ETV Bharat / bharat

ಮಹಿಳೆಯ ಕಣ್ಣಿನಲ್ಲಿ 60 ಜೀವಂತ ಹುಳುಗಳು! 2 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ವೈದ್ಯ - Live Larvae In Womans Eye

author img

By ETV Bharat Karnataka Team

Published : Aug 9, 2024, 6:32 PM IST

ಮಹಿಳೆಯ ಕಣ್ಣಿನಿಂದ ಸುಮಾರು 60 ಜೀವಂತ ಲಾರ್ವಾಗಳನ್ನು (ಹುಳುಗಳು) ಮಹಾರಾಷ್ಟ್ರದಲ್ಲಿ ವೈದ್ಯರು ಹೊರತೆಗೆದಿದ್ದಾರೆ.

DOCTOR REMOVES 60 LIVE LARVAE  DOCTOR REMOVES LARVAE FROM EYES  LARVAE IN EYES  MAHARASHTRA NEWS
ವೈದ್ಯರಿಂದ ಮಹಿಳೆಯ ಕಣ್ಣಿನ ತಪಾಸಣೆ (ETV Bharat)

ಬುಲ್ಡಾನಾ(ಮಹಾರಾಷ್ಟ್ರ): ಇಲ್ಲಿನ ಚಿಖಾಲಿ ತಾಲೂಕಿನ ವೈದ್ಯರೊಬ್ಬರು ಮಹಿಳೆಯ ಕಣ್ಣಿನಿಂದ 60 ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ಜ್ಯೋತಿ ಗಾಯಕ್ವಾಡ ಎಂಬ ಮಹಿಳೆಗೆ ನೇತ್ರ ತಜ್ಞ ಡಾ.ಸ್ವಪ್ನಿಲ್ ಮೊರ್ವಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು.

ಮಲಗಣಿ ಎಂಬಲ್ಲಿನ ರೈತ ಮಹಿಳೆ ಜ್ಯೋತಿ ಗಾಯಕ್ವಾಡ ತಿಂಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಣ್ಣಿಗೆ ಮಣ್ಣಿನ ಕಣಗಳು ಬಿದ್ದಿವೆ. ಅಂದಿನಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು. ಮೊದಮೊದಲು ನಿರ್ಲಕ್ಷಿಸಿದ್ದಾರೆ. ಆದರೆ ತೊಂದರೆ ಹೆಚ್ಚಾದಂತೆ ನಮ್ಮ ಬಳಿ ಬಂದು ಕಣ್ಣು ತಪಾಸಣೆ ಮಾಡಿಸಿಕೊಂಡರು. ಆಗ ಅವರ ಕಣ್ಣಲ್ಲಿ ಹುಳುಗಳಿರುವುದು ಗೊತ್ತಾಯಿತು. ಕೂಡಲೇ ಅವುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಇಲ್ಲದಿದ್ದರೆ ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು ಎಂದು ವೈದ್ಯ ಡಾ.ಸ್ವಪ್ನಿಲ್ ಮೊರ್ವಾಲ್ ತಿಳಿಸಿದರು.

ಈ ಹುಳುಗಳನ್ನು ತೆಗೆಯಲು ಸುಮಾರು 2 ಗಂಟೆ ಬೇಕಾಯಿತು. ಈಗ ಜ್ಯೋತಿ ಅವರಿಗೆ ಯಾವುದೇ ತೊಂದರೆ ಇಲ್ಲ. ಅವರ ಕಣ್ಣು ಚೆನ್ನಾಗಿದೆ ಎಂದು 'ಈಟಿವಿ ಭಾರತ್' ಪ್ರತಿನಿಧಿಗೆ ಡಾ.ಸ್ವಪ್ನಿಲ್ ಮಾಹಿತಿ ನೀಡಿದರು.

ವೈದ್ಯರ ಸಲಹೆ​: ವೈದ್ಯ ಸ್ವಪ್ನಿಲ್​ ಅವರು ಮಹಿಳೆಗೆ ಉಚಿತ ಚಿಕಿತ್ಸೆ ಮಾಡಿ ಕಳುಹಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೆ ಕೆಲವು ಸಲಹೆ ನೀಡಿದ್ದಾರೆ. ಕಣ್ಣು ನೋವು ಬಂದಾಗ ರೋಗಿಗಳು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಲು ಎಂದಿಗೂ ಪ್ರಯತ್ನಿಸಬಾರದು. ಕಣ್ಣಿನಲ್ಲಿ ಸಮಸ್ಯೆಗಳು ಎದುರಾದರೆ ಮನೆಯಲ್ಲೇ ಚಿಕಿತ್ಸೆ ಪಡೆಯುವ ಬದಲು ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

2023ರ ಡಿಸೆಂಬರ್‌ನಲ್ಲಿ, ಚೀನಾದಲ್ಲಿ ವೈದ್ಯರು ಮಹಿಳೆಯ ಬಲಗಣ್ಣಿನಿಂದ 40ಕ್ಕೂ ಹೆಚ್ಚು ಮತ್ತು ಎಡಗಣ್ಣಿನಿಂದ 10ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ತೆಗೆದುಹಾಕಿದ್ದರು.

