ETV Bharat / bharat

ತ್ರಿಶೂರ್​ನಲ್ಲಿ ಬಿಜೆಪಿ ಗೆಲುವು, ಮತಗಳಿಕೆ ಹೆಚ್ಚಳ: ಕೇರಳದಲ್ಲಿ ಉದಯವಾಗುತ್ತಿದೆಯಾ 3ನೇ ರಾಜಕೀಯ ಶಕ್ತಿ? - Lok Sabha Election Results 2024

author img

By PTI

Published : Jun 6, 2024, 1:46 PM IST

ಕೇರಳದಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಿರುವುದು ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿಯ ಉದಯವಾಗುತ್ತಿರುವುದರ ಮುನ್ಸೂಚನೆ ಆಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತ್ರಿಶೂರ್​ನಲ್ಲಿ ಬಿಜೆಪಿ ಗೆಲುವು, ಮತಗಳಿಕೆ ಹೆಚ್ಚಳ: ಕೇರಳದಲ್ಲಿ ಉದಯವಾಗುತ್ತಿದೆಯಾ 3ನೇ ರಾಜಕೀಯ ಶಕ್ತಿ?
ತ್ರಿಶೂರ್​ನಲ್ಲಿ ಬಿಜೆಪಿ ಗೆಲುವು, ಮತಗಳಿಕೆ ಹೆಚ್ಚಳ: ಕೇರಳದಲ್ಲಿ ಉದಯವಾಗುತ್ತಿದೆಯಾ 3ನೇ ರಾಜಕೀಯ ಶಕ್ತಿ? (IANS (ಸಂಗ್ರಹ ಚಿತ್ರ))

ತಿರುವನಂತಪುರಂ, ಕೇರಳ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತ್ರಿಶೂರ್​ನಿಂದ ಗೆಲುವು ಸಾಧಿಸಿರುವುದು ಮತ್ತು ರಾಜ್ಯದ ಹಲವು ಕ್ಷೇತ್ರಗಳಲ್ಲಿ ತನ್ನ ಮತ ಗಳಿಕೆ ಹೆಚ್ಚಿಸಿಕೊಂಡಿರುವುದು ಕೇರಳ ರಾಜಕೀಯದಲ್ಲಿ ಹೊಸ ಬದಲಾವಣೆಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ತ್ರಿಶೂರ್​ನಿಂದ ಗೆದ್ದಿರುವುದು ಮಾತ್ರವಲ್ಲದೇ, 2019 ಕ್ಕೆ ಹೋಲಿಸಿದರೆ ಬಿಜೆಪಿಯ ಮತಗಳಿಕೆ ಪ್ರಮಾಣವು ಶೇ 15 ರಿಂದ ಶೇ 20 ಕ್ಕೆ ಏರಿಕೆಯಾಗಿದೆ. ಕೇರಳದ ರಾಜಕೀಯ ಕ್ಷೇತ್ರವು ಸಾಂಪ್ರದಾಯಿಕ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ (ಎಂ) ನೇತೃತ್ವದ ಎಲ್​ಡಿಎಫ್ ಪ್ರಾಬಲ್ಯದ ದ್ವಿಪಕ್ಷೀಯ ಪೈಪೋಟಿಯ ಬದಲಾಗಿ ತ್ರಿಕೋನ ಪೈಪೋಟಿಗೆ ಬದಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 2011 ರ ವಿಧಾನಸಭಾ ಚುನಾವಣೆಯ ನಂತರದಿಂದ ಕ್ರಮೇಣವಾಗಿ ನಡೆಯುತ್ತಿರುವ ಈ ಬದಲಾವಣೆ ಈಗ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಎನ್​ಡಿಎ ಕೇರಳದ ಮತದಾರರನ್ನು ಒಲಿಸಿಕೊಳ್ಳುವಲ್ಲಿ ನಿಧಾನವಾಗಿ ಸಫಲವಾಗುತ್ತಿರುವುದು 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳು ದೃಢಪಡಿಸಿವೆ. ಎನ್​ಡಿಎ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಅನೇಕ ಕ್ಷೇತ್ರಗಳಲ್ಲಿ ಸುಮಾರು 20 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ರೆಡಿಯಾಗಿದೆ ತಳಮಟ್ಟದ ಕಾರ್ಯಕರ್ತರ ಪಡೆ: ವಿಶ್ಲೇಷಕರ ಪ್ರಕಾರ ಎನ್​ಡಿಎ ಗೆದ್ದ ತ್ರಿಶೂರ್ ಕ್ಷೇತ್ರ ಮತ್ತು ಅಟ್ಟಿಂಗಲ್ ಹಾಗೂ ಅಲಪ್ಪುಳದಂಥ ಕ್ಷೇತ್ರಗಳಲ್ಲಿ ಮತ ಗಳಿಕೆ ಪ್ರಮಾಣ ಹೆಚ್ಚಾಗಿರುವುದು ಬಿಜೆಪಿಗೆ ಉತ್ತೇಜನ ನೀಡಿದೆ. ಜಾರ್ಖಂಡ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾದ 'ತಳಮಟ್ಟದ ಹಿಂದುತ್ವ' ಕಾರ್ಯತಂತ್ರವು ಕೇರಳದಲ್ಲಿಯೂ ಪರಿಣಾಮಕಾರಿಯಾಗುತ್ತಿರುವಂತೆ ಕಂಡು ಬರುತ್ತಿದೆ ಎನ್ನುತ್ತಾರೆ ರಾಜಕೀಯ ತಜ್ಞರು.

