ETV Bharat / bharat

ದೇಶದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಉತ್ತರಾಖಂಡದಲ್ಲಿ ಪ್ರಾರಂಭ: ಸಿಂಧಿಯಾ

author img

By PTI

Published : Feb 15, 2024, 7:00 PM IST

ಉತ್ತರಾಖಂಡ ರಾಜ್ಯದಲ್ಲಿ ತುರ್ತು ಹೆಲಿಕಾಪ್ಟರ್ ವೈದ್ಯಕೀಯ ಸೇವೆ ಆರಂಭಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ
Jyotiraditya Scindia

ನವದೆಹಲಿ: ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (ಎಚ್ಇಎಂಎಸ್) (Emergency Medical Service-HEMS) ಉತ್ತರಾಖಂಡದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ. "ದೇಶದ ಮೊದಲ ಎಚ್ಇಎಂಎಸ್ ಸೇವೆಯನ್ನು ರಾಜ್ಯದಿಂದ ಪ್ರಾರಂಭಿಸಲಾಗುವುದು ಎಂದು ನಾನು ಉತ್ತರಾಖಂಡದ ಜನರಿಗೆ ತಿಳಿಸಲು ಬಯಸುತ್ತೇನೆ" ಎಂದು ಸಿಂಧಿಯಾ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಹೆಲಿಕಾಪ್ಟರ್ ಅನ್ನು ನಿಲ್ಲಿಸಲಾಗುವುದು. ಅಪಘಾತಕ್ಕೀಡಾದ ಯಾರನ್ನಾದರೂ ಅಲ್ಲಿಂದ ವೈದ್ಯಕೀಯ ಚಿಕಿತ್ಸೆಗಾಗಿ ಏರ್​ಲಿಫ್ಟ್​ ಮಾಡಿ 150 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕಳುಹಿಸಲು ಸಾಧ್ಯವಾಗಲಿದೆ. ಎಚ್ಇಎಂಎಸ್ ಮೂಲಕ ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು ದೇಶಾದ್ಯಂತದ ವ್ಯಾಪಕ ಜನಸಂಖ್ಯೆಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆಘಾತ ಆರೈಕೆ ಸೇವೆಗಳ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಹೊಸ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳು (ಎಚ್ಇಎಂಎಸ್) 'ಸಂಜೀವಿನಿ' ಯೋಜನೆಯಡಿ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ.

ಉತ್ತರಾಖಂಡ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ವಿಮಾನ ನಿಲ್ದಾಣ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರಿಗೆ ಭರವಸೆ ನೀಡಿದ್ದಾರೆ. "ಏಮ್ಸ್ ರಿಷಿಕೇಷ್​ನಿಂದ ಎಚ್ಇಎಂಎಸ್​ಗಾಗಿ ಯೋಜನೆಗಾಗಿ ಸಿದ್ಧತೆ ನಡೆಯುತ್ತಿದೆ. ನನ್ನ ಮೇಲ್ವಿಚಾರಣೆಯಲ್ಲಿ ಹೆಲಿಕಾಪ್ಟರ್ ಜೋಡಣೆ ಮತ್ತು ಪ್ರಮಾಣೀಕರಣ ಪ್ರಗತಿಯಲ್ಲಿದೆ" ಎಂದು ಸಿಂಧಿಯಾ ದೃಢಪಡಿಸಿದರು.

ರಾಜ್ಯ ಸರ್ಕಾರದ ಮನವಿಯ ಮೇರೆಗೆ ಹಿಂಡನ್ ವಾಯುನೆಲೆಯಿಂದ ಪಿಥೋರಗಢಕ್ಕೆ ಮತ್ತೊಂದು ವಾಯು ಸಂಪರ್ಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಸಿಂಧಿಯಾ ಘೋಷಿಸಿದರು. "ಈ ಮಾರ್ಗದ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಉಡಾನ್ ಅಡಿಯಲ್ಲಿ ಹೆಚ್ಚಿನ ಪರಿಶೀಲನೆಯ ನಂತರ ನಿರ್ದಿಷ್ಟ ಮಾರ್ಗವನ್ನು ನಿರ್ಧರಿಸಲಾಗುವುದು" ಎಂದು ಅವರು ಹೇಳಿದರು.

ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಉತ್ತರಾಖಂಡ ರಾಜ್ಯಕ್ಕೆ ಈ ಎರಡೂ ಯೋಜನೆಗಳು ಬಹಳ ಉಪಯುಕ್ತವಾಗಲಿವೆ. ಈ ಯೋಜನೆಗಳು ಕಾರ್ಯಗತಗೊಂಡ ನಂತರ ಜನರಿಗೆ ಗಮನಾರ್ಹವಾಗಿ ಪ್ರಯೋಜನವಾಗಲಿದೆ. ಅಪಘಾತ ಮತ್ತು ಇತರ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ತಜ್ಞ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾಗಿರುವ ನಿರ್ಣಾಯಕ 'ಸುವರ್ಣ ಗಂಟೆ'ಯಲ್ಲಿ ರೋಗಿಗಳನ್ನು ಉಳಿಸಲು ತುರ್ತು ಹೆಲಿಕಾಪ್ಟರ್ ಸೇವೆಗಳು ಅನಿವಾರ್ಯವಾಗಿವೆ. ಈ ಯೋಜನೆಯು ಪ್ರವಾಸಿಗರು, ಯಾತ್ರಾರ್ಥಿಗಳು ಮತ್ತು ಸಾಹಸ ಚಾರಣಿಗರನ್ನು ಆಕರ್ಷಿಸುವ ರಾಜ್ಯ ಉತ್ತರಾಖಂಡಕ್ಕೆ ವರದಾನವಾಗಲಿದೆ.

ಇದನ್ನೂ ಓದಿ: 'ನೋಟಿಗಿಂತ ವೋಟಿಗೆ ಬಲ ಬಂದಿದೆ': ಚುನಾವಣಾ ಬಾಂಡ್​ ರದ್ದು ತೀರ್ಪು ಸ್ವಾಗತಿಸಿದ ಕಾಂಗ್ರೆಸ್​

ನವದೆಹಲಿ: ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (ಎಚ್ಇಎಂಎಸ್) (Emergency Medical Service-HEMS) ಉತ್ತರಾಖಂಡದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ. "ದೇಶದ ಮೊದಲ ಎಚ್ಇಎಂಎಸ್ ಸೇವೆಯನ್ನು ರಾಜ್ಯದಿಂದ ಪ್ರಾರಂಭಿಸಲಾಗುವುದು ಎಂದು ನಾನು ಉತ್ತರಾಖಂಡದ ಜನರಿಗೆ ತಿಳಿಸಲು ಬಯಸುತ್ತೇನೆ" ಎಂದು ಸಿಂಧಿಯಾ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಹೆಲಿಕಾಪ್ಟರ್ ಅನ್ನು ನಿಲ್ಲಿಸಲಾಗುವುದು. ಅಪಘಾತಕ್ಕೀಡಾದ ಯಾರನ್ನಾದರೂ ಅಲ್ಲಿಂದ ವೈದ್ಯಕೀಯ ಚಿಕಿತ್ಸೆಗಾಗಿ ಏರ್​ಲಿಫ್ಟ್​ ಮಾಡಿ 150 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕಳುಹಿಸಲು ಸಾಧ್ಯವಾಗಲಿದೆ. ಎಚ್ಇಎಂಎಸ್ ಮೂಲಕ ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು ದೇಶಾದ್ಯಂತದ ವ್ಯಾಪಕ ಜನಸಂಖ್ಯೆಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆಘಾತ ಆರೈಕೆ ಸೇವೆಗಳ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಹೊಸ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳು (ಎಚ್ಇಎಂಎಸ್) 'ಸಂಜೀವಿನಿ' ಯೋಜನೆಯಡಿ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ.

