ETV Bharat / bharat

ಮತದಾನದ ದಿನವೇ ಹಿರಿಯ ನಟ ಶೇಖರ್​ ಸುಮನ್, ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ - Loksabha Election - LOKSABHA ELECTION

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದಂದೇ ಬಿಜೆಪಿಗೆ ಹಿರಿಯ ನಟ ಮತ್ತು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಮುಖಂಡೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಪಕ್ಷದ ಸದಸ್ಯತ್ವ ಪ್ರಮಾಣಪತ್ರ ಹಂಚಿಕೆ
ಬಿಜೆಪಿ ಪಕ್ಷದ ಸದಸ್ಯತ್ವ ಪ್ರಮಾಣಪತ್ರ ಹಂಚಿಕೆ (Source: ANI Website)
author img

By ETV Bharat Karnataka Team

Published : May 7, 2024, 4:49 PM IST

ಹೈದರಾಬಾದ್: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ದಿನವೇ ಬಾಲಿವುಡ್​ ಹಿರಿಯ ನಟ ಶೇಖರ್​ ಸುಮನ್​ ಮತ್ತು ಕಾಂಗ್ರೆಸ್​ನ ರಾಷ್ಟ್ರೀಯ ಮಾಧ್ಯಮದ ಮಾಜಿ ಸಂಯೋಜಕಿ ರಾಧಿಕಾ ಖೇರಾ ಅವರು ಬಿಜೆಪಿ ಸೇರ್ಪಡೆಯಾದರು.

ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಶೇಖರ್ ಸುಮನ್ ಮತ್ತು ಈಚೆಗೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ರಾಧಿಕಾ ಖೇರಾ ಅವರನ್ನು ಪಕ್ಷದ ಹಿರಿಯ ನಾಯಕ ವಿನೋದ್ ತಾವ್ಡೆ ಅವರು ಸ್ವಾಗತಿಸಿದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಾನು ನಿನ್ನೆಯವರೆಗೂ ಬಿಜೆಪಿ ಸೇರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಜೀವನದಲ್ಲಿ ಅನೇಕ ವಿಷಯಗಳು ತಿಳಿದೋ ಅಥವಾ ತಿಳಿಯದೆಯೋ ಸಂಭವಿಸುತ್ತವೆ. ಈಗ ಬಿಜೆಪಿ ಸೇರಿದ್ದೇನೆ. ಇದು ದೇವರ ಆದೇಶ ಇತ್ತು ಎಂದೆನಿಸುತ್ತದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದರು.

ಬಿಜೆಪಿಯ ಅಭಿವೃದ್ಧಿ ಚಿಂತನೆಯನ್ನು ಕಾಂಗ್ರೆಸ್​ ಸರಿಹೊಂದಲು ಸಾಧ್ಯವಿಲ್ಲ. ಹೀಗಾಗಿ ನಾನು ಹಳೆಯ ಪಕ್ಷಕ್ಕೆ ಗುಡ್​ಬೈ ಹೇಳಿ ಬಿಜೆಪಿ ಸೇರಿದ್ದೇನೆ ಎಂದು ಕಾಂಗ್ರೆಸ್​ನ ಮಾಧ್ಯಮ ಸಂಯೋಜಕರಾಗಿದ್ದ ರಾಧಿಕಾ ಖೇರಾ ಅವರು ಹೇಳಿದರು.

ಬಾಲಿವುಡ್​ನ ಹಿರಿಯ ನಟ ಶೇಖರ್ ಸುಮನ್ ಅವರು ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿ. ಅವರ ಹೀರಾಮಂಡಿ: ದಿ ಡೈಮಂಡ್ ಬಜಾರ್‌ ವೆಬ್​ಸಿರೀಸ್​ ಈಚೆಗೆ ಭರ್ಜರಿ ಯಶಸ್ಸು ಕಂಡಿದೆ.

