ETV Bharat / bharat

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ: ಆರ್​​ಎಸ್​ಎಸ್​ ಪ್ರಚಾರಕ ಸಭೆಯಲ್ಲಿ ಗಂಭೀರ ಚರ್ಚೆ, ಕಳವಳ - RSS Expansion in Uttar Pradesh

author img

By ETV Bharat Karnataka Team

Published : Jun 27, 2024, 11:45 AM IST

ಉತ್ತರ ಪ್ರದೇಶದ ಉತ್ತರ ಭಾಗದಲ್ಲಿ ಸಂಘದ ಕಾರ್ಯದ ವಿಸ್ತರಣೆ ಗುರಿ ಅಪೂರ್ಣವಾಗಿರುವುದೇ ಶೇಕಡಾವಾರು ಮತಗಳ ಪ್ರಮಾಣ ಕುಸಿಯಲು ಕಾರಣ ಎಂದು ಆರ್​​ಎಸ್​ಎಸ್​ ಪ್ರಚಾರಕ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

concern-in-rashtriya-swayamsevak-sangh-regarding-rss-expansion-in-uttar-pradesh-impact-on-lok-sabha-election-2024-bjp-defeat
ದತ್ತಾತ್ರೇಯ ಹೊಸಬಾಳೆ (ಈಟಿವಿ ಭಾರತ್​​)

ಲಖನೌ, ಉತ್ತರಪ್ರದೇಶ: 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಕುರಿತು ಅನೇಕ ವಿಶ್ಲೇಷಣೆಗಳು ನಡೆಯತ್ತಿವೆ. ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿ ಸಂಘದ ಕಾರ್ಯದ ವಿಸ್ತರಣೆಯ ಗುರಿ ಅಪೂರ್ಣವಾಗಿರುವುದೂ ಕೂಡಾ ಒಂದು. ಸಂಘ ಹಾಕಿಕೊಂಡ ಗುರಿಯನ್ನು ತಲುಪಲಾಗದೇ ಇರುವುದು ಉತ್ತರಪ್ರದೇಶದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಸಂಘದ ನಾಯಕರು ಕಳವಳ ವ್ಯಕಪಡಿಸಿದ್ದಾರೆ.

ಉತ್ತರ ಪ್ರದೇಶದ ಪ್ರಚಾರಕದ​​ ಸಭೆಯಲ್ಲಿ ಈ ಕುರಿತು ಆತಂಕ ವ್ಯಕ್ತವಾಗಿದೆ. ಬುಧವಾರದಿಂದ ಉತ್ತರಪ್ರದೇಶದ ರಾಜಧಾನಿ ಲಖನೌದ ನಿರಲ ನಗರ್​​ನಲ್ಲಿನ ಸರಸ್ವತಿ ಶಿಶು ಮಂದಿರದಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಸರಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕುಟುಂಬ ಜ್ಞಾನ ಸೇರಿದಂತೆ ಇತರ ವಿಷಯಗಳ ಚರ್ಚೆ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡಿದೆ. 2025ರ ವಿಜಯದಶಮಿಯಿಂದ ಸಂಘದ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿದೆ. ಆದರೂ ಉತ್ತರ ಭಾಗದ ಉತ್ತರ ಪ್ರದೇಶದಲ್ಲಿ ಸಂಘದ ವಿಸ್ತರಣೆ ಕಾರ್ಯದ ಗುರಿ ಹಾಗೆಯೇ ಉಳಿದಿದೆ. 2022ರಲ್ಲಿ ಈ ಸಂಬಂಧ ಪ್ರಯಾಗ್​ರಾಜ್​ನಲ್ಲಿನ ಕಾರ್ಯಕಾರಿ ಮಂಡಳಿ ಸಭೆ ನಡೆಸಲಾಗಿತ್ತು.