ತ್ರಿಶೂರ್​ನಲ್ಲಿ ಬಿಜೆಪಿ ಶೇ 37.8ರಷ್ಟು ಮತಗಳನ್ನು ಗಳಿಸಿದೆ. ತಿರುವನಂತಪುರಂನಲ್ಲಿ ಶೇ 35.52ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಎಡಪಕ್ಷಗಳ ಭದ್ರಕೋಟೆಯಾದ ಅಟ್ಟಿಂಗಲ್​ನಲ್ಲಿ ಬಿಜೆಪಿ ಅಭ್ಯರ್ಥಿ ಶೇ 31.64ರಷ್ಟು ಮತಗಳನ್ನು ಪಡೆದು, ಗೆದ್ದ ಯುಡಿಎಫ್ ಅಭ್ಯರ್ಥಿಗಿಂತ ಕೇವಲ ಶೇ 1.65ರಷ್ಟು ಹಿಂದಿದ್ದಾರೆ. ಸಿಪಿಐ (ಎಂ) ಮತ್ತು ಕಾಂಗ್ರೆಸ್​ನ ಮತ್ತೊಂದು ಭದ್ರಕೋಟೆಯಾದ ಅಲಪ್ಪುಳದಲ್ಲಿ ಬಿಜೆಪಿ ಅಭ್ಯರ್ಥಿ ಶೇಕಡಾ 28.3 ರಷ್ಟು ಮತಗಳನ್ನು ಗಳಿಸಿದ್ದಾರೆ.

ಒಂದು ಕಾಲದಲ್ಲಿ ಕೇರಳದಲ್ಲಿ ಎಡಪಕ್ಷಗಳ ಬದ್ಧ ಮತ ಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು, ಸಾಂಪ್ರದಾಯಿಕ ಕಾಂಗ್ರೆಸ್ ಬೆಂಬಲಿಗರು ಮತ್ತು ಒಬಿಸಿಗಳ ಮತ ಚಲಾವಣೆಯ ಆದ್ಯತೆಗಳಲ್ಲಿ ಬದಲಾವಣೆ ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಕ್ರಿಶ್ಚಿಯನ್​ ಮತಗಳು ಬಿಜೆಪಿಯತ್ತ: "2011 ರ ವಿಧಾನಸಭಾ ಚುನಾವಣೆಯಿಂದಲೂ ನಾವು ಈ ಬದಲಾವಣೆಯನ್ನು ಗಮನಿಸುತ್ತಿದ್ದೇವೆ. ಎಡಪಕ್ಷಗಳು ತಮ್ಮ ಒಬಿಸಿ ಮತಗಳಲ್ಲಿ ಸುಮಾರು ಶೇ 20 ರಷ್ಟು ಮತಗಳನ್ನು ಕಳೆದುಕೊಂಡಿದ್ದವು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಅವು ಇದನ್ನು ಸರಿದೂಗಿಸಿದ್ದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗಳು ವ್ಯಾಪಕವಾಗಿ ಕಂಡು ಬಂದಿರುವುದು ಕೂಡ ಗಮನಾರ್ಹ" ಎಂದು ಕೇರಳ ವಿಶ್ವವಿದ್ಯಾಲಯದ ಪ್ರಮುಖ ಸೆಫಾಲಜಿಸ್ಟ್ ಸಜಾದ್ ಇಬ್ರಾಹಿಂ ತಿಳಿಸಿದ್ದಾರೆ. ತ್ರಿಶೂರ್ ಮತ್ತು ತಿರುವನಂತಪುರಂನಂಥ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮತಗಳು ಬಿಜೆಪಿಯತ್ತ ವಾಲಿರುವುದು ಬಹಳ ಸ್ಪಷ್ಟವಾಗಿದೆ.

"ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಮೇಲ್ಜಾತಿಯ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾರೆ. ಈ ಕ್ರಿಶ್ಚಿಯನ್ನರ ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಬೆರೆತಿರುವುದರಿಂದ ಅವರು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತಿದೆ. ರಾಜಕೀಯದ ವಿಷಯಕ್ಕೆ ಬಂದಾಗ ಈ ಅಂಶಗಳು ವಾಸ್ತವಿಕವಾಗಿ ಕೆಲಸ ಮಾಡುತ್ತಿವೆ" ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಪ್ರಸಿದ್ಧ ಸೆಫಾಲಜಿಸ್ಟ್ ಡಾ. ಜಿ. ಗೋಪಕುಮಾರ್ ಹೇಳಿದರು.

