ETV Bharat / bharat

ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ: ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶಗಳ ಪಟ್ಟಿ - CWRC orders

author img

By ETV Bharat Karnataka Team

Published : Jul 12, 2024, 7:05 PM IST

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸಿಡಬ್ಲ್ಯೂಆರ್​ಸಿ ಕರ್ನಾಟಕಕ್ಕೆ ನೀಡಿದ ಆದೇಶಗಳ ಪಟ್ಟಿ ಇಲ್ಲಿದೆ.

Cauvery Water Regulation Committee
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ: ವಿವಿಧ ಪ್ರಾಧಿಕಾರಗಳ ಆದೇಶಗಳ ಪಟ್ಟಿ (IANS ಸಾಂದರ್ಭಿಕ ಚಿತ್ರ)

ಕಾವೇರಿ ನೀರು ಹಂಚಿಕೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಜೂನ್ 2018 ರಲ್ಲಿ 'ಕಾವೇರಿ ನೀರು ನಿಯಂತ್ರಣ ಸಮಿತಿ' (ಸಿಡಬ್ಲ್ಯೂಆರ್​ಸಿ) ಯನ್ನು ರಚಿಸಿತು. ಪ್ರಸ್ತುತ ಜುಲೈ 31 ರವರೆಗೆ ಪ್ರತಿದಿನ ಒಂದು ಟಿಎಂಸಿ ಅಡಿ (11,500 ಕ್ಯೂಸೆಕ್) ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಯು ಕರ್ನಾಟಕಕ್ಕೆ ಸೂಚಿಸಿದೆ. ಕರ್ನಾಟಕವು ನೀರಿನ ಹರಿವಿನ ಕೊರತೆಯನ್ನು ಉಲ್ಲೇಖಿಸಿ ಜುಲೈ 25 ರವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸದಂತೆ ಸಮಿತಿಯನ್ನು ಒತ್ತಾಯಿಸಿತ್ತು. ಫೆಬ್ರವರಿ 2024 ಮತ್ತು ಮೇ 2024 ರ ನಡುವೆ ಪರಿಸರ ಉದ್ದೇಶಗಳಿಗಾಗಿ ಕರ್ನಾಟಕವು ನದಿಗೆ ನೀರಿನ ಹರಿವನ್ನು ನಿರ್ವಹಿಸಿಲ್ಲ ಎಂದು ತಮಿಳುನಾಡು ವಾದಿಸಿತು. ಪ್ರಸಕ್ತ ವರ್ಷವನ್ನು ಸಾಮಾನ್ಯ ವರ್ಷವೆಂದು ಪರಿಗಣಿಸಲಾಗುತ್ತಿದ್ದು, ನದಿಗೆ ಒಳಹರಿವು ಸಹ ಸಾಮಾನ್ಯವಾಗಿದೆ.

ಕರ್ನಾಟಕದ ವಾದ: ಜೂನ್ 1 ರಿಂದ ಜುಲೈ 9 ರ ನಡುವೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವು 41.651 ಟಿಎಂಸಿ ಅಡಿ ಆಗಿದ್ದು, ಇದು ಹಿಂದಿನ ವರ್ಷಗಳ ಸರಾಸರಿ ಒಳಹರಿವಿಗಿಂತ 28.71% ಕೊರತೆಯಾಗಿದೆ. ಜುಲೈ 31 ರವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 11,500 ಕ್ಯೂಸೆಕ್ ನೀರು ಹರಿಯುವಂತೆ ನೋಡಿಕೊಳ್ಳುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ.

ತಮಿಳುನಾಡಿನ ವಾದ: ಕರ್ನಾಟಕವು ಫೆಬ್ರವರಿ ಮತ್ತು ಮೇ ನಡುವೆ ಪರಿಸರ ಉದ್ದೇಶಗಳಿಗಾಗಿ ನದಿಗೆ ನೀರಿನ ಹರಿವನ್ನು ಕಾಯ್ದುಕೊಂಡಿಲ್ಲ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ 58.66 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಒಟ್ಟು 24.705 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇಲ್ಲಿಯವರೆಗೆ ತಮಿಳುನಾಡು ಜಲಾಶಯಗಳಿಂದ ನೀರಾವರಿಗಾಗಿ ಯಾವುದೇ ನೀರನ್ನು ಬಿಡುಗಡೆ ಮಾಡಿಲ್ಲ.

ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶಗಳ ಪಟ್ಟಿ ಹೀಗಿದೆ:

ಆಗಸ್ಟ್ 28, 2023: ಕರ್ನಾಟಕ ಜಲಾಶಯಗಳಿಂದ ತಮಿಳುನಾಡಿಗೆ ಸೆಪ್ಟೆಂಬರ್ 12 ರವರೆಗೆ 5,000 ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಶಿಫಾರಸು ಮಾಡಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 28, 2023: ಕರ್ನಾಟಕದಲ್ಲಿ ಕಾವೇರಿ ನದಿ ನೀರಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿತು. ಸೆಪ್ಟೆಂಬರ್ 28 ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯೂಆರ್​ಸಿ) ನಿರ್ಧಾರವನ್ನು ಎತ್ತಿಹಿಡಿದಿದೆ ಮತ್ತು ಅಕ್ಟೋಬರ್ 15 ರವರೆಗೆ ಪ್ರತಿದಿನ ಸುಮಾರು 3,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು.

ಅಕ್ಟೋಬರ್ 30, 2023: ನವೆಂಬರ್ 1 ರಿಂದ 15 ರವರೆಗೆ ಪ್ರತಿದಿನ 13,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಶಿಫಾರಸು ಮಾಡಿತು.

ನವೆಂಬರ್ 23, 2023: ನವೆಂಬರ್ 24 ರಿಂದ 38 ದಿನಗಳವರೆಗೆ ಪ್ರತಿದಿನ 3,216 ಕ್ಯೂಸೆಕ್ ನಂತೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ನವೆಂಬರ್ 23 ರಂದು ಕರ್ನಾಟಕಕ್ಕೆ ನಿರ್ದೇಶನ ನೀಡಿತು.

ಡಿಸೆಂಬರ್ 19, 2023: ಡಿಸೆಂಬರ್ 19 ರಂದು ಸಭೆ ಸೇರಿದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಡಿಸೆಂಬರ್ 31 ರವರೆಗೆ ಪ್ರತಿದಿನ 3,128 ಕ್ಯೂಸೆಕ್ ಮತ್ತು 2024 ರ ಜನವರಿ ತಿಂಗಳಿಗೆ ಪ್ರತಿದಿನ 1,030 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಶಿಫಾರಸು ಮಾಡಿತು. ಕರ್ನಾಟಕವು ತನ್ನ ನಾಲ್ಕು ಜಲಾಶಯಗಳಿಗೆ ಸಂಚಿತ ಕೊರತೆಯಲ್ಲಿ 52.84% ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿತು.

ಫೆಬ್ರವರಿ 13, 2024: ಕಾವೇರಿ ನೀರು ಬಿಡುವಂತೆ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ಸಿಡಬ್ಲ್ಯೂಆರ್​ಸಿ ತಿರಸ್ಕರಿಸಿತು. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಪ್ರಕಾರ ನದಿಯ ಪರಿಸರದ ಹರಿವನ್ನು ಖಚಿತಪಡಿಸಿಕೊಳ್ಳಲು ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಸಮಿತಿಯು ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು.

ಏಪ್ರಿಲ್ 30, 2024: ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ ಸಿ) ಮಂಗಳವಾರ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಮೇ 1, 2024: ಕಾವೇರಿ ನದಿ ನೀರು ಹಂಚಿಕೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ತಮಿಳುನಾಡು ನಿರ್ಧರಿಸಿತು. ಕಾವೇರಿ ನದಿಗೆ ನೀರು ಬಿಡಬೇಕೆಂಬ ಬೇಡಿಕೆಯ ಬಗ್ಗೆ ಕರ್ನಾಟಕ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಎರಡರಿಂದಲೂ ತಿರಸ್ಕಾರಕ್ಕೊಳಗಾದ ತಮಿಳುನಾಡು ಸರ್ಕಾರವು ತನ್ನ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟ್​ಗೆ ಹೋಗಲು ನಿರ್ಧರಿಸಿತು.

17 ಮೇ 2024: ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರು ಹರಿಯುವಂತೆ ನೋಡಿಕೊಳ್ಳಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿತು. ಸುಪ್ರೀಂ ಕೋರ್ಟ್ ಆದೇಶದಂತೆ ಮೇ ತಿಂಗಳ ಉಳಿದ ಅವಧಿಯಲ್ಲಿ ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ನೈಸರ್ಗಿಕ ಹರಿವನ್ನು ಕರ್ನಾಟಕ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದೆ. ಕಾವೇರಿ ಜಲಾಶಯಗಳಲ್ಲಿನ ಸಂಗ್ರಹವನ್ನು ಕುಡಿಯುವ ನೀರು ಸರಬರಾಜಿಗೆ ಮಾತ್ರ ಕಾಯ್ದಿರಿಸಲಾಗಿದೆ ಮತ್ತು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಈ ಹಿಂದೆ ವಾದಿಸಿತ್ತು.