ಈ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಂಘದ ಕಾರ್ಯವನ್ನು ಮಂಡಲ್​ ಮಟ್ಟದಲ್ಲಿ ಆರಂಭಿಸುವ ಕುರಿತು ಗುರಿ ಹೊಂದಲಾಗಿತ್ತು. ಆದರೆ, ರಾಜ್ಯದ ಉತ್ತರ ಭಾಗದಲ್ಲಿ ಮಂಡಲ್​ ಮಟ್ಟದಲ್ಲಿ ಸಂಘದ ಕೆಲಸವನ್ನು ಮುಟ್ಟಿಸುವಲ್ಲಿ ವಿಫಲವಾಗಿದೆ. ಮಂಡಲ್​ ಮಟ್ಟದಲ್ಲಿ ಅನೇಕ ಬ್ರಾಂಚ್​ಗಳ ಕೊರತೆ ಇರುವುದು ಕೂಡ ಸಂಘದ ಪ್ರಮುಖ ನಾಯಕರ ಚಿಂತೆಗೆ ಕಾರಣವಾಗಿದೆ. ಇದರಿಂದ ಸಂಘದ ಅನೇಕ ಪ್ರಯತ್ನಗಳ ಹೊರತಾಗಿಯುವ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಲ್ಲ. ಪರಿಣಾಮ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಸಂಘ ಸಾರ್ವಜನಿಕ ಅಭಿಪ್ರಾಯವನ್ನು ಪರಿಷ್ಕರಿಸುವ ಕೆಲಸ ಮಾಡಿತ್ತು. ಇದಕ್ಕಾಗಿ ಪ್ರತಿ ಲೋಕಸಭಾದಲ್ಲಿ 10 ಸಾವಿರ ಡ್ರಾಯಿಂಗ್​ ರೂಮ್​ ಸೆಮಿನಾರ್​ ನಡಸಲಾಗಿತ್ತು. ಆದರೆ, ಪೂರ್ವಾಂಚಲದಲ್ಲಿ ಮಂಡಲ್​ ಮಟ್ಟದಲ್ಲಿ ಅಂದುಕೊಂಡಂತೆ ಕೆಲಸ ನಡೆಯದ ಹಿನ್ನೆಲೆ ಈ ಸಭೆಯನ್ನು ನಡೆಸಲಾಗಿತ್ತು. ಲಖನೌ ಮತ್ತು ಕಾಶಿಯಂತಹ ನಗರದಲ್ಲಿ ಮತದಾನದ ಶೇಖಡಾವಾರು ಪ್ರಮಾಣ ಕಡಿಮೆ ಆಗಿದೆ. ಚುನಾವಣಾ ಫಲಿತಾಂಶ ಮತ್ತು ಮತದಾನದ ಶೇಕಡಾವಾರು ಗಮನಿಸಿದಾಗ ಕಾಶಿ ಪ್ರಾಂತ್ಯದಲ್ಲೇ ಅತ್ಯಂತ ಕಳಪೆ ಮತದಾನ ಆಗಿರುವುದು ಕಂಡು ಬಂದಿದೆ.

ಸದ್ಯ ರಾಷ್ಟ್ರೀಯ ಸ್ವಯಂಸೇವಕ್​ ಸಂಘದ ಪ್ರಚಾರಕರ ಸಭೆಯು ಉತ್ತರ ಪ್ರದೇಶದ ಉತ್ತರ ಭಾಗದ ಪ್ರದೇಶದಲ್ಲಿನ ಸರಸ್ವತಿ ಕುಂಜ್​ ನಿರಲನಗರ್​ನಲ್ಲಿ ನಡೆಯುತ್ತಿದೆ. ಜೂನ್​ 29ರವರೆಗೆ ವಿವಿಧ ವಿಭಾಗಗಳಲ್ಲಿ ಸಭೆ ನಡೆಯಲಿದೆ.

ಮೊದಲ ದಿನದ ಸಭೆಯಲ್ಲಿ ಪ್ರಾದೇಶಿಕ ಕಾರ್ಯಕಾರಿ ಪ್ರಚಾರಕರು ಭಾಗಿಯಾಗಿದ್ದರು. ಎರಡನೇ ದಿನ ರಾಜ್ಯದ ಉತ್ತರ ಭಾಗದ ವಿಭಾಗ ಮಟ್ಟದ ಪ್ರಚಾರಕರು ಮತ್ತು ಸಹ ವಿಭಾಗದ ಪ್ರಚಾರಕರು ಭಾಗಿಯಾಗಲಿದ್ದಾರೆ. ಸಂಘದ ಶತಮಾನವನ್ನು ಗಮನದಲ್ಲಿರಿಸಿಕೊಂಡು ವಿಭಾಗ್​ ಪ್ರಚಾರಕರು ತಮ್ಮ ಕಾರ್ಯ ವಿಸ್ತರಣೆ ಮತ್ತು ಕೆಲಸ ಗುಣಮಟ್ಟ ಹೆಚ್ಚಿಸುವ ಅಂಶದ ಕುರಿತು ಚರ್ಚಿಸಲಾಗುವುದು. ವಿಭಾಗದ ಪ್ರಚಾರಕರಿಗೆ ವಿದ್ಯಾರ್ಥಿಗಳ ಶಾಖೆ ಮೇಲೆ ತಮ್ಮ ಗುರಿ ನೆಡುವಂತೆ ಸೂಚಿಸಲಾಗಿದೆ.