ಕೇರಳದಲ್ಲಿ ಬಿಜೆಪಿ ತನ್ನ ಧಾರ್ಮಿಕ ಮೂಲಭೂತವಾದವನ್ನು ಬದಿಗಿಟ್ಟು ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ದಲಿತರನ್ನು ತಲುಪಲು ಮಾಡಿದ ಪ್ರಯತ್ನಗಳು ಹೆಚ್ಚಿನ ರಾಜಕೀಯ ನೆಲೆ ಕಂಡುಕೊಳ್ಳಲು ಅದಕ್ಕೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

"ಬಲವಾದ ದ್ರಾವಿಡ ಮನೋಭಾವನೆಗಳನ್ನು ಹೊಂದಿರುವ ತಮಿಳುನಾಡು ಮತ್ತು ಬಲವಾದ ಕಮ್ಯುನಿಸ್ಟ್ ಮನಸ್ಥಿತಿಯನ್ನು ಹೊಂದಿರುವ ಕೇರಳದಲ್ಲಿ ತಮ್ಮ ಮತ ಗಳಕೆಯನ್ನು ಸುಧಾರಿಸಿಕೊಳ್ಳಲು ಇದು ಅವರಿಗೆ ಸಹಾಯ ಮಾಡಿದೆ" ಎಂದು ಗೋಪಕುಮಾರ್ ತಿಳಿಸಿದರು. "ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಕೇರಳದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ ಮತ್ತು ತ್ರಿಶೂರ್​ನಂಥ ಕ್ಷೇತ್ರಗಳಲ್ಲಿ ಅವರು ಈ ತಿಳುವಳಿಕೆಯನ್ನು ಚೆನ್ನಾಗಿ ಜಾರಿಗೆ ತಂದಿದ್ದಾರೆ" ಎಂದು ಗೋಪಕುಮಾರ್ ಹೇಳಿದರು.

ಎಡಪಂಥೀಯರ ತುಷ್ಟೀಕರಣ ನೀತಿ ಹಿಂದೂಗಳ ದೃವೀಕರಣಕ್ಕೆ ಕಾರಣವಾಗುತ್ತಿದೆಯಾ?: ಈ ಬಗ್ಗೆ ಮಾತನಾಡಿದ ಕೇರಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪ್ರಭಾಶ್ ಜೆ, ಎಡಪಂಥೀಯರ ಮುಸ್ಲಿಂ ತುಷ್ಟೀಕರಣವು ಹಿಂದೂ ಮತದಾರರು ತಮ್ಮ ನಿಷ್ಠೆಯನ್ನು ಬಿಜೆಪಿಗೆ ಬದಲಾಯಿಸಲು ಮುಖ್ಯ ಕಾರಣವಾಗಿದೆ ಎಂದರು.

"ಈ ಹಿಂದೆ ಎಡಪಕ್ಷಗಳು ತಮ್ಮ ಎಲ್ಲ ಸಾಂಪ್ರದಾಯಿಕ ಮತದಾರರ ಮತಗಳನ್ನು ಪಡೆಯುತ್ತಿದ್ದವು. ಆದರೆ ನಂತರದ ಸಮಯದಲ್ಲಿ ಅವರ ಮತದಾರರು ಆರಂಭದಲ್ಲಿ ಯುಡಿಎಫ್​ನತ್ತ ಹಾಗೂ ಈಗ ಯುಡಿಎಫ್ ಅಥವಾ ಎನ್​ಡಿಎಯತ್ತ ವಾಲುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ದುರ್ಬಲಗೊಂಡಾಗ ಗೊಂದಲಕ್ಕೊಳಗಾದ ಮತದಾರರು ಬಲಗೊಳ್ಳುತ್ತಿರುವ ಬಿಜೆಪಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುವುದು ಸುಲಭವಾಯಿತು" ಎಂದು ಅವರು ಹೇಳಿದರು.

"ಎಡಪಂಥೀಯರು ಕೇರಳದ ಇಸ್ಲಾಂನ ಉನ್ನತ ಸಾಂಸ್ಥಿಕ ಮತ್ತು ಧಾರ್ಮಿಕ ನಾಯಕರನ್ನು ಮಾತನಾಡಿಸಿ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು. ಧಾರ್ಮಿಕ ನಾಯಕರನ್ನು ಮನವೊಲಿಸಿದರೆ ಸಾಕು ಮುಸ್ಲಿಂ ಮತಗಳು ತಮ್ಮತ್ತ ಬರುತ್ತವೆ ಎಂದು ಅವರು ಭಾವಿಸಿದ್ದರು. ಈ ಸಮಯದಲ್ಲಿ ಅವರು ಸಾಮಾನ್ಯ ಮುಸ್ಲಿಮ್​ ನಾಗರಿಕರೊಂದಿಗೆ ಮಾತುಕತೆ ನಡೆಸಲಿಲ್ಲ. ಇನ್ನು ಸಿಎಎ ವಿರುದ್ಧದ ಬಹಿರಂಗ ಸಮರವು ಕ್ರಿಶ್ಚಿಯನ್ ಸಮುದಾಯವನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ ಸಮುದಾಯಕ್ಕೆ ಸಿಎಎ ವಿಷಯವು ಯಾವುದೇ ಸಂಬಂಧ ಹೊಂದಿಲ್ಲದಿರುವುದು ಇದಕ್ಕೆ ಕಾರಣವಾಗಿದೆ." ಎಂದು ಪ್ರಭಾಶ್ ಹೇಳಿದರು.