ಇದನ್ನೂ ಓದಿ: ತಂತ್ರಜ್ಞಾನದ ನೆರವಿನಿಂದ ಪ್ರಾಣಹಾನಿ ತಪ್ಪಿಸಬಹುದು: ಭೂಕುಸಿತದ ಭೀತಿ ಪತ್ತೆ ಹಚ್ಚಲು ಸೆನ್ಸರ್ ವ್ಯವಸ್ಥೆ - landslides detecting Sensor system

ಬುಲ್ಡಾನಾ(ಮಹಾರಾಷ್ಟ್ರ): ಇಲ್ಲಿನ ಚಿಖಾಲಿ ತಾಲೂಕಿನ ವೈದ್ಯರೊಬ್ಬರು ಮಹಿಳೆಯ ಕಣ್ಣಿನಿಂದ 60 ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ಜ್ಯೋತಿ ಗಾಯಕ್ವಾಡ ಎಂಬ ಮಹಿಳೆಗೆ ನೇತ್ರ ತಜ್ಞ ಡಾ.ಸ್ವಪ್ನಿಲ್ ಮೊರ್ವಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು.

ಮಲಗಣಿ ಎಂಬಲ್ಲಿನ ರೈತ ಮಹಿಳೆ ಜ್ಯೋತಿ ಗಾಯಕ್ವಾಡ ತಿಂಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಣ್ಣಿಗೆ ಮಣ್ಣಿನ ಕಣಗಳು ಬಿದ್ದಿವೆ. ಅಂದಿನಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು. ಮೊದಮೊದಲು ನಿರ್ಲಕ್ಷಿಸಿದ್ದಾರೆ. ಆದರೆ ತೊಂದರೆ ಹೆಚ್ಚಾದಂತೆ ನಮ್ಮ ಬಳಿ ಬಂದು ಕಣ್ಣು ತಪಾಸಣೆ ಮಾಡಿಸಿಕೊಂಡರು. ಆಗ ಅವರ ಕಣ್ಣಲ್ಲಿ ಹುಳುಗಳಿರುವುದು ಗೊತ್ತಾಯಿತು. ಕೂಡಲೇ ಅವುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಇಲ್ಲದಿದ್ದರೆ ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು ಎಂದು ವೈದ್ಯ ಡಾ.ಸ್ವಪ್ನಿಲ್ ಮೊರ್ವಾಲ್ ತಿಳಿಸಿದರು.

ಈ ಹುಳುಗಳನ್ನು ತೆಗೆಯಲು ಸುಮಾರು 2 ಗಂಟೆ ಬೇಕಾಯಿತು. ಈಗ ಜ್ಯೋತಿ ಅವರಿಗೆ ಯಾವುದೇ ತೊಂದರೆ ಇಲ್ಲ. ಅವರ ಕಣ್ಣು ಚೆನ್ನಾಗಿದೆ ಎಂದು 'ಈಟಿವಿ ಭಾರತ್' ಪ್ರತಿನಿಧಿಗೆ ಡಾ.ಸ್ವಪ್ನಿಲ್ ಮಾಹಿತಿ ನೀಡಿದರು.

ವೈದ್ಯರ ಸಲಹೆ​: ವೈದ್ಯ ಸ್ವಪ್ನಿಲ್​ ಅವರು ಮಹಿಳೆಗೆ ಉಚಿತ ಚಿಕಿತ್ಸೆ ಮಾಡಿ ಕಳುಹಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೆ ಕೆಲವು ಸಲಹೆ ನೀಡಿದ್ದಾರೆ. ಕಣ್ಣು ನೋವು ಬಂದಾಗ ರೋಗಿಗಳು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಲು ಎಂದಿಗೂ ಪ್ರಯತ್ನಿಸಬಾರದು. ಕಣ್ಣಿನಲ್ಲಿ ಸಮಸ್ಯೆಗಳು ಎದುರಾದರೆ ಮನೆಯಲ್ಲೇ ಚಿಕಿತ್ಸೆ ಪಡೆಯುವ ಬದಲು ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

2023ರ ಡಿಸೆಂಬರ್‌ನಲ್ಲಿ, ಚೀನಾದಲ್ಲಿ ವೈದ್ಯರು ಮಹಿಳೆಯ ಬಲಗಣ್ಣಿನಿಂದ 40ಕ್ಕೂ ಹೆಚ್ಚು ಮತ್ತು ಎಡಗಣ್ಣಿನಿಂದ 10ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ತೆಗೆದುಹಾಕಿದ್ದರು.

ಇದನ್ನೂ ಓದಿ: ತಂತ್ರಜ್ಞಾನದ ನೆರವಿನಿಂದ ಪ್ರಾಣಹಾನಿ ತಪ್ಪಿಸಬಹುದು: ಭೂಕುಸಿತದ ಭೀತಿ ಪತ್ತೆ ಹಚ್ಚಲು ಸೆನ್ಸರ್ ವ್ಯವಸ್ಥೆ - landslides detecting Sensor system

ETV Bharat Logo

Copyright © 2024 Ushodaya Enterprises Pvt. Ltd., All Rights Reserved.