲೋಮೀಟರ್ ಆಳದಲ್ಲಿ ಇದೆ ಎಂದು ತಿಳಿಸಿದೆ.

ಇತ್ತೀಚೆಗೆ ಘಟನೆ: ಈ ಹಿಂದೆ ಮೇ 20 ರಂದು ಲಡಾಖ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಲಡಾಖ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 4.0 ಎಂದು ಅಳೆಯಲಾಗಿದೆ. ಭೂಕಂಪದ ತೀವ್ರತೆ ಅಷ್ಟೊಂದು ಪ್ರಬಲವಾಗಿಲ್ಲದ ಕಾರಣ, ಯಾವುದೇ ರೀತಿಯ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಅದೇ ದಿನ ಬೆಳಗ್ಗೆ ಲಡಾಖ್‌ನಲ್ಲಿ ಲೋಕಸಭೆ ಚುನಾವಣೆಯ ಮತದಾನವೂ ನಡೆಯಬೇಕಿತ್ತು.

ಭೂಕಂಪದ ವೇಳೆ ಏನು ಮಾಡಬೇಕು? ಏನು ಮಾಡಬಾರದು?: ನಿಮ್ಮ ಪ್ರದೇಶದಲ್ಲಿ ಭೂಕಂಪನದ ಅನುಭವವಾದರೆ, ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯೋಣ ಬನ್ನಿ.

  • ನೀವು ಕಟ್ಟಡದಲ್ಲಿದ್ದರೆ ಮತ್ತು ಭೂಕಂಪದ ನಡುಕವನ್ನು ಅನುಭವಿಸಿದರೆ, ಮೊದಲು ನೆಲದ ಮೇಲೆ ಕುಳಿತುಕೊಳ್ಳಿ ಅಥವಾ ಕೆಲವು ಬಲವಾದ ಪೀಠೋಪಕರಣಗಳ ಕೆಳಗೆ ಹೋಗಿ ಕುಳಿತುಕೊಳ್ಳಬೇಕು. ನೀವು ಕಟ್ಟಡದ ಹೊರಗಿದ್ದರೆ, ಮರಗಳು, ಕಂಬಗಳು ಮತ್ತು ತಂತಿಗಳಿಂದ ದೂರವಿರಿ, ಏಕೆಂದರೆ ಅವು ನಿಮ್ಮ ಮೇಲೆ ಬೀಳುವ ಅಪಾಯ ಹೆಚ್ಚು.
  • ನೀವು ವಾಹನವನ್ನು ಚಾಲನೆ ಮಾಡುತ್ತಿದ್ದರೆ, ತಕ್ಷಣವೇ ಅದನ್ನು ನಿಲ್ಲಿಸಿ, ಪಕ್ಕದಲ್ಲಿ ಬಂದು ನಿಲ್ಲಬೇಕು. ಭೂಕಂಪದ ನಂತರ ನೀವು ಅವಶೇಷಗಳ ರಾಶಿಯ ಅಡಿ ಹೂತುಹೋದರೆ, ನಂತರ ಬೆಂಕಿಕಡ್ಡಿಯನ್ನು ಬೆಳಗಿಸಬೇಡಿ, ಚಲಿಸಲು ಪ್ರಯತ್ನಿಸಬೇಡಿ ಅಥವಾ ತಳ್ಳಬೇಡಿ, ಇಲ್ಲದಿದ್ದರೆ ನಿಮ್ಮ ಮೇಲೆ ಮತ್ತಷ್ಟು ವಸ್ತುಗಳು ಬೀಳಬಹುದು.
  • ಅವಶೇಷಗಳ ಅಡಿ ಹೂತುಹೋದಾಗ ಅಥವಾ ರಕ್ಷಣೆಯ ಸಂದರ್ಭದಲ್ಲಿ ಎಂದಿಗೂ ಶಬ್ದ ಮಾಡಬೇಡಿ, ಅಂತಹ ಪರಿಸ್ಥಿತಿಯಲ್ಲಿ ಧೂಳು ಮತ್ತು ಕೊಳಕು ಗಂಟಲಿನೊಳಗೆ ಹೋಗಬಹುದು.

ಇದನ್ನೂ ಓದಿ: ಸೈಬರ್​ ಕಳ್ಳರ ಕೈಗೆ ಸಿಲುಕಿ ಮೋಸ ಹೋಗಿದ್ದೀರಾ?- ಡೋಂಟ್​ವರಿ, ಈ ರೀತಿ ಮಾಡಿದ್ರೆ ನಿಮ್ಮ ಹಣ ವಾಪಸ್​! - CYBER FRAUD CALL CASES

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಂದು (ಜುಲೈ 3) ಬೆಳಗ್ಗೆ ಲಡಾಖ್‌ನಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪದ ತೀವ್ರತೆ ಕಡಿಮೆ ಇರುವುದರಿಂದ ಈ ಪ್ರದೇಶದಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.

ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪನ ಕೇಂದ್ರವು, ಬೆಳಗ್ಗೆ 8.12ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 36.10 ಡಿಗ್ರಿ ಅಕ್ಷಾಂಶ ಮತ್ತು 74.81 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 150 ಕಿಲೋಮೀಟರ್ ಆಳದಲ್ಲಿ ಇದೆ ಎಂದು ತಿಳಿಸಿದೆ.

ಇತ್ತೀಚೆಗೆ ಘಟನೆ: ಈ ಹಿಂದೆ ಮೇ 20 ರಂದು ಲಡಾಖ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಲಡಾಖ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 4.0 ಎಂದು ಅಳೆಯಲಾಗಿದೆ. ಭೂಕಂಪದ ತೀವ್ರತೆ ಅಷ್ಟೊಂದು ಪ್ರಬಲವಾಗಿಲ್ಲದ ಕಾರಣ, ಯಾವುದೇ ರೀತಿಯ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಅದೇ ದಿನ ಬೆಳಗ್ಗೆ ಲಡಾಖ್‌ನಲ್ಲಿ ಲೋಕಸಭೆ ಚುನಾವಣೆಯ ಮತದಾನವೂ ನಡೆಯಬೇಕಿತ್ತು.

ಭೂಕಂಪದ ವೇಳೆ ಏನು ಮಾಡಬೇಕು? ಏನು ಮಾಡಬಾರದು?: ನಿಮ್ಮ ಪ್ರದೇಶದಲ್ಲಿ ಭೂಕಂಪನದ ಅನುಭವವಾದರೆ, ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯೋಣ ಬನ್ನಿ.

  • ನೀವು ಕಟ್ಟಡದಲ್ಲಿದ್ದರೆ ಮತ್ತು ಭೂಕಂಪದ ನಡುಕವನ್ನು ಅನುಭವಿಸಿದರೆ, ಮೊದಲು ನೆಲದ ಮೇಲೆ ಕುಳಿತುಕೊಳ್ಳಿ ಅಥವಾ ಕೆಲವು ಬಲವಾದ ಪೀಠೋಪಕರಣಗಳ ಕೆಳಗೆ ಹೋಗಿ ಕುಳಿತುಕೊಳ್ಳಬೇಕು. ನೀವು ಕಟ್ಟಡದ ಹೊರಗಿದ್ದರೆ, ಮರಗಳು, ಕಂಬಗಳು ಮತ್ತು ತಂತಿಗಳಿಂದ ದೂರವಿರಿ, ಏಕೆಂದರೆ ಅವು ನಿಮ್ಮ ಮೇಲೆ ಬೀಳುವ ಅಪಾಯ ಹೆಚ್ಚು.
  • ನೀವು ವಾಹನವನ್ನು ಚಾಲನೆ ಮಾಡುತ್ತಿದ್ದರೆ, ತಕ್ಷಣವೇ ಅದನ್ನು ನಿಲ್ಲಿಸಿ, ಪಕ್ಕದಲ್ಲಿ ಬಂದು ನಿಲ್ಲಬೇಕು. ಭೂಕಂಪದ ನಂತರ ನೀವು ಅವಶೇಷಗಳ ರಾಶಿಯ ಅಡಿ ಹೂತುಹೋದರೆ, ನಂತರ ಬೆಂಕಿಕಡ್ಡಿಯನ್ನು ಬೆಳಗಿಸಬೇಡಿ, ಚಲಿಸಲು ಪ್ರಯತ್ನಿಸಬೇಡಿ ಅಥವಾ ತಳ್ಳಬೇಡಿ, ಇಲ್ಲದಿದ್ದರೆ ನಿಮ್ಮ ಮೇಲೆ ಮತ್ತಷ್ಟು ವಸ್ತುಗಳು ಬೀಳಬಹುದು.
  • ಅವಶೇಷಗಳ ಅಡಿ ಹೂತುಹೋದಾಗ ಅಥವಾ ರಕ್ಷಣೆಯ ಸಂದರ್ಭದಲ್ಲಿ ಎಂದಿಗೂ ಶಬ್ದ ಮಾಡಬೇಡಿ, ಅಂತಹ ಪರಿಸ್ಥಿತಿಯಲ್ಲಿ ಧೂಳು ಮತ್ತು ಕೊಳಕು ಗಂಟಲಿನೊಳಗೆ ಹೋಗಬಹುದು.

ಇದನ್ನೂ ಓದಿ: ಸೈಬರ್​ ಕಳ್ಳರ ಕೈಗೆ ಸಿಲುಕಿ ಮೋಸ ಹೋಗಿದ್ದೀರಾ?- ಡೋಂಟ್​ವರಿ, ಈ ರೀತಿ ಮಾಡಿದ್ರೆ ನಿಮ್ಮ ಹಣ ವಾಪಸ್​! - CYBER FRAUD CALL CASES

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.