ಜಾತ್ಯತೀತ ನಿಲುವುಗಳಲ್ಲಿನ ರಾಜಿ ರಾಜಕೀಯ ಸಮೀಕರಣ ಬದಲಿಸುತ್ತಿದೆಯಾ?: ಯುಡಿಎಫ್ ಮತ್ತು ಎಡಪಕ್ಷಗಳೆರಡೂ ತಮ್ಮ ಜಾತ್ಯತೀತ ನಿಲುವುಗಳಲ್ಲಿ ರಾಜಿ ಮಾಡಿಕೊಂಡಿರುವಂತೆ ಕಾಣಿಸುತ್ತಿರುವುದರಿಂದ ಮೂರೂ ರಂಗಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಜನರು ಭಾವಿಸುವಂತಾಗಿದೆ ಎಂದು ಪ್ರಭಾಶ್ ಹೇಳುತ್ತಾರೆ. 'ಲವ್ ಜಿಹಾದ್'ನಂತಹ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಬಿಜೆಪಿಯು ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಕಳವಳವನ್ನು ಸೃಷ್ಟಿಸಿದೆ ಎಂದು ಗೋಪಕುಮಾರ್ ಹೇಳುತ್ತಾರೆ.

"ಕೇರಳದ ಕ್ರಿಶ್ಚಿಯನ್ನರು ಅಂತಾರಾಷ್ಟ್ರೀಯ ಮನೋಭಾವದವರಾಗಿರುವುದರಿಂದ, ಜಾಗತಿಕವಾಗಿ ಮುಸ್ಲಿಂ ಪ್ರಾಬಲ್ಯದಿಂದ ಭಯಭೀತರಾಗಿದ್ದಾರೆ. ಹಾಗೆಯೇ ಎಡಪಂಥೀಯರ ಪ್ರಮುಖ ಮತ ಬ್ಯಾಂಕ್ ಆಗಿರುವ ಹಿಂದೂಗಳು, ವಿಶೇಷವಾಗಿ ಈಳವರಂತಹ ಸಮುದಾಯಗಳು ಅವರಿಂದ ದೂರವಾಗಲು ಪ್ರಾರಂಭಿಸಿದವು. ಎಡಪಂಥೀಯರ ಬಲವಾದ ಮುಸ್ಲಿಂ ತುಷ್ಟೀಕರಣವು ಈ ಮತದಾರರನ್ನು ದೂರವಿರಿಸಿತು" ಎಂದು ಗೋಪಕುಮಾರ್ ಹೇಳಿದರು.

ಆದಾಗ್ಯೂ, ತ್ರಿಶೂರ್​ನಲ್ಲಿ ಗೋಪಿ ಅವರ ಗೆಲುವು ರಾಜಕೀಯಕ್ಕಿಂತ ವೈಯಕ್ತಿಕವಾಗಿದೆ ಎಂದು ಅವರು ಉಲ್ಲೇಖಿಸಿದರು. "ಕ್ರಿಶ್ಚಿಯನ್ ಸಮುದಾಯವು ಸಮಾಜ ಸೇವೆಯಲ್ಲಿ ನಂಬಿಕೆ ಇಟ್ಟಿದೆ ಮತ್ತು ಚಲನಚಿತ್ರ ನಟರ ಪೈಕಿ ಗೋಪಿ ಅತ್ಯುತ್ತಮ ಸಮಾಜಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಬಡಜನರಿಗೆ ಅವರು ಸಹಾಯ ಮಾಡಿದ್ದು, ಅದಕ್ಕೆ ಪ್ರತಿಫಲ ಸಿಕ್ಕಿದೆ. ತ್ರಿಶೂರ್​ನಲ್ಲಿ ಶೇಕಡಾ 21 ರಷ್ಟು ಕ್ರಿಶ್ಚಿಯನ್ ಮತದಾರರಿದ್ದು, ಅವರು ಗೋಪಿಗೆ ಸಾಮೂಹಿಕವಾಗಿ ಮತ ಚಲಾಯಿಸಿದರು" ಎಂದು ಗೋಪಕುಮಾರ್ ನುಡಿದರು.