22 ಮೇ 2024: ಪರಿಸರಕ್ಕಾಗಿ ಬಿಡಬೇಕಾದ ನೀರಿನ ಹರಿವಿನಲ್ಲಿ ಬ್ಯಾಕ್ ಲಾಗ್ ಕೊರತೆಯ ನೀರನ್ನು ಬಿಡುಗಡೆ ಮಾಡಲು ಮತ್ತು ರಾಜ್ಯಕ್ಕೆ ಕಾವೇರಿ ನದಿಯ ಪರಿಸರ ಹರಿವಿನಲ್ಲಿ ಮತ್ತಷ್ಟು ಕೊರತೆಯಾಗದಂತೆ ನೋಡಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಸಿಡಬ್ಲ್ಯೂಆರ್ ಸಿ ಮೇ 16 ರಂದು ತಿರಸ್ಕರಿಸಿತು.

ಜೂನ್ 15, 2024: ತಮಿಳುನಾಡಿಗೆ ಹೆಚ್ಚಿನ ನೀರು ಬಿಡಬೇಕೆಂಬ ತಮಿಳುನಾಡಿನ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿತು.ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಇನ್ನೂ ವೇಗ ಪಡೆದುಕೊಂಡಿಲ್ಲ ಎಂದು ಹೇಳಿತು.

ಜುಲೈ 11, 2024: ಜುಲೈ 31 ರವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ ಒಂದು ಟಿಎಂಸಿ ಅಡಿ (11,500 ಕ್ಯೂಸೆಕ್) ನೀರು ಹರಿಯುವಂತೆ ನೋಡಿಕೊಳ್ಳುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಕರ್ನಾಟಕಕ್ಕೆ ಸೂಚಿಸಿತು. ಕರ್ನಾಟಕವು ನೀರಿನ ಹರಿವಿನ ಕೊರತೆಯನ್ನು ಉಲ್ಲೇಖಿಸಿ ಜುಲೈ 25 ರವರೆಗೆ ಯಾವುದೇ ನಿರ್ಧಾರ ಪ್ರಕಟಿಸದಂತೆ ಸಮಿತಿಯನ್ನು ಒತ್ತಾಯಿಸಿತ್ತು.

Source: RKC

ಇದನ್ನೂ ಓದಿ : ಶಂಭು ಗಡಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿ: ಹರಿಯಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ - Farmers Protest

ಕಾವೇರಿ ನೀರು ಹಂಚಿಕೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಜೂನ್ 2018 ರಲ್ಲಿ 'ಕಾವೇರಿ ನೀರು ನಿಯಂತ್ರಣ ಸಮಿತಿ' (ಸಿಡಬ್ಲ್ಯೂಆರ್​ಸಿ) ಯನ್ನು ರಚಿಸಿತು. ಪ್ರಸ್ತುತ ಜುಲೈ 31 ರವರೆಗೆ ಪ್ರತಿದಿನ ಒಂದು ಟಿಎಂಸಿ ಅಡಿ (11,500 ಕ್ಯೂಸೆಕ್) ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಯು ಕರ್ನಾಟಕಕ್ಕೆ ಸೂಚಿಸಿದೆ. ಕರ್ನಾಟಕವು ನೀರಿನ ಹರಿವಿನ ಕೊರತೆಯನ್ನು ಉಲ್ಲೇಖಿಸಿ ಜುಲೈ 25 ರವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸದಂತೆ ಸಮಿತಿಯನ್ನು ಒತ್ತಾಯಿಸಿತ್ತು. ಫೆಬ್ರವರಿ 2024 ಮತ್ತು ಮೇ 2024 ರ ನಡುವೆ ಪರಿಸರ ಉದ್ದೇಶಗಳಿಗಾಗಿ ಕರ್ನಾಟಕವು ನದಿಗೆ ನೀರಿನ ಹರಿವನ್ನು ನಿರ್ವಹಿಸಿಲ್ಲ ಎಂದು ತಮಿಳುನಾಡು ವಾದಿಸಿತು. ಪ್ರಸಕ್ತ ವರ್ಷವನ್ನು ಸಾಮಾನ್ಯ ವರ್ಷವೆಂದು ಪರಿಗಣಿಸಲಾಗುತ್ತಿದ್ದು, ನದಿಗೆ ಒಳಹರಿವು ಸಹ ಸಾಮಾನ್ಯವಾಗಿದೆ.