ಈ ಸಭೆಯಲ್ಲಿ ರಾಜ್ಯದ ಉತ್ತರ ಭಾಗ, ಔದ್​, ಕಾನ್ಫುರ್​, ಕಾಶಿ ಮತ್ತು ಗೋರಖ್​ ನಾಲ್ಕು ಪ್ರಾಂತ್ಯದ ಪ್ರಾಂತೀಯ ಮತ್ತು ಸಹ ಪ್ರಾಂತೀಯ ಪ್ರಚಾರಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಪ್ರಾಂತೀಯ ಮಟ್ಟದ ಪ್ರಚಾರಕರು ಮತ್ತು ಕಡೆಯ ದಿನ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಇತ್ತೀಚಿಗೆ ಸಂಘ ಶಿಕ್ಷಾ ವರ್ಗ ಎಲ್ಲ ಪ್ರಾಂತ್ಯದಲ್ಲೂ ಪೂರ್ಣಗೊಳಿಸಿದೆ.

ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸಂಘ ಶಿಕ್ಷಾ ವರ್ಗ ವಿಶೇಷ ಹಾಗೂ ಕಾರ್ಯಕರ್ತರ ವಿಕಾಸ ವರ್ಗ ಪೂರ್ಣಗೊಂಡಿದೆ. ಸಭೆಯಲ್ಲಿ ಸಂಘ ಶಿಕ್ಷಾ ವರ್ಗಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಜೊತೆಗೆ ಪ್ರಾಂತ್ಯಗಳಲ್ಲಿ ಯೋಜನಾ ಸಭೆಗಳನ್ನೂ ನಡೆಸಲಾಗಿದೆ. ಕೆಲವು ಪ್ರಚಾರಕರ ಕಾರ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ. ಸಭೆಯಲ್ಲಿ ಶ್ರೀ ಗುರುಪೂಜೆಯ ಯೋಜನೆಯನ್ನೂ ನಡೆಸಲಾಗುವುದು.

ಇದನ್ನೂ ಓದಿ: ಬಿಜೆಪಿಯ ಭೀಷ್ಮ ಎಲ್​ ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು: ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು

ಲಖನೌ, ಉತ್ತರಪ್ರದೇಶ: 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಕುರಿತು ಅನೇಕ ವಿಶ್ಲೇಷಣೆಗಳು ನಡೆಯತ್ತಿವೆ. ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿ ಸಂಘದ ಕಾರ್ಯದ ವಿಸ್ತರಣೆಯ ಗುರಿ ಅಪೂರ್ಣವಾಗಿರುವುದೂ ಕೂಡಾ ಒಂದು. ಸಂಘ ಹಾಕಿಕೊಂಡ ಗುರಿಯನ್ನು ತಲುಪಲಾಗದೇ ಇರುವುದು ಉತ್ತರಪ್ರದೇಶದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಸಂಘದ ನಾಯಕರು ಕಳವಳ ವ್ಯಕಪಡಿಸಿದ್ದಾರೆ.