ಕೇರಳದ ಮತದಾರರು ಬಿಜೆಪಿಯನ್ನು ಸಂಪೂರ್ಣವಾಗಿ ಸ್ವೀಕರಿಸಿಲ್ಲವಾದರೂ, ಬಿಜೆಪಿಯ ಹೊಸ ನಿಲುವು ಮತದಾರರಲ್ಲಿ ಅದರ ಬಗ್ಗೆ ಇದ್ದ ದ್ವೇಷ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಸೆಫಾಲಜಿಸ್ಟ್ ಸಜಾದ್ ಇಬ್ರಾಹಿಂ ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೊಡೆತ: ಡಿಸಿಎಂ ಸ್ಥಾನ ತೊರೆಯಲು ಮುಂದಾದ ದೇವೇಂದ್ರ ಫಡ್ನವೀಸ್ - Devendra Fadnavis

ತಿರುವನಂತಪುರಂ, ಕೇರಳ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತ್ರಿಶೂರ್​ನಿಂದ ಗೆಲುವು ಸಾಧಿಸಿರುವುದು ಮತ್ತು ರಾಜ್ಯದ ಹಲವು ಕ್ಷೇತ್ರಗಳಲ್ಲಿ ತನ್ನ ಮತ ಗಳಿಕೆ ಹೆಚ್ಚಿಸಿಕೊಂಡಿರುವುದು ಕೇರಳ ರಾಜಕೀಯದಲ್ಲಿ ಹೊಸ ಬದಲಾವಣೆಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ತ್ರಿಶೂರ್​ನಿಂದ ಗೆದ್ದಿರುವುದು ಮಾತ್ರವಲ್ಲದೇ, 2019 ಕ್ಕೆ ಹೋಲಿಸಿದರೆ ಬಿಜೆಪಿಯ ಮತಗಳಿಕೆ ಪ್ರಮಾಣವು ಶೇ 15 ರಿಂದ ಶೇ 20 ಕ್ಕೆ ಏರಿಕೆಯಾಗಿದೆ. ಕೇರಳದ ರಾಜಕೀಯ ಕ್ಷೇತ್ರವು ಸಾಂಪ್ರದಾಯಿಕ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ (ಎಂ) ನೇತೃತ್ವದ ಎಲ್​ಡಿಎಫ್ ಪ್ರಾಬಲ್ಯದ ದ್ವಿಪಕ್ಷೀಯ ಪೈಪೋಟಿಯ ಬದಲಾಗಿ ತ್ರಿಕೋನ ಪೈಪೋಟಿಗೆ ಬದಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 2011 ರ ವಿಧಾನಸಭಾ ಚುನಾವಣೆಯ ನಂತರದಿಂದ ಕ್ರಮೇಣವಾಗಿ ನಡೆಯುತ್ತಿರುವ ಈ ಬದಲಾವಣೆ ಈಗ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಎನ್​ಡಿಎ ಕೇರಳದ ಮತದಾರರನ್ನು ಒಲಿಸಿಕೊಳ್ಳುವಲ್ಲಿ ನಿಧಾನವಾಗಿ ಸಫಲವಾಗುತ್ತಿರುವುದು 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳು ದೃಢಪಡಿಸಿವೆ. ಎನ್​ಡಿಎ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಅನೇಕ ಕ್ಷೇತ್ರಗಳಲ್ಲಿ ಸುಮಾರು 20 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ರೆಡಿಯಾಗಿದೆ ತಳಮಟ್ಟದ ಕಾರ್ಯಕರ್ತರ ಪಡೆ: ವಿಶ್ಲೇಷಕರ ಪ್ರಕಾರ ಎನ್​ಡಿಎ ಗೆದ್ದ ತ್ರಿಶೂರ್ ಕ್ಷೇತ್ರ ಮತ್ತು ಅಟ್ಟಿಂಗಲ್ ಹಾಗೂ ಅಲಪ್ಪುಳದಂಥ ಕ್ಷೇತ್ರಗಳಲ್ಲಿ ಮತ ಗಳಿಕೆ ಪ್ರಮಾಣ ಹೆಚ್ಚಾಗಿರುವುದು ಬಿಜೆಪಿಗೆ ಉತ್ತೇಜನ ನೀಡಿದೆ. ಜಾರ್ಖಂಡ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾದ 'ತಳಮಟ್ಟದ ಹಿಂದುತ್ವ' ಕಾರ್ಯತಂತ್ರವು ಕೇರಳದಲ್ಲಿಯೂ ಪರಿಣಾಮಕಾರಿಯಾಗುತ್ತಿರುವಂತೆ ಕಂಡು ಬರುತ್ತಿದೆ ಎನ್ನುತ್ತಾರೆ ರಾಜಕೀಯ ತಜ್ಞರು.