ಕರ್ನಾಟಕದ ವಾದ: ಜೂನ್ 1 ರಿಂದ ಜುಲೈ 9 ರ ನಡುವೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವು 41.651 ಟಿಎಂಸಿ ಅಡಿ ಆಗಿದ್ದು, ಇದು ಹಿಂದಿನ ವರ್ಷಗಳ ಸರಾಸರಿ ಒಳಹರಿವಿಗಿಂತ 28.71% ಕೊರತೆಯಾಗಿದೆ. ಜುಲೈ 31 ರವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 11,500 ಕ್ಯೂಸೆಕ್ ನೀರು ಹರಿಯುವಂತೆ ನೋಡಿಕೊಳ್ಳುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ.

ತಮಿಳುನಾಡಿನ ವಾದ: ಕರ್ನಾಟಕವು ಫೆಬ್ರವರಿ ಮತ್ತು ಮೇ ನಡುವೆ ಪರಿಸರ ಉದ್ದೇಶಗಳಿಗಾಗಿ ನದಿಗೆ ನೀರಿನ ಹರಿವನ್ನು ಕಾಯ್ದುಕೊಂಡಿಲ್ಲ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ 58.66 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಒಟ್ಟು 24.705 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇಲ್ಲಿಯವರೆಗೆ ತಮಿಳುನಾಡು ಜಲಾಶಯಗಳಿಂದ ನೀರಾವರಿಗಾಗಿ ಯಾವುದೇ ನೀರನ್ನು ಬಿಡುಗಡೆ ಮಾಡಿಲ್ಲ.

ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶಗಳ ಪಟ್ಟಿ ಹೀಗಿದೆ:

ಆಗಸ್ಟ್ 28, 2023: ಕರ್ನಾಟಕ ಜಲಾಶಯಗಳಿಂದ ತಮಿಳುನಾಡಿಗೆ ಸೆಪ್ಟೆಂಬರ್ 12 ರವರೆಗೆ 5,000 ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಶಿಫಾರಸು ಮಾಡಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 28, 2023: ಕರ್ನಾಟಕದಲ್ಲಿ ಕಾವೇರಿ ನದಿ ನೀರಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿತು. ಸೆಪ್ಟೆಂಬರ್ 28 ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯೂಆರ್​ಸಿ) ನಿರ್ಧಾರವನ್ನು ಎತ್ತಿಹಿಡಿದಿದೆ ಮತ್ತು ಅಕ್ಟೋಬರ್ 15 ರವರೆಗೆ ಪ್ರತಿದಿನ ಸುಮಾರು 3,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು.

ಅಕ್ಟೋಬರ್ 30, 2023: ನವೆಂಬರ್ 1 ರಿಂದ 15 ರವರೆಗೆ ಪ್ರತಿದಿನ 13,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಶಿಫಾರಸು ಮಾಡಿತು.

ನವೆಂಬರ್ 23, 2023: ನವೆಂಬರ್ 24 ರಿಂದ 38 ದಿನಗಳವರೆಗೆ ಪ್ರತಿದಿನ 3,216 ಕ್ಯೂಸೆಕ್ ನಂತೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ನವೆಂಬರ್ 23 ರಂದು ಕರ್ನಾಟಕಕ್ಕೆ ನಿರ್ದೇಶನ ನೀಡಿತು.

ಡಿಸೆಂಬರ್ 19, 2023: ಡಿಸೆಂಬರ್ 19 ರಂದು ಸಭೆ ಸೇರಿದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಡಿಸೆಂಬರ್ 31 ರವರೆಗೆ ಪ್ರತಿದಿನ 3,128 ಕ್ಯೂಸೆಕ್ ಮತ್ತು 2024 ರ ಜನವರಿ ತಿಂಗಳಿಗೆ ಪ್ರತಿದಿನ 1,030 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಶಿಫಾರಸು ಮಾಡಿತು. ಕರ್ನಾಟಕವು ತನ್ನ ನಾಲ್ಕು ಜಲಾಶಯಗಳಿಗೆ ಸಂಚಿತ ಕೊರತೆಯಲ್ಲಿ 52.84% ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿತು.