ಖ್ಯಾತ ಟಿವಿ ನಿರೂಪಕಿ ರೂಪಾಲಿ ಗಂಗೂಲಿ ಮತ್ತು ಜ್ಯೋತಿಶಿ ಅಮೇಯ ಜೋಶಿ ಅವರು ಈಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಅದರ ಜೊತೆಗೆ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್​ ಸಿಂಗ್​ ಲವ್ಲಿ ಕೂಡ ಕಮಲ ಪಕ್ಷ ಸೇರಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್​ಗೆ ಶಾಕ್​: ಪಕ್ಷ ತೊರೆದ ಅರವಿಂದರ್ ಸಿಂಗ್ ಲವ್ಲಿ, ಮಾಜಿ ಸಚಿವ, ಶಾಸಕ ಬಿಜೆಪಿ ಸೇರ್ಪಡೆ - Arvinder Singh Lovely

ಹೈದರಾಬಾದ್: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ದಿನವೇ ಬಾಲಿವುಡ್​ ಹಿರಿಯ ನಟ ಶೇಖರ್​ ಸುಮನ್​ ಮತ್ತು ಕಾಂಗ್ರೆಸ್​ನ ರಾಷ್ಟ್ರೀಯ ಮಾಧ್ಯಮದ ಮಾಜಿ ಸಂಯೋಜಕಿ ರಾಧಿಕಾ ಖೇರಾ ಅವರು ಬಿಜೆಪಿ ಸೇರ್ಪಡೆಯಾದರು.

ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಶೇಖರ್ ಸುಮನ್ ಮತ್ತು ಈಚೆಗೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ರಾಧಿಕಾ ಖೇರಾ ಅವರನ್ನು ಪಕ್ಷದ ಹಿರಿಯ ನಾಯಕ ವಿನೋದ್ ತಾವ್ಡೆ ಅವರು ಸ್ವಾಗತಿಸಿದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಾನು ನಿನ್ನೆಯವರೆಗೂ ಬಿಜೆಪಿ ಸೇರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಜೀವನದಲ್ಲಿ ಅನೇಕ ವಿಷಯಗಳು ತಿಳಿದೋ ಅಥವಾ ತಿಳಿಯದೆಯೋ ಸಂಭವಿಸುತ್ತವೆ. ಈಗ ಬಿಜೆಪಿ ಸೇರಿದ್ದೇನೆ. ಇದು ದೇವರ ಆದೇಶ ಇತ್ತು ಎಂದೆನಿಸುತ್ತದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದರು.

ಬಿಜೆಪಿಯ ಅಭಿವೃದ್ಧಿ ಚಿಂತನೆಯನ್ನು ಕಾಂಗ್ರೆಸ್​ ಸರಿಹೊಂದಲು ಸಾಧ್ಯವಿಲ್ಲ. ಹೀಗಾಗಿ ನಾನು ಹಳೆಯ ಪಕ್ಷಕ್ಕೆ ಗುಡ್​ಬೈ ಹೇಳಿ ಬಿಜೆಪಿ ಸೇರಿದ್ದೇನೆ ಎಂದು ಕಾಂಗ್ರೆಸ್​ನ ಮಾಧ್ಯಮ ಸಂಯೋಜಕರಾಗಿದ್ದ ರಾಧಿಕಾ ಖೇರಾ ಅವರು ಹೇಳಿದರು.

ಬಾಲಿವುಡ್​ನ ಹಿರಿಯ ನಟ ಶೇಖರ್ ಸುಮನ್ ಅವರು ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿ. ಅವರ ಹೀರಾಮಂಡಿ: ದಿ ಡೈಮಂಡ್ ಬಜಾರ್‌ ವೆಬ್​ಸಿರೀಸ್​ ಈಚೆಗೆ ಭರ್ಜರಿ ಯಶಸ್ಸು ಕಂಡಿದೆ.

ಖ್ಯಾತ ಟಿವಿ ನಿರೂಪಕಿ ರೂಪಾಲಿ ಗಂಗೂಲಿ ಮತ್ತು ಜ್ಯೋತಿಶಿ ಅಮೇಯ ಜೋಶಿ ಅವರು ಈಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಅದರ ಜೊತೆಗೆ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್​ ಸಿಂಗ್​ ಲವ್ಲಿ ಕೂಡ ಕಮಲ ಪಕ್ಷ ಸೇರಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್​ಗೆ ಶಾಕ್​: ಪಕ್ಷ ತೊರೆದ ಅರವಿಂದರ್ ಸಿಂಗ್ ಲವ್ಲಿ, ಮಾಜಿ ಸಚಿವ, ಶಾಸಕ ಬಿಜೆಪಿ ಸೇರ್ಪಡೆ - Arvinder Singh Lovely

ETV Bharat Logo

Copyright © 2025 Ushodaya Enterprises Pvt. Ltd., All Rights Reserved.