ತ್ರಿಶೂರ್​ನಲ್ಲಿ ಬಿಜೆಪಿ ಶೇ 37.8ರಷ್ಟು ಮತಗಳನ್ನು ಗಳಿಸಿದೆ. ತಿರುವನಂತಪುರಂನಲ್ಲಿ ಶೇ 35.52ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಎಡಪಕ್ಷಗಳ ಭದ್ರಕೋಟೆಯಾದ ಅಟ್ಟಿಂಗಲ್​ನಲ್ಲಿ ಬಿಜೆಪಿ ಅಭ್ಯರ್ಥಿ ಶೇ 31.64ರಷ್ಟು ಮತಗಳನ್ನು ಪಡೆದು, ಗೆದ್ದ ಯುಡಿಎಫ್ ಅಭ್ಯರ್ಥಿಗಿಂತ ಕೇವಲ ಶೇ 1.65ರಷ್ಟು ಹಿಂದಿದ್ದಾರೆ. ಸಿಪಿಐ (ಎಂ) ಮತ್ತು ಕಾಂಗ್ರೆಸ್​ನ ಮತ್ತೊಂದು ಭದ್ರಕೋಟೆಯಾದ ಅಲಪ್ಪುಳದಲ್ಲಿ ಬಿಜೆಪಿ ಅಭ್ಯರ್ಥಿ ಶೇಕಡಾ 28.3 ರಷ್ಟು ಮತಗಳನ್ನು ಗಳಿಸಿದ್ದಾರೆ.

ಒಂದು ಕಾಲದಲ್ಲಿ ಕೇರಳದಲ್ಲಿ ಎಡಪಕ್ಷಗಳ ಬದ್ಧ ಮತ ಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು, ಸಾಂಪ್ರದಾಯಿಕ ಕಾಂಗ್ರೆಸ್ ಬೆಂಬಲಿಗರು ಮತ್ತು ಒಬಿಸಿಗಳ ಮತ ಚಲಾವಣೆಯ ಆದ್ಯತೆಗಳಲ್ಲಿ ಬದಲಾವಣೆ ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಕ್ರಿಶ್ಚಿಯನ್​ ಮತಗಳು ಬಿಜೆಪಿಯತ್ತ: "2011 ರ ವಿಧಾನಸಭಾ ಚುನಾವಣೆಯಿಂದಲೂ ನಾವು ಈ ಬದಲಾವಣೆಯನ್ನು ಗಮನಿಸುತ್ತಿದ್ದೇವೆ. ಎಡಪಕ್ಷಗಳು ತಮ್ಮ ಒಬಿಸಿ ಮತಗಳಲ್ಲಿ ಸುಮಾರು ಶೇ 20 ರಷ್ಟು ಮತಗಳನ್ನು ಕಳೆದುಕೊಂಡಿದ್ದವು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಅವು ಇದನ್ನು ಸರಿದೂಗಿಸಿದ್ದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗಳು ವ್ಯಾಪಕವಾಗಿ ಕಂಡು ಬಂದಿರುವುದು ಕೂಡ ಗಮನಾರ್ಹ" ಎಂದು ಕೇರಳ ವಿಶ್ವವಿದ್ಯಾಲಯದ ಪ್ರಮುಖ ಸೆಫಾಲಜಿಸ್ಟ್ ಸಜಾದ್ ಇಬ್ರಾಹಿಂ ತಿಳಿಸಿದ್ದಾರೆ. ತ್ರಿಶೂರ್ ಮತ್ತು ತಿರುವನಂತಪುರಂನಂಥ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮತಗಳು ಬಿಜೆಪಿಯತ್ತ ವಾಲಿರುವುದು ಬಹಳ ಸ್ಪಷ್ಟವಾಗಿದೆ.

"ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಮೇಲ್ಜಾತಿಯ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾರೆ. ಈ ಕ್ರಿಶ್ಚಿಯನ್ನರ ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಬೆರೆತಿರುವುದರಿಂದ ಅವರು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತಿದೆ. ರಾಜಕೀಯದ ವಿಷಯಕ್ಕೆ ಬಂದಾಗ ಈ ಅಂಶಗಳು ವಾಸ್ತವಿಕವಾಗಿ ಕೆಲಸ ಮಾಡುತ್ತಿವೆ" ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಪ್ರಸಿದ್ಧ ಸೆಫಾಲಜಿಸ್ಟ್ ಡಾ. ಜಿ. ಗೋಪಕುಮಾರ್ ಹೇಳಿದರು.