ಉತ್ತರ ಪ್ರದೇಶದ ಪ್ರಚಾರಕದ​​ ಸಭೆಯಲ್ಲಿ ಈ ಕುರಿತು ಆತಂಕ ವ್ಯಕ್ತವಾಗಿದೆ. ಬುಧವಾರದಿಂದ ಉತ್ತರಪ್ರದೇಶದ ರಾಜಧಾನಿ ಲಖನೌದ ನಿರಲ ನಗರ್​​ನಲ್ಲಿನ ಸರಸ್ವತಿ ಶಿಶು ಮಂದಿರದಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಸರಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕುಟುಂಬ ಜ್ಞಾನ ಸೇರಿದಂತೆ ಇತರ ವಿಷಯಗಳ ಚರ್ಚೆ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡಿದೆ. 2025ರ ವಿಜಯದಶಮಿಯಿಂದ ಸಂಘದ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿದೆ. ಆದರೂ ಉತ್ತರ ಭಾಗದ ಉತ್ತರ ಪ್ರದೇಶದಲ್ಲಿ ಸಂಘದ ವಿಸ್ತರಣೆ ಕಾರ್ಯದ ಗುರಿ ಹಾಗೆಯೇ ಉಳಿದಿದೆ. 2022ರಲ್ಲಿ ಈ ಸಂಬಂಧ ಪ್ರಯಾಗ್​ರಾಜ್​ನಲ್ಲಿನ ಕಾರ್ಯಕಾರಿ ಮಂಡಳಿ ಸಭೆ ನಡೆಸಲಾಗಿತ್ತು.

ಈ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಂಘದ ಕಾರ್ಯವನ್ನು ಮಂಡಲ್​ ಮಟ್ಟದಲ್ಲಿ ಆರಂಭಿಸುವ ಕುರಿತು ಗುರಿ ಹೊಂದಲಾಗಿತ್ತು. ಆದರೆ, ರಾಜ್ಯದ ಉತ್ತರ ಭಾಗದಲ್ಲಿ ಮಂಡಲ್​ ಮಟ್ಟದಲ್ಲಿ ಸಂಘದ ಕೆಲಸವನ್ನು ಮುಟ್ಟಿಸುವಲ್ಲಿ ವಿಫಲವಾಗಿದೆ. ಮಂಡಲ್​ ಮಟ್ಟದಲ್ಲಿ ಅನೇಕ ಬ್ರಾಂಚ್​ಗಳ ಕೊರತೆ ಇರುವುದು ಕೂಡ ಸಂಘದ ಪ್ರಮುಖ ನಾಯಕರ ಚಿಂತೆಗೆ ಕಾರಣವಾಗಿದೆ. ಇದರಿಂದ ಸಂಘದ ಅನೇಕ ಪ್ರಯತ್ನಗಳ ಹೊರತಾಗಿಯುವ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಲ್ಲ. ಪರಿಣಾಮ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಸಂಘ ಸಾರ್ವಜನಿಕ ಅಭಿಪ್ರಾಯವನ್ನು ಪರಿಷ್ಕರಿಸುವ ಕೆಲಸ ಮಾಡಿತ್ತು. ಇದಕ್ಕಾಗಿ ಪ್ರತಿ ಲೋಕಸಭಾದಲ್ಲಿ 10 ಸಾವಿರ ಡ್ರಾಯಿಂಗ್​ ರೂಮ್​ ಸೆಮಿನಾರ್​ ನಡಸಲಾಗಿತ್ತು. ಆದರೆ, ಪೂರ್ವಾಂಚಲದಲ್ಲಿ ಮಂಡಲ್​ ಮಟ್ಟದಲ್ಲಿ ಅಂದುಕೊಂಡಂತೆ ಕೆಲಸ ನಡೆಯದ ಹಿನ್ನೆಲೆ ಈ ಸಭೆಯನ್ನು ನಡೆಸಲಾಗಿತ್ತು. ಲಖನೌ ಮತ್ತು ಕಾಶಿಯಂತಹ ನಗರದಲ್ಲಿ ಮತದಾನದ ಶೇಖಡಾವಾರು ಪ್ರಮಾಣ ಕಡಿಮೆ ಆಗಿದೆ. ಚುನಾವಣಾ ಫಲಿತಾಂಶ ಮತ್ತು ಮತದಾನದ ಶೇಕಡಾವಾರು ಗಮನಿಸಿದಾಗ ಕಾಶಿ ಪ್ರಾಂತ್ಯದಲ್ಲೇ ಅತ್ಯಂತ ಕಳಪೆ ಮತದಾನ ಆಗಿರುವುದು ಕಂಡು ಬಂದಿದೆ.

