ETV Bharat / bharat

ಸಾಸಿವೆ, ಕಡಲೆ, ಗೋಧಿ ಸೇರಿದಂತೆ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ರಬಿ ಋತುವಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿದೆ.

author img

By ANI

Published : 2 hours ago

ಸಾಸಿವೆ, ಕಡಲೆ, ಗೋಧಿ ಸೇರಿದಂತೆ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ಸಂಗ್ರಹ ಚಿತ್ರ (IANS)

ನವದೆಹಲಿ: 2025-26ರ ಮಾರುಕಟ್ಟೆ ಋತುವಿನಲ್ಲಿ ಎಲ್ಲಾ ಸೂಚಿತ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್​ಪಿ) ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ)ಯಲ್ಲಿ ಈ ಅನುಮೋದನೆ ನೀಡಲಾಗಿದೆ.

ರೈತರು ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಲು ಸರ್ಕಾರವು ರಬಿ ಬೆಳೆಗಳ ಎಂಎಸ್​ಪಿಯನ್ನು ಹೆಚ್ಚಿಸಿದೆ. ಸಾಸಿವೆಯ ಎಂಎಸ್​ಪಿಯನ್ನು ಪ್ರತಿ ಕ್ವಿಂಟಾಲ್​ಗೆ 300 ರೂ.ಗೆ, ಮಸೂರ್​ ಎಂಎಸ್​ಪಿಯನ್ನು ಪ್ರತಿ ಕ್ವಿಂಟಾಲ್​ಗೆ 275 ರೂ.ಗೆ ಹೆಚ್ಚಿಸಲಾಗಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ನಿರ್ಧಾರವನ್ನು ಪ್ರಕಟಿಸಿದರು. ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿಗಳ ಎಂಎಸ್​ಪಿಗಳನ್ನು ಕ್ರಮವಾಗಿ ಕ್ವಿಂಟಾಲ್​ಗೆ 210 ರೂ., 150 ರೂ., 140 ರೂ., 130 ರೂ. ಗೆ ಹೆಚ್ಚಿಸಲಾಗಿದೆ.

2025-26ರ ಮಾರುಕಟ್ಟೆ ಋತುವಿನಲ್ಲಿ ಕಡ್ಡಾಯ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳವು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂಎಸ್​ಪಿಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ. ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭಾಂಶವು ಗೋಧಿಗೆ 105 ಪ್ರತಿಶತ, ಸಾಸಿವೆಗೆ 98 ಪ್ರತಿಶತ; ಬೇಳೆಕಾಳುಗಳಿಗೆ ಶೇಕಡಾ 89; ಕಡಲೆಗೆ 60 ಪ್ರತಿಶತ; ಬಾರ್ಲಿಗೆ 60 ಪ್ರತಿಶತ; ಮತ್ತು ಕುಸುಬೆಗೆ 50 ಪ್ರತಿಶತ ಆಗಿದೆ.

ರೈತರು ತಮ್ಮ ಉತ್ಪನ್ನಗಳಿಗೆ ಸಾಕಷ್ಟು ಆದಾಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2025-26 ಮಾರುಕಟ್ಟೆ ಋತುವಿನಲ್ಲಿ ರಬಿ ಬೆಳೆಗಳಿಗೆ ಎಂಎಸ್​ಪಿಯನ್ನು ಹೆಚ್ಚಿಸಿದೆ.

ಎಂಎಸ್​ಪಿ ಎಂದರೆ ಬೆಳೆಗಳಿಗೆ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯಾಗಿದೆ. ಇದು ರೈತರು ತಮ್ಮ ಬೆಳೆಗಳನ್ನು ಸರ್ಕಾರಕ್ಕೆ ಮಾರಾಟ ಮಾಡುವ ಕನಿಷ್ಠ ದರವಾಗಿದೆ. ಈ ಬೆಲೆಯು ರೈತರನ್ನು ಮಾರುಕಟ್ಟೆ ಏರಿಳಿತದಿಂದ ತಡೆಯುತ್ತದೆ ಮತ್ತು ಸ್ಥಿರತೆ ಮತ್ತು ಆದಾಯ ಭದ್ರತೆಯನ್ನು ನೀಡುತ್ತದೆ. 1965ರಲ್ಲಿ ಸ್ಥಾಪನೆಯಾದ ಸಿಎಸಿಪಿ ಅಥವಾ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗವು ವಿವಿಧ ಅಂಶಗಳ ಆಧಾರದ ಮೇಲೆ ಎಂಎಸ್​ಪಿಯನ್ನು ಶಿಫಾರಸು ಮಾಡುತ್ತದೆ. ಪ್ರಧಾನ ಮಂತ್ರಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಎಂಎಸ್​ಪಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ 3ರಷ್ಟು ಹೆಚ್ಚಳ

ನವದೆಹಲಿ: 2025-26ರ ಮಾರುಕಟ್ಟೆ ಋತುವಿನಲ್ಲಿ ಎಲ್ಲಾ ಸೂಚಿತ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್​ಪಿ) ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ)ಯಲ್ಲಿ ಈ ಅನುಮೋದನೆ ನೀಡಲಾಗಿದೆ.