ಕೇರಳದಲ್ಲಿ ಬಿಜೆಪಿ ತನ್ನ ಧಾರ್ಮಿಕ ಮೂಲಭೂತವಾದವನ್ನು ಬದಿಗಿಟ್ಟು ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ದಲಿತರನ್ನು ತಲುಪಲು ಮಾಡಿದ ಪ್ರಯತ್ನಗಳು ಹೆಚ್ಚಿನ ರಾಜಕೀಯ ನೆಲೆ ಕಂಡುಕೊಳ್ಳಲು ಅದಕ್ಕೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

"ಬಲವಾದ ದ್ರಾವಿಡ ಮನೋಭಾವನೆಗಳನ್ನು ಹೊಂದಿರುವ ತಮಿಳುನಾಡು ಮತ್ತು ಬಲವಾದ ಕಮ್ಯುನಿಸ್ಟ್ ಮನಸ್ಥಿತಿಯನ್ನು ಹೊಂದಿರುವ ಕೇರಳದಲ್ಲಿ ತಮ್ಮ ಮತ ಗಳಕೆಯನ್ನು ಸುಧಾರಿಸಿಕೊಳ್ಳಲು ಇದು ಅವರಿಗೆ ಸಹಾಯ ಮಾಡಿದೆ" ಎಂದು ಗೋಪಕುಮಾರ್ ತಿಳಿಸಿದರು. "ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಕೇರಳದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ ಮತ್ತು ತ್ರಿಶೂರ್​ನಂಥ ಕ್ಷೇತ್ರಗಳಲ್ಲಿ ಅವರು ಈ ತಿಳುವಳಿಕೆಯನ್ನು ಚೆನ್ನಾಗಿ ಜಾರಿಗೆ ತಂದಿದ್ದಾರೆ" ಎಂದು ಗೋಪಕುಮಾರ್ ಹೇಳಿದರು.

ಎಡಪಂಥೀಯರ ತುಷ್ಟೀಕರಣ ನೀತಿ ಹಿಂದೂಗಳ ದೃವೀಕರಣಕ್ಕೆ ಕಾರಣವಾಗುತ್ತಿದೆಯಾ?: ಈ ಬಗ್ಗೆ ಮಾತನಾಡಿದ ಕೇರಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪ್ರಭಾಶ್ ಜೆ, ಎಡಪಂಥೀಯರ ಮುಸ್ಲಿಂ ತುಷ್ಟೀಕರಣವು ಹಿಂದೂ ಮತದಾರರು ತಮ್ಮ ನಿಷ್ಠೆಯನ್ನು ಬಿಜೆಪಿಗೆ ಬದಲಾಯಿಸಲು ಮುಖ್ಯ ಕಾರಣವಾಗಿದೆ ಎಂದರು.

"ಈ ಹಿಂದೆ ಎಡಪಕ್ಷಗಳು ತಮ್ಮ ಎಲ್ಲ ಸಾಂಪ್ರದಾಯಿಕ ಮತದಾರರ ಮತಗಳನ್ನು ಪಡೆಯುತ್ತಿದ್ದವು. ಆದರೆ ನಂತರದ ಸಮಯದಲ್ಲಿ ಅವರ ಮತದಾರರು ಆರಂಭದಲ್ಲಿ ಯುಡಿಎಫ್​ನತ್ತ ಹಾಗೂ ಈಗ ಯುಡಿಎಫ್ ಅಥವಾ ಎನ್​ಡಿಎಯತ್ತ ವಾಲುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ದುರ್ಬಲಗೊಂಡಾಗ ಗೊಂದಲಕ್ಕೊಳಗಾದ ಮತದಾರರು ಬಲಗೊಳ್ಳುತ್ತಿರುವ ಬಿಜೆಪಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುವುದು ಸುಲಭವಾಯಿತು" ಎಂದು ಅವರು ಹೇಳಿದರು.

"ಎಡಪಂಥೀಯರು ಕೇರಳದ ಇಸ್ಲಾಂನ ಉನ್ನತ ಸಾಂಸ್ಥಿಕ ಮತ್ತು ಧಾರ್ಮಿಕ ನಾಯಕರನ್ನು ಮಾತನಾಡಿಸಿ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು. ಧಾರ್ಮಿಕ ನಾಯಕರನ್ನು ಮನವೊಲಿಸಿದರೆ ಸಾಕು ಮುಸ್ಲಿಂ ಮತಗಳು ತಮ್ಮತ್ತ ಬರುತ್ತವೆ ಎಂದು ಅವರು ಭಾವಿಸಿದ್ದರು. ಈ ಸಮಯದಲ್ಲಿ ಅವರು ಸಾಮಾನ್ಯ ಮುಸ್ಲಿಮ್​ ನಾಗರಿಕರೊಂದಿಗೆ ಮಾತುಕತೆ ನಡೆಸಲಿಲ್ಲ. ಇನ್ನು ಸಿಎಎ ವಿರುದ್ಧದ ಬಹಿರಂಗ ಸಮರವು ಕ್ರಿಶ್ಚಿಯನ್ ಸಮುದಾಯವನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ ಸಮುದಾಯಕ್ಕೆ ಸಿಎಎ ವಿಷಯವು ಯಾವುದೇ ಸಂಬಂಧ ಹೊಂದಿಲ್ಲದಿರುವುದು ಇದಕ್ಕೆ ಕಾರಣವಾಗಿದೆ." ಎಂದು ಪ್ರಭಾಶ್ ಹೇಳಿದರು.