ಉತ್ತರಾಖಂಡ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ವಿಮಾನ ನಿಲ್ದಾಣ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರಿಗೆ ಭರವಸೆ ನೀಡಿದ್ದಾರೆ. "ಏಮ್ಸ್ ರಿಷಿಕೇಷ್​ನಿಂದ ಎಚ್ಇಎಂಎಸ್​ಗಾಗಿ ಯೋಜನೆಗಾಗಿ ಸಿದ್ಧತೆ ನಡೆಯುತ್ತಿದೆ. ನನ್ನ ಮೇಲ್ವಿಚಾರಣೆಯಲ್ಲಿ ಹೆಲಿಕಾಪ್ಟರ್ ಜೋಡಣೆ ಮತ್ತು ಪ್ರಮಾಣೀಕರಣ ಪ್ರಗತಿಯಲ್ಲಿದೆ" ಎಂದು ಸಿಂಧಿಯಾ ದೃಢಪಡಿಸಿದರು.

ರಾಜ್ಯ ಸರ್ಕಾರದ ಮನವಿಯ ಮೇರೆಗೆ ಹಿಂಡನ್ ವಾಯುನೆಲೆಯಿಂದ ಪಿಥೋರಗಢಕ್ಕೆ ಮತ್ತೊಂದು ವಾಯು ಸಂಪರ್ಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಸಿಂಧಿಯಾ ಘೋಷಿಸಿದರು. "ಈ ಮಾರ್ಗದ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಉಡಾನ್ ಅಡಿಯಲ್ಲಿ ಹೆಚ್ಚಿನ ಪರಿಶೀಲನೆಯ ನಂತರ ನಿರ್ದಿಷ್ಟ ಮಾರ್ಗವನ್ನು ನಿರ್ಧರಿಸಲಾಗುವುದು" ಎಂದು ಅವರು ಹೇಳಿದರು.

ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಉತ್ತರಾಖಂಡ ರಾಜ್ಯಕ್ಕೆ ಈ ಎರಡೂ ಯೋಜನೆಗಳು ಬಹಳ ಉಪಯುಕ್ತವಾಗಲಿವೆ. ಈ ಯೋಜನೆಗಳು ಕಾರ್ಯಗತಗೊಂಡ ನಂತರ ಜನರಿಗೆ ಗಮನಾರ್ಹವಾಗಿ ಪ್ರಯೋಜನವಾಗಲಿದೆ. ಅಪಘಾತ ಮತ್ತು ಇತರ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ತಜ್ಞ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾಗಿರುವ ನಿರ್ಣಾಯಕ 'ಸುವರ್ಣ ಗಂಟೆ'ಯಲ್ಲಿ ರೋಗಿಗಳನ್ನು ಉಳಿಸಲು ತುರ್ತು ಹೆಲಿಕಾಪ್ಟರ್ ಸೇವೆಗಳು ಅನಿವಾರ್ಯವಾಗಿವೆ. ಈ ಯೋಜನೆಯು ಪ್ರವಾಸಿಗರು, ಯಾತ್ರಾರ್ಥಿಗಳು ಮತ್ತು ಸಾಹಸ ಚಾರಣಿಗರನ್ನು ಆಕರ್ಷಿಸುವ ರಾಜ್ಯ ಉತ್ತರಾಖಂಡಕ್ಕೆ ವರದಾನವಾಗಲಿದೆ.

ಇದನ್ನೂ ಓದಿ: 'ನೋಟಿಗಿಂತ ವೋಟಿಗೆ ಬಲ ಬಂದಿದೆ': ಚುನಾವಣಾ ಬಾಂಡ್​ ರದ್ದು ತೀರ್ಪು ಸ್ವಾಗತಿಸಿದ ಕಾಂಗ್ರೆಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.