ರೈತರು ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಲು ಸರ್ಕಾರವು ರಬಿ ಬೆಳೆಗಳ ಎಂಎಸ್​ಪಿಯನ್ನು ಹೆಚ್ಚಿಸಿದೆ. ಸಾಸಿವೆಯ ಎಂಎಸ್​ಪಿಯನ್ನು ಪ್ರತಿ ಕ್ವಿಂಟಾಲ್​ಗೆ 300 ರೂ.ಗೆ, ಮಸೂರ್​ ಎಂಎಸ್​ಪಿಯನ್ನು ಪ್ರತಿ ಕ್ವಿಂಟಾಲ್​ಗೆ 275 ರೂ.ಗೆ ಹೆಚ್ಚಿಸಲಾಗಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ನಿರ್ಧಾರವನ್ನು ಪ್ರಕಟಿಸಿದರು. ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿಗಳ ಎಂಎಸ್​ಪಿಗಳನ್ನು ಕ್ರಮವಾಗಿ ಕ್ವಿಂಟಾಲ್​ಗೆ 210 ರೂ., 150 ರೂ., 140 ರೂ., 130 ರೂ. ಗೆ ಹೆಚ್ಚಿಸಲಾಗಿದೆ.

2025-26ರ ಮಾರುಕಟ್ಟೆ ಋತುವಿನಲ್ಲಿ ಕಡ್ಡಾಯ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳವು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂಎಸ್​ಪಿಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ. ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭಾಂಶವು ಗೋಧಿಗೆ 105 ಪ್ರತಿಶತ, ಸಾಸಿವೆಗೆ 98 ಪ್ರತಿಶತ; ಬೇಳೆಕಾಳುಗಳಿಗೆ ಶೇಕಡಾ 89; ಕಡಲೆಗೆ 60 ಪ್ರತಿಶತ; ಬಾರ್ಲಿಗೆ 60 ಪ್ರತಿಶತ; ಮತ್ತು ಕುಸುಬೆಗೆ 50 ಪ್ರತಿಶತ ಆಗಿದೆ.

ರೈತರು ತಮ್ಮ ಉತ್ಪನ್ನಗಳಿಗೆ ಸಾಕಷ್ಟು ಆದಾಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2025-26 ಮಾರುಕಟ್ಟೆ ಋತುವಿನಲ್ಲಿ ರಬಿ ಬೆಳೆಗಳಿಗೆ ಎಂಎಸ್​ಪಿಯನ್ನು ಹೆಚ್ಚಿಸಿದೆ.

ಎಂಎಸ್​ಪಿ ಎಂದರೆ ಬೆಳೆಗಳಿಗೆ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯಾಗಿದೆ. ಇದು ರೈತರು ತಮ್ಮ ಬೆಳೆಗಳನ್ನು ಸರ್ಕಾರಕ್ಕೆ ಮಾರಾಟ ಮಾಡುವ ಕನಿಷ್ಠ ದರವಾಗಿದೆ. ಈ ಬೆಲೆಯು ರೈತರನ್ನು ಮಾರುಕಟ್ಟೆ ಏರಿಳಿತದಿಂದ ತಡೆಯುತ್ತದೆ ಮತ್ತು ಸ್ಥಿರತೆ ಮತ್ತು ಆದಾಯ ಭದ್ರತೆಯನ್ನು ನೀಡುತ್ತದೆ. 1965ರಲ್ಲಿ ಸ್ಥಾಪನೆಯಾದ ಸಿಎಸಿಪಿ ಅಥವಾ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗವು ವಿವಿಧ ಅಂಶಗಳ ಆಧಾರದ ಮೇಲೆ ಎಂಎಸ್​ಪಿಯನ್ನು ಶಿಫಾರಸು ಮಾಡುತ್ತದೆ. ಪ್ರಧಾನ ಮಂತ್ರಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಎಂಎಸ್​ಪಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ 3ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.