ಸದ್ಯ ರಾಷ್ಟ್ರೀಯ ಸ್ವಯಂಸೇವಕ್​ ಸಂಘದ ಪ್ರಚಾರಕರ ಸಭೆಯು ಉತ್ತರ ಪ್ರದೇಶದ ಉತ್ತರ ಭಾಗದ ಪ್ರದೇಶದಲ್ಲಿನ ಸರಸ್ವತಿ ಕುಂಜ್​ ನಿರಲನಗರ್​ನಲ್ಲಿ ನಡೆಯುತ್ತಿದೆ. ಜೂನ್​ 29ರವರೆಗೆ ವಿವಿಧ ವಿಭಾಗಗಳಲ್ಲಿ ಸಭೆ ನಡೆಯಲಿದೆ.

ಮೊದಲ ದಿನದ ಸಭೆಯಲ್ಲಿ ಪ್ರಾದೇಶಿಕ ಕಾರ್ಯಕಾರಿ ಪ್ರಚಾರಕರು ಭಾಗಿಯಾಗಿದ್ದರು. ಎರಡನೇ ದಿನ ರಾಜ್ಯದ ಉತ್ತರ ಭಾಗದ ವಿಭಾಗ ಮಟ್ಟದ ಪ್ರಚಾರಕರು ಮತ್ತು ಸಹ ವಿಭಾಗದ ಪ್ರಚಾರಕರು ಭಾಗಿಯಾಗಲಿದ್ದಾರೆ. ಸಂಘದ ಶತಮಾನವನ್ನು ಗಮನದಲ್ಲಿರಿಸಿಕೊಂಡು ವಿಭಾಗ್​ ಪ್ರಚಾರಕರು ತಮ್ಮ ಕಾರ್ಯ ವಿಸ್ತರಣೆ ಮತ್ತು ಕೆಲಸ ಗುಣಮಟ್ಟ ಹೆಚ್ಚಿಸುವ ಅಂಶದ ಕುರಿತು ಚರ್ಚಿಸಲಾಗುವುದು. ವಿಭಾಗದ ಪ್ರಚಾರಕರಿಗೆ ವಿದ್ಯಾರ್ಥಿಗಳ ಶಾಖೆ ಮೇಲೆ ತಮ್ಮ ಗುರಿ ನೆಡುವಂತೆ ಸೂಚಿಸಲಾಗಿದೆ.

ಈ ಸಭೆಯಲ್ಲಿ ರಾಜ್ಯದ ಉತ್ತರ ಭಾಗ, ಔದ್​, ಕಾನ್ಫುರ್​, ಕಾಶಿ ಮತ್ತು ಗೋರಖ್​ ನಾಲ್ಕು ಪ್ರಾಂತ್ಯದ ಪ್ರಾಂತೀಯ ಮತ್ತು ಸಹ ಪ್ರಾಂತೀಯ ಪ್ರಚಾರಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಪ್ರಾಂತೀಯ ಮಟ್ಟದ ಪ್ರಚಾರಕರು ಮತ್ತು ಕಡೆಯ ದಿನ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಇತ್ತೀಚಿಗೆ ಸಂಘ ಶಿಕ್ಷಾ ವರ್ಗ ಎಲ್ಲ ಪ್ರಾಂತ್ಯದಲ್ಲೂ ಪೂರ್ಣಗೊಳಿಸಿದೆ.

ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸಂಘ ಶಿಕ್ಷಾ ವರ್ಗ ವಿಶೇಷ ಹಾಗೂ ಕಾರ್ಯಕರ್ತರ ವಿಕಾಸ ವರ್ಗ ಪೂರ್ಣಗೊಂಡಿದೆ. ಸಭೆಯಲ್ಲಿ ಸಂಘ ಶಿಕ್ಷಾ ವರ್ಗಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಜೊತೆಗೆ ಪ್ರಾಂತ್ಯಗಳಲ್ಲಿ ಯೋಜನಾ ಸಭೆಗಳನ್ನೂ ನಡೆಸಲಾಗಿದೆ. ಕೆಲವು ಪ್ರಚಾರಕರ ಕಾರ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ. ಸಭೆಯಲ್ಲಿ ಶ್ರೀ ಗುರುಪೂಜೆಯ ಯೋಜನೆಯನ್ನೂ ನಡೆಸಲಾಗುವುದು.

ಇದನ್ನೂ ಓದಿ: ಬಿಜೆಪಿಯ ಭೀಷ್ಮ ಎಲ್​ ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು: ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.