ETV Bharat / bharat

ತಿಹಾರ್ ಜೈಲಿಗೆ ಶರಣಾಗುವ ಮುನ್ನ ರಾಜ್​ಘಾಟ್, ಹನುಮಾನ್ ದೇವಸ್ಥಾನಕ್ಕೆ ಕೇಜ್ರಿವಾಲ್ ಭೇಟಿ - Arvind Kejriwal

author img

By PTI

Published : Jun 2, 2024, 4:29 PM IST

Updated : Jun 2, 2024, 5:22 PM IST

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಇಂದು ತಿಹಾರ್ ಜೈಲಿಗೆ ಶರಣಾದರು. ಇದಕ್ಕೂ ಮುನ್ನ ಅವರು ರಾಜ್​ಘಾಟ್ ಹಾಗು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು.

Delhi CM Kejriwal receives blessings of his parents (Left Picture); AAP leaders arrive at Rajghat (Right Picture).
ದೆಹಲಿ ಸಿಎಂ ಕೇಜ್ರಿವಾಲ್ ತಂದೆ-ತಾಯಿಯ ಆಶೀರ್ವಾದ ಪಡೆಯುತ್ತಿರುವುದು (ಎಡ ಚಿತ್ರ);​ ರಾಜ್​ಘಾಟ್​ಗೆ ತೆರಳುತ್ತಿರುವುದು (ಬಲ ಚಿತ್ರ). (IANS)

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಇಂದು ತಿಹಾರ್ ಜೈಲಿಗೆ ಶರಣಾದರು. ಇದಕ್ಕೂ ಮುನ್ನ, ರಾಜ್​ಘಾಟ್​ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಕೇಜ್ರಿವಾಲ್​ ಎದುರಿಸುತ್ತಿದ್ದಾರೆ. ಮೇ 10ರಂದು ಸುಪ್ರೀಂ ಕೋರ್ಟ್​ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಜೂನ್​ 1ಕ್ಕೆ ಮುಕ್ತಾಯವಾಗಿದೆ. ಹೀಗಾಗಿ, ಇಂದು ಮರಳಿ ಜೈಲಿಗೆ ಶರಣಾಗುವಂತೆ ಕೋರ್ಟ್‌ ಆದೇಶಿಸಿತ್ತು.

ಜೈಲಿಗೆ ಮರಳುವ ಮುನ್ನ ಕೇಜ್ರಿವಾಲ್​ ಮನೆಯಲ್ಲಿ ತಂದೆ-ತಾಯಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ರಾಜ್​ಘಾಟ್​ ಹಾಗೂ ಹನುಮಾನ್ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ, ಪತ್ನಿ ಸುನೀತಾ ಕೇಜ್ರಿವಾಲ್​, ಪಕ್ಷದ ನಾಯಕರು, ಸಚಿವರಾದ ಅತಿಶಿ, ಕೈಲಾಶ್ ಗಹ್ಲೋಟ್, ಸೌರಭ್ ಭಾರಧ್ವಾಜ್, ರಾಜ್ಯಸಭಾ ಸದಸ್ಯರಾದ ಸಂಜಯ್​ ಸಿಂಗ್, ಸಂದೀಪ್ ಪಾಠಕ್​ ಹಾಗೂ ದುರ್ಗೇಶ್ ಪಾಠಕ್​, ರಾಖಿ ಬಿರ್ಲಾ, ರೀನಾ ಮೊದಲಾದವರು ಇದ್ದರು. ನಂತರ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು. ಅಲ್ಲಿಂದ ಜೈಲಿಗೆ ತೆರಳಿ ಶರಣಾದರು.

