ETV Bharat / bharat

ವಯನಾಡ್ ದುರಂತದಲ್ಲಿ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಯುವತಿಯ ಭಾವಿ ಪತಿ ರಸ್ತೆ ಅಪಘಾತದಲ್ಲಿ ಸಾವು - Wayanad Tragedy

author img

By ETV Bharat Karnataka Team

Published : Sep 12, 2024, 10:25 AM IST

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆನ್ಸನ್​ ಎಂಬವರನ್ನು ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

fter-the-death-of-her-nine-kin-in-wayanad-tragedy-women-lost-her-husband
ಸಾಂದರ್ಭಿಕ ಚಿತ್ರ (ETV Bharat)

ವಯನಾಡ್​: ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಯುವತಿಗೆ ಇದೀಗ ಮತ್ತೊಂದು ಆಘಾತವಾಗಿದೆ. ಭೀಕರ ಪ್ರವಾಹದಲ್ಲಿ ಬದುಕುಳಿದ ಶೃತಿ ಎಂಬವರು ರಸ್ತೆ ಅಪಘಾತದಲ್ಲಿ ತನ್ನ ಭಾವಿ ಗಂಡನನ್ನೂ ಕಳೆದುಕೊಂಡಿದ್ದಾರೆ.

ಅಪಘಾತದಲ್ಲಿ ಶೃತಿ ಕಾಲಿಗೂ ಗಾಯವಾಗಿದೆ. ಜೊತೆಗಿದ್ದ ಸಹೋದರ ಸಂಬಂಧಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೇರಳ ಪೊಲೀಸರು, ಕೋಝಿಕ್ಕೋರ್​-ಕೊಳ್ಳಗಲ್​ ರಾಷ್ಟ್ರೀಯ ಹೆದ್ದಾರಿ ವೆಲ್ಲರಂಕುನ್ನು ಎಂಬಲ್ಲಿ ಖಾಸಗಿ ಬಸ್​ ಮತ್ತು ವ್ಯಾನ್​ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜೆನ್ಸನ್​ ಮೃತಪಟ್ಟಿದ್ದಾರೆ. ಕಾಲಿನ ಗಾಯಕ್ಕೆ ತುತ್ತಾಗಿರುವ ಯುವತಿ ಕಳೆದೆರಡು ತಿಂಗಳ ಹಿಂದೆ ಮುಂಡಕೈ-ಚೂರಲ್ಮಲಾದ ಭೂಕುಸಿತದಲ್ಲಿ ತನ್ನ ಪೋಷಕರು, ಸಹೋದರಿಯರು ಸೇರಿದಂತೆ ಒಟ್ಟು 9 ಜನರನ್ನು ಕಳೆದುಕೊಂಡಿದ್ದರು. ಭಾವಿ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇದೀಗ ಮತ್ತೊಂದು ದುರಂತ ಸಂಭವಿಸಿ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜೆನ್ಸನ್​ ಮತ್ತವರ ಸ್ನೇಹಿತರು ಲಿಖಿಟಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೋಝಿಕ್ಕೋಡ್​ನಿಂದ ಸುಲ್ತಾನ್​ ಬತೇರಿ ಕಡೆಗೆ ಸಾಗುತ್ತಿದ್ದಾಗ ಬಸ್​ ಡಿಕ್ಕಿ ಹೊಡೆದಿದೆ. ವಾಹನದಡಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹೊರಗೆಳೆದು ರಕ್ಷಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವ್ಯಾನ್​ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಜೆನ್ಸನ್​ ವಾಹನ ಚಲಾಯಿಸುತ್ತಿದ್ದರು. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ವಯನಾಡು ದುರಂತಕ್ಕೆ ಒಂದು ತಿಂಗಳು: ಚೇತರಿಕೆ ಹಾದಿಯಲ್ಲಿ ಜನರು, ಉತ್ತಮ ಬದುಕಿನ ಭರವಸೆ

ವಯನಾಡ್​: ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಯುವತಿಗೆ ಇದೀಗ ಮತ್ತೊಂದು ಆಘಾತವಾಗಿದೆ. ಭೀಕರ ಪ್ರವಾಹದಲ್ಲಿ ಬದುಕುಳಿದ ಶೃತಿ ಎಂಬವರು ರಸ್ತೆ ಅಪಘಾತದಲ್ಲಿ ತನ್ನ ಭಾವಿ ಗಂಡನನ್ನೂ ಕಳೆದುಕೊಂಡಿದ್ದಾರೆ.

ಅಪಘಾತದಲ್ಲಿ ಶೃತಿ ಕಾಲಿಗೂ ಗಾಯವಾಗಿದೆ. ಜೊತೆಗಿದ್ದ ಸಹೋದರ ಸಂಬಂಧಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೇರಳ ಪೊಲೀಸರು, ಕೋಝಿಕ್ಕೋರ್​-ಕೊಳ್ಳಗಲ್​ ರಾಷ್ಟ್ರೀಯ ಹೆದ್ದಾರಿ ವೆಲ್ಲರಂಕುನ್ನು ಎಂಬಲ್ಲಿ ಖಾಸಗಿ ಬಸ್​ ಮತ್ತು ವ್ಯಾನ್​ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜೆನ್ಸನ್​ ಮೃತಪಟ್ಟಿದ್ದಾರೆ. ಕಾಲಿನ ಗಾಯಕ್ಕೆ ತುತ್ತಾಗಿರುವ ಯುವತಿ ಕಳೆದೆರಡು ತಿಂಗಳ ಹಿಂದೆ ಮುಂಡಕೈ-ಚೂರಲ್ಮಲಾದ ಭೂಕುಸಿತದಲ್ಲಿ ತನ್ನ ಪೋಷಕರು, ಸಹೋದರಿಯರು ಸೇರಿದಂತೆ ಒಟ್ಟು 9 ಜನರನ್ನು ಕಳೆದುಕೊಂಡಿದ್ದರು. ಭಾವಿ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇದೀಗ ಮತ್ತೊಂದು ದುರಂತ ಸಂಭವಿಸಿ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜೆನ್ಸನ್​ ಮತ್ತವರ ಸ್ನೇಹಿತರು ಲಿಖಿಟಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೋಝಿಕ್ಕೋಡ್​ನಿಂದ ಸುಲ್ತಾನ್​ ಬತೇರಿ ಕಡೆಗೆ ಸಾಗುತ್ತಿದ್ದಾಗ ಬಸ್​ ಡಿಕ್ಕಿ ಹೊಡೆದಿದೆ. ವಾಹನದಡಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹೊರಗೆಳೆದು ರಕ್ಷಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವ್ಯಾನ್​ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಜೆನ್ಸನ್​ ವಾಹನ ಚಲಾಯಿಸುತ್ತಿದ್ದರು. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ವಯನಾಡು ದುರಂತಕ್ಕೆ ಒಂದು ತಿಂಗಳು: ಚೇತರಿಕೆ ಹಾದಿಯಲ್ಲಿ ಜನರು, ಉತ್ತಮ ಬದುಕಿನ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.