ETV Bharat / bharat

ಪ್ರಕರಣದ ಬೆನ್ನು ಬಿದ್ದಾಗ ಸಿಕ್ಕಿದ್ದು ಆಘಾತಕಾರಿ ಮಾಹಿತಿ: ಮಗಳ ಕತ್ತು ಹಿಸುಕಿ ಕೊಂದ ಪೋಷಕರ ಬಂಧನ - ಬಿಚ್ವಾ ಪೊಲೀಸ್ ಠಾಣೆ

ಮೂರು ತಿಂಗಳ ಹಿಂದೆ ಮೈನ್‌ಪುರಿಯಲ್ಲಿ ನಡೆದಿದ್ದ ಬಾಲಕಿಯ ಹತ್ಯೆಯ ಕುರಿತ ಹಲವು ಮಾಹಿತಿಗಳನ್ನ ಪೊಲೀಸರು ಬಹಿರಂಗಪಡಿಸಿದ್ದಾರೆ. ಆಕೆಯ ಪೋಷಕರೇ ಕೊಲೆಗಾರರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಮೈನ್‌ಪುರಿ
ಮೈನ್‌ಪುರಿ
author img

By ETV Bharat Karnataka Team

Published : Jan 29, 2024, 5:26 PM IST

ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್

ಮೈನ್‌ಪುರಿ (ಉತ್ತರಪ್ರದೇಶ) : ಸುಮಾರು ಮೂರು ತಿಂಗಳ ಹಿಂದೆ ನಡೆದಿದ್ದ ಬಾಲಕಿಯ ಕೊಲೆಯ ಬಗ್ಗೆ ಪೊಲೀಸರು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಬಾಲಕಿಯ ಪೋಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಆಕೆಯ ಮನೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅವರು ತಮ್ಮ ವಿರೋಧಿಗಳನ್ನು ಸಿಲುಕಿಸಲು ಕೊಲೆ ಆರೋಪ ಹೊರಿಸಿದ್ದರು. ಆದರೆ, ಇದೊಂದು ಮರ್ಯಾದಾ ಹತ್ಯೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ವರ್ತನೆಯಿಂದ ಕುಟುಂಬಸ್ಥರು ಅನುಮಾನಗೊಂಡು ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಇದೀಗ ಪೊಲೀಸರು ಎಲ್ಲ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.

ಬಾಲಕಿ ಕೊಲೆಯಲ್ಲಿ ಕುಟುಂಬಸ್ಥರು ಭಾಗಿ: 14 ವರ್ಷದ ಬಾಲಕಿ ಅಕ್ಟೋಬರ್ - 30 - 2023 ರಂದು ಬಿಚ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಹರ್ಕೇಶಿ ಗ್ರಾಮದಲ್ಲಿ ನಾಪತ್ತೆಯಾಗಿದ್ದರು. ಬಾಲಕಿ ಕುರವಲಿ ಔಷಧ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದರು. ನಂತರ ಅವರ ಶವವು ಇಟಾಹ್‌ನ ಮಾಲವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 13 ರಂದು ತನಿಖೆಯನ್ನು ಬಿಚ್ವಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಕ್ಷೇತ್ರಾಧಿಕಾರಿ ಭೋಗಾಂವ್ ಸುನೀಲ್ ಕುಮಾರ್ ಮತ್ತು ಪೊಲೀಸ್ ಠಾಣೆಯ ಮುಖ್ಯಸ್ಥ ಅವ್ನಿಶ್ ತ್ಯಾಗಿ ಅವರು ಮಾಹಿತಿದಾರರ ಮೂಲಕ ಮತ್ತು ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸಿದಾಗ, ಅನುಮಾನ ಕುಟುಂಬಸ್ಥರ ಮೇಲೆಯೇ ತಿರುಗಿತ್ತು. ತನಿಖೆಯ ನಂತರ ಬಾಲಕಿಯ ಕೊಲೆಯಲ್ಲಿ ಆಕೆಯ ತಂದೆ, ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಇತರರು ಭಾಗಿಯಾಗಿರುವುದು ಕಂಡು ಬಂದಿತ್ತು.

ಮಾಲವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ. ಈ ಸಂಬಂಧ ದಿನೇಶ್ ಕುಮಾರ್ ಹಾಗೂ ನಾಗಲಾ ಹರಕೇಸಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸ್ ತನಿಖೆಯಿಂದ ಘಟನೆಯ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿದ್ದು, ಎದುರಾಳಿಗಳನ್ನು ಬಲೆಗೆ ಬೀಳಿಸಲು ಬಾಲಕಿಯ ತಂದೆ ಕಿಶನ್ ಪಾಲ್ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಕಿಶನ್‌ಪಾಲ್ ತುಂಬಾ ಕೆಟ್ಟ ವ್ಯಕ್ತಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಪ್ರಕರಣಗಳು ದಾಖಲಾಗಿವೆ. ಈ ಕೊಲೆಯಲ್ಲಿ ಕಿಶನ್‌ಪಾಲ್, ಆತನ ಪತ್ನಿ ಸುಧಾ, ಸಹೋದರಿ ಬೇಬಿ ಕೂಡ ಭಾಗಿಯಾಗಿದ್ದರು. ಕಿಶನ್‌ಪಾಲ್ ಅವರ ಸೋದರ ಮಾವ ಗೋವಿಂದಪುರ ನಿವಾಸಿ ಅಖಿಲೇಶ್, ಅವರ ಸ್ನೇಹಿತ ನಾಗ್ಲಾ ಜೂಲಾ ಕುರವಾಲಿ, ರಜನೀಶ್ ಕೂಡ ಈ ಪಿತೂರಿಯ ಭಾಗವಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಎಲ್ಲ ಆರೋಪಿಗಳ ಬಂಧನ : ಬೆಳಗ್ಗೆ ಮನೆಯಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಆಕೆಯ ದೇಹವನ್ನು ಇಟಾಹ್‌ಗೆ ತೆಗೆದುಕೊಂಡು ಹೋಗಿ ಬಿಸಾಡಲಾಗಿತ್ತು. ಮಗಳ ವರ್ತನೆಯಿಂದ ತನಗೆ ಸಂತಸವಿಲ್ಲ ಎಂದು ಕಿಶನ್ ಪಾಲ್ ಪೊಲೀಸರಿಗೆ ತಿಳಿಸಿದ್ದಾರೆ. ಅನೇಕ ಬಾರಿ ಅವಳಿಗೆ ಬುದ್ದಿ ಹೇಳಿದರೂ ಅವಳು ತಂದೆಯ ಮಾತನ್ನು ಕೇಳಲಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದೀಗ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮರ್ಯಾದಾ ಹತ್ಯೆ.. ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನೇ ಕೊಂದ ತಂದೆ

ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್

ಮೈನ್‌ಪುರಿ (ಉತ್ತರಪ್ರದೇಶ) : ಸುಮಾರು ಮೂರು ತಿಂಗಳ ಹಿಂದೆ ನಡೆದಿದ್ದ ಬಾಲಕಿಯ ಕೊಲೆಯ ಬಗ್ಗೆ ಪೊಲೀಸರು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಬಾಲಕಿಯ ಪೋಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಆಕೆಯ ಮನೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅವರು ತಮ್ಮ ವಿರೋಧಿಗಳನ್ನು ಸಿಲುಕಿಸಲು ಕೊಲೆ ಆರೋಪ ಹೊರಿಸಿದ್ದರು. ಆದರೆ, ಇದೊಂದು ಮರ್ಯಾದಾ ಹತ್ಯೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ವರ್ತನೆಯಿಂದ ಕುಟುಂಬಸ್ಥರು ಅನುಮಾನಗೊಂಡು ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಇದೀಗ ಪೊಲೀಸರು ಎಲ್ಲ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.