ಸುಪ್ರೀಂ ಕೋರ್ಟ್​ಗೆ ಧನ್ಯವಾದ: ತಮ್ಮ ಜಾಮೀನಿನ ಗಡುವು ಮುಗಿದ ಬಗ್ಗೆ ಕೇಜ್ರಿವಾಲ್ ಸಾಮಾಜಿಕ ಜಾಲತಾಣ 'ಎಕ್ಸ್​' ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. 'ಸುಪ್ರೀಂ ಕೋರ್ಟ್​ ಆದೇಶದ ಅನ್ವಯ ನಾನು ಚುನಾವಣಾ ಪ್ರಚಾರಕ್ಕೆ 21 ದಿನಗಳ ಕಾಲ ಜೈಲಿನಿಂದ ಹೊರಬಂದೆ. ಕೋರ್ಟ್​ಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು, 'ನೀವೆಲ್ಲರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ನಿಮ್ಮ ಬಗ್ಗೆ ಚಿಂತಿಸುತ್ತಿರುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಜೈಲಿನಲ್ಲಿಯೂ ಸಂತೋಷವಾಗಿರುತ್ತಾರೆ' ಎಂದು ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದು ಬೀಗಿದ ಆಡಳಿತಾರೂಢ ಸಿಕೆಎಂ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಇಂದು ತಿಹಾರ್ ಜೈಲಿಗೆ ಶರಣಾದರು. ಇದಕ್ಕೂ ಮುನ್ನ, ರಾಜ್​ಘಾಟ್​ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಕೇಜ್ರಿವಾಲ್​ ಎದುರಿಸುತ್ತಿದ್ದಾರೆ. ಮೇ 10ರಂದು ಸುಪ್ರೀಂ ಕೋರ್ಟ್​ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಜೂನ್​ 1ಕ್ಕೆ ಮುಕ್ತಾಯವಾಗಿದೆ. ಹೀಗಾಗಿ, ಇಂದು ಮರಳಿ ಜೈಲಿಗೆ ಶರಣಾಗುವಂತೆ ಕೋರ್ಟ್‌ ಆದೇಶಿಸಿತ್ತು.

ಜೈಲಿಗೆ ಮರಳುವ ಮುನ್ನ ಕೇಜ್ರಿವಾಲ್​ ಮನೆಯಲ್ಲಿ ತಂದೆ-ತಾಯಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ರಾಜ್​ಘಾಟ್​ ಹಾಗೂ ಹನುಮಾನ್ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ, ಪತ್ನಿ ಸುನೀತಾ ಕೇಜ್ರಿವಾಲ್​, ಪಕ್ಷದ ನಾಯಕರು, ಸಚಿವರಾದ ಅತಿಶಿ, ಕೈಲಾಶ್ ಗಹ್ಲೋಟ್, ಸೌರಭ್ ಭಾರಧ್ವಾಜ್, ರಾಜ್ಯಸಭಾ ಸದಸ್ಯರಾದ ಸಂಜಯ್​ ಸಿಂಗ್, ಸಂದೀಪ್ ಪಾಠಕ್​ ಹಾಗೂ ದುರ್ಗೇಶ್ ಪಾಠಕ್​, ರಾಖಿ ಬಿರ್ಲಾ, ರೀನಾ ಮೊದಲಾದವರು ಇದ್ದರು. ನಂತರ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು. ಅಲ್ಲಿಂದ ಜೈಲಿಗೆ ತೆರಳಿ ಶರಣಾದರು.

ಸುಪ್ರೀಂ ಕೋರ್ಟ್​ಗೆ ಧನ್ಯವಾದ: ತಮ್ಮ ಜಾಮೀನಿನ ಗಡುವು ಮುಗಿದ ಬಗ್ಗೆ ಕೇಜ್ರಿವಾಲ್ ಸಾಮಾಜಿಕ ಜಾಲತಾಣ 'ಎಕ್ಸ್​' ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. 'ಸುಪ್ರೀಂ ಕೋರ್ಟ್​ ಆದೇಶದ ಅನ್ವಯ ನಾನು ಚುನಾವಣಾ ಪ್ರಚಾರಕ್ಕೆ 21 ದಿನಗಳ ಕಾಲ ಜೈಲಿನಿಂದ ಹೊರಬಂದೆ. ಕೋರ್ಟ್​ಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು, 'ನೀವೆಲ್ಲರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ನಿಮ್ಮ ಬಗ್ಗೆ ಚಿಂತಿಸುತ್ತಿರುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಜೈಲಿನಲ್ಲಿಯೂ ಸಂತೋಷವಾಗಿರುತ್ತಾರೆ' ಎಂದು ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದು ಬೀಗಿದ ಆಡಳಿತಾರೂಢ ಸಿಕೆಎಂ

Last Updated : Jun 2, 2024, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.