ಫೆಬ್ರವರಿ 13, 2024: ಕಾವೇರಿ ನೀರು ಬಿಡುವಂತೆ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ಸಿಡಬ್ಲ್ಯೂಆರ್​ಸಿ ತಿರಸ್ಕರಿಸಿತು. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಪ್ರಕಾರ ನದಿಯ ಪರಿಸರದ ಹರಿವನ್ನು ಖಚಿತಪಡಿಸಿಕೊಳ್ಳಲು ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಸಮಿತಿಯು ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು.

ಏಪ್ರಿಲ್ 30, 2024: ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ ಸಿ) ಮಂಗಳವಾರ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಮೇ 1, 2024: ಕಾವೇರಿ ನದಿ ನೀರು ಹಂಚಿಕೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ತಮಿಳುನಾಡು ನಿರ್ಧರಿಸಿತು. ಕಾವೇರಿ ನದಿಗೆ ನೀರು ಬಿಡಬೇಕೆಂಬ ಬೇಡಿಕೆಯ ಬಗ್ಗೆ ಕರ್ನಾಟಕ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಎರಡರಿಂದಲೂ ತಿರಸ್ಕಾರಕ್ಕೊಳಗಾದ ತಮಿಳುನಾಡು ಸರ್ಕಾರವು ತನ್ನ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟ್​ಗೆ ಹೋಗಲು ನಿರ್ಧರಿಸಿತು.

17 ಮೇ 2024: ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರು ಹರಿಯುವಂತೆ ನೋಡಿಕೊಳ್ಳಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿತು. ಸುಪ್ರೀಂ ಕೋರ್ಟ್ ಆದೇಶದಂತೆ ಮೇ ತಿಂಗಳ ಉಳಿದ ಅವಧಿಯಲ್ಲಿ ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ನೈಸರ್ಗಿಕ ಹರಿವನ್ನು ಕರ್ನಾಟಕ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದೆ. ಕಾವೇರಿ ಜಲಾಶಯಗಳಲ್ಲಿನ ಸಂಗ್ರಹವನ್ನು ಕುಡಿಯುವ ನೀರು ಸರಬರಾಜಿಗೆ ಮಾತ್ರ ಕಾಯ್ದಿರಿಸಲಾಗಿದೆ ಮತ್ತು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಈ ಹಿಂದೆ ವಾದಿಸಿತ್ತು.

22 ಮೇ 2024: ಪರಿಸರಕ್ಕಾಗಿ ಬಿಡಬೇಕಾದ ನೀರಿನ ಹರಿವಿನಲ್ಲಿ ಬ್ಯಾಕ್ ಲಾಗ್ ಕೊರತೆಯ ನೀರನ್ನು ಬಿಡುಗಡೆ ಮಾಡಲು ಮತ್ತು ರಾಜ್ಯಕ್ಕೆ ಕಾವೇರಿ ನದಿಯ ಪರಿಸರ ಹರಿವಿನಲ್ಲಿ ಮತ್ತಷ್ಟು ಕೊರತೆಯಾಗದಂತೆ ನೋಡಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಸಿಡಬ್ಲ್ಯೂಆರ್ ಸಿ ಮೇ 16 ರಂದು ತಿರಸ್ಕರಿಸಿತು.

ಜೂನ್ 15, 2024: ತಮಿಳುನಾಡಿಗೆ ಹೆಚ್ಚಿನ ನೀರು ಬಿಡಬೇಕೆಂಬ ತಮಿಳುನಾಡಿನ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿತು.ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಇನ್ನೂ ವೇಗ ಪಡೆದುಕೊಂಡಿಲ್ಲ ಎಂದು ಹೇಳಿತು.

ಜುಲೈ 11, 2024: ಜುಲೈ 31 ರವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ ಒಂದು ಟಿಎಂಸಿ ಅಡಿ (11,500 ಕ್ಯೂಸೆಕ್) ನೀರು ಹರಿಯುವಂತೆ ನೋಡಿಕೊಳ್ಳುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಕರ್ನಾಟಕಕ್ಕೆ ಸೂಚಿಸಿತು. ಕರ್ನಾಟಕವು ನೀರಿನ ಹರಿವಿನ ಕೊರತೆಯನ್ನು ಉಲ್ಲೇಖಿಸಿ ಜುಲೈ 25 ರವರೆಗೆ ಯಾವುದೇ ನಿರ್ಧಾರ ಪ್ರಕಟಿಸದಂತೆ ಸಮಿತಿಯನ್ನು ಒತ್ತಾಯಿಸಿತ್ತು.

Source: RKC

ಇದನ್ನೂ ಓದಿ : ಶಂಭು ಗಡಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿ: ಹರಿಯಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ - Farmers Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.