ಜಾತ್ಯತೀತ ನಿಲುವುಗಳಲ್ಲಿನ ರಾಜಿ ರಾಜಕೀಯ ಸಮೀಕರಣ ಬದಲಿಸುತ್ತಿದೆಯಾ?: ಯುಡಿಎಫ್ ಮತ್ತು ಎಡಪಕ್ಷಗಳೆರಡೂ ತಮ್ಮ ಜಾತ್ಯತೀತ ನಿಲುವುಗಳಲ್ಲಿ ರಾಜಿ ಮಾಡಿಕೊಂಡಿರುವಂತೆ ಕಾಣಿಸುತ್ತಿರುವುದರಿಂದ ಮೂರೂ ರಂಗಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಜನರು ಭಾವಿಸುವಂತಾಗಿದೆ ಎಂದು ಪ್ರಭಾಶ್ ಹೇಳುತ್ತಾರೆ. 'ಲವ್ ಜಿಹಾದ್'ನಂತಹ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಬಿಜೆಪಿಯು ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಕಳವಳವನ್ನು ಸೃಷ್ಟಿಸಿದೆ ಎಂದು ಗೋಪಕುಮಾರ್ ಹೇಳುತ್ತಾರೆ.

"ಕೇರಳದ ಕ್ರಿಶ್ಚಿಯನ್ನರು ಅಂತಾರಾಷ್ಟ್ರೀಯ ಮನೋಭಾವದವರಾಗಿರುವುದರಿಂದ, ಜಾಗತಿಕವಾಗಿ ಮುಸ್ಲಿಂ ಪ್ರಾಬಲ್ಯದಿಂದ ಭಯಭೀತರಾಗಿದ್ದಾರೆ. ಹಾಗೆಯೇ ಎಡಪಂಥೀಯರ ಪ್ರಮುಖ ಮತ ಬ್ಯಾಂಕ್ ಆಗಿರುವ ಹಿಂದೂಗಳು, ವಿಶೇಷವಾಗಿ ಈಳವರಂತಹ ಸಮುದಾಯಗಳು ಅವರಿಂದ ದೂರವಾಗಲು ಪ್ರಾರಂಭಿಸಿದವು. ಎಡಪಂಥೀಯರ ಬಲವಾದ ಮುಸ್ಲಿಂ ತುಷ್ಟೀಕರಣವು ಈ ಮತದಾರರನ್ನು ದೂರವಿರಿಸಿತು" ಎಂದು ಗೋಪಕುಮಾರ್ ಹೇಳಿದರು.

ಆದಾಗ್ಯೂ, ತ್ರಿಶೂರ್​ನಲ್ಲಿ ಗೋಪಿ ಅವರ ಗೆಲುವು ರಾಜಕೀಯಕ್ಕಿಂತ ವೈಯಕ್ತಿಕವಾಗಿದೆ ಎಂದು ಅವರು ಉಲ್ಲೇಖಿಸಿದರು. "ಕ್ರಿಶ್ಚಿಯನ್ ಸಮುದಾಯವು ಸಮಾಜ ಸೇವೆಯಲ್ಲಿ ನಂಬಿಕೆ ಇಟ್ಟಿದೆ ಮತ್ತು ಚಲನಚಿತ್ರ ನಟರ ಪೈಕಿ ಗೋಪಿ ಅತ್ಯುತ್ತಮ ಸಮಾಜಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಬಡಜನರಿಗೆ ಅವರು ಸಹಾಯ ಮಾಡಿದ್ದು, ಅದಕ್ಕೆ ಪ್ರತಿಫಲ ಸಿಕ್ಕಿದೆ. ತ್ರಿಶೂರ್​ನಲ್ಲಿ ಶೇಕಡಾ 21 ರಷ್ಟು ಕ್ರಿಶ್ಚಿಯನ್ ಮತದಾರರಿದ್ದು, ಅವರು ಗೋಪಿಗೆ ಸಾಮೂಹಿಕವಾಗಿ ಮತ ಚಲಾಯಿಸಿದರು" ಎಂದು ಗೋಪಕುಮಾರ್ ನುಡಿದರು.

ಕೇರಳದ ಮತದಾರರು ಬಿಜೆಪಿಯನ್ನು ಸಂಪೂರ್ಣವಾಗಿ ಸ್ವೀಕರಿಸಿಲ್ಲವಾದರೂ, ಬಿಜೆಪಿಯ ಹೊಸ ನಿಲುವು ಮತದಾರರಲ್ಲಿ ಅದರ ಬಗ್ಗೆ ಇದ್ದ ದ್ವೇಷ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಸೆಫಾಲಜಿಸ್ಟ್ ಸಜಾದ್ ಇಬ್ರಾಹಿಂ ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೊಡೆತ: ಡಿಸಿಎಂ ಸ್ಥಾನ ತೊರೆಯಲು ಮುಂದಾದ ದೇವೇಂದ್ರ ಫಡ್ನವೀಸ್ - Devendra Fadnavis

ETV Bharat Logo

Copyright © 2024 Ushodaya Enterprises Pvt. Ltd., All Rights Reserved.