ಬಾಲಕಿ ಕೊಲೆಯಲ್ಲಿ ಕುಟುಂಬಸ್ಥರು ಭಾಗಿ: 14 ವರ್ಷದ ಬಾಲಕಿ ಅಕ್ಟೋಬರ್ - 30 - 2023 ರಂದು ಬಿಚ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಹರ್ಕೇಶಿ ಗ್ರಾಮದಲ್ಲಿ ನಾಪತ್ತೆಯಾಗಿದ್ದರು. ಬಾಲಕಿ ಕುರವಲಿ ಔಷಧ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದರು. ನಂತರ ಅವರ ಶವವು ಇಟಾಹ್‌ನ ಮಾಲವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 13 ರಂದು ತನಿಖೆಯನ್ನು ಬಿಚ್ವಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಕ್ಷೇತ್ರಾಧಿಕಾರಿ ಭೋಗಾಂವ್ ಸುನೀಲ್ ಕುಮಾರ್ ಮತ್ತು ಪೊಲೀಸ್ ಠಾಣೆಯ ಮುಖ್ಯಸ್ಥ ಅವ್ನಿಶ್ ತ್ಯಾಗಿ ಅವರು ಮಾಹಿತಿದಾರರ ಮೂಲಕ ಮತ್ತು ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸಿದಾಗ, ಅನುಮಾನ ಕುಟುಂಬಸ್ಥರ ಮೇಲೆಯೇ ತಿರುಗಿತ್ತು. ತನಿಖೆಯ ನಂತರ ಬಾಲಕಿಯ ಕೊಲೆಯಲ್ಲಿ ಆಕೆಯ ತಂದೆ, ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಇತರರು ಭಾಗಿಯಾಗಿರುವುದು ಕಂಡು ಬಂದಿತ್ತು.

ಮಾಲವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ. ಈ ಸಂಬಂಧ ದಿನೇಶ್ ಕುಮಾರ್ ಹಾಗೂ ನಾಗಲಾ ಹರಕೇಸಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸ್ ತನಿಖೆಯಿಂದ ಘಟನೆಯ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿದ್ದು, ಎದುರಾಳಿಗಳನ್ನು ಬಲೆಗೆ ಬೀಳಿಸಲು ಬಾಲಕಿಯ ತಂದೆ ಕಿಶನ್ ಪಾಲ್ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಕಿಶನ್‌ಪಾಲ್ ತುಂಬಾ ಕೆಟ್ಟ ವ್ಯಕ್ತಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಪ್ರಕರಣಗಳು ದಾಖಲಾಗಿವೆ. ಈ ಕೊಲೆಯಲ್ಲಿ ಕಿಶನ್‌ಪಾಲ್, ಆತನ ಪತ್ನಿ ಸುಧಾ, ಸಹೋದರಿ ಬೇಬಿ ಕೂಡ ಭಾಗಿಯಾಗಿದ್ದರು. ಕಿಶನ್‌ಪಾಲ್ ಅವರ ಸೋದರ ಮಾವ ಗೋವಿಂದಪುರ ನಿವಾಸಿ ಅಖಿಲೇಶ್, ಅವರ ಸ್ನೇಹಿತ ನಾಗ್ಲಾ ಜೂಲಾ ಕುರವಾಲಿ, ರಜನೀಶ್ ಕೂಡ ಈ ಪಿತೂರಿಯ ಭಾಗವಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಎಲ್ಲ ಆರೋಪಿಗಳ ಬಂಧನ : ಬೆಳಗ್ಗೆ ಮನೆಯಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಆಕೆಯ ದೇಹವನ್ನು ಇಟಾಹ್‌ಗೆ ತೆಗೆದುಕೊಂಡು ಹೋಗಿ ಬಿಸಾಡಲಾಗಿತ್ತು. ಮಗಳ ವರ್ತನೆಯಿಂದ ತನಗೆ ಸಂತಸವಿಲ್ಲ ಎಂದು ಕಿಶನ್ ಪಾಲ್ ಪೊಲೀಸರಿಗೆ ತಿಳಿಸಿದ್ದಾರೆ. ಅನೇಕ ಬಾರಿ ಅವಳಿಗೆ ಬುದ್ದಿ ಹೇಳಿದರೂ ಅವಳು ತಂದೆಯ ಮಾತನ್ನು ಕೇಳಲಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದೀಗ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮರ್ಯಾದಾ ಹತ್ಯೆ.. ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನೇ ಕೊಂದ ತಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.